4 ವರ್ಷದ ದಾಂಪತ್ಯ ಜೀವನ ಫುಲ್ ಸ್ಟಾಪ್ ಇಟ್ಟ ‘ರಾಗ’ ನಟಿ ಭಾಮಾ
ಇನ್ಸ್ಟಾಗ್ರಾಂನಲ್ಲಿ ಮಗುವಿನೊಂದಿಗಿನ ಫೋಟೋ ಹಂಚಿಕೊಂಡ ನಟಿ
2020ರಲ್ಲಿ ಹಸೆಮಣೆ ಏರಿದ್ದ ಮಾಲಿವುಡ್ ನಟಿಯ ದಾಂಪತ್ಯ ಜೀವನದಲ್ಲಿ ಏನಾಯ್ತು?
ಮಾಲಿವುಡ್ ನಟಿ ಭಾಮಾ ಕುರುಪ್ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಯಶ್ ಅಭಿನಯದ ‘ಮೊದಲಾಸಲ’ ಸಿನಿಮಾದ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಯವಾಗಿದ್ದ ಮುದ್ದು ಮುಖದ ಬೆಡಗಿ ತನ್ನ ಪತಿಯಿಂದ ದೂರವಾಗಿರುವುದನ್ನ ಖಚಿತಪಡಿಸಿದ್ದಾರೆ.
ಭಾಮಾ ಕುರುಪ್ ನಾಲ್ಕು ವರ್ಷದ ಹಿಂದೆ ಅರುಣ್ ಜಗದೀಶ್ ಎಂಬವರನ್ನು ವಿವಾಹವಾಗಿದ್ದರು. 2020ರಲ್ಲಿ ಹಸೆಮಣೆ ಏರುವ ಮೂಲಕ ಸಂತಸದ ಸುದ್ದಿಯನ್ನು ಫ್ಯಾನ್ ಜೊತೆಗೆ ಹಂಚಿಕೊಂಡಿದ್ದರು. ಆದರೀಗ ಪತಿಯಿಂದ ದೂರವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
View this post on Instagram
ಭಾಮಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಗುವಿನೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. “ನಾನು ಸಿಂಗಲ್ ಮದರ್ ಆಗುವವರೆಗೂ ನಾನು ಇಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ. ಬಲಶಾಲಿಯಾಗಿರುವುದು ನನಗೆ ಮತ್ತು ನನ್ನ ಮಗಳಿಗೆ ಇರುವ ಒಂದೇ ದಾರಿ” ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಪತಿಯಿಂದ ದೂರ ಉಳಿದಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಭಾಮಾ ಮೊದಲಿಗೆ ಟಿವಿ ನಿರೂಪಕಿಯಾಗಿ ಬಳಿಕ ಸಿನಿಮಾ ನಟಿಯಾಗಿ ತೆರೆ ಮೇಲೆ ಬಂದವರು. ಸೂರ್ಯ ಟಿವಿಯಲ್ಲಿ ನಿರೂಪಕಿಯಾಗಿ ಮೊದಲು ಕಾಣಿಸಿಕೊಂಡರು. ಬಳಿಕ ಕ್ರಿಶ್ಚಿಯನ್ ಭಕ್ತಿ ಆಲ್ಬಂನಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ನಿರ್ದೇಶಕ ಲೋಹಿತ್ ದಾಸ್ ಅವರ ‘ನಿವೇದ್ಯಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.
ಭಾಮಾ ಕನ್ನಡದಲ್ಲೂ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಯಶ್ ಜೊತೆಗೆ ‘ಮೊದಲಾಸಲ’, ಗಣೇಶ್ ಜೊತೆಗೆ ‘ಶೈಲೂ’, ಮಿತ್ರ ಅವರ ಜೊತೆಗೆ ‘ರಾಗ’ ಸಿನಿಮಾದಲ್ಲೂ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
4 ವರ್ಷದ ದಾಂಪತ್ಯ ಜೀವನ ಫುಲ್ ಸ್ಟಾಪ್ ಇಟ್ಟ ‘ರಾಗ’ ನಟಿ ಭಾಮಾ
ಇನ್ಸ್ಟಾಗ್ರಾಂನಲ್ಲಿ ಮಗುವಿನೊಂದಿಗಿನ ಫೋಟೋ ಹಂಚಿಕೊಂಡ ನಟಿ
2020ರಲ್ಲಿ ಹಸೆಮಣೆ ಏರಿದ್ದ ಮಾಲಿವುಡ್ ನಟಿಯ ದಾಂಪತ್ಯ ಜೀವನದಲ್ಲಿ ಏನಾಯ್ತು?
ಮಾಲಿವುಡ್ ನಟಿ ಭಾಮಾ ಕುರುಪ್ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಯಶ್ ಅಭಿನಯದ ‘ಮೊದಲಾಸಲ’ ಸಿನಿಮಾದ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಯವಾಗಿದ್ದ ಮುದ್ದು ಮುಖದ ಬೆಡಗಿ ತನ್ನ ಪತಿಯಿಂದ ದೂರವಾಗಿರುವುದನ್ನ ಖಚಿತಪಡಿಸಿದ್ದಾರೆ.
ಭಾಮಾ ಕುರುಪ್ ನಾಲ್ಕು ವರ್ಷದ ಹಿಂದೆ ಅರುಣ್ ಜಗದೀಶ್ ಎಂಬವರನ್ನು ವಿವಾಹವಾಗಿದ್ದರು. 2020ರಲ್ಲಿ ಹಸೆಮಣೆ ಏರುವ ಮೂಲಕ ಸಂತಸದ ಸುದ್ದಿಯನ್ನು ಫ್ಯಾನ್ ಜೊತೆಗೆ ಹಂಚಿಕೊಂಡಿದ್ದರು. ಆದರೀಗ ಪತಿಯಿಂದ ದೂರವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
View this post on Instagram
ಭಾಮಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಗುವಿನೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. “ನಾನು ಸಿಂಗಲ್ ಮದರ್ ಆಗುವವರೆಗೂ ನಾನು ಇಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ. ಬಲಶಾಲಿಯಾಗಿರುವುದು ನನಗೆ ಮತ್ತು ನನ್ನ ಮಗಳಿಗೆ ಇರುವ ಒಂದೇ ದಾರಿ” ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಪತಿಯಿಂದ ದೂರ ಉಳಿದಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಭಾಮಾ ಮೊದಲಿಗೆ ಟಿವಿ ನಿರೂಪಕಿಯಾಗಿ ಬಳಿಕ ಸಿನಿಮಾ ನಟಿಯಾಗಿ ತೆರೆ ಮೇಲೆ ಬಂದವರು. ಸೂರ್ಯ ಟಿವಿಯಲ್ಲಿ ನಿರೂಪಕಿಯಾಗಿ ಮೊದಲು ಕಾಣಿಸಿಕೊಂಡರು. ಬಳಿಕ ಕ್ರಿಶ್ಚಿಯನ್ ಭಕ್ತಿ ಆಲ್ಬಂನಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ನಿರ್ದೇಶಕ ಲೋಹಿತ್ ದಾಸ್ ಅವರ ‘ನಿವೇದ್ಯಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.
ಭಾಮಾ ಕನ್ನಡದಲ್ಲೂ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಯಶ್ ಜೊತೆಗೆ ‘ಮೊದಲಾಸಲ’, ಗಣೇಶ್ ಜೊತೆಗೆ ‘ಶೈಲೂ’, ಮಿತ್ರ ಅವರ ಜೊತೆಗೆ ‘ರಾಗ’ ಸಿನಿಮಾದಲ್ಲೂ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ