ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಮತ್ತೊಂದು ಶಾಕ್
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ತೇಜಸ್ವಿನಿಗೌಡ ರಾಜೀನಾಮೆ
ಕೆಲ ದಿನಗಳ ಹಿಂದೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು
ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಡಾ.ತೇಜಸ್ವಿನಿಗೌಡ ಶಾಕ್ ನೀಡಿದ್ದಾರೆ. ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್ಬೈ ಹೇಳಿದ್ದಾರೆ. ಒಂದು ಪುಟದ ಭಾವನಾತ್ಮಕ ಪತ್ರ ಬರೆದು, ಪಕ್ಷದಲ್ಲಿನ ಆಂತರಿಕ ವಿಚಾರ ಉಲ್ಲೇಖಿಸಿ ತೇಜಸ್ವಿನಿಗೌಡ ಕಮಲಕ್ಕೆ ಕೊನೆ ಹಾಡಿದ್ದಾರೆ. ತೇಜಸ್ವಿನಿಗೌಡ ನಡೆ ಬಗ್ಗೆ ನ್ಯೂಸ್ಫಸ್ಟ್ ಸರಿಯಾಗಿ ತಿಂಗಳ ಹಿಂದೇ ನಿಖರ ವರದಿ ಬಿತ್ತರಿಸಿತ್ತು.
ಪತ್ರದಲ್ಲಿ ಏನಿದೆ..?
ಕಳೆದೊಂದು ದಶಕದಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ವಕ್ತಾರಳಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ಪ್ರ-ಶಿಕ್ಷಣಕಾರಳಾಗಿ, ಕೆಳಹಂತದಿಂದ ಮೇಲ್ಮಟ್ಟದವರೆಗೂ ಶಿಸ್ತಿನ ಸಿಪಾಯಿಯಾಗಿ, ಪಕ್ಷಕ್ಕೆ ನಿಷ್ಠಳಾಗಿ ಶಕ್ತಿ ಮೀರಿ ದುಡಿರುತ್ತೇನೆ.
ದಿ. ಅನಂತ್ಕುಮಾರ್ ಹಾಗೂ ರಾಷ್ಟ್ರೀಯ ನಾಯಕರಾದ ರಾಜ್ಯದ ಮುತ್ಸದ್ಧಿಯೂ ಆದ ಹಿರಿಯರಾದ ಶ್ರೀ ಬಿ.ಎಸ್. ಯಡಿಯೂರಪ್ಪಾಜಿಯವರ ಮಾರ್ಗದರ್ಶನದಲ್ಲಿ ಅಪಾರ ರಾಜಕೀಯ ಅನುಭವಗಳಿಸಿದ ಭಾಗ್ಯ ಪಡೆದಿರುತ್ತೇನೆ.
ಇದನ್ನೂ ಓದಿ: ಬಿಜೆಪಿ ಶಾಲು ಧರಿಸಿದ ಮುತ್ಸದ್ಧಿ ದೇವೇಗೌಡ; ರಾಜಕೀಯ ಪಡಶಾಲೆಯಲ್ಲಿ ಭಾರೀ ಚರ್ಚೆ..!
ಇತ್ತೀಚಿನ ವರ್ಷಗಳಲ್ಲಿ BJP ಯು ಸಂಸದೀಯ ಪ್ರಜಾಪ್ರಭುತ್ವ ಮೌಲ್ಯಗಳಿಂದ ದೂರ ಸರಿದು, ಉತ್ತಮ ಸಂಸದೀಯ ಪಟುಗಳು ಹಾಗೂ ಪ್ರತಿಭಾವಂತರನ್ನು ಕಡೆಗಣಿಸಿ, ಅವಕಾಶವಾದಿಗಳ ತಾಣವಾಗುತ್ತಿರುವುದು ಮನಸ್ಸಿಗೆ ಅಪಾರ ನೋವು ತಂದಿದೆ. ಈ ಬಗ್ಗೆ ಪಕ್ಷದ ಆಂತರಿಕ ವೇದಿಕೆಗಳಲ್ಲಿ, ಪಕ್ಷದ ವರ್ಚಸ್ಸಿಗೆ ಧಕ್ಕೆ ಬರದಂತೆ, ಹಿರಿಯರ ಗಮನಕ್ಕೆ ತರುವ ಪ್ರಯತ್ನಗಳಾದರೂ, ಫಲಿತಾಂಶ ಶೂನ್ಯವಾಗಿದೆ.
ಎಲ್ಲ ಬಲ್ಲ ತಮಗೆ ವ್ಯರ್ಥ ವಿವರಣೆ ನೀಡದೇ, ಬಿಎಸ್ವೈ-ಅನಂತ ಯುಗಾಂತ್ಯದೊಡನೆ BJP ಯಲ್ಲಿ ಒಂದು ದಶಕದ ನನ್ನ ಯಾನಕ್ಕೆ ವಿದಾಯ ಹೇಳುತ್ತಿದ್ದೇನೆ. ಈ ಮೂಲಕ BJP ಯ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆ ನೀಡುತ್ತಿದ್ದು ಸ್ವೀಕರಿಸಬೇಕಾಗಿ ವಿನಮ್ರ ಕೋರಿಕೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಮತ್ತೊಂದು ಶಾಕ್
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ತೇಜಸ್ವಿನಿಗೌಡ ರಾಜೀನಾಮೆ
ಕೆಲ ದಿನಗಳ ಹಿಂದೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು
ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಡಾ.ತೇಜಸ್ವಿನಿಗೌಡ ಶಾಕ್ ನೀಡಿದ್ದಾರೆ. ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್ಬೈ ಹೇಳಿದ್ದಾರೆ. ಒಂದು ಪುಟದ ಭಾವನಾತ್ಮಕ ಪತ್ರ ಬರೆದು, ಪಕ್ಷದಲ್ಲಿನ ಆಂತರಿಕ ವಿಚಾರ ಉಲ್ಲೇಖಿಸಿ ತೇಜಸ್ವಿನಿಗೌಡ ಕಮಲಕ್ಕೆ ಕೊನೆ ಹಾಡಿದ್ದಾರೆ. ತೇಜಸ್ವಿನಿಗೌಡ ನಡೆ ಬಗ್ಗೆ ನ್ಯೂಸ್ಫಸ್ಟ್ ಸರಿಯಾಗಿ ತಿಂಗಳ ಹಿಂದೇ ನಿಖರ ವರದಿ ಬಿತ್ತರಿಸಿತ್ತು.
ಪತ್ರದಲ್ಲಿ ಏನಿದೆ..?
ಕಳೆದೊಂದು ದಶಕದಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ವಕ್ತಾರಳಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ಪ್ರ-ಶಿಕ್ಷಣಕಾರಳಾಗಿ, ಕೆಳಹಂತದಿಂದ ಮೇಲ್ಮಟ್ಟದವರೆಗೂ ಶಿಸ್ತಿನ ಸಿಪಾಯಿಯಾಗಿ, ಪಕ್ಷಕ್ಕೆ ನಿಷ್ಠಳಾಗಿ ಶಕ್ತಿ ಮೀರಿ ದುಡಿರುತ್ತೇನೆ.
ದಿ. ಅನಂತ್ಕುಮಾರ್ ಹಾಗೂ ರಾಷ್ಟ್ರೀಯ ನಾಯಕರಾದ ರಾಜ್ಯದ ಮುತ್ಸದ್ಧಿಯೂ ಆದ ಹಿರಿಯರಾದ ಶ್ರೀ ಬಿ.ಎಸ್. ಯಡಿಯೂರಪ್ಪಾಜಿಯವರ ಮಾರ್ಗದರ್ಶನದಲ್ಲಿ ಅಪಾರ ರಾಜಕೀಯ ಅನುಭವಗಳಿಸಿದ ಭಾಗ್ಯ ಪಡೆದಿರುತ್ತೇನೆ.
ಇದನ್ನೂ ಓದಿ: ಬಿಜೆಪಿ ಶಾಲು ಧರಿಸಿದ ಮುತ್ಸದ್ಧಿ ದೇವೇಗೌಡ; ರಾಜಕೀಯ ಪಡಶಾಲೆಯಲ್ಲಿ ಭಾರೀ ಚರ್ಚೆ..!
ಇತ್ತೀಚಿನ ವರ್ಷಗಳಲ್ಲಿ BJP ಯು ಸಂಸದೀಯ ಪ್ರಜಾಪ್ರಭುತ್ವ ಮೌಲ್ಯಗಳಿಂದ ದೂರ ಸರಿದು, ಉತ್ತಮ ಸಂಸದೀಯ ಪಟುಗಳು ಹಾಗೂ ಪ್ರತಿಭಾವಂತರನ್ನು ಕಡೆಗಣಿಸಿ, ಅವಕಾಶವಾದಿಗಳ ತಾಣವಾಗುತ್ತಿರುವುದು ಮನಸ್ಸಿಗೆ ಅಪಾರ ನೋವು ತಂದಿದೆ. ಈ ಬಗ್ಗೆ ಪಕ್ಷದ ಆಂತರಿಕ ವೇದಿಕೆಗಳಲ್ಲಿ, ಪಕ್ಷದ ವರ್ಚಸ್ಸಿಗೆ ಧಕ್ಕೆ ಬರದಂತೆ, ಹಿರಿಯರ ಗಮನಕ್ಕೆ ತರುವ ಪ್ರಯತ್ನಗಳಾದರೂ, ಫಲಿತಾಂಶ ಶೂನ್ಯವಾಗಿದೆ.
ಎಲ್ಲ ಬಲ್ಲ ತಮಗೆ ವ್ಯರ್ಥ ವಿವರಣೆ ನೀಡದೇ, ಬಿಎಸ್ವೈ-ಅನಂತ ಯುಗಾಂತ್ಯದೊಡನೆ BJP ಯಲ್ಲಿ ಒಂದು ದಶಕದ ನನ್ನ ಯಾನಕ್ಕೆ ವಿದಾಯ ಹೇಳುತ್ತಿದ್ದೇನೆ. ಈ ಮೂಲಕ BJP ಯ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆ ನೀಡುತ್ತಿದ್ದು ಸ್ವೀಕರಿಸಬೇಕಾಗಿ ವಿನಮ್ರ ಕೋರಿಕೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ