ಟಿ-20 ವಿಶ್ವಕಪ್ಗೆ ಟೀಮ್ ಇಂಡಿಯಾ ಅನೌನ್ಸ್
ವಿಶ್ವಕಪ್ ಮಹಾಸಮರಕ್ಕೆ 15 ವೀರ ಕಲಿಗಳು ಸನ್ನದ್ಧ
ಯಂಗ್ ಇಂಡಿಯಾ ಕಟ್ಟಿದ ಬಿಸಿಸಿಐ, ಯಾರಿಗೆ ಜಾಕ್ಪಾಟ್?
ಕೊನೆಗೂ ಎಲ್ಲಾ ಕಾಯುವಿಕೆಗೆ ತೆರೆ ಬಿದ್ದಿದೆ. ತಡವಾದ್ರು ಮುಂಬರೋ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಬಲಿಷ್ಠ ಟೀಮ್ ಇಂಡಿಯಾವನ್ನ ಪ್ರಕಟಿಸಿದೆ. ಆಯ್ಕೆ ಆಗೇ ಆಗ್ತೀನಿ ಅನ್ನುವ ನಿರೀಕ್ಷೆಯಲ್ಲಿದ್ದವರಿಗೆ ಸೆಲೆಕ್ಟರ್ಸ್ ಶಾಕ್ ನೀಡಿದ್ದಾರೆ. ಕೆಲವರಿಗೆ ಬಂಪರ್ ಲಾಟರಿ ಹೊಡೆದಿದೆ.
T20 ವಿಶ್ವಕಪ್ಗೆ ಟೀಮ್ ಇಂಡಿಯಾ ಅನೌನ್ಸ್
ಸೆಲೆಕ್ಟರ್ಸ್ ಟಿ20 ವಿಶ್ವಕಪ್ಗೆ ಸಂಬಂಧಿಸಿದಂತೆ ಎಲ್ಲಾ ಅಂತೆ ಕಂತೆಗಳಿಗೆ ಫುಲ್ಸ್ಟಾಪ್ ಹಾಕಿದ್ದಾರೆ. ಪಕ್ಕಾ ಲೆಕ್ಕಾಚಾರ ಹಾಕಿ ಟೀಮ್ ಅನೌನ್ಸ್ ಮಾಡಿದ್ದಾರೆ. ಐಪಿಎಲ್ ಪ್ರದರ್ಶನ ಪರಿಗಣಿಸದೇ, ಯಾರಿಗೂ ಕಾಂಪ್ರಮೈಸ್ ಆಗದೇ ಬಲಿಷ್ಠ ತಂಡವನ್ನ ಪ್ರಕಟಿಸಿದ್ದಾರೆ. ಯಾರ ಮುಲಾಜಿಲ್ಲದೇ, ಸ್ಟಾರ್ಗಿರಿ ಬದಿಗೊತ್ತಿ 15 ಅತಿರಥ ಮಹಾರಥರ ಯಂಗ್ ಇಂಡಿಯಾವನ್ನ ವೆಸ್ಟ್ಇಂಡೀಸ್ ಹಾಗೂ ಅಮೆರಿಕಾಗೆ ಕಳುಹಿಸಲಿದೆ. ಅಳೆದು ತೂಗಿ ತಂಡವನ್ನ ಪ್ರಕಟಿಸಿರೋ ಸೆಲೆಕ್ಟರ್ಸ್ ಬಲಾಢ್ಯ ಟಾಪ್ ಆರ್ಡರ್ ಕಟ್ಟಿದೆ. ಇವರು ಸಿಡಿದೆದ್ರೆ ಎದುರಾಳಿ ತಂಡದ ಕಥೆ ಖತಂ ಆಗೋದು ಗ್ಯಾರಂಟಿ.
ಇದನ್ನೂ ಓದಿ: ಗ್ರಾಹಕರಿಗೆ ಗುಡ್ ನ್ಯೂಸ್.. ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
ಟಾಪ್ ಆರ್ಡರ್
ಕ್ಯಾಪ್ಟನ್ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಓಪನರ್ಗಾಗಿ ಆಡಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಡೇಂಜರಸ್ ಸೂರ್ಯಕುಮಾರ್ ಯಾದವ್ ಕೂಡ ಟಾಪ್ ಆರ್ಡರ್ನಲ್ಲಿದ್ದಾರೆ. 15 ಸದಸ್ಯರ ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್ಗಳಿಗೆ ಸೆಲೆಕ್ಟರ್ಸ್ ಮಣೆ ಹಾಕಿದ್ದಾರೆ. ಈ ಇಬ್ಬರಿಗೂ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ತಾಕತ್ತು ಹೊಂದಿದ್ದಾರೆ.
ವಿಕೆಟ್ ಕೀಪರ್ಸ್
ವಿಕೆಟ್ ಕೀಪರ್ಗಳಾಗಿ ರಿಷಬ್ ಪಂತ್ ಹಾಗೂ ಬಿಗ್ ಹಿಟ್ಟರ್ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ. ಪಂತ್ ಲಾಂಗ್ ಗ್ಯಾಪ್ನ ಬಳಿಕ ಕಮ್ಬ್ಯಾಕ್ ಮಾಡಿದ್ರೆ, ಸಂಜುಗೆ ಅದೃಷ್ಟ ಖುಲಾಯಿಸಿದೆ. ವಿಶ್ವಕಪ್ನಂತ ಗ್ಲೋಬಲ್ ಈವೆಂಟ್ ಗೆಲ್ಲಬೇಕಾದ್ರೆ ಆಲ್ರೌಂಡರ್ಸ್ ಬಹುಮುಖ್ಯ. ಅದನ್ನ ಪರಿಗಣಿಸಿಯೇ ಸೆಲೆಕ್ಟರ್ಸ್ ಇಬ್ಬರು ಪೇಸ್ ಆಲ್ರೌಂಡರ್ಗಳಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.
ಇದನ್ನೂ ಓದಿ:ಭೀಕರ ಅಪಘಾತ.. ಕಂದಕಕ್ಕೆ ಉರುಳಿದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್
ಪೇಸ್ ಆಲ್ರೌಂಡರ್ಸ್
ನಿರೀಕ್ಷೆಯಂತೆ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪಾಂಡ್ಯಾಗೆ ಉಪನಾಯಕನ ಪಟ್ಟವನ್ನೂ ಕಟ್ಟಲಾಗಿದೆ. ಇವರ ಜೊತೆ ಯಂಗ್ ಸೆನ್ಷೆಷನ್ ಶಿವಂ ದುಬೆಗೂ ಜಾಕ್ಪಾಟ್ ಹೊಡೆದಿದೆ. ಸ್ಪಿನ್ನರ್ಸ್ ಆಯ್ಕೆಯಲ್ಲೂ ಸೆಲೆಕ್ಟರ್ಸ್ ಸಮರ್ಥರಿಗೆ ಮಣೆ ಹಾಕಿದ್ದಾರೆ. ಇವರ ಅಪಾರ ಅನುಭವ ಹಾಗೂ ಪ್ರಸೆಂಟ್ ಫಾರ್ಮ್ ಡೆಫಿನೆಟ್ಲಿ ವಿಶ್ವಕಪ್ನಲ್ಲಿ ತಂಡಕ್ಕೆ ನೆರವಾಗಲಿದೆ.
ಸ್ಪಿನ್ನರ್ಸ್
ಮ್ಯಾಚ್ ವಿನ್ನರ್ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಸ್ಪಿನ್ ಆಲ್ರೌಂಡರ್ಗಳಾಗಿ ತಂಡದಲ್ಲಿದ್ದಾರೆ. ಸ್ಪೆಷಲಿಸ್ಟ್ ಸ್ಪಿನ್ನರ್ಗಳಾಗಿ ಕುಲ್ದೀಪ್ ಯಾದವ್ ಹಾಗೂ ಯುಜವೇಂದ್ರ ಚಹಲ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫಾಸ್ಟ್ ಬೌಲಿಂಗ್ ವಿಭಾಗ ತಂಡಕ್ಕೆ ದೊಡ್ಡ ಶಕ್ತಿ. ಅದನ್ನ ನಿಜವಾಗಿಸುವ ನಿಟ್ಟಿನಲ್ಲಿ ಮೂವರು ಸ್ಟಾರ್ ವೇಗಿಗಳು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:ಭಾರೀ ಮಳೆಗೆ ಕುಸಿದ ಅಣೆಕಟ್ಟು.. ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ.. ಪ್ರವಾಹ ಹೋದಲೆಲ್ಲ ನರಕದರ್ಶನ..!
ಫಾಸ್ಟ್ ಬೌಲರ್ಸ್
ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಮೊದಲ ಆಯ್ಕೆ ವೇಗಿಯಾಗಿದ್ದಾರೆ. ಬೂಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್ ಹಾಗೂ ಆರ್ಷ್ದೀಪ್ ಸಿಂಗ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 15 ಆಟಗಾರರ ಪ್ರಮುಖ ತಂಡದ ಜೊತೆ ನಾಲ್ವರು ರಿಸರ್ವ್ ಆಟಗಾರರನ್ನ ಕೂಡ ಆಯ್ಕೆ ಸಮಿತಿ ಅನೌನ್ಸ್ ಮಾಡಿದೆ.
ರಿಸರ್ವ್ ಆಟಗಾರರು
ಬ್ಯಾಟ್ಸ್ಮನ್ಗಳಾದ ಶುಭ್ಮನ್ ಗಿಲ್, ರಿಂಕು ಸಿಂಗ್ ರಿಸರ್ವ್ ಪ್ಲೇಯರ್ಸ್ಗಳಾಗಿದ್ದಾರೆ. ವೇಗಿಗಳ ಕೋಟಾದಲ್ಲಿ ಆವೇಶ್ ಖಾನ್ ಹಾಗೂ ಖಲೀಲ್ ಅಹ್ಮದ್ ಸ್ಥಾನ ಪಡೆದಿದ್ದಾರೆ. ಒಟ್ಟಿನಲ್ಲಿ, ಅಳೆದು ತೂಗಿ ಲೆಕ್ಕಾಚಾರ ಹಾಕಿ ಬಿಸಿಸಿಐ ಬಲಿಷ್ಠ ತಂಡವನ್ನು ಟಿ20 ವಿಶ್ವಕಪ್ಗೆ ಅಣಿಗೊಳಿಸಿದೆ. ಈ 15 ಆಟಗಾರರು ವೀರ ಸೇನಾನಿಗಳಂತೆ ಹೋರಾಡಿ 2ನೇ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಡ್ತಾರಾ? ಕಾದುನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟಿ-20 ವಿಶ್ವಕಪ್ಗೆ ಟೀಮ್ ಇಂಡಿಯಾ ಅನೌನ್ಸ್
ವಿಶ್ವಕಪ್ ಮಹಾಸಮರಕ್ಕೆ 15 ವೀರ ಕಲಿಗಳು ಸನ್ನದ್ಧ
ಯಂಗ್ ಇಂಡಿಯಾ ಕಟ್ಟಿದ ಬಿಸಿಸಿಐ, ಯಾರಿಗೆ ಜಾಕ್ಪಾಟ್?
ಕೊನೆಗೂ ಎಲ್ಲಾ ಕಾಯುವಿಕೆಗೆ ತೆರೆ ಬಿದ್ದಿದೆ. ತಡವಾದ್ರು ಮುಂಬರೋ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಬಲಿಷ್ಠ ಟೀಮ್ ಇಂಡಿಯಾವನ್ನ ಪ್ರಕಟಿಸಿದೆ. ಆಯ್ಕೆ ಆಗೇ ಆಗ್ತೀನಿ ಅನ್ನುವ ನಿರೀಕ್ಷೆಯಲ್ಲಿದ್ದವರಿಗೆ ಸೆಲೆಕ್ಟರ್ಸ್ ಶಾಕ್ ನೀಡಿದ್ದಾರೆ. ಕೆಲವರಿಗೆ ಬಂಪರ್ ಲಾಟರಿ ಹೊಡೆದಿದೆ.
T20 ವಿಶ್ವಕಪ್ಗೆ ಟೀಮ್ ಇಂಡಿಯಾ ಅನೌನ್ಸ್
ಸೆಲೆಕ್ಟರ್ಸ್ ಟಿ20 ವಿಶ್ವಕಪ್ಗೆ ಸಂಬಂಧಿಸಿದಂತೆ ಎಲ್ಲಾ ಅಂತೆ ಕಂತೆಗಳಿಗೆ ಫುಲ್ಸ್ಟಾಪ್ ಹಾಕಿದ್ದಾರೆ. ಪಕ್ಕಾ ಲೆಕ್ಕಾಚಾರ ಹಾಕಿ ಟೀಮ್ ಅನೌನ್ಸ್ ಮಾಡಿದ್ದಾರೆ. ಐಪಿಎಲ್ ಪ್ರದರ್ಶನ ಪರಿಗಣಿಸದೇ, ಯಾರಿಗೂ ಕಾಂಪ್ರಮೈಸ್ ಆಗದೇ ಬಲಿಷ್ಠ ತಂಡವನ್ನ ಪ್ರಕಟಿಸಿದ್ದಾರೆ. ಯಾರ ಮುಲಾಜಿಲ್ಲದೇ, ಸ್ಟಾರ್ಗಿರಿ ಬದಿಗೊತ್ತಿ 15 ಅತಿರಥ ಮಹಾರಥರ ಯಂಗ್ ಇಂಡಿಯಾವನ್ನ ವೆಸ್ಟ್ಇಂಡೀಸ್ ಹಾಗೂ ಅಮೆರಿಕಾಗೆ ಕಳುಹಿಸಲಿದೆ. ಅಳೆದು ತೂಗಿ ತಂಡವನ್ನ ಪ್ರಕಟಿಸಿರೋ ಸೆಲೆಕ್ಟರ್ಸ್ ಬಲಾಢ್ಯ ಟಾಪ್ ಆರ್ಡರ್ ಕಟ್ಟಿದೆ. ಇವರು ಸಿಡಿದೆದ್ರೆ ಎದುರಾಳಿ ತಂಡದ ಕಥೆ ಖತಂ ಆಗೋದು ಗ್ಯಾರಂಟಿ.
ಇದನ್ನೂ ಓದಿ: ಗ್ರಾಹಕರಿಗೆ ಗುಡ್ ನ್ಯೂಸ್.. ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
ಟಾಪ್ ಆರ್ಡರ್
ಕ್ಯಾಪ್ಟನ್ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಓಪನರ್ಗಾಗಿ ಆಡಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಡೇಂಜರಸ್ ಸೂರ್ಯಕುಮಾರ್ ಯಾದವ್ ಕೂಡ ಟಾಪ್ ಆರ್ಡರ್ನಲ್ಲಿದ್ದಾರೆ. 15 ಸದಸ್ಯರ ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್ಗಳಿಗೆ ಸೆಲೆಕ್ಟರ್ಸ್ ಮಣೆ ಹಾಕಿದ್ದಾರೆ. ಈ ಇಬ್ಬರಿಗೂ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ತಾಕತ್ತು ಹೊಂದಿದ್ದಾರೆ.
ವಿಕೆಟ್ ಕೀಪರ್ಸ್
ವಿಕೆಟ್ ಕೀಪರ್ಗಳಾಗಿ ರಿಷಬ್ ಪಂತ್ ಹಾಗೂ ಬಿಗ್ ಹಿಟ್ಟರ್ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ. ಪಂತ್ ಲಾಂಗ್ ಗ್ಯಾಪ್ನ ಬಳಿಕ ಕಮ್ಬ್ಯಾಕ್ ಮಾಡಿದ್ರೆ, ಸಂಜುಗೆ ಅದೃಷ್ಟ ಖುಲಾಯಿಸಿದೆ. ವಿಶ್ವಕಪ್ನಂತ ಗ್ಲೋಬಲ್ ಈವೆಂಟ್ ಗೆಲ್ಲಬೇಕಾದ್ರೆ ಆಲ್ರೌಂಡರ್ಸ್ ಬಹುಮುಖ್ಯ. ಅದನ್ನ ಪರಿಗಣಿಸಿಯೇ ಸೆಲೆಕ್ಟರ್ಸ್ ಇಬ್ಬರು ಪೇಸ್ ಆಲ್ರೌಂಡರ್ಗಳಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.
ಇದನ್ನೂ ಓದಿ:ಭೀಕರ ಅಪಘಾತ.. ಕಂದಕಕ್ಕೆ ಉರುಳಿದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್
ಪೇಸ್ ಆಲ್ರೌಂಡರ್ಸ್
ನಿರೀಕ್ಷೆಯಂತೆ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪಾಂಡ್ಯಾಗೆ ಉಪನಾಯಕನ ಪಟ್ಟವನ್ನೂ ಕಟ್ಟಲಾಗಿದೆ. ಇವರ ಜೊತೆ ಯಂಗ್ ಸೆನ್ಷೆಷನ್ ಶಿವಂ ದುಬೆಗೂ ಜಾಕ್ಪಾಟ್ ಹೊಡೆದಿದೆ. ಸ್ಪಿನ್ನರ್ಸ್ ಆಯ್ಕೆಯಲ್ಲೂ ಸೆಲೆಕ್ಟರ್ಸ್ ಸಮರ್ಥರಿಗೆ ಮಣೆ ಹಾಕಿದ್ದಾರೆ. ಇವರ ಅಪಾರ ಅನುಭವ ಹಾಗೂ ಪ್ರಸೆಂಟ್ ಫಾರ್ಮ್ ಡೆಫಿನೆಟ್ಲಿ ವಿಶ್ವಕಪ್ನಲ್ಲಿ ತಂಡಕ್ಕೆ ನೆರವಾಗಲಿದೆ.
ಸ್ಪಿನ್ನರ್ಸ್
ಮ್ಯಾಚ್ ವಿನ್ನರ್ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಸ್ಪಿನ್ ಆಲ್ರೌಂಡರ್ಗಳಾಗಿ ತಂಡದಲ್ಲಿದ್ದಾರೆ. ಸ್ಪೆಷಲಿಸ್ಟ್ ಸ್ಪಿನ್ನರ್ಗಳಾಗಿ ಕುಲ್ದೀಪ್ ಯಾದವ್ ಹಾಗೂ ಯುಜವೇಂದ್ರ ಚಹಲ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫಾಸ್ಟ್ ಬೌಲಿಂಗ್ ವಿಭಾಗ ತಂಡಕ್ಕೆ ದೊಡ್ಡ ಶಕ್ತಿ. ಅದನ್ನ ನಿಜವಾಗಿಸುವ ನಿಟ್ಟಿನಲ್ಲಿ ಮೂವರು ಸ್ಟಾರ್ ವೇಗಿಗಳು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:ಭಾರೀ ಮಳೆಗೆ ಕುಸಿದ ಅಣೆಕಟ್ಟು.. ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ.. ಪ್ರವಾಹ ಹೋದಲೆಲ್ಲ ನರಕದರ್ಶನ..!
ಫಾಸ್ಟ್ ಬೌಲರ್ಸ್
ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಮೊದಲ ಆಯ್ಕೆ ವೇಗಿಯಾಗಿದ್ದಾರೆ. ಬೂಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್ ಹಾಗೂ ಆರ್ಷ್ದೀಪ್ ಸಿಂಗ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 15 ಆಟಗಾರರ ಪ್ರಮುಖ ತಂಡದ ಜೊತೆ ನಾಲ್ವರು ರಿಸರ್ವ್ ಆಟಗಾರರನ್ನ ಕೂಡ ಆಯ್ಕೆ ಸಮಿತಿ ಅನೌನ್ಸ್ ಮಾಡಿದೆ.
ರಿಸರ್ವ್ ಆಟಗಾರರು
ಬ್ಯಾಟ್ಸ್ಮನ್ಗಳಾದ ಶುಭ್ಮನ್ ಗಿಲ್, ರಿಂಕು ಸಿಂಗ್ ರಿಸರ್ವ್ ಪ್ಲೇಯರ್ಸ್ಗಳಾಗಿದ್ದಾರೆ. ವೇಗಿಗಳ ಕೋಟಾದಲ್ಲಿ ಆವೇಶ್ ಖಾನ್ ಹಾಗೂ ಖಲೀಲ್ ಅಹ್ಮದ್ ಸ್ಥಾನ ಪಡೆದಿದ್ದಾರೆ. ಒಟ್ಟಿನಲ್ಲಿ, ಅಳೆದು ತೂಗಿ ಲೆಕ್ಕಾಚಾರ ಹಾಕಿ ಬಿಸಿಸಿಐ ಬಲಿಷ್ಠ ತಂಡವನ್ನು ಟಿ20 ವಿಶ್ವಕಪ್ಗೆ ಅಣಿಗೊಳಿಸಿದೆ. ಈ 15 ಆಟಗಾರರು ವೀರ ಸೇನಾನಿಗಳಂತೆ ಹೋರಾಡಿ 2ನೇ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಡ್ತಾರಾ? ಕಾದುನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್