ಸೌತ್ ಇಂಡಿಯನ್ ಡರ್ಬಿ ಕಾಳಗಕ್ಕೆ ಕ್ಷಣಗಣನೆ
ಬೆಸ್ಟ್ ಆಫ್ ದಿ ಬೆಸ್ಟ್ ಬ್ಯಾಟಲ್ನಲ್ಲಿ ಗೆಲ್ಲೋದ್ಯಾರು..?
ರೋರಿಂಗ್ RCB V/S ಗಾಯಾಳು ಲಯನ್ಸ್ ಕದನ
ಉಸಿರಾಡಲು ಚಾನ್ಸೇ ಇಲ್ಲ. ಇರೊಂದೊಂದೇ ಅವಕಾಶ. ಆ ಒಂದು ಚಾನ್ಸ್ನಲ್ಲಿ ಗೆಲುವು ತಮ್ಮದಾಗಿಸಿಕೊಳ್ಳಲು ಸಿಎಸ್ಕೆ ಹಾಗೂ ಆರ್ಸಿಬಿ ತಂಡಗಳು ಹವಣಿಸ್ತಿವೆ. ಇತಿಹಾಸ ಚೆನ್ನೈ ಪರವಿದ್ರೂ, ಈ ಸಲ ಆರ್ಸಿಬಿ, ಯೆಲ್ಲೋ ಆರ್ಮಿಯನ್ನ ಬೇಟೆಯಾಡುವುದು ಫಿಕ್ಸ್.
MUST WIN GAME..! ಸಿಎಸ್ಕೆ ವರ್ಸಸ್ ಅರ್ಸಿಬಿ ತಂಡಗಳಿಗೆ ಮುಂದಿನ ಪಂದ್ಯ MUST WIN GAME. ಇಲ್ಲಿ ಗೆದ್ದರಿವಷ್ಟೇ ಉಳಿಗಾಲ. ಸೋತ್ರೆ ಟೂರ್ನಿಯಿಂದಲೇ ಗಂಟೆಮೂಟೆ ಕಟ್ಟಬೇಕಾಗುತ್ತೆ. ಹಾಗಾಗಿ ಸೌತ್ ಇಂಡಿಯನ್ ಡರ್ಬಿ ಭಾರಿ ಕುತೂಹಲ ಕೆರಳಿಸಿದೆ. ಇಡೀ ಕ್ರಿಕೆಟ್ ಪ್ರೇಮಿಗಳ ಚಿತ್ತ ಈ ಪಂದ್ಯದ ಮೇಲೆ ನೆಟ್ಟಿದ್ದು, ಗೆಲುವು-ಸೋಲಿನ ಲೆಕ್ಕಾಚಾರ ಜೋರಾಗಿದೆ.
ಇದು ಬೆಸ್ಟ್ ಆಫ್ ದಿ ಬೆಸ್ಟ್ ಬ್ಯಾಟಲ್..!
ಆರ್ಸಿಬಿ ವರ್ಸಸ್ ಸಿಎಸ್ಕೆ.. ಎರಡು ತಂಡಗಳು ಎದುರಾದ್ರೆ ಸಾಕು, ಅದರ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲಿ ಇರುತ್ತೆ. ಈ ಪಂದ್ಯವನ್ನ ಬದ್ಧವೈರಿ ಭಾರತ-ಪಾಕ್ನಂತೆ ಭಾವಿಸ್ತಾರೆ. ಯಾಕಂದ್ರೆ ಇದು ಮಾಮೂಲಿ ಪಂದ್ಯಗಳಂತೆ ಇರಲ್ಲ. ಹೋರಾಟದ ಕಿಚ್ಚು, ಆಟಗಾರರ ಹಾವ-ಭಾವ, ಗೆಲುವಿನ ಪ್ರತಿಷ್ಠೆ. ಎಲ್ಲಾ ಅಂಶಗಳು ಪಂದ್ಯದ ಕೌತುಕತೆಯನ್ನ ಬೇರೆ ಹಂತಕ್ಕೆ ಕೊಂಡೊಯ್ಯುತ್ತೆ. ಇಂತಹ ಮೆಗಾ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದ್ದು ಇನ್ನಿಲ್ಲದ ಕಿಚ್ಚು ಹಚ್ಚಿದೆ.
ಇದನ್ನೂ ಓದಿ:ಮೋಹಕ್ಕೆ ಬಿದ್ದ ಗರುಡ ಭಾರೀ ಗೊಂದಲಕ್ಕೆ ಒಳಗಾಗಿದೆ.. ಯಾಕೆಂದು ಹೇಳಿ ನೋಡುವ..! Photos..!
ಸೆಕೆಂಡ್ ಹಾಫ್.. ಆರ್ಸಿಬಿ ಮುಟ್ಟಿದ್ದೆಲ್ಲ ಚಿನ್ನ..!
ಆರ್ಸಿಬಿ ಈ ಸೀಸನ್ನಲ್ಲಿ ಏಳು ಬೀಳುಗಳನ್ನ ಕಂಡಿದೆ. ಮೊದಲ ಹಾಫ್ನಲ್ಲಿ ಕಳಪೆ ಅಟವಾಡಿ ಭಾರಿ ಟೀಕೆ ಎದುರಿಸಿತ್ತು. ಇನ್ನೇನು ಆರ್ಸಿಬಿ ಕಥೆ ಮುಗೀತು. ಲೀಗ್ನಲ್ಲೇ ಆಟ ಕೊನೆಗೊಳ್ಳುತ್ತೆ ಎಂದು ಎಲ್ಲರೂ ಭಾವಿಸಿದ್ರು. ಆದರೆ ಸೆಕೆಂಡ್ ಹಾಫ್ನಲ್ಲಿ ಫಿನಿಕ್ಸ್ ಎದ್ದು ನಿಲ್ತು. ಮೊದಲಾರ್ಧದಲ್ಲಿ 1 ಗೆದ್ದು ಆರರಲ್ಲಿ ಮುಗ್ಗರಿಸಿದ್ದ ಆರ್ಸಿಬಿ ದ್ವಿತಿಯಾರ್ಧದಲ್ಲಿ ಇಂಪ್ರೆಸ್ಸಿವ್ ಆಟವಾಡ್ತಿದೆ. 6 ರಲ್ಲಿ ಐದು ಗೆದ್ದು ಪ್ಲೇಆಫ್ ರೇಸ್ ಮೇಲೆ ಕಣ್ಣಿಟ್ಟಿದೆ.
ಸಾಂಘಿಕ ಹೋರಾಟ.. ಚೆನ್ನೈಗಿದೆ ಕಠಿಣ ಚಾಲೆಂಜ್..!
ರೆಡ್ ಆರ್ಮಿ ಪ್ರಚಂಡ ಫಾರ್ಮ್ನಲ್ಲಿದೆ. ಎಪ್ರಿಲ್ 25ರಿಂದ ಇಲ್ಲಿಯತನಕ ಸೋಲನ್ನೆ ಕಂಡಿಲ್ಲ. ಬರೀ ಗೆಲುವು, ಗೆಲುವು, ಗೆಲುವು. ಸತತ ಐದರಲ್ಲಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ತಂಡದ ಎಲ್ಲಾ ವಿಭಾಗವು ಸುಧಾರಿಸಿದೆ. ಇಡೀ ತಂಡಕ್ಕೆ ತಂಡವೇ ಜೋಶ್ನಿಂದ ಕಣಕ್ಕಿಳಿದು ಎದುರಾಳಿಗೆ ಸೋಲಿನ ರುಚಿ ತೋರಿಸ್ತಿದೆ. ಹೀಗಾಗಿ ಗೆಲುವಿನ ಮದದಲ್ಲಿ ತೇಲಾಡ್ತಿರೋ ಆರ್ಸಿಬಿಯನ್ನ ಕಟ್ಟಿಹಾಕೋದೆ ಚೆನ್ನೈಗೆ ಅಗ್ನಿಪರೀಕ್ಷೆಯಾಗಿದೆ.
ಇದನ್ನೂ ಓದಿ:CSK vs RCB ನಡುವಿನ ಮ್ಯಾಚ್ಗೆ ಮಳೆ ಬಂದರೆ ಏನಾಗುತ್ತದೆ..?
ಗಾಯಾಳು ಲಯನ್ಸ್.. ಸಮಸ್ಯೆಗಳ ಸರಮಾಲೆ..!
ಒಂದೆಡೆ ಆರ್ಸಿಬಿ ಗೆಲುವಿನ ಮೇಲೆ ಗೆಲುವು ದಾಖಲಿಸ್ತಿದೆ. ಅತ್ತ ಸಿಎಸ್ಕೆ ಸಮಸ್ಯೆಗಳ ಆಗರವಾಗಿದೆ. ಮ್ಯಾಚ್ ವಿನ್ನಿಂಗ್ ಬೌಲರ್ಸ್ ಗಾಯಕ್ಕೆ ತುತ್ತಾಗಿದ್ದಾರೆ. ಪವರ್ ಪ್ಲೇ ಸ್ಪೆಷಲಿಸ್ಟ್ ದೀಪಕ್ ಚಹರ್ ಹಾಗೂ ಡೆತ್ ಓವರ್ ಪಂಟರ್ ಮಥೀಶ ಪತಿರಾಣ ತಂಡದಿಂದ ಹೊರಬಿದ್ದಿದ್ದಾರೆ. ಅನುಭವಿ ಬೌಲರ್ಗಳ ಅಲಭ್ಯತೆ ಚೆನ್ನೈಗೆ ಕಂಟಕವಾಗಿ ಪರಿಣಮಿಸಿದೆ.
ಇನ್ನೊಂದೆಡೆ ವಿಕೆಟ್ ಟೇಕರ್ ಮುಸ್ತಾಫಿಜುರ್ ರೆಹಮಾನ್ ಕೂಡ ಬಾಂಗ್ಲಾದೇಶಕ್ಕೆ ವಾಪಾಸಾಗಿದ್ದಾರೆ. ಮೂರು ಸ್ಟಾರ್ವೇಗಿಗಳ ಅಲಭ್ಯತೆಯಿಂದ ಸಿಎಸ್ಕೆ ಬೌಲಿಂಗ್ ದುರ್ಬಲಗೊಂಡಿದೆ. ಇರೋ ಬೌಲರ್ಗಳು ಸೂಕ್ತ ನ್ಯಾಯ ಒದಗಿಸ್ತಿಲ್ಲ. ತುಷಾರ್ ದೇಶಪಾಂಡೆ ಹೊರತುಪಡಿಸಿದ್ರೆ, ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರ್ತಿಲ್ಲ. ಸಾಲದೆಂಬಂತೆ ನಂಬಿಗಸ್ಥ ಅಜಿಂಕ್ಯಾ ರಹಾನೆ ಕೂಡ ಅಟ್ಟರ್ ಫ್ಲಾಪ್ ಶೋ ನೀಡ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಚೆನ್ನೈ ತಂಡ ಬಲಾಢ್ಯ ಆರ್ಸಿಬಿ ಎದುರು ಕಣಕ್ಕಿಳಿಯುತ್ತಿದೆ.
ಇದನ್ನೂ ಓದಿ:ಬೇಸರದಲ್ಲೇ ವಿಮಾನ ಹತ್ತಿದ RCB ವಿಲ್ ಜಾಕ್ಸ್.. ಈ ಆಟಗಾರನ ಸಹಾಯ ಸ್ಮರಿಸಿ ಜಾಕ್ಸ್ ಭಾವುಕ
ಒಟ್ಟಿನಲ್ಲಿ ಶನಿವಾರದ ಮಹಾಸಮರ INFORM ಆರ್ಸಿಬಿ V/S WOUNDED ಲಯನ್ಸ್ ಕಣವಾಗಿ ಮಾರ್ಪಟ್ಟಿದೆ. ಆರ್ಸಿಬಿ ಒಳ್ಳೆ ಫಾರ್ಮ್ನಲ್ಲಿದ್ರೂ, ಗಾಯಗೊಂಡಿರೋ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತೆ ಅನ್ನೋ ಮಾತನ್ನ ಮರೆಯುವಂತಿಲ್ಲ. ಆರ್ಸಿಬಿ, ಹಾಲಿ ಚಾಂಪಿಯನ್ ಚೆನ್ನೈ ಮಣಿಸಿ ಪ್ಲೇ ಆಫ್ ರೇಸ್ಗೆ ಎಂಟ್ರಿಕೊಡುತ್ತಾ ? ಇಲ್ಲಾ ಎಲ್ಲಾ ಸಮಸ್ಯೆಗಳನ್ನ ಬದಿಗೊತ್ತಿ ಸಿಎಸ್ಕೆ, ರೆಡ್ ಆರ್ಮಿಯ ಕೋಟೆಯನ್ನ ಬೇಧಿಸುತ್ತಾ ಅನ್ನೋದನ್ನ ಕಾದು ನೋಡೋಣ.
ಇದನ್ನೂ ಓದಿ:ಆರ್ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸೌತ್ ಇಂಡಿಯನ್ ಡರ್ಬಿ ಕಾಳಗಕ್ಕೆ ಕ್ಷಣಗಣನೆ
ಬೆಸ್ಟ್ ಆಫ್ ದಿ ಬೆಸ್ಟ್ ಬ್ಯಾಟಲ್ನಲ್ಲಿ ಗೆಲ್ಲೋದ್ಯಾರು..?
ರೋರಿಂಗ್ RCB V/S ಗಾಯಾಳು ಲಯನ್ಸ್ ಕದನ
ಉಸಿರಾಡಲು ಚಾನ್ಸೇ ಇಲ್ಲ. ಇರೊಂದೊಂದೇ ಅವಕಾಶ. ಆ ಒಂದು ಚಾನ್ಸ್ನಲ್ಲಿ ಗೆಲುವು ತಮ್ಮದಾಗಿಸಿಕೊಳ್ಳಲು ಸಿಎಸ್ಕೆ ಹಾಗೂ ಆರ್ಸಿಬಿ ತಂಡಗಳು ಹವಣಿಸ್ತಿವೆ. ಇತಿಹಾಸ ಚೆನ್ನೈ ಪರವಿದ್ರೂ, ಈ ಸಲ ಆರ್ಸಿಬಿ, ಯೆಲ್ಲೋ ಆರ್ಮಿಯನ್ನ ಬೇಟೆಯಾಡುವುದು ಫಿಕ್ಸ್.
MUST WIN GAME..! ಸಿಎಸ್ಕೆ ವರ್ಸಸ್ ಅರ್ಸಿಬಿ ತಂಡಗಳಿಗೆ ಮುಂದಿನ ಪಂದ್ಯ MUST WIN GAME. ಇಲ್ಲಿ ಗೆದ್ದರಿವಷ್ಟೇ ಉಳಿಗಾಲ. ಸೋತ್ರೆ ಟೂರ್ನಿಯಿಂದಲೇ ಗಂಟೆಮೂಟೆ ಕಟ್ಟಬೇಕಾಗುತ್ತೆ. ಹಾಗಾಗಿ ಸೌತ್ ಇಂಡಿಯನ್ ಡರ್ಬಿ ಭಾರಿ ಕುತೂಹಲ ಕೆರಳಿಸಿದೆ. ಇಡೀ ಕ್ರಿಕೆಟ್ ಪ್ರೇಮಿಗಳ ಚಿತ್ತ ಈ ಪಂದ್ಯದ ಮೇಲೆ ನೆಟ್ಟಿದ್ದು, ಗೆಲುವು-ಸೋಲಿನ ಲೆಕ್ಕಾಚಾರ ಜೋರಾಗಿದೆ.
ಇದು ಬೆಸ್ಟ್ ಆಫ್ ದಿ ಬೆಸ್ಟ್ ಬ್ಯಾಟಲ್..!
ಆರ್ಸಿಬಿ ವರ್ಸಸ್ ಸಿಎಸ್ಕೆ.. ಎರಡು ತಂಡಗಳು ಎದುರಾದ್ರೆ ಸಾಕು, ಅದರ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲಿ ಇರುತ್ತೆ. ಈ ಪಂದ್ಯವನ್ನ ಬದ್ಧವೈರಿ ಭಾರತ-ಪಾಕ್ನಂತೆ ಭಾವಿಸ್ತಾರೆ. ಯಾಕಂದ್ರೆ ಇದು ಮಾಮೂಲಿ ಪಂದ್ಯಗಳಂತೆ ಇರಲ್ಲ. ಹೋರಾಟದ ಕಿಚ್ಚು, ಆಟಗಾರರ ಹಾವ-ಭಾವ, ಗೆಲುವಿನ ಪ್ರತಿಷ್ಠೆ. ಎಲ್ಲಾ ಅಂಶಗಳು ಪಂದ್ಯದ ಕೌತುಕತೆಯನ್ನ ಬೇರೆ ಹಂತಕ್ಕೆ ಕೊಂಡೊಯ್ಯುತ್ತೆ. ಇಂತಹ ಮೆಗಾ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದ್ದು ಇನ್ನಿಲ್ಲದ ಕಿಚ್ಚು ಹಚ್ಚಿದೆ.
ಇದನ್ನೂ ಓದಿ:ಮೋಹಕ್ಕೆ ಬಿದ್ದ ಗರುಡ ಭಾರೀ ಗೊಂದಲಕ್ಕೆ ಒಳಗಾಗಿದೆ.. ಯಾಕೆಂದು ಹೇಳಿ ನೋಡುವ..! Photos..!
ಸೆಕೆಂಡ್ ಹಾಫ್.. ಆರ್ಸಿಬಿ ಮುಟ್ಟಿದ್ದೆಲ್ಲ ಚಿನ್ನ..!
ಆರ್ಸಿಬಿ ಈ ಸೀಸನ್ನಲ್ಲಿ ಏಳು ಬೀಳುಗಳನ್ನ ಕಂಡಿದೆ. ಮೊದಲ ಹಾಫ್ನಲ್ಲಿ ಕಳಪೆ ಅಟವಾಡಿ ಭಾರಿ ಟೀಕೆ ಎದುರಿಸಿತ್ತು. ಇನ್ನೇನು ಆರ್ಸಿಬಿ ಕಥೆ ಮುಗೀತು. ಲೀಗ್ನಲ್ಲೇ ಆಟ ಕೊನೆಗೊಳ್ಳುತ್ತೆ ಎಂದು ಎಲ್ಲರೂ ಭಾವಿಸಿದ್ರು. ಆದರೆ ಸೆಕೆಂಡ್ ಹಾಫ್ನಲ್ಲಿ ಫಿನಿಕ್ಸ್ ಎದ್ದು ನಿಲ್ತು. ಮೊದಲಾರ್ಧದಲ್ಲಿ 1 ಗೆದ್ದು ಆರರಲ್ಲಿ ಮುಗ್ಗರಿಸಿದ್ದ ಆರ್ಸಿಬಿ ದ್ವಿತಿಯಾರ್ಧದಲ್ಲಿ ಇಂಪ್ರೆಸ್ಸಿವ್ ಆಟವಾಡ್ತಿದೆ. 6 ರಲ್ಲಿ ಐದು ಗೆದ್ದು ಪ್ಲೇಆಫ್ ರೇಸ್ ಮೇಲೆ ಕಣ್ಣಿಟ್ಟಿದೆ.
ಸಾಂಘಿಕ ಹೋರಾಟ.. ಚೆನ್ನೈಗಿದೆ ಕಠಿಣ ಚಾಲೆಂಜ್..!
ರೆಡ್ ಆರ್ಮಿ ಪ್ರಚಂಡ ಫಾರ್ಮ್ನಲ್ಲಿದೆ. ಎಪ್ರಿಲ್ 25ರಿಂದ ಇಲ್ಲಿಯತನಕ ಸೋಲನ್ನೆ ಕಂಡಿಲ್ಲ. ಬರೀ ಗೆಲುವು, ಗೆಲುವು, ಗೆಲುವು. ಸತತ ಐದರಲ್ಲಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ತಂಡದ ಎಲ್ಲಾ ವಿಭಾಗವು ಸುಧಾರಿಸಿದೆ. ಇಡೀ ತಂಡಕ್ಕೆ ತಂಡವೇ ಜೋಶ್ನಿಂದ ಕಣಕ್ಕಿಳಿದು ಎದುರಾಳಿಗೆ ಸೋಲಿನ ರುಚಿ ತೋರಿಸ್ತಿದೆ. ಹೀಗಾಗಿ ಗೆಲುವಿನ ಮದದಲ್ಲಿ ತೇಲಾಡ್ತಿರೋ ಆರ್ಸಿಬಿಯನ್ನ ಕಟ್ಟಿಹಾಕೋದೆ ಚೆನ್ನೈಗೆ ಅಗ್ನಿಪರೀಕ್ಷೆಯಾಗಿದೆ.
ಇದನ್ನೂ ಓದಿ:CSK vs RCB ನಡುವಿನ ಮ್ಯಾಚ್ಗೆ ಮಳೆ ಬಂದರೆ ಏನಾಗುತ್ತದೆ..?
ಗಾಯಾಳು ಲಯನ್ಸ್.. ಸಮಸ್ಯೆಗಳ ಸರಮಾಲೆ..!
ಒಂದೆಡೆ ಆರ್ಸಿಬಿ ಗೆಲುವಿನ ಮೇಲೆ ಗೆಲುವು ದಾಖಲಿಸ್ತಿದೆ. ಅತ್ತ ಸಿಎಸ್ಕೆ ಸಮಸ್ಯೆಗಳ ಆಗರವಾಗಿದೆ. ಮ್ಯಾಚ್ ವಿನ್ನಿಂಗ್ ಬೌಲರ್ಸ್ ಗಾಯಕ್ಕೆ ತುತ್ತಾಗಿದ್ದಾರೆ. ಪವರ್ ಪ್ಲೇ ಸ್ಪೆಷಲಿಸ್ಟ್ ದೀಪಕ್ ಚಹರ್ ಹಾಗೂ ಡೆತ್ ಓವರ್ ಪಂಟರ್ ಮಥೀಶ ಪತಿರಾಣ ತಂಡದಿಂದ ಹೊರಬಿದ್ದಿದ್ದಾರೆ. ಅನುಭವಿ ಬೌಲರ್ಗಳ ಅಲಭ್ಯತೆ ಚೆನ್ನೈಗೆ ಕಂಟಕವಾಗಿ ಪರಿಣಮಿಸಿದೆ.
ಇನ್ನೊಂದೆಡೆ ವಿಕೆಟ್ ಟೇಕರ್ ಮುಸ್ತಾಫಿಜುರ್ ರೆಹಮಾನ್ ಕೂಡ ಬಾಂಗ್ಲಾದೇಶಕ್ಕೆ ವಾಪಾಸಾಗಿದ್ದಾರೆ. ಮೂರು ಸ್ಟಾರ್ವೇಗಿಗಳ ಅಲಭ್ಯತೆಯಿಂದ ಸಿಎಸ್ಕೆ ಬೌಲಿಂಗ್ ದುರ್ಬಲಗೊಂಡಿದೆ. ಇರೋ ಬೌಲರ್ಗಳು ಸೂಕ್ತ ನ್ಯಾಯ ಒದಗಿಸ್ತಿಲ್ಲ. ತುಷಾರ್ ದೇಶಪಾಂಡೆ ಹೊರತುಪಡಿಸಿದ್ರೆ, ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರ್ತಿಲ್ಲ. ಸಾಲದೆಂಬಂತೆ ನಂಬಿಗಸ್ಥ ಅಜಿಂಕ್ಯಾ ರಹಾನೆ ಕೂಡ ಅಟ್ಟರ್ ಫ್ಲಾಪ್ ಶೋ ನೀಡ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಚೆನ್ನೈ ತಂಡ ಬಲಾಢ್ಯ ಆರ್ಸಿಬಿ ಎದುರು ಕಣಕ್ಕಿಳಿಯುತ್ತಿದೆ.
ಇದನ್ನೂ ಓದಿ:ಬೇಸರದಲ್ಲೇ ವಿಮಾನ ಹತ್ತಿದ RCB ವಿಲ್ ಜಾಕ್ಸ್.. ಈ ಆಟಗಾರನ ಸಹಾಯ ಸ್ಮರಿಸಿ ಜಾಕ್ಸ್ ಭಾವುಕ
ಒಟ್ಟಿನಲ್ಲಿ ಶನಿವಾರದ ಮಹಾಸಮರ INFORM ಆರ್ಸಿಬಿ V/S WOUNDED ಲಯನ್ಸ್ ಕಣವಾಗಿ ಮಾರ್ಪಟ್ಟಿದೆ. ಆರ್ಸಿಬಿ ಒಳ್ಳೆ ಫಾರ್ಮ್ನಲ್ಲಿದ್ರೂ, ಗಾಯಗೊಂಡಿರೋ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತೆ ಅನ್ನೋ ಮಾತನ್ನ ಮರೆಯುವಂತಿಲ್ಲ. ಆರ್ಸಿಬಿ, ಹಾಲಿ ಚಾಂಪಿಯನ್ ಚೆನ್ನೈ ಮಣಿಸಿ ಪ್ಲೇ ಆಫ್ ರೇಸ್ಗೆ ಎಂಟ್ರಿಕೊಡುತ್ತಾ ? ಇಲ್ಲಾ ಎಲ್ಲಾ ಸಮಸ್ಯೆಗಳನ್ನ ಬದಿಗೊತ್ತಿ ಸಿಎಸ್ಕೆ, ರೆಡ್ ಆರ್ಮಿಯ ಕೋಟೆಯನ್ನ ಬೇಧಿಸುತ್ತಾ ಅನ್ನೋದನ್ನ ಕಾದು ನೋಡೋಣ.
ಇದನ್ನೂ ಓದಿ:ಆರ್ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್