ಮಧ್ಯರಾತ್ರಿ ಕಾಲೇಜು ಕಟ್ಟಡದ ಮೇಲಿಂದ ಬಿದ್ದ ವ್ಯಕ್ತಿ ಸಾವು
ಸಿಂಧನೂರಿನ ಅಕ್ಕಮಹಾದೇವಿ ಪಿಜಿ ಸೆಂಟರ್ನಲ್ಲಿ ದಾರುಣ ಘಟನೆ
ಕಾಲೇಜು ಕಟ್ಟಡದ ಮೇಲೆ ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ಬಸ್ಸಯ್ಯ
ಸಾವು ಹೇಗೆ, ಯಾವಾಗ ಬರುತ್ತೋ ಹೇಳಲು ಆಗೋದಿಲ್ಲ. ರಾಯಚೂರು ಜಿಲ್ಲೆ ಸಿಂಧನೂರು ನಗರದ ಅಕ್ಕಮಹಾದೇವಿ ಪಿಜಿ ಸೆಂಟರ್ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕಾಲೇಜು ಕಟ್ಟಡದ ಮೇಲಿಂದ ಬಿದ್ದು 45 ವರ್ಷದ ಬಸ್ಸಯ್ಯು ಧುಮತಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಪೋರ್ಷೆ ಕಾರು ಆಕ್ಸಿಡೆಂಟ್ ಕೇಸ್ನಲ್ಲಿ ಕಳ್ಳಾಟ.. ಬಾಲಕನ ತಾಯಿ ತಗ್ಲಾಕೊಂಡಿದ್ದೇ ರೋಚಕ; ಅಸಲಿಗೆ ಆಗಿದ್ದೇನು?
ಬಸ್ಸಯ್ಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಕಾಲೇಜು ಕಟ್ಟಡದ ಮೇಲೆ ಮಲಗಿದ್ದ ಬಸ್ಸಯ್ಯ ಮೇಲಿಂದ ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಬಸ್ಸಯ್ಯ ಧುಮತಿ ಅವರು ರಾತ್ರಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಮಧ್ಯರಾತ್ರಿ ನಿದ್ದೆ ಮಂಪರಿನಲ್ಲಿ ಆಯ ತಪ್ಪಿ ಬಿದ್ದು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಧ್ಯರಾತ್ರಿ ಕಾಲೇಜು ಕಟ್ಟಡದ ಮೇಲಿಂದ ಬಿದ್ದ ವ್ಯಕ್ತಿ ಸಾವು
ಸಿಂಧನೂರಿನ ಅಕ್ಕಮಹಾದೇವಿ ಪಿಜಿ ಸೆಂಟರ್ನಲ್ಲಿ ದಾರುಣ ಘಟನೆ
ಕಾಲೇಜು ಕಟ್ಟಡದ ಮೇಲೆ ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ಬಸ್ಸಯ್ಯ
ಸಾವು ಹೇಗೆ, ಯಾವಾಗ ಬರುತ್ತೋ ಹೇಳಲು ಆಗೋದಿಲ್ಲ. ರಾಯಚೂರು ಜಿಲ್ಲೆ ಸಿಂಧನೂರು ನಗರದ ಅಕ್ಕಮಹಾದೇವಿ ಪಿಜಿ ಸೆಂಟರ್ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕಾಲೇಜು ಕಟ್ಟಡದ ಮೇಲಿಂದ ಬಿದ್ದು 45 ವರ್ಷದ ಬಸ್ಸಯ್ಯು ಧುಮತಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಪೋರ್ಷೆ ಕಾರು ಆಕ್ಸಿಡೆಂಟ್ ಕೇಸ್ನಲ್ಲಿ ಕಳ್ಳಾಟ.. ಬಾಲಕನ ತಾಯಿ ತಗ್ಲಾಕೊಂಡಿದ್ದೇ ರೋಚಕ; ಅಸಲಿಗೆ ಆಗಿದ್ದೇನು?
ಬಸ್ಸಯ್ಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಕಾಲೇಜು ಕಟ್ಟಡದ ಮೇಲೆ ಮಲಗಿದ್ದ ಬಸ್ಸಯ್ಯ ಮೇಲಿಂದ ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಬಸ್ಸಯ್ಯ ಧುಮತಿ ಅವರು ರಾತ್ರಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಮಧ್ಯರಾತ್ರಿ ನಿದ್ದೆ ಮಂಪರಿನಲ್ಲಿ ಆಯ ತಪ್ಪಿ ಬಿದ್ದು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ