ರೇಣುಕಾಸ್ವಾಮಿ ಕೊಲೆ ಬೆನ್ನಲ್ಲೇ ಮಲ್ಲಿಕಾರ್ಜುನ್ ನಾಪತ್ತೆ ಸುತ್ತ ಅನುಮಾನ
2011ರಿಂದ 2018ರವರೆಗೆ ದರ್ಶನ್ ಬಳಿ ಮ್ಯಾನೇಜರ್ ಆಗಿದ್ದ ಮಂಜುನಾಥ್
ಅರ್ಜುನ್ ಸರ್ಜಾ ಕೂಡ ಅವರ ವಿರುದ್ಧ ದೂರು ನೀಡಿದ್ರು.. ಆಮೇಲೇನಾಯ್ತು?
ರೇಣುಕಾಸ್ವಾಮಿ ಮರ್ಡರ್ ಬೆನ್ನಲ್ಲೇ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್ ಪ್ರಕರಣ ಮುನ್ನೆಲೆಗೆ ಬಂದಿದೆ. ಹಣ ವಂಚನೆ ಮಾಡಿ ಎಸ್ಕೇಪ್ ಆಗಿದ್ದ ದರ್ಶನ್ ಮ್ಯಾನೇಜರ್ ನಿಜಕ್ಕೂ ಕಾಣೆಯಾದ್ರಾ? ಅಥವಾ ರೇಣುಕಾಸ್ವಾಮಿ ಥರಾ ಯಾವುದಾರೂ ಮೋರಿ ಪಾಲಾಗಿದ್ದಾರಾ ಅನ್ನೋ ಪ್ರಶ್ನೆ ಉದ್ಭವವಾಗಿದ್ದು, ಡಿ ಗ್ಯಾಂಗ್ ಮೇಲೆ ಅನುಮಾನ ಕಾಡ್ತಿದೆ.
ಡಿ-ಗ್ಯಾಂಗ್ ಮೇಲೆ ಮತ್ತೊಂದು ಅನುಮಾನ
ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿ ಸದ್ಯ ವಿಚಾರಣೆ ಎದುರಿಸುತ್ತಿದ್ದಾರೆ. ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ದರ್ಶನ್ ಮತ್ತು ಆತನ ಗ್ಯಾಂಗ್ ಭೀಕರವಾಗಿ ಕೊಲೆ ಮಾಡಿದೆ. ಇದೀಗ ಈ ಪ್ರಕರಣದ ನಡುವೆಯೇ ಡಿ-ಗ್ಯಾಂಗ್ ಮೇಲೆ ಮತ್ತೊಂದು ಅನುಮಾನ ಮೂಡಿದೆ. ದರ್ಶನ್ ಹಳೆಯ ಮ್ಯಾನೇಜಯ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ರೇಣುಕಾಸ್ವಾಮಿಗಿತ್ತು ಸೋಶಿಯಲ್ ಮೀಡಿಯಾ ಗೀಳು.. ಸ್ಕ್ರೀನ್ ಟೈಂ ಪರಿಶೀಲನೆ ವೇಳೆ ಸಿಕ್ಕಿತು ಅಚ್ಚರಿಯ ಮಾಹಿತಿ
‘ಪ್ರೇಮಬರಹ’ ಚಿತ್ರದ ವಿತರಣೆ ವಿಚಾರದಲ್ಲಿ ಮಲ್ಲಿಕಾರ್ಜುನ್ ವಂಚನೆ
ನಾಪತ್ತೆ ಆಗಿರುವ ಮಲ್ಲಿಕಾರ್ಜುನ್, ನಟ ದರ್ಶನ್ ಅವರ ಮಾಜಿ ಮ್ಯಾನೇಜರ್. 2011ರಿಂದ 2018ರವರೆಗೆ ದರ್ಶನ್ ಬಳಿ ಮ್ಯಾನೇಜರ್ ಆಗಿದ್ದರು. ದರ್ಶನ್ ಅವರ ಕಾಲ್ಶೀಟ್ ಸೇರಿದಂತೆ ಹಣದ ವ್ಯವಹಾರ ನೋಡಿಕೊಳ್ತಿದ್ದ. ‘ಪ್ರೇಮಬರಹ’ ಚಿತ್ರದ ವಿತರಣೆ ವಿಚಾರದಲ್ಲಿ ಮಲ್ಲಿಕಾರ್ಜುನ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. 1 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ನಟ ಅರ್ಜುನ್ ಸರ್ಜಾ ದೂರು ನೀಡಿದ್ದರು. ಈ ವಿಷ್ಯ ಗೊತ್ತಾಗಿ ಮಲ್ಲಿಕಾರ್ಜುನ್ಗೆ ದರ್ಶನ್ ಕ್ಲಾಸ್ ತೆಗೆದುಕೊಂಡಿದ್ರು. ಇನ್ನು ನಟ ದರ್ಶನ್ಗೂ ಮಲ್ಲಿಕಾರ್ಜುನ್ 2 ಕೋಟಿ ವಂಚನೆ ಮಾಡಿರುವ ಆರೋಪ ಇದೆ. ಇದೆಲ್ಲ ಕಾರಣದಿಂದ ಮಾನ್ಯೇಜರ್ ಆಗಿದ್ದ ಮಲ್ಲಿಕಾರ್ಜುನ್ನನ್ನು ನಟ ದರ್ಶನ್ ಸ್ವಲ್ಪ ದೂರವಿಟ್ಟಿದ್ದರಂತೆ.
ಇದನ್ನೂ ಓದಿ: ದರ್ಶನ್ ಮತ್ತು ವಿನಯ್ ಫ್ರೆಂಡ್ಶಿಪ್ ಶುರುವಾಗಿದ್ದೇ ಇಲ್ಲಿಂದ! ಇಬ್ಬರನ್ನು ಪರಿಚಯಿಸಿದ್ದು ಆ ನಟ!
ಮನೆಯಲ್ಲಿ ಪತ್ರ ಬರೆದಿಟ್ಟು ಮಲ್ಲಿಕಾರ್ಜುನ್ ನಾಪತ್ತೆ
ಇನ್ನು ಗದಗದಲ್ಲಿದ್ದ ಮಲ್ಲಿಕಾರ್ಜುನ್ ಮನೆಯವರೆಗೂ ಈ ಬಗ್ಗೆ ಗೊತ್ತಿಲ್ಲವಂತೆ. ಮಲ್ಲಿಕಾರ್ಜುನ್ ಅವರನ್ನ ಹುಡುಕಿ ಅರ್ಜುನ್ ಸರ್ಜಾ ಮ್ಯಾನೇಜರ್ ಊರಿಗೆ ಹೋಗಿದ್ದರು. ಆಗ ಅವರ ಪತ್ನಿ ಮಾತಾಡಿ ಹೀಗೆ ಒಂದು ದಿನ ಮನೆಗೆ ಬಂದು, ನಾನು ಸಾಲ ಮಾಡಿಕೊಂಡಿದ್ದೇನೆ, ಯಾರಿಗೂ ಮುಖ ತೋರಿಸಲು ಆಗಲ್ಲ. ಸಾಲ ತೀರಿಸಿ ಬರುತ್ತೇನೆ, ಯಾರೂ ನನ್ನನ್ನು ಹುಡುಕಬೇಡಿ” ಅಂತ ಪತ್ರ ಬರೆದಿಟ್ಟು ಹೋದರು ಅಂತ ಹೇಳಿದ್ದರಂತೆ. ಹೀಗಾಗಿ ಅರ್ಜುನ್ ಸರ್ಜಾ ದೂರು ನೀಡಿದ್ದರು. ಕಳೆದ ಮೇ ತಿಂಗಳಲ್ಲಿ ಕೋರ್ಟ್ ಮಲ್ಲಿಕಾರ್ಜುನ ಬಗ್ಗೆ ಪತ್ರಿಕಾ ಪ್ರಕಟಣೆಯೂ ಹೊರಡಿಸಿತ್ತು. ಆದರೂ ಕಳೆದ ಆರು ವರ್ಷಗಳಿಂದ ಮಲ್ಲಿಕಾರ್ಜುನ್ ಬಗ್ಗೆ ಯಾವ ಸುಳಿವು ಸಿಕ್ಕಿಲ್ಲ.
ಇದನ್ನೂ ಓದಿ: ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ದರ್ಶನ್ ಆ್ಯಂಡ್ ಗ್ಯಾಂಗ್.. ಇಂದು ಮತ್ತೊಮ್ಮೆ ಪೊಲೀಸರಿಂದ ವಿಚಾರಣೆ
ಇದೀಗ ರೇಣುಕಾಸ್ವಾಮಿಯ ಕೊಲೆ ಹಿಂದಿನ ಪ್ಲಾನ್ಗಳನ್ನು ನೋಡ್ತಿದ್ರೆ ದರ್ಶನ್ ಹಳೇ ಮ್ಯಾನೇಜರ್ಗೂ ಏನೋ ಆಗಿರಬೇಕು ಅಂತ ಚರ್ಚೆ ಶುರುವಾಗಿದೆ. ಒಟ್ಟಿನಲ್ಲಿ ರೇಣುಕಾಸ್ವಾಮಿ ಮರ್ಡರ್ ಪ್ರಕರಣದಿಂದ ಒಂದಷ್ಟು ಹಳೆ ಕೇಸ್ಗಳು, ಹಳೇ ವಿವಾದಗಳು ಮುನ್ನೆಲೆಗೆ ಬರ್ತಿದ್ದು, ಡಿ ಗ್ಯಾಂಗ್ ಮೇಲೆ ಮತ್ತಷ್ಟು ಅನುಮಾನ ಮೂಡುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೇಣುಕಾಸ್ವಾಮಿ ಕೊಲೆ ಬೆನ್ನಲ್ಲೇ ಮಲ್ಲಿಕಾರ್ಜುನ್ ನಾಪತ್ತೆ ಸುತ್ತ ಅನುಮಾನ
2011ರಿಂದ 2018ರವರೆಗೆ ದರ್ಶನ್ ಬಳಿ ಮ್ಯಾನೇಜರ್ ಆಗಿದ್ದ ಮಂಜುನಾಥ್
ಅರ್ಜುನ್ ಸರ್ಜಾ ಕೂಡ ಅವರ ವಿರುದ್ಧ ದೂರು ನೀಡಿದ್ರು.. ಆಮೇಲೇನಾಯ್ತು?
ರೇಣುಕಾಸ್ವಾಮಿ ಮರ್ಡರ್ ಬೆನ್ನಲ್ಲೇ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್ ಪ್ರಕರಣ ಮುನ್ನೆಲೆಗೆ ಬಂದಿದೆ. ಹಣ ವಂಚನೆ ಮಾಡಿ ಎಸ್ಕೇಪ್ ಆಗಿದ್ದ ದರ್ಶನ್ ಮ್ಯಾನೇಜರ್ ನಿಜಕ್ಕೂ ಕಾಣೆಯಾದ್ರಾ? ಅಥವಾ ರೇಣುಕಾಸ್ವಾಮಿ ಥರಾ ಯಾವುದಾರೂ ಮೋರಿ ಪಾಲಾಗಿದ್ದಾರಾ ಅನ್ನೋ ಪ್ರಶ್ನೆ ಉದ್ಭವವಾಗಿದ್ದು, ಡಿ ಗ್ಯಾಂಗ್ ಮೇಲೆ ಅನುಮಾನ ಕಾಡ್ತಿದೆ.
ಡಿ-ಗ್ಯಾಂಗ್ ಮೇಲೆ ಮತ್ತೊಂದು ಅನುಮಾನ
ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿ ಸದ್ಯ ವಿಚಾರಣೆ ಎದುರಿಸುತ್ತಿದ್ದಾರೆ. ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ದರ್ಶನ್ ಮತ್ತು ಆತನ ಗ್ಯಾಂಗ್ ಭೀಕರವಾಗಿ ಕೊಲೆ ಮಾಡಿದೆ. ಇದೀಗ ಈ ಪ್ರಕರಣದ ನಡುವೆಯೇ ಡಿ-ಗ್ಯಾಂಗ್ ಮೇಲೆ ಮತ್ತೊಂದು ಅನುಮಾನ ಮೂಡಿದೆ. ದರ್ಶನ್ ಹಳೆಯ ಮ್ಯಾನೇಜಯ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ರೇಣುಕಾಸ್ವಾಮಿಗಿತ್ತು ಸೋಶಿಯಲ್ ಮೀಡಿಯಾ ಗೀಳು.. ಸ್ಕ್ರೀನ್ ಟೈಂ ಪರಿಶೀಲನೆ ವೇಳೆ ಸಿಕ್ಕಿತು ಅಚ್ಚರಿಯ ಮಾಹಿತಿ
‘ಪ್ರೇಮಬರಹ’ ಚಿತ್ರದ ವಿತರಣೆ ವಿಚಾರದಲ್ಲಿ ಮಲ್ಲಿಕಾರ್ಜುನ್ ವಂಚನೆ
ನಾಪತ್ತೆ ಆಗಿರುವ ಮಲ್ಲಿಕಾರ್ಜುನ್, ನಟ ದರ್ಶನ್ ಅವರ ಮಾಜಿ ಮ್ಯಾನೇಜರ್. 2011ರಿಂದ 2018ರವರೆಗೆ ದರ್ಶನ್ ಬಳಿ ಮ್ಯಾನೇಜರ್ ಆಗಿದ್ದರು. ದರ್ಶನ್ ಅವರ ಕಾಲ್ಶೀಟ್ ಸೇರಿದಂತೆ ಹಣದ ವ್ಯವಹಾರ ನೋಡಿಕೊಳ್ತಿದ್ದ. ‘ಪ್ರೇಮಬರಹ’ ಚಿತ್ರದ ವಿತರಣೆ ವಿಚಾರದಲ್ಲಿ ಮಲ್ಲಿಕಾರ್ಜುನ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. 1 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ನಟ ಅರ್ಜುನ್ ಸರ್ಜಾ ದೂರು ನೀಡಿದ್ದರು. ಈ ವಿಷ್ಯ ಗೊತ್ತಾಗಿ ಮಲ್ಲಿಕಾರ್ಜುನ್ಗೆ ದರ್ಶನ್ ಕ್ಲಾಸ್ ತೆಗೆದುಕೊಂಡಿದ್ರು. ಇನ್ನು ನಟ ದರ್ಶನ್ಗೂ ಮಲ್ಲಿಕಾರ್ಜುನ್ 2 ಕೋಟಿ ವಂಚನೆ ಮಾಡಿರುವ ಆರೋಪ ಇದೆ. ಇದೆಲ್ಲ ಕಾರಣದಿಂದ ಮಾನ್ಯೇಜರ್ ಆಗಿದ್ದ ಮಲ್ಲಿಕಾರ್ಜುನ್ನನ್ನು ನಟ ದರ್ಶನ್ ಸ್ವಲ್ಪ ದೂರವಿಟ್ಟಿದ್ದರಂತೆ.
ಇದನ್ನೂ ಓದಿ: ದರ್ಶನ್ ಮತ್ತು ವಿನಯ್ ಫ್ರೆಂಡ್ಶಿಪ್ ಶುರುವಾಗಿದ್ದೇ ಇಲ್ಲಿಂದ! ಇಬ್ಬರನ್ನು ಪರಿಚಯಿಸಿದ್ದು ಆ ನಟ!
ಮನೆಯಲ್ಲಿ ಪತ್ರ ಬರೆದಿಟ್ಟು ಮಲ್ಲಿಕಾರ್ಜುನ್ ನಾಪತ್ತೆ
ಇನ್ನು ಗದಗದಲ್ಲಿದ್ದ ಮಲ್ಲಿಕಾರ್ಜುನ್ ಮನೆಯವರೆಗೂ ಈ ಬಗ್ಗೆ ಗೊತ್ತಿಲ್ಲವಂತೆ. ಮಲ್ಲಿಕಾರ್ಜುನ್ ಅವರನ್ನ ಹುಡುಕಿ ಅರ್ಜುನ್ ಸರ್ಜಾ ಮ್ಯಾನೇಜರ್ ಊರಿಗೆ ಹೋಗಿದ್ದರು. ಆಗ ಅವರ ಪತ್ನಿ ಮಾತಾಡಿ ಹೀಗೆ ಒಂದು ದಿನ ಮನೆಗೆ ಬಂದು, ನಾನು ಸಾಲ ಮಾಡಿಕೊಂಡಿದ್ದೇನೆ, ಯಾರಿಗೂ ಮುಖ ತೋರಿಸಲು ಆಗಲ್ಲ. ಸಾಲ ತೀರಿಸಿ ಬರುತ್ತೇನೆ, ಯಾರೂ ನನ್ನನ್ನು ಹುಡುಕಬೇಡಿ” ಅಂತ ಪತ್ರ ಬರೆದಿಟ್ಟು ಹೋದರು ಅಂತ ಹೇಳಿದ್ದರಂತೆ. ಹೀಗಾಗಿ ಅರ್ಜುನ್ ಸರ್ಜಾ ದೂರು ನೀಡಿದ್ದರು. ಕಳೆದ ಮೇ ತಿಂಗಳಲ್ಲಿ ಕೋರ್ಟ್ ಮಲ್ಲಿಕಾರ್ಜುನ ಬಗ್ಗೆ ಪತ್ರಿಕಾ ಪ್ರಕಟಣೆಯೂ ಹೊರಡಿಸಿತ್ತು. ಆದರೂ ಕಳೆದ ಆರು ವರ್ಷಗಳಿಂದ ಮಲ್ಲಿಕಾರ್ಜುನ್ ಬಗ್ಗೆ ಯಾವ ಸುಳಿವು ಸಿಕ್ಕಿಲ್ಲ.
ಇದನ್ನೂ ಓದಿ: ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ದರ್ಶನ್ ಆ್ಯಂಡ್ ಗ್ಯಾಂಗ್.. ಇಂದು ಮತ್ತೊಮ್ಮೆ ಪೊಲೀಸರಿಂದ ವಿಚಾರಣೆ
ಇದೀಗ ರೇಣುಕಾಸ್ವಾಮಿಯ ಕೊಲೆ ಹಿಂದಿನ ಪ್ಲಾನ್ಗಳನ್ನು ನೋಡ್ತಿದ್ರೆ ದರ್ಶನ್ ಹಳೇ ಮ್ಯಾನೇಜರ್ಗೂ ಏನೋ ಆಗಿರಬೇಕು ಅಂತ ಚರ್ಚೆ ಶುರುವಾಗಿದೆ. ಒಟ್ಟಿನಲ್ಲಿ ರೇಣುಕಾಸ್ವಾಮಿ ಮರ್ಡರ್ ಪ್ರಕರಣದಿಂದ ಒಂದಷ್ಟು ಹಳೆ ಕೇಸ್ಗಳು, ಹಳೇ ವಿವಾದಗಳು ಮುನ್ನೆಲೆಗೆ ಬರ್ತಿದ್ದು, ಡಿ ಗ್ಯಾಂಗ್ ಮೇಲೆ ಮತ್ತಷ್ಟು ಅನುಮಾನ ಮೂಡುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ