ಖಾಸಗಿ ಬಸ್ ಡ್ರೈವರ್ ವಿರುದ್ಧ ಭಾರೀ ಆಕ್ರೋಶ
ಎಷ್ಟೇ ಮೇಲೆ ಎತ್ತಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ
ಕರು ಕಳೆದುಕೊಂಡು ಮೌನವಾಗಿ ನಿಂತ ತಾಯಿ ಹಸು
ಬಳ್ಳಾರಿ: ನಗರದ ಮೋಕಾ ರಸ್ತೆಯ ಬಸವೇಶ್ವರ ಸರ್ಕಲ್ ಬಳಿ ಮನಕಲುವ ಘಟನೆಯೊಂದು ತಡರಾತ್ರಿ ನಡೆದಿದೆ. ಖಾಸಗಿ ಬಸ್ ಚಾಲಕನ ಅಜಾಗರೂಕತೆಗೆ ಕರುವಿಗೆ ಡಿಕ್ಕಿಯಾಗಿದೆ. ಮಗುವನ್ನು ಕಳೆದುಕೊಂಡ ತಾಯಿ ಹಸು ರಸ್ತೆಯಲ್ಲಿ ಕಣ್ಣೀರು ಇಡುತ್ತ ಮರುಕ ವ್ಯಕ್ತಪಡಿಸಿದೆ. ಈ ದೃಶ್ಯ ಅಲ್ಲಿನ ಸ್ಥಳೀಯರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿದೆ.
ಆಗಿದ್ದು ಏನು..?
ಹಸುಗಳು ರಸ್ತೆ ದಾಟುವ ವೇಳೆ ಖಾಸಗಿ ಬಸ್ ಬಸ್ ಕರುವಿಗೆ ಡಿಕ್ಕಿ ಹೊಡೆದಿದೆ. ನೆಲಕ್ಕೆ ಬಿದ್ದ ಕರು, ತೀವ್ರ ರಕ್ತಸ್ರಾವ ಉಂಟಾಗಿ ಅಲ್ಲೇ ಪ್ರಾಣಬಿಟ್ಟಿದೆ. ಮಗುವನ್ನು ಕಳೆದುಕೊಳ್ತಿದ್ದಂತೆಯೇ ತಾಯಿ ಹಸು ಕಣ್ಣೀರು ಇಟ್ಟಿದೆ. ಬಾಯಿಯಿಂದ ಕರುವನ್ನ ಎಚ್ಚರಗೊಳಿಸಲು ಮುಂದಾಗಿದೆ. ಸಾಧ್ಯವಾಗದಿದ್ದಾಗ ತಾಯಿ ಹಸು ಮೌನವಾಗಿ ನಿಂತು ಬಿಕ್ಕಳಿಸಿದೆ.
ಇದನ್ನೂ ಓದಿ:9 ಜನರ ಬಲಿ ಪಡೆದ ಮಳೆರಾಯ.. ಭರ್ಜರಿ ಮಳೆಯಿಂದ ಎಲ್ಲೆಲ್ಲಿ ಏನೆಲ್ಲ ಆಗೋಯ್ತು..!
ಜಿಂದಾಲ್ ಕಾರ್ಖಾನೆಯ ಬಸ್ ಡಿಕ್ಕಿ ಹೊಡೆದಿದೆ. ಸಂಸ್ಥೆಯ ಓರ್ವ ಸಿಬ್ಬಂದಿಯನ್ನ ಪಿಕಪ್ ಮಾಡಲು ವಾಹನ ಬಂದಿತ್ತು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಆಕಳು ಕರು ಸಾವನ್ನಪ್ಪಿದೆ. ಬಸ್ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮನೆ ದೇವರ ಪೂಜೆಗೆ ಹೊರಟಿದ್ದ 13 ಮಂದಿ ದಾರುಣ ಸಾವು.. ಕರುಳು ಚುರ್ ಎನ್ನುತ್ತೆ ಈ ಘೋರ ದುರಂತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಖಾಸಗಿ ಬಸ್ ಡ್ರೈವರ್ ವಿರುದ್ಧ ಭಾರೀ ಆಕ್ರೋಶ
ಎಷ್ಟೇ ಮೇಲೆ ಎತ್ತಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ
ಕರು ಕಳೆದುಕೊಂಡು ಮೌನವಾಗಿ ನಿಂತ ತಾಯಿ ಹಸು
ಬಳ್ಳಾರಿ: ನಗರದ ಮೋಕಾ ರಸ್ತೆಯ ಬಸವೇಶ್ವರ ಸರ್ಕಲ್ ಬಳಿ ಮನಕಲುವ ಘಟನೆಯೊಂದು ತಡರಾತ್ರಿ ನಡೆದಿದೆ. ಖಾಸಗಿ ಬಸ್ ಚಾಲಕನ ಅಜಾಗರೂಕತೆಗೆ ಕರುವಿಗೆ ಡಿಕ್ಕಿಯಾಗಿದೆ. ಮಗುವನ್ನು ಕಳೆದುಕೊಂಡ ತಾಯಿ ಹಸು ರಸ್ತೆಯಲ್ಲಿ ಕಣ್ಣೀರು ಇಡುತ್ತ ಮರುಕ ವ್ಯಕ್ತಪಡಿಸಿದೆ. ಈ ದೃಶ್ಯ ಅಲ್ಲಿನ ಸ್ಥಳೀಯರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿದೆ.
ಆಗಿದ್ದು ಏನು..?
ಹಸುಗಳು ರಸ್ತೆ ದಾಟುವ ವೇಳೆ ಖಾಸಗಿ ಬಸ್ ಬಸ್ ಕರುವಿಗೆ ಡಿಕ್ಕಿ ಹೊಡೆದಿದೆ. ನೆಲಕ್ಕೆ ಬಿದ್ದ ಕರು, ತೀವ್ರ ರಕ್ತಸ್ರಾವ ಉಂಟಾಗಿ ಅಲ್ಲೇ ಪ್ರಾಣಬಿಟ್ಟಿದೆ. ಮಗುವನ್ನು ಕಳೆದುಕೊಳ್ತಿದ್ದಂತೆಯೇ ತಾಯಿ ಹಸು ಕಣ್ಣೀರು ಇಟ್ಟಿದೆ. ಬಾಯಿಯಿಂದ ಕರುವನ್ನ ಎಚ್ಚರಗೊಳಿಸಲು ಮುಂದಾಗಿದೆ. ಸಾಧ್ಯವಾಗದಿದ್ದಾಗ ತಾಯಿ ಹಸು ಮೌನವಾಗಿ ನಿಂತು ಬಿಕ್ಕಳಿಸಿದೆ.
ಇದನ್ನೂ ಓದಿ:9 ಜನರ ಬಲಿ ಪಡೆದ ಮಳೆರಾಯ.. ಭರ್ಜರಿ ಮಳೆಯಿಂದ ಎಲ್ಲೆಲ್ಲಿ ಏನೆಲ್ಲ ಆಗೋಯ್ತು..!
ಜಿಂದಾಲ್ ಕಾರ್ಖಾನೆಯ ಬಸ್ ಡಿಕ್ಕಿ ಹೊಡೆದಿದೆ. ಸಂಸ್ಥೆಯ ಓರ್ವ ಸಿಬ್ಬಂದಿಯನ್ನ ಪಿಕಪ್ ಮಾಡಲು ವಾಹನ ಬಂದಿತ್ತು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಆಕಳು ಕರು ಸಾವನ್ನಪ್ಪಿದೆ. ಬಸ್ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮನೆ ದೇವರ ಪೂಜೆಗೆ ಹೊರಟಿದ್ದ 13 ಮಂದಿ ದಾರುಣ ಸಾವು.. ಕರುಳು ಚುರ್ ಎನ್ನುತ್ತೆ ಈ ಘೋರ ದುರಂತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ