ವಿಕೆಟ್ ಕೀಪಿಂಗ್ಗಾಗಿ ಆಟಗಾರರ ನಡುವೆ ಭಾರೀ ಪೈಪೋಟಿ
ಚಾನ್ಸ್ಗಾಗಿ ಕಾಯ್ತಿರೋ ರಿಂಕು, ಅಶುತೋಷ್ ಶರ್ಮಾ, ದುಬೆ
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಆಯ್ಕೆ ಕಬ್ಬಿಣದ ಕಡಲೆ
ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಹೇಗಿರಲಿದೆ ? ಯಾರಿಗೆಲ್ಲಾ ಅವಕಾಶ ಸಿಗಬಹುದು ಅನ್ನೋ ಬಿಸಿಬಿಸಿ ಚರ್ಚೆ ನಡೀತಿದೆ. ಈ ಸಲ ಆಯ್ಕೆಯಂತೂ ಸುಲಭವಿಲ್ಲ. ಒಂದು ಸ್ಲಾಟ್ಗೆ 4 ರಿಂದ ಐವರ ಮಧ್ಯೆ ಪೈಪೋಟಿ ಇದ್ದು, ಅಜಿತ್ ಅಗರ್ಕರ್ & ಟೀಮ್ಗೆ ದೊಡ್ಡ ತಲೆನೋವಾಗಿದೆ. ಯಾವೆಲ್ಲ ಸ್ಲಾಟ್ಗೆ, ಯಾವೆಲ್ಲ ಆಟಗಾರರ ನಡುವೆ ಸ್ಪರ್ಧೆ ಇದೆ?.
ಒಂದು ಸ್ಥಾನಕ್ಕೆ 4 ರಿಂದ 5 ಪ್ಲೇಯರ್ಸ್..ಯಾರಿಗೆ ಚಾನ್ಸ್..?
2024ರ ಟಿ20 ವಿಶ್ವಕಪ್ ಹೆಚ್ಚೇನೂ ದೂರವಿಲ್ಲ. ಜೂನ್ 1 ರಿಂದ ಹೊಡಿಬಡಿ ಟೂರ್ನಿ ಆರಂಭಗೊಳ್ಳಲಿದ್ದು, ತಂಡ ಪ್ರಕಟಣೆಗೆ ಕೌಂಟ್ಡೌನ್ ಶುರುವಾಗಿದೆ. ಇದೇ ವಾರಾಂತ್ಯದಲ್ಲಿ ಟೀಮ್ ಇಂಡಿಯಾ ಪ್ರಕಟಗೊಳ್ಳಲಿದ್ದು, ತಂಡದ ಆಯ್ಕೆ ಅಜಿತ್ ಅಗರ್ಕರ್ & ಟೀಮ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾಕಂದ್ರೆ ಒಂದು ಸ್ಥಾನಕ್ಕೆ 4 ರಿಂದ 5 ಪ್ಲೇಯರ್ಸ್ ಮಧ್ಯೆ ಫೈಟ್ ಏರ್ಪಟ್ಟಿದ್ದು, ಯಾರನ್ನ ಆಯ್ಕೆ ಮಾಡಬೇಕು, ಯಾರನ್ನ ಡ್ರಾಪ್ ಮಾಡ್ಬೇಕು ಅಂತಾ ಆಯ್ಕೆಗಾರರಿಗೆ ದಿಕ್ಕೇ ತೋಚದಂತಾಗಿದೆ.
ಇದನ್ನೂ ಓದಿ: ಧಾರಾಕಾರ ಮಳೆ, ಭಯಾನಕ ಸುಂಟರಗಾಳಿಗೆ 5 ಜನ ಸಾವು.. 33ಕ್ಕೂ ಹೆಚ್ಚು ಮಂದಿ ಗಂಭೀರ
ಆರಂಭಿಕ ಸ್ಥಾನಕ್ಕೆ ಪಂಚ ಪಾಂಡವರ ಮಧ್ಯೆ ಫೈಟ್
ಟಿ20 ವಿಶ್ವಕಪ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ಇನ್ನಿಲ್ಲದ ಪೈಪೋಟಿ ಶುರುವಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇವರ ಪೈಕಿ ರೋಹಿತ್ ಸ್ಥಾನ ಖಚಿತವಾಗಿದ್ದು, ರೋಹಿತ್ಗೆ ಸಾಥ್ ನೀಡೋದ್ಯಾರು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. ಗಿಲ್, ಕೊಹ್ಲಿ, ಜೈಸ್ವಾಲ್ಗೆ ಆರಂಭಿಕರಾಗಿ ಆಡಿದ ಅನುಭವವಿದ್ರೆ, ಐಪಿಎಲ್ನಲ್ಲಿ ಆರ್ಭಟಿಸ್ತಿರೋ ಅಭಿಷೇಕ್ ಶರ್ಮಾನ ಕಡೆಗಣಿಸುವಂತಿಲ್ಲ.
ವಿಕೆಟ್ ಕೀಪಿಂಗ್ಗಾಗಿ ನಾ ಕೊಡೆ, ನೀ ಬಿಡೆ ಹಣಾಹಣಿ..!
ಇನ್ನು ವಿಕೆಟ್ ಕೀಪರ್ ಆಯ್ಕೆನೂ ಸೆಲೆಕ್ಟರ್ಸ್ಗೆ ದೊಡ್ಡ ತಲೆನೋವಾಗಿದೆ. ಒಂದು ಸ್ಲಾಟ್ಗೆ ಹಿಂದೆಂದೂ ಕಾಣದಷ್ಟು ಫೈಟ್ ಇದೆ. ಅನುಭವಿ ಕೆಎಲ್ ರಾಹುಲ್, ರಿಷಭ್ ಪಂತ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ರೇಸ್ನಲ್ಲಿದ್ದಾರೆ. ಜಿತೇಶ್ ಶರ್ಮಾ ಹೊರತುಪಡಿಸಿದ್ರೆ, ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡ್ತಿದ್ದು, ಸೆಲೆಕ್ಷನ್ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಫಿನಿಶರ್ ಸ್ಥಾನದ ಮೇಲೆ ಮೂವರು ಹದ್ದಿನ ಕಣ್ಣು
ಫಿನಿಶರ್ ಆಯ್ಕೆನೂ ಸುಲಭವಿಲ್ಲ. ಈ ಸ್ಲಾಟ್ ಕಬ್ಜ ಮಾಡಿಕೊಳ್ಳಲು ನಾಲ್ವರು ಕಾಯ್ತಿದ್ದಾರೆ. ರಿಂಕು ಸಿಂಗ್, ಅಶುತೋಷ್ ಶರ್ಮಾ ಹಾಗೂ ಶಿವಂ ದುಬೆ ಅವಕಾಶಕ್ಕಾಗಿ ಎದುರು ನೋಡ್ತಿದ್ದಾರೆ. ಈ ತ್ರಿಮೂರ್ತಿಗಳಲ್ಲಿ ಯಾರಿಗೆ ಮಣೆ ಹಾಕ್ಬೇಕು ? ಯಾರನ್ನ ಕೈ ಬಿಡಬೇಕು.? ಅನ್ನೋ ಪ್ರಶ್ನೆ ಸೆಲೆಕ್ಟರ್ಸ್ನ ಕಾಡ್ತಿದೆ.
ಇದನ್ನೂ ಓದಿ: ಗಿಲ್ ಪಡೆಗೂ ಇದು ಡು ಆರ್ ಡೈ ಪಂದ್ಯ.. ಗೆಲುವಿನ ಉತ್ಸಾಹದಲ್ಲಿರೋ RCB ಮುಂದಿದೆ ಬಿಗ್ ಚಾಲೆಂಜ್
ಸ್ಪಿನ್ನರ್ಸ್ ರೇಸ್ನಲ್ಲಿ ಐವರು ಘಟಾನುಘಟಿಗಳು
ಸ್ಪಿನ್ ವಿಭಾಗದ ಆಯ್ಕೆನೂ ಕಬ್ಬಿಣದ ಕಡಲೆಯಾಗಿದೆ. ಯಾಕಂದ್ರೆ ಘಟಾನುಘಟಿ ಸ್ಪಿನ್ನರ್ಗಳೇ ಈ ರೇಸ್ನಲ್ಲಿದ್ದಾರೆ. ಚೈನಾಮನ್ ಕುಲ್ದೀಪ್ ಯಾದವ್, ಕೇರಂ ಸ್ಪಿನ್ನರ್, ಆರ್ ಅಶ್ವಿನ್, ರಿಸ್ಟ್ ಸ್ಪಿನ್ನರ್ ಯುಜವೇಂದ್ರ ಚಹಲ್ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಈ ಪೈಕಿ ಕುಲ್ದೀಪ್ ಮೊದಲ ಆಯ್ಕೆಯಾಗಿದ್ದು, ಉಳಿದ ಒಂದು ಸ್ಥಾನಕ್ಕೆ ನಾಲ್ವರ ಮಧ್ಯೆ ಮೆಗಾ ಫೈಟ್ ಏರ್ಪಟ್ಟಿದೆ.
ಇದನ್ನೂ ಓದಿ: IPLನಲ್ಲಿ ಮೊಟ್ಟ ಮೊದಲ ಹಾಫ್ಸೆಂಚುರಿ.. ಫ್ಯಾಮಿಲಿ ಜೊತೆ ಸಂಭ್ರಮಿಸಿದ ರಾಯಲ್ಸ್ ಪ್ಲೇಯರ್!
ಈ ಸಲದ ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಆಯ್ಕೆ ಕಬ್ಬಿಣದ ಕಡಲೆಯಾಗಿದೆ. ಅಳೆದು ತೂಗಿ ಬಲಿಷ್ಠ ತಂಡವನ್ನ ಕಟ್ಟಬೇಕಾದ ದೊಡ್ಡ ಜವಾಬ್ದಾರಿ ಆಯ್ಕೆಗಾರರ ಮೇಲಿದೆ. ಯಾರಿಗೆಲ್ಲಾ ಅದೃಷ್ಟ ಖುಲಾಯಿಸುತ್ತೆ ಅನ್ನೋದಕ್ಕೆ ಈ ವಾರಾಂತ್ಯದಲ್ಲಿ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಕೆಟ್ ಕೀಪಿಂಗ್ಗಾಗಿ ಆಟಗಾರರ ನಡುವೆ ಭಾರೀ ಪೈಪೋಟಿ
ಚಾನ್ಸ್ಗಾಗಿ ಕಾಯ್ತಿರೋ ರಿಂಕು, ಅಶುತೋಷ್ ಶರ್ಮಾ, ದುಬೆ
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಆಯ್ಕೆ ಕಬ್ಬಿಣದ ಕಡಲೆ
ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಹೇಗಿರಲಿದೆ ? ಯಾರಿಗೆಲ್ಲಾ ಅವಕಾಶ ಸಿಗಬಹುದು ಅನ್ನೋ ಬಿಸಿಬಿಸಿ ಚರ್ಚೆ ನಡೀತಿದೆ. ಈ ಸಲ ಆಯ್ಕೆಯಂತೂ ಸುಲಭವಿಲ್ಲ. ಒಂದು ಸ್ಲಾಟ್ಗೆ 4 ರಿಂದ ಐವರ ಮಧ್ಯೆ ಪೈಪೋಟಿ ಇದ್ದು, ಅಜಿತ್ ಅಗರ್ಕರ್ & ಟೀಮ್ಗೆ ದೊಡ್ಡ ತಲೆನೋವಾಗಿದೆ. ಯಾವೆಲ್ಲ ಸ್ಲಾಟ್ಗೆ, ಯಾವೆಲ್ಲ ಆಟಗಾರರ ನಡುವೆ ಸ್ಪರ್ಧೆ ಇದೆ?.
ಒಂದು ಸ್ಥಾನಕ್ಕೆ 4 ರಿಂದ 5 ಪ್ಲೇಯರ್ಸ್..ಯಾರಿಗೆ ಚಾನ್ಸ್..?
2024ರ ಟಿ20 ವಿಶ್ವಕಪ್ ಹೆಚ್ಚೇನೂ ದೂರವಿಲ್ಲ. ಜೂನ್ 1 ರಿಂದ ಹೊಡಿಬಡಿ ಟೂರ್ನಿ ಆರಂಭಗೊಳ್ಳಲಿದ್ದು, ತಂಡ ಪ್ರಕಟಣೆಗೆ ಕೌಂಟ್ಡೌನ್ ಶುರುವಾಗಿದೆ. ಇದೇ ವಾರಾಂತ್ಯದಲ್ಲಿ ಟೀಮ್ ಇಂಡಿಯಾ ಪ್ರಕಟಗೊಳ್ಳಲಿದ್ದು, ತಂಡದ ಆಯ್ಕೆ ಅಜಿತ್ ಅಗರ್ಕರ್ & ಟೀಮ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾಕಂದ್ರೆ ಒಂದು ಸ್ಥಾನಕ್ಕೆ 4 ರಿಂದ 5 ಪ್ಲೇಯರ್ಸ್ ಮಧ್ಯೆ ಫೈಟ್ ಏರ್ಪಟ್ಟಿದ್ದು, ಯಾರನ್ನ ಆಯ್ಕೆ ಮಾಡಬೇಕು, ಯಾರನ್ನ ಡ್ರಾಪ್ ಮಾಡ್ಬೇಕು ಅಂತಾ ಆಯ್ಕೆಗಾರರಿಗೆ ದಿಕ್ಕೇ ತೋಚದಂತಾಗಿದೆ.
ಇದನ್ನೂ ಓದಿ: ಧಾರಾಕಾರ ಮಳೆ, ಭಯಾನಕ ಸುಂಟರಗಾಳಿಗೆ 5 ಜನ ಸಾವು.. 33ಕ್ಕೂ ಹೆಚ್ಚು ಮಂದಿ ಗಂಭೀರ
ಆರಂಭಿಕ ಸ್ಥಾನಕ್ಕೆ ಪಂಚ ಪಾಂಡವರ ಮಧ್ಯೆ ಫೈಟ್
ಟಿ20 ವಿಶ್ವಕಪ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ಇನ್ನಿಲ್ಲದ ಪೈಪೋಟಿ ಶುರುವಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇವರ ಪೈಕಿ ರೋಹಿತ್ ಸ್ಥಾನ ಖಚಿತವಾಗಿದ್ದು, ರೋಹಿತ್ಗೆ ಸಾಥ್ ನೀಡೋದ್ಯಾರು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. ಗಿಲ್, ಕೊಹ್ಲಿ, ಜೈಸ್ವಾಲ್ಗೆ ಆರಂಭಿಕರಾಗಿ ಆಡಿದ ಅನುಭವವಿದ್ರೆ, ಐಪಿಎಲ್ನಲ್ಲಿ ಆರ್ಭಟಿಸ್ತಿರೋ ಅಭಿಷೇಕ್ ಶರ್ಮಾನ ಕಡೆಗಣಿಸುವಂತಿಲ್ಲ.
ವಿಕೆಟ್ ಕೀಪಿಂಗ್ಗಾಗಿ ನಾ ಕೊಡೆ, ನೀ ಬಿಡೆ ಹಣಾಹಣಿ..!
ಇನ್ನು ವಿಕೆಟ್ ಕೀಪರ್ ಆಯ್ಕೆನೂ ಸೆಲೆಕ್ಟರ್ಸ್ಗೆ ದೊಡ್ಡ ತಲೆನೋವಾಗಿದೆ. ಒಂದು ಸ್ಲಾಟ್ಗೆ ಹಿಂದೆಂದೂ ಕಾಣದಷ್ಟು ಫೈಟ್ ಇದೆ. ಅನುಭವಿ ಕೆಎಲ್ ರಾಹುಲ್, ರಿಷಭ್ ಪಂತ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ರೇಸ್ನಲ್ಲಿದ್ದಾರೆ. ಜಿತೇಶ್ ಶರ್ಮಾ ಹೊರತುಪಡಿಸಿದ್ರೆ, ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡ್ತಿದ್ದು, ಸೆಲೆಕ್ಷನ್ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಫಿನಿಶರ್ ಸ್ಥಾನದ ಮೇಲೆ ಮೂವರು ಹದ್ದಿನ ಕಣ್ಣು
ಫಿನಿಶರ್ ಆಯ್ಕೆನೂ ಸುಲಭವಿಲ್ಲ. ಈ ಸ್ಲಾಟ್ ಕಬ್ಜ ಮಾಡಿಕೊಳ್ಳಲು ನಾಲ್ವರು ಕಾಯ್ತಿದ್ದಾರೆ. ರಿಂಕು ಸಿಂಗ್, ಅಶುತೋಷ್ ಶರ್ಮಾ ಹಾಗೂ ಶಿವಂ ದುಬೆ ಅವಕಾಶಕ್ಕಾಗಿ ಎದುರು ನೋಡ್ತಿದ್ದಾರೆ. ಈ ತ್ರಿಮೂರ್ತಿಗಳಲ್ಲಿ ಯಾರಿಗೆ ಮಣೆ ಹಾಕ್ಬೇಕು ? ಯಾರನ್ನ ಕೈ ಬಿಡಬೇಕು.? ಅನ್ನೋ ಪ್ರಶ್ನೆ ಸೆಲೆಕ್ಟರ್ಸ್ನ ಕಾಡ್ತಿದೆ.
ಇದನ್ನೂ ಓದಿ: ಗಿಲ್ ಪಡೆಗೂ ಇದು ಡು ಆರ್ ಡೈ ಪಂದ್ಯ.. ಗೆಲುವಿನ ಉತ್ಸಾಹದಲ್ಲಿರೋ RCB ಮುಂದಿದೆ ಬಿಗ್ ಚಾಲೆಂಜ್
ಸ್ಪಿನ್ನರ್ಸ್ ರೇಸ್ನಲ್ಲಿ ಐವರು ಘಟಾನುಘಟಿಗಳು
ಸ್ಪಿನ್ ವಿಭಾಗದ ಆಯ್ಕೆನೂ ಕಬ್ಬಿಣದ ಕಡಲೆಯಾಗಿದೆ. ಯಾಕಂದ್ರೆ ಘಟಾನುಘಟಿ ಸ್ಪಿನ್ನರ್ಗಳೇ ಈ ರೇಸ್ನಲ್ಲಿದ್ದಾರೆ. ಚೈನಾಮನ್ ಕುಲ್ದೀಪ್ ಯಾದವ್, ಕೇರಂ ಸ್ಪಿನ್ನರ್, ಆರ್ ಅಶ್ವಿನ್, ರಿಸ್ಟ್ ಸ್ಪಿನ್ನರ್ ಯುಜವೇಂದ್ರ ಚಹಲ್ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಈ ಪೈಕಿ ಕುಲ್ದೀಪ್ ಮೊದಲ ಆಯ್ಕೆಯಾಗಿದ್ದು, ಉಳಿದ ಒಂದು ಸ್ಥಾನಕ್ಕೆ ನಾಲ್ವರ ಮಧ್ಯೆ ಮೆಗಾ ಫೈಟ್ ಏರ್ಪಟ್ಟಿದೆ.
ಇದನ್ನೂ ಓದಿ: IPLನಲ್ಲಿ ಮೊಟ್ಟ ಮೊದಲ ಹಾಫ್ಸೆಂಚುರಿ.. ಫ್ಯಾಮಿಲಿ ಜೊತೆ ಸಂಭ್ರಮಿಸಿದ ರಾಯಲ್ಸ್ ಪ್ಲೇಯರ್!
ಈ ಸಲದ ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಆಯ್ಕೆ ಕಬ್ಬಿಣದ ಕಡಲೆಯಾಗಿದೆ. ಅಳೆದು ತೂಗಿ ಬಲಿಷ್ಠ ತಂಡವನ್ನ ಕಟ್ಟಬೇಕಾದ ದೊಡ್ಡ ಜವಾಬ್ದಾರಿ ಆಯ್ಕೆಗಾರರ ಮೇಲಿದೆ. ಯಾರಿಗೆಲ್ಲಾ ಅದೃಷ್ಟ ಖುಲಾಯಿಸುತ್ತೆ ಅನ್ನೋದಕ್ಕೆ ಈ ವಾರಾಂತ್ಯದಲ್ಲಿ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ