ವಿಶ್ವವೇ ಕಾದು ಕುಳಿತಿರೋ ಹೈವೋಲ್ಟೆಜ್ ಕದನಕ್ಕೆ ವೇದಿಕೆ ರೆಡಿ
ಶಿವಂ ದುಬೆಗೆ ಕೊಕ್, ಸಂಜು ಸ್ಯಾಮ್ಸನ್ಗೆ ಸಿಗುತ್ತಾ ಇಲ್ಲಿ ಚಾನ್ಸ್?
ಶಾಕಿಂಗ್ ರಿಸಲ್ಟ್ ಕ್ರಿಕೆಟ್ ಪ್ರೇಮಿಗಳ ಕುತೂಹಲವನ್ನ ಹೆಚ್ಚಿಸ್ತಿವೆ
ಟಿ20 ವಿಶ್ವಕಪ್ನ ಹೈವೋಲ್ಟೆಜ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಪಾಕ್ ವಿರುದ್ಧದ ಯುದ್ಧ ಗೆಲ್ಲಲು ಟೀಮ್ ಇಂಡಿಯಾ ಭರ್ಜರಿ ಸಮರಾಭ್ಯಾಸ ನಡೆಸಿದೆ. ಪ್ರತಿಷ್ಠೆಯ ಪಂದ್ಯದಲ್ಲಿ ಗೆಲುವೊಂದೇ ಗುರಿ ಅನ್ನೋದು ಕೋಚ್-ಕ್ಯಾಪ್ಟನ್ ಮಂತ್ರವಾಗಿದೆ. ತಂತ್ರ-ರಣತಂತ್ರದ ಲೆಕ್ಕಾಚಾರ ಜೋರಾಗಿದ್ದು, ಪಾಕ್ ಪ್ಲಾನ್ನ ಪಂಚರ್ ಮಾಡಲು ಮಾಸ್ಟರ್ ಪ್ಲಾನ್ ರೆಡಿಯಾಗಿದೆ.
ಟಿ20 ವಿಶ್ವಕಪ್ನ ಫೀವರ್ ದಿನೇ ದಿನೇ ಜಾಸ್ತಿಯಾಗ್ತಿದೆ. ರೋಚಕ ಫೈಟ್ಗಳು, ಶಾಕಿಂಗ್ ರಿಸಲ್ಟ್ ಕ್ರಿಕೆಟ್ ಪ್ರೇಮಿಗಳ ಕುತೂಹಲವನ್ನ ಹೆಚ್ಚಿಸ್ತಿವೆ. ಇದೀಗ ಇಡೀ ವಿಶ್ವವೇ ಕಾದು ಕುಳಿತಿರೋ ಹೈವೋಲ್ಟೆಜ್ ಕದನಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನ ಮೆಗಾ ಕದನದಲ್ಲಿ ಬದ್ಧವೈರಿಗಳಾದ ಇಂಡೋ -ಪಾಕ್ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲು ಸಜ್ಜಾಗಿವೆ.
ಇದನ್ನೂ ಓದಿ: T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು?
ಪಾಕಿಸ್ತಾನದ ವಿರುದ್ಧ ಅಮೆರಿಕಗೆ ಗೆಲುವು.!
ಈ ಬಾರಿಯ ಟೂರ್ನಿಯಲ್ಲಿ ಕಪ್ ಗೆಲ್ಲೋ ಫೇವರಿಟ್ ಆಗಿ ಕಣಕ್ಕಿಳಿದ ಪಾಕಿಸ್ತಾನ ತಂಡ ಸದ್ಯ ಹೀನಾಯ ಸ್ಥಿತಿ ತಲುಪಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸೂಪರ್ ಸ್ಟಾರ್ಗಳನ್ನೇ ಹೊಂದಿರುವ ಬಲಿಷ್ಠ ಪಾಕಿಸ್ತಾನ, ಅಮೆರಿಕದ ಆಟಕ್ಕೆ ಶರಣಾಗಿದೆ. ಯುಎಸ್ಎ ಎದುರು ಬಾಬರ್ ಬಳಗ ಹೀನಾಯವಾಗಿ ಸೋತಿರಬಹುದು. ಹಾಗಂತ ಟೀಮ್ ಇಂಡಿಯಾ ರಿಲ್ಯಾಕ್ಸ್ ಆಗುವಂತಿಲ್ಲ. ಪಾಕ್ ಎಂದಿದ್ರೂ ಡೇಂಜರಸ್ ತಂಡವೇ. ಹೀಗಾಗಿ ಅಮೆರಿಕ ಎದುರು ಪಾಕ್ ಸೋತ ಬಳಿಕ ಭಾರತದ ಟೀಮ್ ಮ್ಯಾನೇಜ್ಮೆಂಟ್ ಮತ್ತಷ್ಟು ಎಚ್ಚೆತ್ತುಕೊಂಡಿದೆ.
ಬದಲಾಗುತ್ತಾ ಟೀಮ್ ಇಂಡಿಯಾ ಗೇಮ್ಪ್ಲಾನ್.?
ಪಾಕ್ ವಿರುದ್ಧ ಕದನ ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಠೆಯ ಸಮರ. ಸೋಲು ಅನ್ನೋ ಪದವನ್ನ ಸಹಿಸಲು ಸಾಧ್ಯವಿಲ್ಲ. ಇಡೀ ದೇಶ ಭಾರತದ ಗೆಲುವಿಗೆ ಪ್ರಾರ್ಥನೆ ಮಾಡ್ತಿದ್ರೆ, ಇಡೀ ವಿಶ್ವ ಕುತೂಹಲದ ಕಣ್ಣಿನಿಂದ ಪಂದ್ಯವನ್ನ ನೋಡ್ತಿರುತ್ತೆ. ಯಾಮಾರೋವಂತೆ ಇಲ್ಲ. ಹೀಗಾಗಿಯೇ ನ್ಯೂಯಾರ್ಕ್ ಫ್ಲೈಟ್ ಹತ್ತೋಕು ಮುನ್ನವೇ ಈ ಪಂದ್ಯಕ್ಕೆ ಸಿದ್ಧತೆ ಆರಂಭವಾಗಿತ್ತು. ಗೇಮ್ಪ್ಲಾನ್ ರೆಡಿಯಾಗಿತ್ತು. ಆದ್ರೆ, ಈಗ ಎಲ್ಲಾ ಲೆಕ್ಕಾಚಾರ ಬದಲಾಗಿದೆ. ಇಲ್ಲಿನ ಪ್ಲೇಯಿಂಗ್ ಕಂಡೀಷನ್, ಪಿಚ್ ವರ್ತನೆ, ಪಂದ್ಯದ ರಿಸಲ್ಟ್ಗಳನ್ನ ನೋಡಿ ಅದಕ್ಕಾಗಿ ಮಹತ್ವದ ನಿರ್ಧಾರ ಕೈಗೊಳ್ಳಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ.
ಬ್ಯಾಟಿಂಗ್ ಬಲ ಹೆಚ್ಚಿಸಲು ಮುಂದಾದ ಮ್ಯಾನೇಜ್ಮೆಂಟ್.!
ನಸ್ಸೌ ಪಿಚ್ ವರ್ತನೆ ಹಾಗೂ ಪಾಕ್ನ ಫಲಿತಾಂಶ ನೋಡಿದ ಮೇಲೆ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸೋದು ಅನಿವಾರ್ಯ ಅನ್ನೋ ನಿರ್ಧಾರಕ್ಕೆ ಸದ್ಯ ಟೀಮ್ ಇಂಡಿಯಾ ಬಂದಿದೆ. ಹೀಗಾಗಿ ಕಳಪೆ ಫಾರ್ಮ್ ಸುಳಿಗೆ ಸಿಲುಕಿರುವ ಶಿವಂ ದುಬೆಗೆ ಕೊಕ್ ಕೊಡೋ ಸಾಧ್ಯತೆ ದಟ್ಟವಾಗಿದೆ. ದುಬೆಗೆ ಗೇಟ್ಪಾಸ್ ಕೊಟ್ಟು, ಸಂಜು ಸ್ಯಾಮ್ಸನ್ಗೆ ಸ್ಥಾನ ಕಲ್ಪಿಸುವ ಚಿಂತನೆ ನಡೆಸಿದೆ. ಪಾಕ್ ತಂಡಕ್ಕೆ ಲೆಫ್ಟ್ ಆರ್ಮ್ ಪೇಸರ್ಗಳಾದ ಮೊಹಮ್ಮದ್ ಅಮೀರ್, ಶಾಹೀನ್ ಶಾ ಅಫ್ರಿದಿ ಬಲವಿದೆ. ಈ ಲೆಕ್ಕಾಚಾರದಲ್ಲೂ ಲೆಫ್ಟ್ ಹ್ಯಾಂಡರ್ ದುಬೆ ಬದಲು ರೈಟ್ ಹ್ಯಾಂಡರ್ ಸಂಜುಗೆ ಚಾನ್ಸ್ ನಿಡೋದು ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್ ಆಗಿರುವಂತೆ ಖಡಕ್ ವಾರ್ನಿಂಗ್
ಸ್ಪೆಷಲಿಸ್ಟ್ ಸ್ಪಿನ್ನರ್ಗೆ ಮಣೆ ಹಾಕಲು ಪ್ಲಾನ್ ಸಿದ್ಧ.!
ಐರ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಇಬ್ಬರು ಸ್ಪಿನ್ ಆಲ್ರೌಂಡರ್ಸ್, ಮೂವರು ವೇಗಿಗಳು ಬಲದೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿದಿತ್ತು. ಆದ್ರೆ, ಪಾಕ್ ವಿರುದ್ಧ ಪ್ಲಾನ್ ಬದಲಾಗೋ ಸಾಧ್ಯತೆಯಿದೆ. ಅಕ್ಷರ್ ಪಟೇಲ್ನ ಡ್ರಾಪ್ ಮಾಡಿ ಕುಲ್ದೀಪ್ ಯಾದವ್ಗೆ ಚಾನ್ಸ್ ನೀಡೋ ಯೋಚನೆ ನಡೆದಿದೆ. ಹೀಗಾದ್ರೆ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಸ್ಪಿನ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಹಾರ್ದಿಕ್ ಪಾಂಡ್ಯ ಸೇರಿದ್ರೆ, ನಾಲ್ವರ ವೇಗಿಗಳ ಬಲವೂ ತಂಡಕ್ಕೆ ಸಿಗಲಿದೆ.
ಇದನ್ನೂ ಓದಿ: TDP, JDUಗೆ ಸಿಂಹಪಾಲು ಸಿಗಲಿದೆಯಾ.. ಮೋದಿ ಜೊತೆ ಇಂದು ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ?
ಹೈವೋಲ್ಟೆಜ್ ಕದನಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ತಂತ್ರ-ರಣತಂತ್ರದ ಲೆಕ್ಕಾಚಾರ ಜೋರಾಗಿದೆ. ಬದಲಾವಣೆ ಮಾಡಲಿ, ಬಿಡಲಿ. ಪರ್ಫೆಕ್ಟ್ ಪ್ಲಾನ್ನೊಂದಿಗೆ ರೋಹಿತ್ ಪಡೆ ಕಣಕ್ಕಿಳಿದು ಪಂದ್ಯದಲ್ಲಿ ಗೆದ್ದು ಬರಲಿ ಅನ್ನೋದು ಇಡೀ ದೇಶದ ಪ್ರಾರ್ಥನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಶ್ವವೇ ಕಾದು ಕುಳಿತಿರೋ ಹೈವೋಲ್ಟೆಜ್ ಕದನಕ್ಕೆ ವೇದಿಕೆ ರೆಡಿ
ಶಿವಂ ದುಬೆಗೆ ಕೊಕ್, ಸಂಜು ಸ್ಯಾಮ್ಸನ್ಗೆ ಸಿಗುತ್ತಾ ಇಲ್ಲಿ ಚಾನ್ಸ್?
ಶಾಕಿಂಗ್ ರಿಸಲ್ಟ್ ಕ್ರಿಕೆಟ್ ಪ್ರೇಮಿಗಳ ಕುತೂಹಲವನ್ನ ಹೆಚ್ಚಿಸ್ತಿವೆ
ಟಿ20 ವಿಶ್ವಕಪ್ನ ಹೈವೋಲ್ಟೆಜ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಪಾಕ್ ವಿರುದ್ಧದ ಯುದ್ಧ ಗೆಲ್ಲಲು ಟೀಮ್ ಇಂಡಿಯಾ ಭರ್ಜರಿ ಸಮರಾಭ್ಯಾಸ ನಡೆಸಿದೆ. ಪ್ರತಿಷ್ಠೆಯ ಪಂದ್ಯದಲ್ಲಿ ಗೆಲುವೊಂದೇ ಗುರಿ ಅನ್ನೋದು ಕೋಚ್-ಕ್ಯಾಪ್ಟನ್ ಮಂತ್ರವಾಗಿದೆ. ತಂತ್ರ-ರಣತಂತ್ರದ ಲೆಕ್ಕಾಚಾರ ಜೋರಾಗಿದ್ದು, ಪಾಕ್ ಪ್ಲಾನ್ನ ಪಂಚರ್ ಮಾಡಲು ಮಾಸ್ಟರ್ ಪ್ಲಾನ್ ರೆಡಿಯಾಗಿದೆ.
ಟಿ20 ವಿಶ್ವಕಪ್ನ ಫೀವರ್ ದಿನೇ ದಿನೇ ಜಾಸ್ತಿಯಾಗ್ತಿದೆ. ರೋಚಕ ಫೈಟ್ಗಳು, ಶಾಕಿಂಗ್ ರಿಸಲ್ಟ್ ಕ್ರಿಕೆಟ್ ಪ್ರೇಮಿಗಳ ಕುತೂಹಲವನ್ನ ಹೆಚ್ಚಿಸ್ತಿವೆ. ಇದೀಗ ಇಡೀ ವಿಶ್ವವೇ ಕಾದು ಕುಳಿತಿರೋ ಹೈವೋಲ್ಟೆಜ್ ಕದನಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನ ಮೆಗಾ ಕದನದಲ್ಲಿ ಬದ್ಧವೈರಿಗಳಾದ ಇಂಡೋ -ಪಾಕ್ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲು ಸಜ್ಜಾಗಿವೆ.
ಇದನ್ನೂ ಓದಿ: T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು?
ಪಾಕಿಸ್ತಾನದ ವಿರುದ್ಧ ಅಮೆರಿಕಗೆ ಗೆಲುವು.!
ಈ ಬಾರಿಯ ಟೂರ್ನಿಯಲ್ಲಿ ಕಪ್ ಗೆಲ್ಲೋ ಫೇವರಿಟ್ ಆಗಿ ಕಣಕ್ಕಿಳಿದ ಪಾಕಿಸ್ತಾನ ತಂಡ ಸದ್ಯ ಹೀನಾಯ ಸ್ಥಿತಿ ತಲುಪಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸೂಪರ್ ಸ್ಟಾರ್ಗಳನ್ನೇ ಹೊಂದಿರುವ ಬಲಿಷ್ಠ ಪಾಕಿಸ್ತಾನ, ಅಮೆರಿಕದ ಆಟಕ್ಕೆ ಶರಣಾಗಿದೆ. ಯುಎಸ್ಎ ಎದುರು ಬಾಬರ್ ಬಳಗ ಹೀನಾಯವಾಗಿ ಸೋತಿರಬಹುದು. ಹಾಗಂತ ಟೀಮ್ ಇಂಡಿಯಾ ರಿಲ್ಯಾಕ್ಸ್ ಆಗುವಂತಿಲ್ಲ. ಪಾಕ್ ಎಂದಿದ್ರೂ ಡೇಂಜರಸ್ ತಂಡವೇ. ಹೀಗಾಗಿ ಅಮೆರಿಕ ಎದುರು ಪಾಕ್ ಸೋತ ಬಳಿಕ ಭಾರತದ ಟೀಮ್ ಮ್ಯಾನೇಜ್ಮೆಂಟ್ ಮತ್ತಷ್ಟು ಎಚ್ಚೆತ್ತುಕೊಂಡಿದೆ.
ಬದಲಾಗುತ್ತಾ ಟೀಮ್ ಇಂಡಿಯಾ ಗೇಮ್ಪ್ಲಾನ್.?
ಪಾಕ್ ವಿರುದ್ಧ ಕದನ ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಠೆಯ ಸಮರ. ಸೋಲು ಅನ್ನೋ ಪದವನ್ನ ಸಹಿಸಲು ಸಾಧ್ಯವಿಲ್ಲ. ಇಡೀ ದೇಶ ಭಾರತದ ಗೆಲುವಿಗೆ ಪ್ರಾರ್ಥನೆ ಮಾಡ್ತಿದ್ರೆ, ಇಡೀ ವಿಶ್ವ ಕುತೂಹಲದ ಕಣ್ಣಿನಿಂದ ಪಂದ್ಯವನ್ನ ನೋಡ್ತಿರುತ್ತೆ. ಯಾಮಾರೋವಂತೆ ಇಲ್ಲ. ಹೀಗಾಗಿಯೇ ನ್ಯೂಯಾರ್ಕ್ ಫ್ಲೈಟ್ ಹತ್ತೋಕು ಮುನ್ನವೇ ಈ ಪಂದ್ಯಕ್ಕೆ ಸಿದ್ಧತೆ ಆರಂಭವಾಗಿತ್ತು. ಗೇಮ್ಪ್ಲಾನ್ ರೆಡಿಯಾಗಿತ್ತು. ಆದ್ರೆ, ಈಗ ಎಲ್ಲಾ ಲೆಕ್ಕಾಚಾರ ಬದಲಾಗಿದೆ. ಇಲ್ಲಿನ ಪ್ಲೇಯಿಂಗ್ ಕಂಡೀಷನ್, ಪಿಚ್ ವರ್ತನೆ, ಪಂದ್ಯದ ರಿಸಲ್ಟ್ಗಳನ್ನ ನೋಡಿ ಅದಕ್ಕಾಗಿ ಮಹತ್ವದ ನಿರ್ಧಾರ ಕೈಗೊಳ್ಳಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ.
ಬ್ಯಾಟಿಂಗ್ ಬಲ ಹೆಚ್ಚಿಸಲು ಮುಂದಾದ ಮ್ಯಾನೇಜ್ಮೆಂಟ್.!
ನಸ್ಸೌ ಪಿಚ್ ವರ್ತನೆ ಹಾಗೂ ಪಾಕ್ನ ಫಲಿತಾಂಶ ನೋಡಿದ ಮೇಲೆ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸೋದು ಅನಿವಾರ್ಯ ಅನ್ನೋ ನಿರ್ಧಾರಕ್ಕೆ ಸದ್ಯ ಟೀಮ್ ಇಂಡಿಯಾ ಬಂದಿದೆ. ಹೀಗಾಗಿ ಕಳಪೆ ಫಾರ್ಮ್ ಸುಳಿಗೆ ಸಿಲುಕಿರುವ ಶಿವಂ ದುಬೆಗೆ ಕೊಕ್ ಕೊಡೋ ಸಾಧ್ಯತೆ ದಟ್ಟವಾಗಿದೆ. ದುಬೆಗೆ ಗೇಟ್ಪಾಸ್ ಕೊಟ್ಟು, ಸಂಜು ಸ್ಯಾಮ್ಸನ್ಗೆ ಸ್ಥಾನ ಕಲ್ಪಿಸುವ ಚಿಂತನೆ ನಡೆಸಿದೆ. ಪಾಕ್ ತಂಡಕ್ಕೆ ಲೆಫ್ಟ್ ಆರ್ಮ್ ಪೇಸರ್ಗಳಾದ ಮೊಹಮ್ಮದ್ ಅಮೀರ್, ಶಾಹೀನ್ ಶಾ ಅಫ್ರಿದಿ ಬಲವಿದೆ. ಈ ಲೆಕ್ಕಾಚಾರದಲ್ಲೂ ಲೆಫ್ಟ್ ಹ್ಯಾಂಡರ್ ದುಬೆ ಬದಲು ರೈಟ್ ಹ್ಯಾಂಡರ್ ಸಂಜುಗೆ ಚಾನ್ಸ್ ನಿಡೋದು ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್ ಆಗಿರುವಂತೆ ಖಡಕ್ ವಾರ್ನಿಂಗ್
ಸ್ಪೆಷಲಿಸ್ಟ್ ಸ್ಪಿನ್ನರ್ಗೆ ಮಣೆ ಹಾಕಲು ಪ್ಲಾನ್ ಸಿದ್ಧ.!
ಐರ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಇಬ್ಬರು ಸ್ಪಿನ್ ಆಲ್ರೌಂಡರ್ಸ್, ಮೂವರು ವೇಗಿಗಳು ಬಲದೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿದಿತ್ತು. ಆದ್ರೆ, ಪಾಕ್ ವಿರುದ್ಧ ಪ್ಲಾನ್ ಬದಲಾಗೋ ಸಾಧ್ಯತೆಯಿದೆ. ಅಕ್ಷರ್ ಪಟೇಲ್ನ ಡ್ರಾಪ್ ಮಾಡಿ ಕುಲ್ದೀಪ್ ಯಾದವ್ಗೆ ಚಾನ್ಸ್ ನೀಡೋ ಯೋಚನೆ ನಡೆದಿದೆ. ಹೀಗಾದ್ರೆ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಸ್ಪಿನ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಹಾರ್ದಿಕ್ ಪಾಂಡ್ಯ ಸೇರಿದ್ರೆ, ನಾಲ್ವರ ವೇಗಿಗಳ ಬಲವೂ ತಂಡಕ್ಕೆ ಸಿಗಲಿದೆ.
ಇದನ್ನೂ ಓದಿ: TDP, JDUಗೆ ಸಿಂಹಪಾಲು ಸಿಗಲಿದೆಯಾ.. ಮೋದಿ ಜೊತೆ ಇಂದು ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ?
ಹೈವೋಲ್ಟೆಜ್ ಕದನಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ತಂತ್ರ-ರಣತಂತ್ರದ ಲೆಕ್ಕಾಚಾರ ಜೋರಾಗಿದೆ. ಬದಲಾವಣೆ ಮಾಡಲಿ, ಬಿಡಲಿ. ಪರ್ಫೆಕ್ಟ್ ಪ್ಲಾನ್ನೊಂದಿಗೆ ರೋಹಿತ್ ಪಡೆ ಕಣಕ್ಕಿಳಿದು ಪಂದ್ಯದಲ್ಲಿ ಗೆದ್ದು ಬರಲಿ ಅನ್ನೋದು ಇಡೀ ದೇಶದ ಪ್ರಾರ್ಥನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ