ಗೃಹ ಸಚಿವರ ಮನೆಗೆ ಕಣ್ಣೀರಿಡುತ್ತಾ ಬಂದ ಸಚಿವ
ಕಾನೂನು ಸಚಿವ ಹೆಚ್.ಕೆ ಪಾಟೀಲ್ಗೆ ಕರೆ ಮಾಡಿದ ಗೃಹ ಸಚಿವ
ದರ್ಶನ್ ಬಗ್ಗೆ ಚರ್ಚೆ.. ಸಚಿವನಿಗೆ ಗೃಹ ಸಚಿವರು ಹೇಳಿದ ಕಿವಿ ಮಾತೇನು ಗೊತ್ತಾ?
ಕೊಲೆ ಕೇಸ್ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಗ್ಯಾಂಗ್ ಅರೆಸ್ಟ್ ಆಗಿದ್ದಾರೆ. ಲಾಕಪ್ನಲ್ಲಿರುವ ದರ್ಶನ್ ಪೊಲೀಸರಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಅತ್ತ ಪೊಲೀಸರು ಸಹ ಪಾರದರ್ಶಕತೆಯ ತನಿಖೆ ನಡೆಸುತ್ತಿದ್ದಾರೆ. ಆದರೆ ನಟನನ್ನು ರಕ್ಷಿಸಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆ ಪೈಕಿ ಸಚಿವರೊಬ್ಬರ ಒದ್ಡಾಟ, ಕಣ್ಣೀರು ಹಾಕಿದ ಪ್ರಸಂಗ ಕೇಳಿಬಂದಿದೆ.
ದರ್ಶನ್ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಪ್ರಭಾವಿ ಸಚಿವರೊಬ್ಬರು ಕಣ್ಣೀರಿಟ್ಟಿದ್ದಾರಂತೆ. ದರ್ಶನ್ ಬಂಧನ ಬಳಿಕ ಗೃಹ ಸಚಿವ ಜಿ ಪರಮೇಶ್ವರ್ ಮನೆಗೆ ಎಂಟ್ರಿಕೊಟ್ಟಿದ್ದ ಸಚಿವರೊಬ್ಬರು ಅಳಲು ತೋಡಿಕೊಂಡಿದ್ದಾರಂತೆ. ಈ ವೇಳೆ ಜಿ ಪರಮೇಶ್ವರ್ ಕಾನೂನು ಸಚಿವ ಹೆಚ್.ಕೆ ಪಾಟೀಲ್ಗೆ ಕರೆ ಮಾಡಿ ಬರಹೇಳಿದ್ದಾರೆ.
ಇದನ್ನೂ ಓದಿ: ಕಲೆಗಳು.. ರಕ್ತದ ಕಲೆಗಳು.. ಸೆಕ್ಯುರಿಟಿ ಗಾರ್ಡ್ ಬಿಚ್ಚಿಟ್ಟ ರೇಣುಕಾಸ್ವಾಮಿ ಹತ್ಯೆಯ ಬಗೆಗಿನ ಸ್ಫೋಟಕ ಮಾಹಿತಿ
ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ್ದರು ಹೆಚ್.ಕೆ ಪಾಟೀಲ್ ಸಚಿವರ ಜೊತೆಗೆ ಸಮಗ್ರವಾಗಿ ಚರ್ಚಿಸಿದ್ದಾರೆ. ಈ ವೇಳೆ ದರ್ಶನ್ಗೆ ಉಂಟಾಗಬಹುದಾದ ಸಂಕಷ್ಟದ ಬಗ್ಗೆಯೂ ಚರ್ಚೆ ನಡೆದಿದೆ. ಜೊತೆಗೆ ದರ್ಶನ್ ಬಿಡುಗಡೆಗೆ ಯತ್ನಿಸಿದ್ರೆ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬಗ್ಗೆ ಮಾತುಕತೆಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕೈಯೇ ದಿಂಬು, ಲಾಕಪ್ನಲ್ಲಿ ವಿಚಾರಣೆ.. ದರ್ಶನ್ಗೆ ಸಿಗೋ ಟ್ರೀಟ್ಮೆಂಟ್ ಮಾತ್ರ..
ಬಳಿಕ ತನಿಖೆ ವೇಳೆ ಮಧ್ಯಪ್ರವೇಶಿಸುವುದು ಕಷ್ಟವೆಂದು ಕಾನೂನು ಸಚಿವ H.K ಪಾಟೀಲ್ ಕೂಡ ಹೇಳಿದ್ದಾರೆ. ಒಂದು ವೇಳೆ ಪ್ರಭಾವ ಬೀರಲು ಮುಂದಾದ್ರೆ ನೀವೂ ಸಿಲುಕಿಕೊಳ್ಳಬೇಕಾಗುತ್ತೆ ಎಂದು ಕಿವಿಮಾತು ಹೇಳಿದ್ದಾರೆ. ಈ ವೇಳೆ ಅಳುತ್ತಲೇ ಪರಮೇಶ್ವರ್ ಕಾಲಿಗೆ ಬೀಳಲು ಸಚಿವ ಮುಂದಾದ್ರು ಎನ್ನಲಾಗುತ್ತಿದೆ.
ಬಳಿಕ ಸಚಿವರಿಗೆ ಬುದ್ದಿ ಹೇಳಿ ಪರಮೇಶ್ವರ್ & ಹೆಚ್.ಕೆ ಪಾಟೀಲ್ ಕಳುಹಿಸಿಕೊಟ್ಟಿದ್ದಾರೆ. ಅಳಲು ತೋಡಿಕೊಂಡು ಪ್ರಯೋಜನವಿಲ್ಲವೆಂಬತೆ ಸಚಿವರು ಬಂದ ದಾರಿ ಹಿಡಿದರು ಎಂಬ ಸಂಗತಿಯೊಂದು ಹೊರಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗೃಹ ಸಚಿವರ ಮನೆಗೆ ಕಣ್ಣೀರಿಡುತ್ತಾ ಬಂದ ಸಚಿವ
ಕಾನೂನು ಸಚಿವ ಹೆಚ್.ಕೆ ಪಾಟೀಲ್ಗೆ ಕರೆ ಮಾಡಿದ ಗೃಹ ಸಚಿವ
ದರ್ಶನ್ ಬಗ್ಗೆ ಚರ್ಚೆ.. ಸಚಿವನಿಗೆ ಗೃಹ ಸಚಿವರು ಹೇಳಿದ ಕಿವಿ ಮಾತೇನು ಗೊತ್ತಾ?
ಕೊಲೆ ಕೇಸ್ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಗ್ಯಾಂಗ್ ಅರೆಸ್ಟ್ ಆಗಿದ್ದಾರೆ. ಲಾಕಪ್ನಲ್ಲಿರುವ ದರ್ಶನ್ ಪೊಲೀಸರಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಅತ್ತ ಪೊಲೀಸರು ಸಹ ಪಾರದರ್ಶಕತೆಯ ತನಿಖೆ ನಡೆಸುತ್ತಿದ್ದಾರೆ. ಆದರೆ ನಟನನ್ನು ರಕ್ಷಿಸಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆ ಪೈಕಿ ಸಚಿವರೊಬ್ಬರ ಒದ್ಡಾಟ, ಕಣ್ಣೀರು ಹಾಕಿದ ಪ್ರಸಂಗ ಕೇಳಿಬಂದಿದೆ.
ದರ್ಶನ್ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಪ್ರಭಾವಿ ಸಚಿವರೊಬ್ಬರು ಕಣ್ಣೀರಿಟ್ಟಿದ್ದಾರಂತೆ. ದರ್ಶನ್ ಬಂಧನ ಬಳಿಕ ಗೃಹ ಸಚಿವ ಜಿ ಪರಮೇಶ್ವರ್ ಮನೆಗೆ ಎಂಟ್ರಿಕೊಟ್ಟಿದ್ದ ಸಚಿವರೊಬ್ಬರು ಅಳಲು ತೋಡಿಕೊಂಡಿದ್ದಾರಂತೆ. ಈ ವೇಳೆ ಜಿ ಪರಮೇಶ್ವರ್ ಕಾನೂನು ಸಚಿವ ಹೆಚ್.ಕೆ ಪಾಟೀಲ್ಗೆ ಕರೆ ಮಾಡಿ ಬರಹೇಳಿದ್ದಾರೆ.
ಇದನ್ನೂ ಓದಿ: ಕಲೆಗಳು.. ರಕ್ತದ ಕಲೆಗಳು.. ಸೆಕ್ಯುರಿಟಿ ಗಾರ್ಡ್ ಬಿಚ್ಚಿಟ್ಟ ರೇಣುಕಾಸ್ವಾಮಿ ಹತ್ಯೆಯ ಬಗೆಗಿನ ಸ್ಫೋಟಕ ಮಾಹಿತಿ
ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ್ದರು ಹೆಚ್.ಕೆ ಪಾಟೀಲ್ ಸಚಿವರ ಜೊತೆಗೆ ಸಮಗ್ರವಾಗಿ ಚರ್ಚಿಸಿದ್ದಾರೆ. ಈ ವೇಳೆ ದರ್ಶನ್ಗೆ ಉಂಟಾಗಬಹುದಾದ ಸಂಕಷ್ಟದ ಬಗ್ಗೆಯೂ ಚರ್ಚೆ ನಡೆದಿದೆ. ಜೊತೆಗೆ ದರ್ಶನ್ ಬಿಡುಗಡೆಗೆ ಯತ್ನಿಸಿದ್ರೆ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬಗ್ಗೆ ಮಾತುಕತೆಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕೈಯೇ ದಿಂಬು, ಲಾಕಪ್ನಲ್ಲಿ ವಿಚಾರಣೆ.. ದರ್ಶನ್ಗೆ ಸಿಗೋ ಟ್ರೀಟ್ಮೆಂಟ್ ಮಾತ್ರ..
ಬಳಿಕ ತನಿಖೆ ವೇಳೆ ಮಧ್ಯಪ್ರವೇಶಿಸುವುದು ಕಷ್ಟವೆಂದು ಕಾನೂನು ಸಚಿವ H.K ಪಾಟೀಲ್ ಕೂಡ ಹೇಳಿದ್ದಾರೆ. ಒಂದು ವೇಳೆ ಪ್ರಭಾವ ಬೀರಲು ಮುಂದಾದ್ರೆ ನೀವೂ ಸಿಲುಕಿಕೊಳ್ಳಬೇಕಾಗುತ್ತೆ ಎಂದು ಕಿವಿಮಾತು ಹೇಳಿದ್ದಾರೆ. ಈ ವೇಳೆ ಅಳುತ್ತಲೇ ಪರಮೇಶ್ವರ್ ಕಾಲಿಗೆ ಬೀಳಲು ಸಚಿವ ಮುಂದಾದ್ರು ಎನ್ನಲಾಗುತ್ತಿದೆ.
ಬಳಿಕ ಸಚಿವರಿಗೆ ಬುದ್ದಿ ಹೇಳಿ ಪರಮೇಶ್ವರ್ & ಹೆಚ್.ಕೆ ಪಾಟೀಲ್ ಕಳುಹಿಸಿಕೊಟ್ಟಿದ್ದಾರೆ. ಅಳಲು ತೋಡಿಕೊಂಡು ಪ್ರಯೋಜನವಿಲ್ಲವೆಂಬತೆ ಸಚಿವರು ಬಂದ ದಾರಿ ಹಿಡಿದರು ಎಂಬ ಸಂಗತಿಯೊಂದು ಹೊರಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ