ವಂಚಕ ಬೀಸಿದ್ದ ಬಲೆಗೆ ಸುಲಭವಾಗಿ ಬಿದ್ದ ವೃದ್ಧ ಹಣ ಕಳೆದುಕೊಂಡ
ಮೊದಲು 1 ರೂಪಾಯಿ ಕಳಿಸಿ, ಬಳಿಕ ಅಕೌಂಟ್ನಲ್ಲಿನ ಹಣಕ್ಕೆ ಕನ್ನಾ
ಸೈಬರ್ ಕಳ್ಳರು ಯಾರೆಂದು ಹುಡುಕುವುದೇ ದೊಡ್ಡ ಕೆಲಸ.. ಹುಷಾರ್
ಗೃಹಜ್ಯೋತಿ.. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಈಗಾಗಲೇ ಕೋಟ್ಯಾಂತರ ಮಂದಿ ಈ ಯೋಜನೆ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಫ್ರೀ ಸಿಗುತ್ತೆ ಅಂತ ಕೆಲವರು ಲೈಟ್ ಬಿಲ್ ಕಟ್ಟದೇ ಹಾಗೇ ಉಳಿಸಿಕೊಂಡಿದ್ದಾರೆ. ಹೀಗೆ ಉಳಿಸಿಕೊಂಡವರನ್ನೇ ಸೈಬರ್ ಕ್ರಿಮಿಗಳು ಟಾರ್ಗೆಟ್ ಮಾಡುತ್ತಿದ್ದಾರೆ.
ನಿಮಗೂ ಬರಬಹುದು ಈ ಕಾಲ್..!
ಗೃಹ ಜ್ಯೋತಿ ಆರಂಭದ ವೇಳೆಯೇ ಸೈಬರ್ ಕಳ್ಳರ ಕೈಚಳಕ…
ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದು ವಂಚನೆಗಿಳಿದ ಸೈಬರ್ ಕಳ್ಳರು…
ಬಿಲ್ ಬಾಕಿ ಇದೆ ಅಂತ ಸಾವಿರಾರು ರೂಪಾಯಿ ದೋಖಾ
ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ಗೆ ವಂಚನೆ…
ಸೈಬರ್ ಕಳ್ಳರು ಕಾಲ್ ಮಾಡೋದು ಹೇಗೆ..? ವಂಚನೆ ಮಾಡೋದು ಹೇಗೆ ಗೊತ್ತಾ?
ಸೈಬರ್ ವಂಚಕ : ಹಲೋ
ನಾರಾಯಣ್ : ಹೇಳಿ.. ಯಾರ್ ಮಾತಾಡ್ತಿರೋದು?
ಸೈಬರ್ ವಂಚಕ : ನಾವು ಬೆಸ್ಕಾಂನಿಂದ ಕಾಲ್ ಮಾಡ್ತಿರೋದು. ನೀವು ಈ ತಿಂಗಳದ್ದು ಇನ್ನೂ ಬಿಲ್ ಕಟ್ಟಿಲ್ಲ. ಕೂಡಲೇ ಕಟ್ಟಿ ಇಲ್ಲದಿದ್ರೆ ಕನೆಕ್ಷನ್ ಕಟ್ ಮಾಡ್ತೀವಿ.
ನಾರಾಯಣ್ : ಅಯ್ಯೋ ಹಾಗ್ ಮಾಡ್ಬೇಡಿ ಸರ್. ಫ್ರೀ ಇರುತ್ತೆ ಅಂತ ಕಟ್ಟಿರಲಿಲ್ಲ. ಈಗಲೇ ಹೋಗಿ ಕಟ್ಟಿ ಬರುತ್ತೇನಿ.
ಸೈಬರ್ ವಂಚಕ : ಆಫೀಸ್ ತನಕ ಬರೋದೇನ್ ಬೇಡ. ನಾನೊಂದು ಲಿಂಕ್ ಕಳಿಸುತ್ತೇನೆ ಅದರಲ್ಲಿ ಕಟ್ಟಿದರೆ ಆಯಿತು.
ನಾರಾಯಣ್ : ಸರಿ ಸರ್
ವಂಚಕ ಬೀಸಿದ್ದ ಬಲೆಗೆ ಬಿದ್ದ ನಾರಾಯಣ್ ಎಂಬ ವೃದ್ಧ ಆ ಲಿಂಕ್ ಕ್ಲಿಕ್ ಮಾಡ್ತಾರೆ. ಅದನ್ನ ಫಾಲೋ ಮಾಡ್ತಾರೆ. ಬಳಿಕ ಬ್ಯಾಂಕ್ ಡೀಟೇಲ್ಸ್ ಕೂಡಾ ಹಾಕ್ತಾರೆ. ಮೊದಲಿಗೆ ಒಂದು ರುಪಾಯಿ ಕಳಿಸ್ತಾರೆ. ಆಮೇಲೆ ಹಂತ ಹಂತವಾಗಿ ಬರೋಬ್ಬರಿ 53 ಸಾವಿರ ಹಣ ಕಟ್ ಆಗುತ್ತೆ. ಹಣ ಕಟ್ ಆಗ್ತಿದ್ದಂತೆ ಮತ್ತೆ ವಾಪಸ್ ಅದೇ ನಂಬರ್ಗೆ ಕಾಲ್ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್ ಆಗಿರುತ್ತೆ. ಇದ್ರಿಂದ ಅನುಮಾನಗೊಂಡ ನಾರಾಯಣ್ ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಅದೇನೇ ಇರಲಿ ರಾಜ್ಯದಲ್ಲಿ ಗ್ಯಾರಂಟಿ ಗಲಾಟೆ ಜೋರಾಗುತ್ತಿದೆ. ಇದರ ಮಧ್ಯೆ ಸದ್ದಿಲ್ಲದೇ ಸೈಬರ್ ಕಳ್ಳರು ಆ್ಯಕ್ಟೀವ್ ಆಗಿದ್ದಾರೆ. ನಿಮಗೂ ಇಂಥಾ ಕರೆ ಬರಬಹುದು ಎಚ್ಚರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಂಚಕ ಬೀಸಿದ್ದ ಬಲೆಗೆ ಸುಲಭವಾಗಿ ಬಿದ್ದ ವೃದ್ಧ ಹಣ ಕಳೆದುಕೊಂಡ
ಮೊದಲು 1 ರೂಪಾಯಿ ಕಳಿಸಿ, ಬಳಿಕ ಅಕೌಂಟ್ನಲ್ಲಿನ ಹಣಕ್ಕೆ ಕನ್ನಾ
ಸೈಬರ್ ಕಳ್ಳರು ಯಾರೆಂದು ಹುಡುಕುವುದೇ ದೊಡ್ಡ ಕೆಲಸ.. ಹುಷಾರ್
ಗೃಹಜ್ಯೋತಿ.. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಈಗಾಗಲೇ ಕೋಟ್ಯಾಂತರ ಮಂದಿ ಈ ಯೋಜನೆ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಫ್ರೀ ಸಿಗುತ್ತೆ ಅಂತ ಕೆಲವರು ಲೈಟ್ ಬಿಲ್ ಕಟ್ಟದೇ ಹಾಗೇ ಉಳಿಸಿಕೊಂಡಿದ್ದಾರೆ. ಹೀಗೆ ಉಳಿಸಿಕೊಂಡವರನ್ನೇ ಸೈಬರ್ ಕ್ರಿಮಿಗಳು ಟಾರ್ಗೆಟ್ ಮಾಡುತ್ತಿದ್ದಾರೆ.
ನಿಮಗೂ ಬರಬಹುದು ಈ ಕಾಲ್..!
ಗೃಹ ಜ್ಯೋತಿ ಆರಂಭದ ವೇಳೆಯೇ ಸೈಬರ್ ಕಳ್ಳರ ಕೈಚಳಕ…
ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದು ವಂಚನೆಗಿಳಿದ ಸೈಬರ್ ಕಳ್ಳರು…
ಬಿಲ್ ಬಾಕಿ ಇದೆ ಅಂತ ಸಾವಿರಾರು ರೂಪಾಯಿ ದೋಖಾ
ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ಗೆ ವಂಚನೆ…
ಸೈಬರ್ ಕಳ್ಳರು ಕಾಲ್ ಮಾಡೋದು ಹೇಗೆ..? ವಂಚನೆ ಮಾಡೋದು ಹೇಗೆ ಗೊತ್ತಾ?
ಸೈಬರ್ ವಂಚಕ : ಹಲೋ
ನಾರಾಯಣ್ : ಹೇಳಿ.. ಯಾರ್ ಮಾತಾಡ್ತಿರೋದು?
ಸೈಬರ್ ವಂಚಕ : ನಾವು ಬೆಸ್ಕಾಂನಿಂದ ಕಾಲ್ ಮಾಡ್ತಿರೋದು. ನೀವು ಈ ತಿಂಗಳದ್ದು ಇನ್ನೂ ಬಿಲ್ ಕಟ್ಟಿಲ್ಲ. ಕೂಡಲೇ ಕಟ್ಟಿ ಇಲ್ಲದಿದ್ರೆ ಕನೆಕ್ಷನ್ ಕಟ್ ಮಾಡ್ತೀವಿ.
ನಾರಾಯಣ್ : ಅಯ್ಯೋ ಹಾಗ್ ಮಾಡ್ಬೇಡಿ ಸರ್. ಫ್ರೀ ಇರುತ್ತೆ ಅಂತ ಕಟ್ಟಿರಲಿಲ್ಲ. ಈಗಲೇ ಹೋಗಿ ಕಟ್ಟಿ ಬರುತ್ತೇನಿ.
ಸೈಬರ್ ವಂಚಕ : ಆಫೀಸ್ ತನಕ ಬರೋದೇನ್ ಬೇಡ. ನಾನೊಂದು ಲಿಂಕ್ ಕಳಿಸುತ್ತೇನೆ ಅದರಲ್ಲಿ ಕಟ್ಟಿದರೆ ಆಯಿತು.
ನಾರಾಯಣ್ : ಸರಿ ಸರ್
ವಂಚಕ ಬೀಸಿದ್ದ ಬಲೆಗೆ ಬಿದ್ದ ನಾರಾಯಣ್ ಎಂಬ ವೃದ್ಧ ಆ ಲಿಂಕ್ ಕ್ಲಿಕ್ ಮಾಡ್ತಾರೆ. ಅದನ್ನ ಫಾಲೋ ಮಾಡ್ತಾರೆ. ಬಳಿಕ ಬ್ಯಾಂಕ್ ಡೀಟೇಲ್ಸ್ ಕೂಡಾ ಹಾಕ್ತಾರೆ. ಮೊದಲಿಗೆ ಒಂದು ರುಪಾಯಿ ಕಳಿಸ್ತಾರೆ. ಆಮೇಲೆ ಹಂತ ಹಂತವಾಗಿ ಬರೋಬ್ಬರಿ 53 ಸಾವಿರ ಹಣ ಕಟ್ ಆಗುತ್ತೆ. ಹಣ ಕಟ್ ಆಗ್ತಿದ್ದಂತೆ ಮತ್ತೆ ವಾಪಸ್ ಅದೇ ನಂಬರ್ಗೆ ಕಾಲ್ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್ ಆಗಿರುತ್ತೆ. ಇದ್ರಿಂದ ಅನುಮಾನಗೊಂಡ ನಾರಾಯಣ್ ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಅದೇನೇ ಇರಲಿ ರಾಜ್ಯದಲ್ಲಿ ಗ್ಯಾರಂಟಿ ಗಲಾಟೆ ಜೋರಾಗುತ್ತಿದೆ. ಇದರ ಮಧ್ಯೆ ಸದ್ದಿಲ್ಲದೇ ಸೈಬರ್ ಕಳ್ಳರು ಆ್ಯಕ್ಟೀವ್ ಆಗಿದ್ದಾರೆ. ನಿಮಗೂ ಇಂಥಾ ಕರೆ ಬರಬಹುದು ಎಚ್ಚರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ