ಕಪ್ ಎತ್ತು ಕನಸನ್ನು ಇನ್ನೂ ಇಟ್ಟುಕೊಂಡಿರುವ ಆರ್ಸಿಬಿ
ಮುಂದಿನ 4 ಪಂದ್ಯಗಳನ್ನು ಗೆಲ್ಲಲೇಬೇಕಿದೆ ಬೆಂಗಳೂರು ತಂಡ
ಒಂದು ವೇಳೆ ಹೀಗಾದರೆ ಪ್ಲೇ-ಆಫ್ ಕನಸು ಭಗ್ನಗೊಳ್ಳಲಿದೆ
10 ಪಂದ್ಯಗಳನ್ನು ಆಡಿ ಮೂರು ಪಂದ್ಯಗಳಲ್ಲಿ ಗೆದ್ದುಕೊಂಡಿರುವ ಆರ್ಸಿಬಿ ಇನ್ನೂ ಪ್ಲೇ-ಆಫ್ ಕನಸು ಕಾಣುತ್ತಿದೆ. ಉಳಿದಿರುವ ಪಂದ್ಯಗಳನ್ನು ಅಂದುಕೊಂಡಂತೆ ಆಡಿದರೆ, ಜೊತೆಗೆ ಅದೃಷ್ಟವೂ ಕೈಹಿಡಿದರೆ ಆರ್ಸಿಬಿ ಪ್ಲೇ-ಆಫ್ಗೆ ಹೋಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.
ಇದೀಗ ಆರ್ಸಿಬಿ ಅಭಿಮಾನಿಗಳಲ್ಲಿ, ತಂಡದಲ್ಲಿ ಒಂದು ಸಣ್ಣ ಆತಂಕ ಕಾಡಲು ಶುರುಮಾಡಿದೆ. ಅದು ಏನೆಂದರೆ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ. ಹೌದು ಮುಂದಿನ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರಲ್ಲಿ ಸಂಜೆ ಮತ್ತು ರಾತ್ರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯ ನಡೆಯುವ ವೇಳೆ ಭರ್ಜರಿಯಾಗಿ ಮಳೆ ಬಂದರೆ ರದ್ದಾಗುವ ಸಾಧ್ಯತೆ ಇದೆ. ಅಂದ್ಹಾಗೆ ನಾಳೆ ಆರ್ಸಿಬಿ ತಂಡವು ಗುಜರಾತ್ ಟೈಟನ್ಸ್ ತಂಡವನ್ನು ಚಿನ್ನಸ್ವಾಮಿ ಮೈದಾನದಲ್ಲಿ ಎದುರಿಸುತ್ತಿದೆ.
ಇದನ್ನೂ ಓದಿ:ರಾಯ್ ಬರೇಲಿಯಿಂದ ರಾಹುಲ್ ಸ್ಪರ್ಧೆ.. ಅಮೇಥಿ ಕ್ಷೇತ್ರ ಬೇರೆಯವರಿಗೆ ಬಿಟ್ಟುಕೊಟ್ಟ ಗಾಂಧಿ ಕುಟುಂಬ!
ಒಂದು ವೇಳೆ ಮಳೆ ಜೋರಾಗಿ ಬಂದರೆ, ಪಂದ್ಯ ರದ್ದಾದರೆ ಆರ್ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ಈ ವಿಚಾರ ಆರ್ಸಿಬಿ ಹಾಗೂ ಅಭಿಮಾನಿಗಳಲ್ಲಿ ಭಾರೀ ಆತಂಕವನ್ನು ಮಾಡುತ್ತಿದೆ. ಒಂದು ವೇಳೆ ಮಳೆ ಬಂದರೆ ಏನ್ ಗತಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನು, ಆರ್ಸಿಬಿಗೆ ಉಳಿದಿರೋದು ಕೇವಲ 4 ಪಂದ್ಯಗಳು ಮಾತ್ರ. ಆಡಿರೋ 10 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕ ಪಡೆದುಕೊಂಡಿದೆ. ತಂಡದ ರನ್ ರೇಟ್ ಕೂಡ ಸುಧಾರಿಸಿದೆ. ಆರ್ಸಿಬಿ ಇನ್ನೂ 4 ಪಂದ್ಯಗಳು ಆಡಲಿದ್ದು. 4ಕ್ಕೆ 4 ಗೆಲ್ಲಬೇಕಿದೆ. ಆಗ ಆರ್ಸಿಬಿಗೆ ಮತ್ತೆ 8 ಅಂಕ ದೊರೆಯಲಿದ್ದು, ಟೋಟಲ್ 14 ಪಾಯಿಂಟ್ಸ್ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್ ಕನ್ಫರ್ಮ್. 14 ಅಂಕ ಪಡೆದ್ರೂ ಪ್ಲೇ ಆಫ್ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್ ಆಗಿರಲಿದೆ.
ಇದನ್ನೂ ಓದಿ:ಅಂತೂ ಇಂತೂ ಬೆಂಗಳೂರಿಗೆ ಕೃಪೆ ತೋರಿದ ಮಳೆರಾಯ.. ಇವತ್ತೂ ಕೂಡ ಮಳೆ ಬರುತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಪ್ ಎತ್ತು ಕನಸನ್ನು ಇನ್ನೂ ಇಟ್ಟುಕೊಂಡಿರುವ ಆರ್ಸಿಬಿ
ಮುಂದಿನ 4 ಪಂದ್ಯಗಳನ್ನು ಗೆಲ್ಲಲೇಬೇಕಿದೆ ಬೆಂಗಳೂರು ತಂಡ
ಒಂದು ವೇಳೆ ಹೀಗಾದರೆ ಪ್ಲೇ-ಆಫ್ ಕನಸು ಭಗ್ನಗೊಳ್ಳಲಿದೆ
10 ಪಂದ್ಯಗಳನ್ನು ಆಡಿ ಮೂರು ಪಂದ್ಯಗಳಲ್ಲಿ ಗೆದ್ದುಕೊಂಡಿರುವ ಆರ್ಸಿಬಿ ಇನ್ನೂ ಪ್ಲೇ-ಆಫ್ ಕನಸು ಕಾಣುತ್ತಿದೆ. ಉಳಿದಿರುವ ಪಂದ್ಯಗಳನ್ನು ಅಂದುಕೊಂಡಂತೆ ಆಡಿದರೆ, ಜೊತೆಗೆ ಅದೃಷ್ಟವೂ ಕೈಹಿಡಿದರೆ ಆರ್ಸಿಬಿ ಪ್ಲೇ-ಆಫ್ಗೆ ಹೋಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.
ಇದೀಗ ಆರ್ಸಿಬಿ ಅಭಿಮಾನಿಗಳಲ್ಲಿ, ತಂಡದಲ್ಲಿ ಒಂದು ಸಣ್ಣ ಆತಂಕ ಕಾಡಲು ಶುರುಮಾಡಿದೆ. ಅದು ಏನೆಂದರೆ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ. ಹೌದು ಮುಂದಿನ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರಲ್ಲಿ ಸಂಜೆ ಮತ್ತು ರಾತ್ರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯ ನಡೆಯುವ ವೇಳೆ ಭರ್ಜರಿಯಾಗಿ ಮಳೆ ಬಂದರೆ ರದ್ದಾಗುವ ಸಾಧ್ಯತೆ ಇದೆ. ಅಂದ್ಹಾಗೆ ನಾಳೆ ಆರ್ಸಿಬಿ ತಂಡವು ಗುಜರಾತ್ ಟೈಟನ್ಸ್ ತಂಡವನ್ನು ಚಿನ್ನಸ್ವಾಮಿ ಮೈದಾನದಲ್ಲಿ ಎದುರಿಸುತ್ತಿದೆ.
ಇದನ್ನೂ ಓದಿ:ರಾಯ್ ಬರೇಲಿಯಿಂದ ರಾಹುಲ್ ಸ್ಪರ್ಧೆ.. ಅಮೇಥಿ ಕ್ಷೇತ್ರ ಬೇರೆಯವರಿಗೆ ಬಿಟ್ಟುಕೊಟ್ಟ ಗಾಂಧಿ ಕುಟುಂಬ!
ಒಂದು ವೇಳೆ ಮಳೆ ಜೋರಾಗಿ ಬಂದರೆ, ಪಂದ್ಯ ರದ್ದಾದರೆ ಆರ್ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ಈ ವಿಚಾರ ಆರ್ಸಿಬಿ ಹಾಗೂ ಅಭಿಮಾನಿಗಳಲ್ಲಿ ಭಾರೀ ಆತಂಕವನ್ನು ಮಾಡುತ್ತಿದೆ. ಒಂದು ವೇಳೆ ಮಳೆ ಬಂದರೆ ಏನ್ ಗತಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನು, ಆರ್ಸಿಬಿಗೆ ಉಳಿದಿರೋದು ಕೇವಲ 4 ಪಂದ್ಯಗಳು ಮಾತ್ರ. ಆಡಿರೋ 10 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕ ಪಡೆದುಕೊಂಡಿದೆ. ತಂಡದ ರನ್ ರೇಟ್ ಕೂಡ ಸುಧಾರಿಸಿದೆ. ಆರ್ಸಿಬಿ ಇನ್ನೂ 4 ಪಂದ್ಯಗಳು ಆಡಲಿದ್ದು. 4ಕ್ಕೆ 4 ಗೆಲ್ಲಬೇಕಿದೆ. ಆಗ ಆರ್ಸಿಬಿಗೆ ಮತ್ತೆ 8 ಅಂಕ ದೊರೆಯಲಿದ್ದು, ಟೋಟಲ್ 14 ಪಾಯಿಂಟ್ಸ್ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್ ಕನ್ಫರ್ಮ್. 14 ಅಂಕ ಪಡೆದ್ರೂ ಪ್ಲೇ ಆಫ್ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್ ಆಗಿರಲಿದೆ.
ಇದನ್ನೂ ಓದಿ:ಅಂತೂ ಇಂತೂ ಬೆಂಗಳೂರಿಗೆ ಕೃಪೆ ತೋರಿದ ಮಳೆರಾಯ.. ಇವತ್ತೂ ಕೂಡ ಮಳೆ ಬರುತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ