ಆಕಸ್ಮಿಕವಾಗಿ ನೀರು ಎಂದು ಆ್ಯಸಿಡ್ ಕುಡಿದ ಮಗು
ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ.. ಬದುಕಲಿಲ್ಲ ಜೀವ
ಒಬ್ಬನೇ ಮಗ, ಇನ್ನಿಲ್ಲ.. ಇದು ಬಾಯಾರಿದ ಮಗನ ಕತೆ-ವ್ಯಥೆ
ನೀರು ಎಂದುಕೊಂಡು ಆ್ಯಸಿಡ್ ಕುಡಿದು ಮಗು ಸಾವನ್ನಪ್ಪಿದ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ನರಳಾಡಿ ಚಿಕಿತ್ಸೆ ಫಲಿಸದೆ ಕೊನೆಗೆ ಮಗು ಸಾವನ್ನಪ್ಪಿದೆ.
ಇಂದೋರ್ನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಬಂಗಾಂಗದಲ್ಲಿ ವಾಸವಾಗಿರುವ ಕೈಲಾಶ್ ಅಹಿರ್ವಾರ್ ಅವರ ಮಗು ನೀರು ಎಂದು ಆಕಸ್ಮಿಕವಾಗಿ ಆ್ಯಸಿಡ್ ಸೇವಿಸಿದೆ. ಪರಿಣಾಮ 6 ವರ್ಷದ ಮಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೂಡಲೇ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಆದರೆ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.
ಅಮ್ಮಾ.. ಬಾಯಾರಿಕೆ ಆಗ್ತಿದೆ
ಮನೆ ಸ್ವಚ್ಛಗೊಳಿಸಲು ಎಂದು ಕೈಲಾಶ್ ಆ್ಯಸಿಡ್ ತಂದಿಟ್ಟಿದ್ದರು. ಮೇ5ರಂದು ರಾತ್ರಿ 12 ಗಂಟೆಗೆ ಸುಮಾರಿಗೆ ಮಖಾನ್ ತನ್ನ ತಂದೆ ಬಳಿ ಮಲಗಿದ್ದನು. ಮಧ್ಯರಾತ್ರಿ ಬಾಯಾರಿಕೆಯಾಗಿದ್ದಾಗ ತಂದೆ ಕೈಲಾಶ್ ಆತನಿಗೆ ನೀರು ಕೊಟ್ಟಿದ್ದಾರೆ. ಬಳಿಕ ಆತ ತಾಯಿ ಬಳಿ ಮಲಗಿದ್ದಾನೆ. ಸುಮಾರು 1.30 ಹೊತ್ತಿಗೆ ಮತ್ತೆ ನೀರು ಕೇಳಿದ್ದಾನೆ. ಆವಾಗ ತಾಯಿ ನೀರು ಕೊಟ್ಟು ಮಲಗಿಸಿದ್ದಾರೆ. ನಂತರ 3 ಗಂಟೆಗೆ ಮತ್ತೆ ಎದ್ದಿದ್ದಾನೆ. ಈ ವೇಳೆ ಕೂಲರ್ ಬಳಿ ಇಟ್ಟಿದ್ದ ಆ್ಯಸಿಡ್ ಬಾಟಲಿಯನ್ನು ನೀರು ಎಂದು ಭಾವಿಸಿ ಕುಡಿದಿದ್ದಾನೆ.
ಇದನ್ನೂ ಓದಿ: ಅಂತು..ಇಂತು..ಬಂತು ಎಲೆಕ್ಟ್ರಿಕ್ ನ್ಯಾನೋ ಕಾರು.. ಒಂದು ಬಾರಿ ಚಾರ್ಜ್ ಮಾಡಿದ್ರೆ 300km ಚಲಿಸುತ್ತೆ ಕಣ್ರಿ.. ಬೆಲೆ?
ಆಸ್ಪತ್ರೆಯಲ್ಲಿ ಹೋರಾಟ.. ಬದುಕಲಿಲ್ಲ ಜೀವ
ಮಖಾನ್ ಆ್ಯಸಿಡ್ ಕುಡಿದು ಮಲಗಿದ ಸ್ವಲ್ಪ ಹೊತ್ತಿನ ಬಳಿಕ ಗಂಟಲಲ್ಲಿ ಉರಿ ಕಾಣಿಸಿದೆ. ತಕ್ಷಣ ತಾಯಿ ರಚನಾ ಅವರನ್ನು ಎಬ್ಬಿಸಿದ್ದಾನೆ. ವಾಂತಿ ಮಾಡಿದ್ದಾನೆ. ವಾಂತಿ ವೇಲೆ ಆ್ಯಸಿಡ್ ವಾಸನೆಯನ್ನ ಗ್ರಹಿಸಿ ತಾಯಿ ಗಾಬರಿಯಾಗಿದ್ದಾಳೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಡಿ ಮಖಾನ್ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಬಾತ್ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ PUC ವಿದ್ಯಾರ್ಥಿನಿ ಮೃತದೇಹ.. ಸಾವಿನ ಸುತ್ತ ಅನುಮಾನದ ಹುತ್ತ
ಮನೆ ಸ್ವಚ್ಛಗೊಳಿಸುವ ಆ್ಯಸಿಡ್
ಮೇ5ರಂದು ಈ ಘಟನೆ ಸಂಭವಿಸಿದೆ. ಕೈಲಾಶ್ ವ್ಯಾಪಾರಿಯೊಬ್ಬರಿಂದ ಮನೆ ಸ್ವಚ್ಛಗೊಳಿಸುವ ಆ್ಯಸಿಡ್ ತೆಗೆದುಕೊಂಡು ಹೋಗಿದ್ದರು. ಬಳಿಕ ಅದನ್ನು ಕೂಲರ್ ಬಳಿ ಇಟ್ಟಿದ್ದರು. ಮಗು ರಾತ್ರಿ ಬಾಯಾರಿಕೆ ಎಂದು ಆ್ಯಸಿಡ್ ಕುಡಿದಿದ್ದಾನೆ.
ಒಬ್ಬನೇ ಮಗ.. ಇನ್ನಿಲ್ಲ
ಸದ್ಯ ಕೈಲಾಶ್ ತನಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡಿದ್ದಾರೆ. ಅನ್ಯಾಯವಾಗಿ ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದ ಮಗ ಇಹಲೋಕ ತ್ಯಜಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆಕಸ್ಮಿಕವಾಗಿ ನೀರು ಎಂದು ಆ್ಯಸಿಡ್ ಕುಡಿದ ಮಗು
ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ.. ಬದುಕಲಿಲ್ಲ ಜೀವ
ಒಬ್ಬನೇ ಮಗ, ಇನ್ನಿಲ್ಲ.. ಇದು ಬಾಯಾರಿದ ಮಗನ ಕತೆ-ವ್ಯಥೆ
ನೀರು ಎಂದುಕೊಂಡು ಆ್ಯಸಿಡ್ ಕುಡಿದು ಮಗು ಸಾವನ್ನಪ್ಪಿದ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ನರಳಾಡಿ ಚಿಕಿತ್ಸೆ ಫಲಿಸದೆ ಕೊನೆಗೆ ಮಗು ಸಾವನ್ನಪ್ಪಿದೆ.
ಇಂದೋರ್ನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಬಂಗಾಂಗದಲ್ಲಿ ವಾಸವಾಗಿರುವ ಕೈಲಾಶ್ ಅಹಿರ್ವಾರ್ ಅವರ ಮಗು ನೀರು ಎಂದು ಆಕಸ್ಮಿಕವಾಗಿ ಆ್ಯಸಿಡ್ ಸೇವಿಸಿದೆ. ಪರಿಣಾಮ 6 ವರ್ಷದ ಮಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೂಡಲೇ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಆದರೆ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.
ಅಮ್ಮಾ.. ಬಾಯಾರಿಕೆ ಆಗ್ತಿದೆ
ಮನೆ ಸ್ವಚ್ಛಗೊಳಿಸಲು ಎಂದು ಕೈಲಾಶ್ ಆ್ಯಸಿಡ್ ತಂದಿಟ್ಟಿದ್ದರು. ಮೇ5ರಂದು ರಾತ್ರಿ 12 ಗಂಟೆಗೆ ಸುಮಾರಿಗೆ ಮಖಾನ್ ತನ್ನ ತಂದೆ ಬಳಿ ಮಲಗಿದ್ದನು. ಮಧ್ಯರಾತ್ರಿ ಬಾಯಾರಿಕೆಯಾಗಿದ್ದಾಗ ತಂದೆ ಕೈಲಾಶ್ ಆತನಿಗೆ ನೀರು ಕೊಟ್ಟಿದ್ದಾರೆ. ಬಳಿಕ ಆತ ತಾಯಿ ಬಳಿ ಮಲಗಿದ್ದಾನೆ. ಸುಮಾರು 1.30 ಹೊತ್ತಿಗೆ ಮತ್ತೆ ನೀರು ಕೇಳಿದ್ದಾನೆ. ಆವಾಗ ತಾಯಿ ನೀರು ಕೊಟ್ಟು ಮಲಗಿಸಿದ್ದಾರೆ. ನಂತರ 3 ಗಂಟೆಗೆ ಮತ್ತೆ ಎದ್ದಿದ್ದಾನೆ. ಈ ವೇಳೆ ಕೂಲರ್ ಬಳಿ ಇಟ್ಟಿದ್ದ ಆ್ಯಸಿಡ್ ಬಾಟಲಿಯನ್ನು ನೀರು ಎಂದು ಭಾವಿಸಿ ಕುಡಿದಿದ್ದಾನೆ.
ಇದನ್ನೂ ಓದಿ: ಅಂತು..ಇಂತು..ಬಂತು ಎಲೆಕ್ಟ್ರಿಕ್ ನ್ಯಾನೋ ಕಾರು.. ಒಂದು ಬಾರಿ ಚಾರ್ಜ್ ಮಾಡಿದ್ರೆ 300km ಚಲಿಸುತ್ತೆ ಕಣ್ರಿ.. ಬೆಲೆ?
ಆಸ್ಪತ್ರೆಯಲ್ಲಿ ಹೋರಾಟ.. ಬದುಕಲಿಲ್ಲ ಜೀವ
ಮಖಾನ್ ಆ್ಯಸಿಡ್ ಕುಡಿದು ಮಲಗಿದ ಸ್ವಲ್ಪ ಹೊತ್ತಿನ ಬಳಿಕ ಗಂಟಲಲ್ಲಿ ಉರಿ ಕಾಣಿಸಿದೆ. ತಕ್ಷಣ ತಾಯಿ ರಚನಾ ಅವರನ್ನು ಎಬ್ಬಿಸಿದ್ದಾನೆ. ವಾಂತಿ ಮಾಡಿದ್ದಾನೆ. ವಾಂತಿ ವೇಲೆ ಆ್ಯಸಿಡ್ ವಾಸನೆಯನ್ನ ಗ್ರಹಿಸಿ ತಾಯಿ ಗಾಬರಿಯಾಗಿದ್ದಾಳೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಡಿ ಮಖಾನ್ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಬಾತ್ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ PUC ವಿದ್ಯಾರ್ಥಿನಿ ಮೃತದೇಹ.. ಸಾವಿನ ಸುತ್ತ ಅನುಮಾನದ ಹುತ್ತ
ಮನೆ ಸ್ವಚ್ಛಗೊಳಿಸುವ ಆ್ಯಸಿಡ್
ಮೇ5ರಂದು ಈ ಘಟನೆ ಸಂಭವಿಸಿದೆ. ಕೈಲಾಶ್ ವ್ಯಾಪಾರಿಯೊಬ್ಬರಿಂದ ಮನೆ ಸ್ವಚ್ಛಗೊಳಿಸುವ ಆ್ಯಸಿಡ್ ತೆಗೆದುಕೊಂಡು ಹೋಗಿದ್ದರು. ಬಳಿಕ ಅದನ್ನು ಕೂಲರ್ ಬಳಿ ಇಟ್ಟಿದ್ದರು. ಮಗು ರಾತ್ರಿ ಬಾಯಾರಿಕೆ ಎಂದು ಆ್ಯಸಿಡ್ ಕುಡಿದಿದ್ದಾನೆ.
ಒಬ್ಬನೇ ಮಗ.. ಇನ್ನಿಲ್ಲ
ಸದ್ಯ ಕೈಲಾಶ್ ತನಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡಿದ್ದಾರೆ. ಅನ್ಯಾಯವಾಗಿ ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದ ಮಗ ಇಹಲೋಕ ತ್ಯಜಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ