ನಿನ್ನೆ ದೆಹಲಿಯಲ್ಲಿ ಎನ್ಡಿಎ ಸಭೆಯಲ್ಲಿ ನಾಯ್ಡು ಭಾಗಿ
ಟಿಡಿಪಿ ಬಿಜೆಪಿ ಮುಂದೆ ಇಡುವ ಬೇಡಿಕೆಗಳು ಏನೇನು?
ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾದ ನಾಯ್ಡು, ನಿತೀಶ್
ಉತ್ತರದಲ್ಲಿ ನಿತೀಶ್ ಆದ್ರೆ ದಕ್ಷಿಣದಲ್ಲಿ ಚಂದ್ರಬಾಬು ನಾಯ್ಡು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಎನ್ಡಿಎಲ್ಲಿರಬೇಕಾದ್ರೆ ಇಬ್ಬರೂ ಕೇಳುವ ಬೇಡಿಕೆಗಳಿಗೆ ಮೋದಿ ಅಸ್ತು ಎನ್ನಲೇಬೇಕಿದೆ. ಹಳೆಯ ದೋಸ್ತಿ ಚಂದ್ರಬಾಬು ನಾಯ್ಡು ಹಲವು ಸಚಿವ ಸ್ಥಾನದ ಜೊತೆಗೆ ಭಾರೀ ದೊಡ್ಡ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಅತ್ತ ನಿತೀಶ್ ಕುಮಾರ್ ಎನ್ಡಿಎ ಭಾಗವಾಗಿರಲು ಹಲವು ಬೇಡಿಕೆಗಳನ್ನು ಇಟ್ಟಿದ್ರೆ ಇತ್ತ ನಾವೇನು ಕಮ್ಮಿ ಇಲ್ಲ ಅಂತ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕೂಡ ಅಖಾಡಕ್ಕಿಳಿದಿದ್ದಾರೆ.
ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಬೇಡಿಕೆ ಇಡುವ ಸಾಧ್ಯತೆ
ಬಿಜೆಪಿಯ ಹಳೇ ದೋಸ್ತಿ ಚಂದ್ರಬಾಬು ನಾಯ್ಡು ಈ ಬಾರಿಯ ಲೋಕಸಭೆ ಹಾಗೂ ಆಂದ್ರಪ್ರದೇಶದ ವಿಧಾನಸಭೆಯಲ್ಲಿ ಕಮಾಲ್ ಮಾಡಿದ್ದಾರೆ. ಜಗನ್ಮೋಹನ್ ರೆಡ್ಡಿಗೆ ಮಣ್ಣುಮುಕ್ಕಿಸಿ ಭಾರೀ ಬಹುಮತದಿಂದ ಆಂಧ್ರದ ಗದ್ದುಗೆ ಹಿಡಿದಿದ್ದಾರೆ. ಲೋಕಸಭೆಯಲ್ಲೂ 16 ಸ್ಥಾನಗಳನ್ನು ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಎನ್ಡಿಎ ಜೊತೆಗಿರುವುದಾಗಿ ಹೇಳಿದ್ದರೂ ಡಿಮ್ಯಾಂಡ್ಗಳನ್ನ ಮುಂದಿಡಲು ಸಜ್ಜಾಗಿದ್ದಾರೆ.
ನಾಯ್ಡು ಬೇಡಿಕೆಗಳು!
ಲೋಕಸಭೆ ಸ್ಪೀಕರ್ ಸ್ಥಾನದ ಜೊತೆ ಮಂತ್ರಿಗಿರಿ ಮೇಲೂ ಕಣ್ಣು
ಆಂಧ್ರಪ್ರದೇಶದ ವಿಶೇಷ ಸ್ಥಾನಮಾನದ ಜೊತೆಗೆ ನಾಯ್ಡು ಪ್ರಮುಖ ಸಚಿವ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ಮೊದಲು ಸ್ಪೀಕರ್ ಸ್ಥಾನ ಕೇಳಿದೆ. ಈ ಹಿಂದೆ ವಾಜಪೇಯಿ ಅವಧಿಯಲ್ಲಿ ಟಿಡಿಪಿ ಪಕ್ಷದ ಜಿಎಂಸಿ ಬಾಲಯೋಗಿ ಲೋಕಸಭಾ ಸ್ಪೀಕರ್ ಆಗಿದ್ರು. ಈಗ ಮತ್ತೆ 16 ಸ್ಥಾನ ಗೆದ್ದಿರುವುದರಿಂದ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ಬೇಡಿಕೆ ಇಟ್ಟಿದೆ. ಇದರ ಜೊತೆಗೆ 5-6 ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯ ಹಣಕಾಸು ಖಾತೆ, ಐಟಿ ಮತ್ತು ಸಂವಹನ, ಕೃಷಿ ಮಂತ್ರಾಲಯ, ಜಲಶಕ್ತಿ ಸಾರಿಗೆ, ಆರೋಗ್ಯ ಮತ್ತು ಗ್ರಾಮೀಣ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ:ಬೆನ್ನು ಬಿಡದ ಬೇತಾಳದಂತೆ ಕಾಡಿದ ದುರಾದೃಷ್ಟ.. 11 ವರ್ಷದಲ್ಲಿ 9 ಪಂದ್ಯ.. ಕಪ್ ನಮ್ದಲ್ಲ..!
ಚುನಾವಣೆ ಫಲಿತಾಂಶದ ಬಳಿಕ ಇಂಡಿಯಾ ಮೈತ್ರಿಕೂಟದಿಂದ ದೊಡ್ಡ ದೊಡ್ಡ ಆಫರ್ಗಳು ಬರುತ್ತಿವೆ. ಆ ಆಫರ್ ರಿಜೆಕ್ಟ್ ಮಾಡಿ ಮೋದಿ ಜೊತೆಯೇ ನಿಲ್ಲಲು ನಾಯ್ಡು ದೊಡ್ಡ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬಗ್ಗೆ ಅಮಿತ್ ಶಾ ಹಾಗೂ ಮೋದಿ ಯಾವ ನಿರ್ಧಾರ ಕೈಗೊಳ್ತಾರೆ ಕಾದು ನೋಡಬೇಕಿದೆ. ಅದರಲ್ಲೂ ನಾಯ್ಡು ರಾಜಕೀಯ ಇತಿಹಾಸವನ್ನು ನೋಡಿಕೊಂಡು ಬಂದಿರುವ ಕೇಂದ್ರ ನಾಯಕರು ಬಹಳ ಮುನ್ನೆಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿನ್ನೆ ದೆಹಲಿಯಲ್ಲಿ ಎನ್ಡಿಎ ಸಭೆಯಲ್ಲಿ ನಾಯ್ಡು ಭಾಗಿ
ಟಿಡಿಪಿ ಬಿಜೆಪಿ ಮುಂದೆ ಇಡುವ ಬೇಡಿಕೆಗಳು ಏನೇನು?
ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾದ ನಾಯ್ಡು, ನಿತೀಶ್
ಉತ್ತರದಲ್ಲಿ ನಿತೀಶ್ ಆದ್ರೆ ದಕ್ಷಿಣದಲ್ಲಿ ಚಂದ್ರಬಾಬು ನಾಯ್ಡು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಎನ್ಡಿಎಲ್ಲಿರಬೇಕಾದ್ರೆ ಇಬ್ಬರೂ ಕೇಳುವ ಬೇಡಿಕೆಗಳಿಗೆ ಮೋದಿ ಅಸ್ತು ಎನ್ನಲೇಬೇಕಿದೆ. ಹಳೆಯ ದೋಸ್ತಿ ಚಂದ್ರಬಾಬು ನಾಯ್ಡು ಹಲವು ಸಚಿವ ಸ್ಥಾನದ ಜೊತೆಗೆ ಭಾರೀ ದೊಡ್ಡ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಅತ್ತ ನಿತೀಶ್ ಕುಮಾರ್ ಎನ್ಡಿಎ ಭಾಗವಾಗಿರಲು ಹಲವು ಬೇಡಿಕೆಗಳನ್ನು ಇಟ್ಟಿದ್ರೆ ಇತ್ತ ನಾವೇನು ಕಮ್ಮಿ ಇಲ್ಲ ಅಂತ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕೂಡ ಅಖಾಡಕ್ಕಿಳಿದಿದ್ದಾರೆ.
ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಬೇಡಿಕೆ ಇಡುವ ಸಾಧ್ಯತೆ
ಬಿಜೆಪಿಯ ಹಳೇ ದೋಸ್ತಿ ಚಂದ್ರಬಾಬು ನಾಯ್ಡು ಈ ಬಾರಿಯ ಲೋಕಸಭೆ ಹಾಗೂ ಆಂದ್ರಪ್ರದೇಶದ ವಿಧಾನಸಭೆಯಲ್ಲಿ ಕಮಾಲ್ ಮಾಡಿದ್ದಾರೆ. ಜಗನ್ಮೋಹನ್ ರೆಡ್ಡಿಗೆ ಮಣ್ಣುಮುಕ್ಕಿಸಿ ಭಾರೀ ಬಹುಮತದಿಂದ ಆಂಧ್ರದ ಗದ್ದುಗೆ ಹಿಡಿದಿದ್ದಾರೆ. ಲೋಕಸಭೆಯಲ್ಲೂ 16 ಸ್ಥಾನಗಳನ್ನು ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಎನ್ಡಿಎ ಜೊತೆಗಿರುವುದಾಗಿ ಹೇಳಿದ್ದರೂ ಡಿಮ್ಯಾಂಡ್ಗಳನ್ನ ಮುಂದಿಡಲು ಸಜ್ಜಾಗಿದ್ದಾರೆ.
ನಾಯ್ಡು ಬೇಡಿಕೆಗಳು!
ಲೋಕಸಭೆ ಸ್ಪೀಕರ್ ಸ್ಥಾನದ ಜೊತೆ ಮಂತ್ರಿಗಿರಿ ಮೇಲೂ ಕಣ್ಣು
ಆಂಧ್ರಪ್ರದೇಶದ ವಿಶೇಷ ಸ್ಥಾನಮಾನದ ಜೊತೆಗೆ ನಾಯ್ಡು ಪ್ರಮುಖ ಸಚಿವ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ಮೊದಲು ಸ್ಪೀಕರ್ ಸ್ಥಾನ ಕೇಳಿದೆ. ಈ ಹಿಂದೆ ವಾಜಪೇಯಿ ಅವಧಿಯಲ್ಲಿ ಟಿಡಿಪಿ ಪಕ್ಷದ ಜಿಎಂಸಿ ಬಾಲಯೋಗಿ ಲೋಕಸಭಾ ಸ್ಪೀಕರ್ ಆಗಿದ್ರು. ಈಗ ಮತ್ತೆ 16 ಸ್ಥಾನ ಗೆದ್ದಿರುವುದರಿಂದ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ಬೇಡಿಕೆ ಇಟ್ಟಿದೆ. ಇದರ ಜೊತೆಗೆ 5-6 ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯ ಹಣಕಾಸು ಖಾತೆ, ಐಟಿ ಮತ್ತು ಸಂವಹನ, ಕೃಷಿ ಮಂತ್ರಾಲಯ, ಜಲಶಕ್ತಿ ಸಾರಿಗೆ, ಆರೋಗ್ಯ ಮತ್ತು ಗ್ರಾಮೀಣ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ:ಬೆನ್ನು ಬಿಡದ ಬೇತಾಳದಂತೆ ಕಾಡಿದ ದುರಾದೃಷ್ಟ.. 11 ವರ್ಷದಲ್ಲಿ 9 ಪಂದ್ಯ.. ಕಪ್ ನಮ್ದಲ್ಲ..!
ಚುನಾವಣೆ ಫಲಿತಾಂಶದ ಬಳಿಕ ಇಂಡಿಯಾ ಮೈತ್ರಿಕೂಟದಿಂದ ದೊಡ್ಡ ದೊಡ್ಡ ಆಫರ್ಗಳು ಬರುತ್ತಿವೆ. ಆ ಆಫರ್ ರಿಜೆಕ್ಟ್ ಮಾಡಿ ಮೋದಿ ಜೊತೆಯೇ ನಿಲ್ಲಲು ನಾಯ್ಡು ದೊಡ್ಡ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬಗ್ಗೆ ಅಮಿತ್ ಶಾ ಹಾಗೂ ಮೋದಿ ಯಾವ ನಿರ್ಧಾರ ಕೈಗೊಳ್ತಾರೆ ಕಾದು ನೋಡಬೇಕಿದೆ. ಅದರಲ್ಲೂ ನಾಯ್ಡು ರಾಜಕೀಯ ಇತಿಹಾಸವನ್ನು ನೋಡಿಕೊಂಡು ಬಂದಿರುವ ಕೇಂದ್ರ ನಾಯಕರು ಬಹಳ ಮುನ್ನೆಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ