ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಕೆಕೆಆರ್
ಕೆಕೆಆರ್ ತಂಡವನ್ನು ಲೀಡ್ ಮಾಡಿದ್ದ ಶ್ರೇಯಸ್ ಅಯ್ಯರ್
ಅಯ್ಯರ್ ಟ್ರೋಫಿ ಹುಡುಕಾಟದಲ್ಲಿತ್ತು ಒಂದು ಅವಮಾನ
ಶ್ರೇಯಸ್ ಅಯ್ಯರ್ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇದರ ಹಿಂದೆ ಒಂದು ಅಪಮಾನದ ಕಥೆ ಇದೆ. ಅಂದಾದ ಆ ಒಂದು ಅವಮಾನ ಅವರನ್ನ ಚಾಂಪಿಯನ್ ಕ್ಯಾಪ್ಟನ್ ಆಗುವಂತೆ ಮಾಡಿದೆ. ಅಷ್ಟಕ್ಕೂ ಶ್ರೇಯಸ್ಗಾದ ಆ ಅವಮಾನ ಏನು? ಮಾಡಿದ್ದಾದ್ರು ಯಾರು?
ಶ್ರೇಯಸ್ ಅಯ್ಯರ್ ಗತ್ತು, ಕಿಮ್ಮತ್ತು ಇದೀಗ ಇಡೀ ಜಗತ್ತಿಗೆ ಗೊತ್ತಾಗಿದೆ. ನಾಯಕನಾಗಿ ಕೆಕೆಆರ್ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟು ಸೈ ಅನ್ನಿಸಿಕೊಂಡಿದ್ದಾರೆ. ಇಂತಹ ಚಾಂಪಿಯನ್ ಕ್ಯಾಪ್ಟನ್ನನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಲೀಸ್ ಮಾಡಿ ಅವಮಾನಿಸಿತ್ತು. ಶ್ರೇಯಸ್ ಅಯ್ಯರ್ ಡೆಲ್ಲಿ ತೊರೆದ ಅಸಲಿ ಕಾರಣ ಇದೀಗ ಬಹಿರಂಗೊಂಡಿದೆ. 2022 ರಲ್ಲಿ ಡೆಲ್ಲಿ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ರಿಷಬ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಕ್ಲಾಶ್ ಏರ್ಪಟ್ಟಿತ್ತು.
ಇದನ್ನೂ ಓದಿ:IPL ಫೈನಲ್ನಲ್ಲಿ WPL ಘಟನೆಗಳು ಪುನರಾವರ್ತನೆ.. ಐದು ಅಚ್ಚರಿಯ ಕಾಕತಾಳೀಯಗಳು ಇಲ್ಲಿವೆ..!
ಕೊನೆಗೆ ಫ್ರಾಂಚೈಸಿ ಹಿರಿಯ ಆಟಗಾರ ಶ್ರೇಯಸ್ ಬದಲು ರಿಷಭ್ ಪಂತ್ಗೆ ನಾಯಕತ್ವದ ಜವಾಬ್ದಾರಿ ನೀಡ್ತು. ಇದರಿಂದ ಶ್ರೇಯಸ್ ಕೋಪಗೊಂಡ್ರು. ಇದು ತನಗಾದ ಅಪಮಾನ ಎಂದು ತಿಳಿದು ಡೆಲ್ಲಿ ತಂಡದಿಂದ ಹೊರಬರಲು ನಿರ್ಧರಿಸಿದ್ರು. ಆಗ ಫ್ರಾಂಚೈಸಿ ನೀವು ಕೇಳಿದಷ್ಟು ದುಡ್ಡು ಕೊಟ್ಟು ರಿಟೆನ್ಷನ್ ಮಾಡಿಕೊಳ್ತೀವಿ. ಯಾವುದೇ ಕಾರಣಕ್ಕೂ ತಂಡ ತೊರೆಯಬೇಡಿ ಎಂದು ಹೇಳಿತು.
ಆದರೂ ಶ್ರೇಯಸ್ ತಂಡ ತೊರೆದ್ರು. ಯಾಕಂದ್ರೆ ಅದಕ್ಕೂ ಹಿಂದಿನ ಸೀಸನ್ನಲ್ಲಿ ಶ್ರೇಯಸ್ ತಂಡವನ್ನ ರನ್ನರ್ಅಪ್ವರೆಗೆ ಕೊಂಡೊಯ್ದಿದ್ರು. ಯಶಸ್ವಿಯಾಗಿ ತಂಡವನ್ನ ಮುನ್ನಡೆಸಿದ್ರು, ನಾಯಕತ್ವ ನಿರಾಕರಣೆ ಮಾಡಿದ್ದಕ್ಕೆ ಶ್ರೇಯಸ್ ಡೆಲ್ಲಿ ತೊರೆದು 2023 ರಲ್ಲಿ ಕೆಕೆಆರ್ ಕ್ಯಾಪ್ಟನ್ ಆದರು. ಆದ್ರೆ ಗಾಯದ ಕಾರಣದಿಂದ ಕಳೆದ ಸೀಸನ್ನಲ್ಲಿ ಆಡಲಿಲ್ಲ. 2024 ರಲ್ಲಿ ಕಮ್ಬ್ಯಾಕ್ ಮಾಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ರು.
ಇದನ್ನೂ ಓದಿ:ಈ 5 ಆಟಗಾರರು ಮಿಂಚಿದ್ರೆ ಟೀಂ ಇಂಡಿಯಾ T20 ವಿಶ್ವಕಪ್ ಚಾಂಪಿಯನ್ ಆಗೋದು ಪಕ್ಕಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಕೆಕೆಆರ್
ಕೆಕೆಆರ್ ತಂಡವನ್ನು ಲೀಡ್ ಮಾಡಿದ್ದ ಶ್ರೇಯಸ್ ಅಯ್ಯರ್
ಅಯ್ಯರ್ ಟ್ರೋಫಿ ಹುಡುಕಾಟದಲ್ಲಿತ್ತು ಒಂದು ಅವಮಾನ
ಶ್ರೇಯಸ್ ಅಯ್ಯರ್ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇದರ ಹಿಂದೆ ಒಂದು ಅಪಮಾನದ ಕಥೆ ಇದೆ. ಅಂದಾದ ಆ ಒಂದು ಅವಮಾನ ಅವರನ್ನ ಚಾಂಪಿಯನ್ ಕ್ಯಾಪ್ಟನ್ ಆಗುವಂತೆ ಮಾಡಿದೆ. ಅಷ್ಟಕ್ಕೂ ಶ್ರೇಯಸ್ಗಾದ ಆ ಅವಮಾನ ಏನು? ಮಾಡಿದ್ದಾದ್ರು ಯಾರು?
ಶ್ರೇಯಸ್ ಅಯ್ಯರ್ ಗತ್ತು, ಕಿಮ್ಮತ್ತು ಇದೀಗ ಇಡೀ ಜಗತ್ತಿಗೆ ಗೊತ್ತಾಗಿದೆ. ನಾಯಕನಾಗಿ ಕೆಕೆಆರ್ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟು ಸೈ ಅನ್ನಿಸಿಕೊಂಡಿದ್ದಾರೆ. ಇಂತಹ ಚಾಂಪಿಯನ್ ಕ್ಯಾಪ್ಟನ್ನನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಲೀಸ್ ಮಾಡಿ ಅವಮಾನಿಸಿತ್ತು. ಶ್ರೇಯಸ್ ಅಯ್ಯರ್ ಡೆಲ್ಲಿ ತೊರೆದ ಅಸಲಿ ಕಾರಣ ಇದೀಗ ಬಹಿರಂಗೊಂಡಿದೆ. 2022 ರಲ್ಲಿ ಡೆಲ್ಲಿ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ರಿಷಬ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಕ್ಲಾಶ್ ಏರ್ಪಟ್ಟಿತ್ತು.
ಇದನ್ನೂ ಓದಿ:IPL ಫೈನಲ್ನಲ್ಲಿ WPL ಘಟನೆಗಳು ಪುನರಾವರ್ತನೆ.. ಐದು ಅಚ್ಚರಿಯ ಕಾಕತಾಳೀಯಗಳು ಇಲ್ಲಿವೆ..!
ಕೊನೆಗೆ ಫ್ರಾಂಚೈಸಿ ಹಿರಿಯ ಆಟಗಾರ ಶ್ರೇಯಸ್ ಬದಲು ರಿಷಭ್ ಪಂತ್ಗೆ ನಾಯಕತ್ವದ ಜವಾಬ್ದಾರಿ ನೀಡ್ತು. ಇದರಿಂದ ಶ್ರೇಯಸ್ ಕೋಪಗೊಂಡ್ರು. ಇದು ತನಗಾದ ಅಪಮಾನ ಎಂದು ತಿಳಿದು ಡೆಲ್ಲಿ ತಂಡದಿಂದ ಹೊರಬರಲು ನಿರ್ಧರಿಸಿದ್ರು. ಆಗ ಫ್ರಾಂಚೈಸಿ ನೀವು ಕೇಳಿದಷ್ಟು ದುಡ್ಡು ಕೊಟ್ಟು ರಿಟೆನ್ಷನ್ ಮಾಡಿಕೊಳ್ತೀವಿ. ಯಾವುದೇ ಕಾರಣಕ್ಕೂ ತಂಡ ತೊರೆಯಬೇಡಿ ಎಂದು ಹೇಳಿತು.
ಆದರೂ ಶ್ರೇಯಸ್ ತಂಡ ತೊರೆದ್ರು. ಯಾಕಂದ್ರೆ ಅದಕ್ಕೂ ಹಿಂದಿನ ಸೀಸನ್ನಲ್ಲಿ ಶ್ರೇಯಸ್ ತಂಡವನ್ನ ರನ್ನರ್ಅಪ್ವರೆಗೆ ಕೊಂಡೊಯ್ದಿದ್ರು. ಯಶಸ್ವಿಯಾಗಿ ತಂಡವನ್ನ ಮುನ್ನಡೆಸಿದ್ರು, ನಾಯಕತ್ವ ನಿರಾಕರಣೆ ಮಾಡಿದ್ದಕ್ಕೆ ಶ್ರೇಯಸ್ ಡೆಲ್ಲಿ ತೊರೆದು 2023 ರಲ್ಲಿ ಕೆಕೆಆರ್ ಕ್ಯಾಪ್ಟನ್ ಆದರು. ಆದ್ರೆ ಗಾಯದ ಕಾರಣದಿಂದ ಕಳೆದ ಸೀಸನ್ನಲ್ಲಿ ಆಡಲಿಲ್ಲ. 2024 ರಲ್ಲಿ ಕಮ್ಬ್ಯಾಕ್ ಮಾಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ರು.
ಇದನ್ನೂ ಓದಿ:ಈ 5 ಆಟಗಾರರು ಮಿಂಚಿದ್ರೆ ಟೀಂ ಇಂಡಿಯಾ T20 ವಿಶ್ವಕಪ್ ಚಾಂಪಿಯನ್ ಆಗೋದು ಪಕ್ಕಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ