ಬಾತ್ರೂಮ್ನಲ್ಲಿ ಎಡಗೈ ಹಾಗೂ ಕತ್ತು ಕೊಯ್ದ ಸ್ಥಿತಿಯಲ್ಲಿ ಬಿದ್ದಿದ್ದ ಪ್ರಬುದ್ಧ
ಬಾತ್ರೂಮ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ ಹಾಲ್ನಲ್ಲಿ ರಕ್ತ ಚೆಲ್ಲಿದ್ದೇಕೆ?
ಕೊಲೆಯಾದ ಸ್ಥಳದಲ್ಲಿ ಸಾರಿ ಅಮ್ಮ ಅನ್ನೋ ಡೆತ್ ನೋಟ್ ಇಟ್ಟಿದ್ದು ಯಾರು?
ಬೆಂಗಳೂರು: ಮನೆ ಬಾತ್ರೂಮ್ನಲ್ಲಿ ಯುವತಿ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಚ್ಚಿ ಬೀಳಿಸಿದೆ. ನಗರದ ಬೃಂದಾವನ ಲೇಔಟ್ನಲ್ಲಿ ಈ ದುರಂತ ನಡೆದಿದ್ದು, ದ್ವಿತೀಯ ಪಿಯು ವಿದ್ಯಾರ್ಥಿನಿ ಪ್ರಬುದ್ಧ ಅನುಮಾನಾಸ್ಪದ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ: ಜಿಮ್ ಟ್ರೈನರ್ ಸೂಸೈಡ್ ಕೇಸ್ಗೆ ಹೊಸ ಟ್ವಿಸ್ಟ್.. ಪತ್ನಿಗೆ ವಿಡಿಯೋ ಕಾಲ್ ಮಾಡಿದ ಮೇಲೆ ಆಗಿದ್ದೇನು?
ಮಗಳನ್ನು ಕಳೆದುಕೊಂಡಿರುವ ಪ್ರಬುದ್ಧ ತಾಯಿ ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳುತ್ತಿದ್ದಾರೆ. ಬಾತ್ರೂಮ್ನಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ, ಅದರ ಜೊತೆಗೆ ಮೂರು ಡೆತ್ ನೋಟ್ಗಳು ಸಿಕ್ಕಿವೆ ಎನ್ನಲಾಗಿದೆ. ಡೆತ್ನೋಟ್ ಕೂಡ ಹಲವು ಅನುಮಾನಕ್ಕೆ ಕಾರಣವಾಗಿದೆ. ಡೆತ್ನೋಟ್ನಲ್ಲಿರುವ ಹ್ಯಾಂಡ್ರೈಟಿಂಗ್ ಮ್ಯಾಚ್ ಆಗುತ್ತಿಲ್ಲ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.
ಪ್ರಬುದ್ಧ ಸಾವಿಗೆ 15 ಅನುಮಾನ!
ಅನುಮಾನ-1: ಮಧ್ಯಾಹ್ನ 1.30ಕ್ಕೆ ತಾಯಿಗೆ ಕರೆ ಮಾಡಿ ಮಾತಾಡಿದ್ದ ಪ್ರಬುದ್ಧ ಮಧ್ಯಾಹ್ನ 3.30ಕ್ಕೆ ಸಾವು
ಅನುಮಾನ-2: ಮಧ್ಯಾಹ್ನ 1.30 ರಿಂದ 3.30ರೊಳಗೆ ಆ ಎರಡು ಗಂಟೆಗಳಲ್ಲಿ ಆಗಿದ್ದು ಏನು?
ಅನುಮಾನ-3: ಪ್ರಬುದ್ಧ ಮನೆಗೆ ಬಂದಾಗ ಮನೆಯಲ್ಲಿ ತಾಯಿ, ಸೋದರ ಯಾರೂ ಇರಲಿಲ್ಲ
ಅನುಮಾನ-4: ಸೋದರ ಮನೆಗೆ ಬಂದಾಗ ಮೇನ್ ಡೋರ್ ಲಾಕ್, ಬ್ಯಾಕ್ಡೋರ್ ಓಪನ್ ಆಗಿತ್ತು
ಅನುಮಾನ-5: ಬಾತ್ರೂಮ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ ಹಾಲ್ನಲ್ಲಿ ರಕ್ತ ಚೆಲ್ಲಲು ಸಾಧ್ಯವಾ?
ಅನುಮಾನ-6: ಎಡಗೈ ಹಾಗೂ ಕತ್ತು ಕೊಯ್ದ ಸ್ಥಿತಿಯಲ್ಲಿ ಬಾತ್ರೂಮ್ನಲ್ಲಿ ಬಿದ್ದಿದ್ದ ಪ್ರಬುದ್ಧ
ಅನುಮಾನ-7: ಮಧ್ಯಾಹ್ನ ತಾಯಿ ಜೊತೆ ಫೋನ್ನಲ್ಲಿ ಮಾತುಕತೆ, ಆದ್ರೀಗ ಫೋನ್ ನಾಪತ್ತೆ
ಅನುಮಾನ-8: ಪ್ರಬುದ್ಧಳ ಮೊಬೈಲ್ ಫೋನ್ನಲ್ಲೇ ಅಡಗಿದೆಯಾ ಆಕೆ ಸಾವಿನ ರಹಸ್ಯ?
ಅನುಮಾನ-9: ಘಟನೆಗೂ ಮುನ್ನ ಮನೆಗೆ ಯಾರು ಬಂದಿದ್ದರು ಅನ್ನೋದು ಇನ್ನೂ ಗೊತ್ತಿಲ್ಲ
ಅನುಮಾನ-10: 3 ಡೆತ್ ನೋಟ್ ಇದ್ದು, ಆತ್ಮಹತ್ಯೆ ಮನಸ್ಥಿತಿಯಲ್ಲಿ 3 ಡೆತ್ ನೋಟ್ ಬರೆದಿದ್ದಳಾ?
ಅನುಮಾನ-11: ಡೆತ್ ನೋಟ್ನಲ್ಲಿರುವ ಬರವಣಿಗೆ, ಪ್ರಬುದ್ಧಳ ನೋಟ್ಸ್ನಲ್ಲಿರುವ ಬರವಣಿಗೆ ಮ್ಯಾಚ್ ಆಗ್ತಿಲ್ಲ
ಅನುಮಾನ-12: ಕೊಲೆಯಾದ ಸ್ಥಳದಲ್ಲಿ ಸಾರಿ ಅಮ್ಮ ಅನ್ನೋ ಡೆತ್ ನೋಟ್ ಇಟ್ಟಿದ್ದು ಯಾರು?
ಅನುಮಾನ-13: ಮರಣೋತ್ತರ ಪರೀಕ್ಷೆಯಲ್ಲಿ ಪ್ರಬುದ್ಧ ಆತ್ಮಹತ್ಯೆನಾ? ಕೊಲೆನಾ? ಅನ್ನೋದು ಬಹಿರಂಗ
ಅನುಮಾನ-14: ಕೊಲೆಗೆ ಅಸಲಿ ಕಾರಣ ಏನೆಂಬುದು ಮೊಬೈಲ್ ರಿಕವರಿ ಆದ ನಂತರ ಗೊತ್ತಾಗಲಿದೆ
ಅನುಮಾನ-15: ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ರೆ ಎಡಕೈನಲ್ಲಿ ಮೂಳೆ ಕಾಣೋ ರೀತಿ ಕೈ ಕೂಯ್ದಿರೋದು ಯಾಕೆ?
ಇವಿಷ್ಟು ಅನುಮಾನಗಳ ಜೊತೆಗೆ ಪ್ರಬುದ್ಧ ಈ ಹಿಂದೆ ಎರಡು ಮೂರು ಬಾರಿ ಕೈ ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಅನ್ನೋ ಅನುಮಾನವೂ ಇದೆ. ಸದ್ಯ ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪ್ರಬುದ್ಧ ಸಾವಿನ ರಹಸ್ಯ ಬೇಧಿಸೋದು ಸವಾಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಾತ್ರೂಮ್ನಲ್ಲಿ ಎಡಗೈ ಹಾಗೂ ಕತ್ತು ಕೊಯ್ದ ಸ್ಥಿತಿಯಲ್ಲಿ ಬಿದ್ದಿದ್ದ ಪ್ರಬುದ್ಧ
ಬಾತ್ರೂಮ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ ಹಾಲ್ನಲ್ಲಿ ರಕ್ತ ಚೆಲ್ಲಿದ್ದೇಕೆ?
ಕೊಲೆಯಾದ ಸ್ಥಳದಲ್ಲಿ ಸಾರಿ ಅಮ್ಮ ಅನ್ನೋ ಡೆತ್ ನೋಟ್ ಇಟ್ಟಿದ್ದು ಯಾರು?
ಬೆಂಗಳೂರು: ಮನೆ ಬಾತ್ರೂಮ್ನಲ್ಲಿ ಯುವತಿ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಚ್ಚಿ ಬೀಳಿಸಿದೆ. ನಗರದ ಬೃಂದಾವನ ಲೇಔಟ್ನಲ್ಲಿ ಈ ದುರಂತ ನಡೆದಿದ್ದು, ದ್ವಿತೀಯ ಪಿಯು ವಿದ್ಯಾರ್ಥಿನಿ ಪ್ರಬುದ್ಧ ಅನುಮಾನಾಸ್ಪದ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ: ಜಿಮ್ ಟ್ರೈನರ್ ಸೂಸೈಡ್ ಕೇಸ್ಗೆ ಹೊಸ ಟ್ವಿಸ್ಟ್.. ಪತ್ನಿಗೆ ವಿಡಿಯೋ ಕಾಲ್ ಮಾಡಿದ ಮೇಲೆ ಆಗಿದ್ದೇನು?
ಮಗಳನ್ನು ಕಳೆದುಕೊಂಡಿರುವ ಪ್ರಬುದ್ಧ ತಾಯಿ ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳುತ್ತಿದ್ದಾರೆ. ಬಾತ್ರೂಮ್ನಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ, ಅದರ ಜೊತೆಗೆ ಮೂರು ಡೆತ್ ನೋಟ್ಗಳು ಸಿಕ್ಕಿವೆ ಎನ್ನಲಾಗಿದೆ. ಡೆತ್ನೋಟ್ ಕೂಡ ಹಲವು ಅನುಮಾನಕ್ಕೆ ಕಾರಣವಾಗಿದೆ. ಡೆತ್ನೋಟ್ನಲ್ಲಿರುವ ಹ್ಯಾಂಡ್ರೈಟಿಂಗ್ ಮ್ಯಾಚ್ ಆಗುತ್ತಿಲ್ಲ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.
ಪ್ರಬುದ್ಧ ಸಾವಿಗೆ 15 ಅನುಮಾನ!
ಅನುಮಾನ-1: ಮಧ್ಯಾಹ್ನ 1.30ಕ್ಕೆ ತಾಯಿಗೆ ಕರೆ ಮಾಡಿ ಮಾತಾಡಿದ್ದ ಪ್ರಬುದ್ಧ ಮಧ್ಯಾಹ್ನ 3.30ಕ್ಕೆ ಸಾವು
ಅನುಮಾನ-2: ಮಧ್ಯಾಹ್ನ 1.30 ರಿಂದ 3.30ರೊಳಗೆ ಆ ಎರಡು ಗಂಟೆಗಳಲ್ಲಿ ಆಗಿದ್ದು ಏನು?
ಅನುಮಾನ-3: ಪ್ರಬುದ್ಧ ಮನೆಗೆ ಬಂದಾಗ ಮನೆಯಲ್ಲಿ ತಾಯಿ, ಸೋದರ ಯಾರೂ ಇರಲಿಲ್ಲ
ಅನುಮಾನ-4: ಸೋದರ ಮನೆಗೆ ಬಂದಾಗ ಮೇನ್ ಡೋರ್ ಲಾಕ್, ಬ್ಯಾಕ್ಡೋರ್ ಓಪನ್ ಆಗಿತ್ತು
ಅನುಮಾನ-5: ಬಾತ್ರೂಮ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ ಹಾಲ್ನಲ್ಲಿ ರಕ್ತ ಚೆಲ್ಲಲು ಸಾಧ್ಯವಾ?
ಅನುಮಾನ-6: ಎಡಗೈ ಹಾಗೂ ಕತ್ತು ಕೊಯ್ದ ಸ್ಥಿತಿಯಲ್ಲಿ ಬಾತ್ರೂಮ್ನಲ್ಲಿ ಬಿದ್ದಿದ್ದ ಪ್ರಬುದ್ಧ
ಅನುಮಾನ-7: ಮಧ್ಯಾಹ್ನ ತಾಯಿ ಜೊತೆ ಫೋನ್ನಲ್ಲಿ ಮಾತುಕತೆ, ಆದ್ರೀಗ ಫೋನ್ ನಾಪತ್ತೆ
ಅನುಮಾನ-8: ಪ್ರಬುದ್ಧಳ ಮೊಬೈಲ್ ಫೋನ್ನಲ್ಲೇ ಅಡಗಿದೆಯಾ ಆಕೆ ಸಾವಿನ ರಹಸ್ಯ?
ಅನುಮಾನ-9: ಘಟನೆಗೂ ಮುನ್ನ ಮನೆಗೆ ಯಾರು ಬಂದಿದ್ದರು ಅನ್ನೋದು ಇನ್ನೂ ಗೊತ್ತಿಲ್ಲ
ಅನುಮಾನ-10: 3 ಡೆತ್ ನೋಟ್ ಇದ್ದು, ಆತ್ಮಹತ್ಯೆ ಮನಸ್ಥಿತಿಯಲ್ಲಿ 3 ಡೆತ್ ನೋಟ್ ಬರೆದಿದ್ದಳಾ?
ಅನುಮಾನ-11: ಡೆತ್ ನೋಟ್ನಲ್ಲಿರುವ ಬರವಣಿಗೆ, ಪ್ರಬುದ್ಧಳ ನೋಟ್ಸ್ನಲ್ಲಿರುವ ಬರವಣಿಗೆ ಮ್ಯಾಚ್ ಆಗ್ತಿಲ್ಲ
ಅನುಮಾನ-12: ಕೊಲೆಯಾದ ಸ್ಥಳದಲ್ಲಿ ಸಾರಿ ಅಮ್ಮ ಅನ್ನೋ ಡೆತ್ ನೋಟ್ ಇಟ್ಟಿದ್ದು ಯಾರು?
ಅನುಮಾನ-13: ಮರಣೋತ್ತರ ಪರೀಕ್ಷೆಯಲ್ಲಿ ಪ್ರಬುದ್ಧ ಆತ್ಮಹತ್ಯೆನಾ? ಕೊಲೆನಾ? ಅನ್ನೋದು ಬಹಿರಂಗ
ಅನುಮಾನ-14: ಕೊಲೆಗೆ ಅಸಲಿ ಕಾರಣ ಏನೆಂಬುದು ಮೊಬೈಲ್ ರಿಕವರಿ ಆದ ನಂತರ ಗೊತ್ತಾಗಲಿದೆ
ಅನುಮಾನ-15: ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ರೆ ಎಡಕೈನಲ್ಲಿ ಮೂಳೆ ಕಾಣೋ ರೀತಿ ಕೈ ಕೂಯ್ದಿರೋದು ಯಾಕೆ?
ಇವಿಷ್ಟು ಅನುಮಾನಗಳ ಜೊತೆಗೆ ಪ್ರಬುದ್ಧ ಈ ಹಿಂದೆ ಎರಡು ಮೂರು ಬಾರಿ ಕೈ ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಅನ್ನೋ ಅನುಮಾನವೂ ಇದೆ. ಸದ್ಯ ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪ್ರಬುದ್ಧ ಸಾವಿನ ರಹಸ್ಯ ಬೇಧಿಸೋದು ಸವಾಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ