ಐದು ಪಂದ್ಯ.. ಟಾರ್ಗೆಟ್ ಟಿ20 ವಿಶ್ವಕಪ್..!
10 ದಿನ.. 5 ಪಂದ್ಯ.. ಎಲ್ಲಾ ಸವಾಲಿಗೂ ಇರಬೇಕು ಸಿದ್ಧ
ಡಿಫರೆಂಟ್ ಟೀಮ್ಸ್ ಅಂಡ್ ಕಂಡೀಷನ್.. ಬೇಕಿದೆ ಪಕ್ಕಾ ಪ್ಲಾನ್
ಟೀಮ್ ಇಂಡಿಯಾ ಸೂಪರ್-8ರ ಘಟ್ಟಕ್ಕೆ ತಲುಪಿದ್ದಾಯ್ತು. ಇನ್ನೇನ್ನಿದ್ದರೂ ಟೀಮ್ ಇಂಡಿಯಾ ದೃಷ್ಟಿ ಟಿ20 ವಿಶ್ವ ಕಿರೀಟ ಗೆಲ್ಲೋದು ಮಾತ್ರ. ಶತಯಾ ಗತಾಯ ಚುಟುಕು ಟ್ರೋಫಿಗೆ ಮುತ್ತಿಡುವ ಹಂಬಲದಲ್ಲಿರುವ ಟೀಮ್ ಇಂಡಿಯಾ, ಮಿಷನ್-5 ಸೂತ್ರದೊಂದಿಗೆ ಹೋರಾಡಲು ಸಜ್ಜಾಗಿದೆ. ಏನಿದು ಮಿಷನ್-5..?
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದೆ. ಸೂಪರ್-8ಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿರುವ ಟೀಮ್ ಇಂಡಿಯಾ, ಈ ಸಲ ಶತಯಾಗತಾಯ ವಿಶ್ವ ಕಿರೀಟಕ್ಕೆ ಮುತ್ತಿಡುವ ಲೆಕ್ಕಚಾರದಲ್ಲಿದೆ. ಇದಕ್ಕಾಗಿಯೇ ತೆರೆ ಹಿಂದೆ ಸ್ಟ್ರಾಟರ್ಜಿ ಪ್ಲಾನಿಂಗ್ ನಡೀತಿದೆ. ಅಂದುಕೊಂಡಂತೆ ಎಲ್ಲಾ ಆಗಬೇಕಂದ್ರೆ, ಟೀಮ್ ಇಂಡಿಯಾ, ಮಿಷನ್-5 ಸೂತ್ರವನ್ನ ಅನುಸರಿಸಬೇಕಿದೆ.
ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್ಗೆ ಕೊಟ್ಟ ವಾರ್ನಿಂಗ್ ಏನು..?
ಮಿಷನ್ ಅನ್ಸ್ಟಾಪಬಲ್.. ಇದು ಟೀಮ್ ಇಂಡಿಯಾ ಧ್ಯೇಯ..!
ಲೀಗ್ ಸ್ಟೇಜ್ನಲ್ಲಿ ಅನ್ಸ್ಟಾಪಬಲ್ ಆಗಿ ಮೆರೆದಾಡಿರುವ ಟೀಮ್ ಇಂಡಿಯಾ, ಈಗ ಹೊಸ ಸವಾಲಿಗೆ ಸಜ್ಜಾಗಿದೆ. ಸೂಪರ್-8ನ ಒಂದೊಂದು ಪಂದ್ಯವೂ, ರೋಹಿತ್ ಬಾಯ್ಸ್ಗೆ ಕಲ್ಲು ಮುಳ್ಳಿನ ಹಾದಿಯೇ ಆಗಿದೆ. ಒಂದೇ ಒಂದು ಪಂದ್ಯದಲ್ಲಿ ಎಡವಿದ್ರೂ, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಲಿದೆ. ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತೆ. ಹೀಗಾಗಿ ಸೋಲಿಲ್ಲದ ಸರದಾರನಂತೆಯೇ ಟಿ20 ವಿಶ್ವಕಪ್ ಫೈನಲ್ಸ್ಗೆ ಎಂಟ್ರಿ ನೀಡಿ, ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳಬೇಕಿದೆ.
10 ದಿನ.. 5 ಪಂದ್ಯ.. ಎಲ್ಲಾ ಸವಾಲಿಗೂ ಇರಬೇಕು ಸಿದ್ಧ..!
ಟೀಮ್ ಇಂಡಿಯಾಗೆ ಸೂಪರ್-8 ಸವಾಲು ಇದೇ 20ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲೇ ಅಫ್ಘನ್ ಎದುರು ಸೆಣಸಾಡಲಿರುವ ಟೀಮ್ ಇಂಡಿಯಾ, ನಂತರ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ಎದುರು ಹೋರಾಟ ನಡೆಸಲಿದೆ. ಆ ಬಳಿಕ ಸೆಮಿಫೈನಲ್ ನಡೆಯಲಿದ್ದು, ವಿಶ್ವಕಪ್ ಫೈನಲ್ 29ರಂದು ನಡೆಯಲಿದೆ. ಹೀಗಾಗಿ 10 ದಿನಗಳ ಅಂತರದಲ್ಲೇ 5 ಪಂದ್ಯಗಳನ್ನಾಡಬೇಕಿದೆ. ಹೀಗಾಗಿ ಎಲ್ಲಾ ಐದು ಪಂದ್ಯಗಳ ಸವಾಲಿಗೂ ಆಟಗಾರರು ಮೆಂಟಲಿ ಸ್ಟ್ರಾಂಗ್ ಇರಬೇಕಿದೆ.
ಇದನ್ನೂ ಓದಿ:Rain News: ಮಲೆನಾಡು.. ಈಗ ಮಳೆನಾಡು.. ಭಾರೀ ಮಳೆ.. ರಾಜ್ಯದಲ್ಲಿ ಎಲ್ಲೆಲ್ಲಿ ಏನೆಲ್ಲಾ ಆಯ್ತು..
ಡಿಫರೆಂಟ್ ಟೀಮ್ಸ್ ಅಂಡ್ ಕಂಡೀಷನ್.. ಬೇಕಿದೆ ಪಕ್ಕಾ ಪ್ಲಾನ್..!
ಇಷ್ಟು ದಿನ ಟೀಮ್ ಇಂಡಿಯಾ ಆಡಿದ ಕಂಡೀಷನ್ಸ್ ಬೇರೆ. ಈಗ ಎದುರಾಗುತ್ತಿರುವ ಕಂಡೀಷನ್ಸ್ ಬೇರೆಯದ್ದಾಗಿದೆ. ಕಂಡೀಷನ್ಸ್ ಮಾತ್ರವೇ ಅಲ್ಲ. ತಂಡಗಳೂ ಕೂಡ ಭಿನ್ನವಿಭಿನ್ನ. ಮುಂದೆ ಟೀಮ್ ಇಂಡಿಯಾ ಎದುರಿಸಲಿರುವ ತಂಡಗಳ ಸ್ಟ್ರೆಂಥ್ಗೆ ನೋಡಿದ್ರೆ, ಗ್ರೂಪ್ ಸ್ಟೇಜ್ನಲ್ಲಿ ಟೀಮ್ ಇಂಡಿಯಾ ಎದುರಿಸಿದ ತಂಡಗಳ ಬಲ ಏನೇನು ಅಲ್ಲ.. ಹೀಗಾಗಿ ಈ ಮದಗಜಗಳನ್ನ ಹೊಡೆದುರುಳಿಸಬೇಕಾದ್ರೆ, ಪಕ್ಕ ಪ್ಲಾನ್ ಇರಬೇಕಿದೆ.
ಬದಲಾಗಬೇಕಿದೆ ಸ್ಟ್ರಾಟರ್ಜಿ ಅಂಡ್ ಪ್ಲೇಯಿಂಗ್-XI..!
ಟೀಮ್ ಇಂಡಿಯಾದ ಸ್ಟ್ರಾಟರ್ಜಿ ಇಲ್ಲಿಂದ ಕಂಪ್ಲೀಟ್ ಬದಲಾಗಬೇಕಿದೆ. ಎದುರಾಳಿಗಳ ಸ್ಟ್ರೆಂಥ್ ಅಂಡ್ ವಿಕ್ನೇಸ್ಗೆ ತಕ್ಕಂತೆ ಒಂದೊಳ್ಳೆ ಕಾಂಬಿನೇಷನ್ ಸೆಟ್ ಮಾಡಬೇಕಿದೆ. ಕೂಲ್ ಆ್ಯಂಡ್ ಡಿಫೆನ್ಸಿವ್ ಅಪ್ರೋಚ್ ಬದಲಾಗಿ ಅಟ್ಯಾಕಿಂಗ್ ಮೂಡ್ನಲ್ಲೇ ಎದುರಾಳಿ ಮೇಲೆ ಮುಗಿಬೀಳಬೇಕಿದೆ. ಆ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸಬೇಕಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಕಂಡೀಷನ್ಸ್ ಅಡ್ವಾಂಟೇಜ್ನ ಎನ್ಕ್ಯಾಶ್ ಮಾಡಿಕೊಳ್ಳುವಂತ ಪ್ಲೇಯಿಂಗ್ ಇಲೆವೆನ್ ಇರಬೇಕಿದೆ.
ಇದನ್ನೂ ಓದಿ:ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?
ಬ್ಯಾಟಿಂಗ್ಗೆ ಬೇಕು ಬಲ.. ಸಂಘಟಿತ ಆಟವೂ ಮುಖ್ಯ..!
ಇಲ್ಲಿಯ ತನಕ ಟೀಮ್ ಇಂಡಿಯಾ ಬ್ಯಾಟರ್ಗಳಿಂದ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಬಂದಿಲ್ಲ. ನ್ಯೂಯಾರ್ಕ್ನ ಅನ್ಪ್ರಿಡಿಕ್ಟಬಲ್ ಪಿಚ್ ಕೂಡ ಇದಕ್ಕೆ ಒಂದು ಕಾರಣ. ಹೀಗಾಗಿ ಗೆಲುವಿಗಾಗಿ ಬೌಲರ್ಗಳನ್ನೇ ಟೀಮ್ ಇಂಡಿಯಾ ನೆಚ್ಚಿಕೊಳ್ಳುವಂತಾಗಿತ್ತು. ಇದೀಗ ಬೌಲರ್ಗಳು ಅದೇ ಖದರ್ ಉಳಿಸಿಕೊಳ್ಳುವುದರ ಜೊತೆ ಜೊತೆಗೆ ಬ್ಯಾಟ್ಸ್ಮನ್ಗಳು, ಸಿಕ್ಸರ್, ಬೌಂಡರಿಗಳ ಬೊರ್ಗೆರೆತದ ಸುನಾಮಿ ಸೃಷ್ಟಿಸಬೇಕು. ಆಗ ಮಾತ್ರ ವಿಶ್ವ ಕಿರೀಟಕ್ಕೆ ಮುತ್ತಿಡಲು ಸಾಧ್ಯ.
ಇದನ್ನೂ ಓದಿ:‘ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಐದು ಪಂದ್ಯ.. ಟಾರ್ಗೆಟ್ ಟಿ20 ವಿಶ್ವಕಪ್..!
10 ದಿನ.. 5 ಪಂದ್ಯ.. ಎಲ್ಲಾ ಸವಾಲಿಗೂ ಇರಬೇಕು ಸಿದ್ಧ
ಡಿಫರೆಂಟ್ ಟೀಮ್ಸ್ ಅಂಡ್ ಕಂಡೀಷನ್.. ಬೇಕಿದೆ ಪಕ್ಕಾ ಪ್ಲಾನ್
ಟೀಮ್ ಇಂಡಿಯಾ ಸೂಪರ್-8ರ ಘಟ್ಟಕ್ಕೆ ತಲುಪಿದ್ದಾಯ್ತು. ಇನ್ನೇನ್ನಿದ್ದರೂ ಟೀಮ್ ಇಂಡಿಯಾ ದೃಷ್ಟಿ ಟಿ20 ವಿಶ್ವ ಕಿರೀಟ ಗೆಲ್ಲೋದು ಮಾತ್ರ. ಶತಯಾ ಗತಾಯ ಚುಟುಕು ಟ್ರೋಫಿಗೆ ಮುತ್ತಿಡುವ ಹಂಬಲದಲ್ಲಿರುವ ಟೀಮ್ ಇಂಡಿಯಾ, ಮಿಷನ್-5 ಸೂತ್ರದೊಂದಿಗೆ ಹೋರಾಡಲು ಸಜ್ಜಾಗಿದೆ. ಏನಿದು ಮಿಷನ್-5..?
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದೆ. ಸೂಪರ್-8ಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿರುವ ಟೀಮ್ ಇಂಡಿಯಾ, ಈ ಸಲ ಶತಯಾಗತಾಯ ವಿಶ್ವ ಕಿರೀಟಕ್ಕೆ ಮುತ್ತಿಡುವ ಲೆಕ್ಕಚಾರದಲ್ಲಿದೆ. ಇದಕ್ಕಾಗಿಯೇ ತೆರೆ ಹಿಂದೆ ಸ್ಟ್ರಾಟರ್ಜಿ ಪ್ಲಾನಿಂಗ್ ನಡೀತಿದೆ. ಅಂದುಕೊಂಡಂತೆ ಎಲ್ಲಾ ಆಗಬೇಕಂದ್ರೆ, ಟೀಮ್ ಇಂಡಿಯಾ, ಮಿಷನ್-5 ಸೂತ್ರವನ್ನ ಅನುಸರಿಸಬೇಕಿದೆ.
ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್ಗೆ ಕೊಟ್ಟ ವಾರ್ನಿಂಗ್ ಏನು..?
ಮಿಷನ್ ಅನ್ಸ್ಟಾಪಬಲ್.. ಇದು ಟೀಮ್ ಇಂಡಿಯಾ ಧ್ಯೇಯ..!
ಲೀಗ್ ಸ್ಟೇಜ್ನಲ್ಲಿ ಅನ್ಸ್ಟಾಪಬಲ್ ಆಗಿ ಮೆರೆದಾಡಿರುವ ಟೀಮ್ ಇಂಡಿಯಾ, ಈಗ ಹೊಸ ಸವಾಲಿಗೆ ಸಜ್ಜಾಗಿದೆ. ಸೂಪರ್-8ನ ಒಂದೊಂದು ಪಂದ್ಯವೂ, ರೋಹಿತ್ ಬಾಯ್ಸ್ಗೆ ಕಲ್ಲು ಮುಳ್ಳಿನ ಹಾದಿಯೇ ಆಗಿದೆ. ಒಂದೇ ಒಂದು ಪಂದ್ಯದಲ್ಲಿ ಎಡವಿದ್ರೂ, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಲಿದೆ. ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತೆ. ಹೀಗಾಗಿ ಸೋಲಿಲ್ಲದ ಸರದಾರನಂತೆಯೇ ಟಿ20 ವಿಶ್ವಕಪ್ ಫೈನಲ್ಸ್ಗೆ ಎಂಟ್ರಿ ನೀಡಿ, ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳಬೇಕಿದೆ.
10 ದಿನ.. 5 ಪಂದ್ಯ.. ಎಲ್ಲಾ ಸವಾಲಿಗೂ ಇರಬೇಕು ಸಿದ್ಧ..!
ಟೀಮ್ ಇಂಡಿಯಾಗೆ ಸೂಪರ್-8 ಸವಾಲು ಇದೇ 20ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲೇ ಅಫ್ಘನ್ ಎದುರು ಸೆಣಸಾಡಲಿರುವ ಟೀಮ್ ಇಂಡಿಯಾ, ನಂತರ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ಎದುರು ಹೋರಾಟ ನಡೆಸಲಿದೆ. ಆ ಬಳಿಕ ಸೆಮಿಫೈನಲ್ ನಡೆಯಲಿದ್ದು, ವಿಶ್ವಕಪ್ ಫೈನಲ್ 29ರಂದು ನಡೆಯಲಿದೆ. ಹೀಗಾಗಿ 10 ದಿನಗಳ ಅಂತರದಲ್ಲೇ 5 ಪಂದ್ಯಗಳನ್ನಾಡಬೇಕಿದೆ. ಹೀಗಾಗಿ ಎಲ್ಲಾ ಐದು ಪಂದ್ಯಗಳ ಸವಾಲಿಗೂ ಆಟಗಾರರು ಮೆಂಟಲಿ ಸ್ಟ್ರಾಂಗ್ ಇರಬೇಕಿದೆ.
ಇದನ್ನೂ ಓದಿ:Rain News: ಮಲೆನಾಡು.. ಈಗ ಮಳೆನಾಡು.. ಭಾರೀ ಮಳೆ.. ರಾಜ್ಯದಲ್ಲಿ ಎಲ್ಲೆಲ್ಲಿ ಏನೆಲ್ಲಾ ಆಯ್ತು..
ಡಿಫರೆಂಟ್ ಟೀಮ್ಸ್ ಅಂಡ್ ಕಂಡೀಷನ್.. ಬೇಕಿದೆ ಪಕ್ಕಾ ಪ್ಲಾನ್..!
ಇಷ್ಟು ದಿನ ಟೀಮ್ ಇಂಡಿಯಾ ಆಡಿದ ಕಂಡೀಷನ್ಸ್ ಬೇರೆ. ಈಗ ಎದುರಾಗುತ್ತಿರುವ ಕಂಡೀಷನ್ಸ್ ಬೇರೆಯದ್ದಾಗಿದೆ. ಕಂಡೀಷನ್ಸ್ ಮಾತ್ರವೇ ಅಲ್ಲ. ತಂಡಗಳೂ ಕೂಡ ಭಿನ್ನವಿಭಿನ್ನ. ಮುಂದೆ ಟೀಮ್ ಇಂಡಿಯಾ ಎದುರಿಸಲಿರುವ ತಂಡಗಳ ಸ್ಟ್ರೆಂಥ್ಗೆ ನೋಡಿದ್ರೆ, ಗ್ರೂಪ್ ಸ್ಟೇಜ್ನಲ್ಲಿ ಟೀಮ್ ಇಂಡಿಯಾ ಎದುರಿಸಿದ ತಂಡಗಳ ಬಲ ಏನೇನು ಅಲ್ಲ.. ಹೀಗಾಗಿ ಈ ಮದಗಜಗಳನ್ನ ಹೊಡೆದುರುಳಿಸಬೇಕಾದ್ರೆ, ಪಕ್ಕ ಪ್ಲಾನ್ ಇರಬೇಕಿದೆ.
ಬದಲಾಗಬೇಕಿದೆ ಸ್ಟ್ರಾಟರ್ಜಿ ಅಂಡ್ ಪ್ಲೇಯಿಂಗ್-XI..!
ಟೀಮ್ ಇಂಡಿಯಾದ ಸ್ಟ್ರಾಟರ್ಜಿ ಇಲ್ಲಿಂದ ಕಂಪ್ಲೀಟ್ ಬದಲಾಗಬೇಕಿದೆ. ಎದುರಾಳಿಗಳ ಸ್ಟ್ರೆಂಥ್ ಅಂಡ್ ವಿಕ್ನೇಸ್ಗೆ ತಕ್ಕಂತೆ ಒಂದೊಳ್ಳೆ ಕಾಂಬಿನೇಷನ್ ಸೆಟ್ ಮಾಡಬೇಕಿದೆ. ಕೂಲ್ ಆ್ಯಂಡ್ ಡಿಫೆನ್ಸಿವ್ ಅಪ್ರೋಚ್ ಬದಲಾಗಿ ಅಟ್ಯಾಕಿಂಗ್ ಮೂಡ್ನಲ್ಲೇ ಎದುರಾಳಿ ಮೇಲೆ ಮುಗಿಬೀಳಬೇಕಿದೆ. ಆ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸಬೇಕಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಕಂಡೀಷನ್ಸ್ ಅಡ್ವಾಂಟೇಜ್ನ ಎನ್ಕ್ಯಾಶ್ ಮಾಡಿಕೊಳ್ಳುವಂತ ಪ್ಲೇಯಿಂಗ್ ಇಲೆವೆನ್ ಇರಬೇಕಿದೆ.
ಇದನ್ನೂ ಓದಿ:ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?
ಬ್ಯಾಟಿಂಗ್ಗೆ ಬೇಕು ಬಲ.. ಸಂಘಟಿತ ಆಟವೂ ಮುಖ್ಯ..!
ಇಲ್ಲಿಯ ತನಕ ಟೀಮ್ ಇಂಡಿಯಾ ಬ್ಯಾಟರ್ಗಳಿಂದ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಬಂದಿಲ್ಲ. ನ್ಯೂಯಾರ್ಕ್ನ ಅನ್ಪ್ರಿಡಿಕ್ಟಬಲ್ ಪಿಚ್ ಕೂಡ ಇದಕ್ಕೆ ಒಂದು ಕಾರಣ. ಹೀಗಾಗಿ ಗೆಲುವಿಗಾಗಿ ಬೌಲರ್ಗಳನ್ನೇ ಟೀಮ್ ಇಂಡಿಯಾ ನೆಚ್ಚಿಕೊಳ್ಳುವಂತಾಗಿತ್ತು. ಇದೀಗ ಬೌಲರ್ಗಳು ಅದೇ ಖದರ್ ಉಳಿಸಿಕೊಳ್ಳುವುದರ ಜೊತೆ ಜೊತೆಗೆ ಬ್ಯಾಟ್ಸ್ಮನ್ಗಳು, ಸಿಕ್ಸರ್, ಬೌಂಡರಿಗಳ ಬೊರ್ಗೆರೆತದ ಸುನಾಮಿ ಸೃಷ್ಟಿಸಬೇಕು. ಆಗ ಮಾತ್ರ ವಿಶ್ವ ಕಿರೀಟಕ್ಕೆ ಮುತ್ತಿಡಲು ಸಾಧ್ಯ.
ಇದನ್ನೂ ಓದಿ:‘ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್