ನಿರ್ಗಮಿತ ಕೋಚ್ಗೆ ನಾಯಕನ ನುಡಿ ನಮನ
ಒಂದೇ ಗುರಿ, ಎರಡು ಮನಸು, ಕಪ್ ಗೆಲ್ಲೋ ಪಣ
ಸೋತಾಗ ಸಂತೈಸಿ, ಗೆದ್ದಾಗ ಸಂಭ್ರಮಿಸಿದ್ದ ದ್ರಾವಿಡ್
ಇಷ್ಟು ದಿನ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದ್ದ ರೋಹಿತ್ ಶರ್ಮಾ ಇದ್ದಕ್ಕಿದ್ದಂತೆ ಭಾವುಕರಾಗಿದ್ದಾರೆ. ಕಳೆದ 3 ವರ್ಷದಿಂದ ಸಾಥ್ ಕೊಟ್ಟಿದ್ದ, ಕೋಚ್ ರಾಹುಲ್ ದ್ರಾವಿಡ್ ನಿರ್ಗಮನ ರೋಹಿತ್ ಶರ್ಮಾ ಮನಸನ್ನ ಕಲುಕಿದೆ. ನಿರ್ಗಮಿತ ಕೋಚ್ಗೆ ಕ್ಯಾಪ್ಟನ್ ರೋಹಿತ್ ಬರೆದಿರೋ ಭಾವುಕ ಪತ್ರ ಎಂಥವರ ಮನಸ್ಸಿನ್ನೂ ತಟ್ಟುವಂತಿದೆ.
ಕೋಟ್ಯಂತರ ಭಾರತೀಯರ ಪ್ರಾಥನೆ ಫಲಿಸಿ, ಕನಸು ನನಸಾಗಿ 11 ದಿನಗಳಾಯ್ತು. ಬಾರ್ಬಡೋಸ್ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನ ರೋಹಿತ್ ಶರ್ಮಾ ಪಡೆ ಹೆಮ್ಮೆಯಿಂದ ಹಾರಾಡಿಸಿದ ಆ ಕ್ಷಣ, ಭಾರತೀಯ ಕ್ರಿಕೆಟ್ ಲೋಕದ ಅವಿಸ್ಮರಣೀಯ ಕ್ಷಣ. ಟೀಮ್ ಇಂಡಿಯಾ T20 ಚಾಂಪಿಯನ್ ಆಗೋದ್ರೊಂದಿಗೆ ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. ದೇಶದ ಕೋಟಿ-ಕೋಟಿ ಮನಸುಗಳು ಖುಷಿಯಲ್ಲಿ ತೇಲಾಡಿವೆ. ಈ ಕೋಟಿ-ಕೋಟಿ ಜನರ ಖುಷಿಯ ಹಿಂದೆ ಈ ಇಬ್ಬರ ಶ್ರಮವಿದೆ. ಅವರೇ ಕೋಚ್ ರಾಹುಲ್ ದ್ರಾವಿಡ್ ಅಂಡ್ ಕ್ಯಾಪ್ಟನ್ ರೋಹಿತ್ ಶರ್ಮಾ
ಡಿಯರ್ ರಾಹುಲ್ ಭಾಯ್.. ರೋಹಿತ್ ಭಾವುಕ
ವಿಶ್ವಕಪ್ ಗೆಲುವಿನೊಂದಿಗೆ ಟೀಮ್ ಇಂಡಿಯಾ ಜೊತೆಗಿನ ರಾಹುಲ್ ದ್ರಾವಿಡ್ ನಂಟು ಅಂತ್ಯ ಕಂಡಿದೆ. ಕೋಚ್ ಹುದ್ದೆಗೆ ದ್ರಾವಿಡ್ ಗೆಲುವಿನ ವಿದಾಯ ಹೇಳಿದ್ದಾರೆ. ಇನ್ಮುಂದೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ದ್ರಾವಿಡ್ ಇರಲ್ಲ. ರೋಹಿತ್ಗೆ ದ್ರಾವಿಡ್ ಭಾಯ್ ಸಿಗಲ್ಲ. ಈ ವಿಚಾರ ಕ್ಯಾಪ್ಟನ್ ರೋಹಿತ್ರನ್ನ ಭಾವುಕವಾಗಿಸಿದೆ. ದ್ರಾವಿಡ್ಗೆ ರೋಹಿತ್ ಬರೆದಿರೋ ಭಾವುಕ ಪತ್ರವೇ ಈ ಕಥೆಯನ್ನ ಹೇಳ್ತಿದೆ.
ಇದನ್ನೂ ಓದಿ:ಐದು ಕೋಟಿ ಹಣ ನನಗೆ ಬೇಡ ಎಂದ ದ್ರಾವಿಡ್.. ಅದಕ್ಕೆ ಕಾರಣವೂ ಇದೆ.. ಮತ್ತೊಮ್ಮೆ ಹೃದಯಗೆದ್ದ ಕನ್ನಡಿಗ..!
ಡಿಯರ್ ರಾಹುಲ್ ಭಾಯ್
ನನ್ನೊಳಗಿನ ಭಾವನೆಯನ್ನ ಹೇಳಲು ಸರಿಯಾದ ಪದಗಳನ್ನ ಬಳಸಲು ಪ್ರಯತ್ನಪಟ್ಟಿದ್ದೇನೆ. ಪ್ರಯತ್ನದಲ್ಲಿ ನಾನು ಯಶಸ್ಸು ಕಂಡಂತಿಲ್ಲ.ಬೇರೆಯವರಂತೆ ನಾನೂ ಚಿಕ್ಕಂದಿನಿಂದಲೂ ನಿಮ್ಮನ್ನ ನೋಡಿಕೊಂಡು ಬೆಳೆದಿದ್ದೇನೆ. ನಾನು ತುಂಬಾ ಅದೃಷ್ಟವಂತ. ನಿಮ್ಮ ಜೊತೆ ಹತ್ತಿರದಿಂದ ಕೆಲಸ ಮಾಡೋ ಅವಕಾಶ ಸಿಕ್ತು. ಈ ಆಟ ಕಂಡ ಅಗ್ರಗಣ್ಯರು ನೀವು. ನಮ್ಮ ಕೋಚ್ ಆದಾಗ ನಾವು ಆರಾಮವಾಗಿರಲಿ, ನಿಮ್ಮೊಂದಿಗೆ ನಮಗೆ ಅನಿಸಿದ್ದನ್ನ ಹೇಳಲಿ ಅನ್ನೋ ಕಾರಣಕ್ಕೆ ನಿಮ್ಮ ಸಾಧನೆ ಮತ್ತು ಪುರಸ್ಕಾರಗಳನ್ನು ಬಾಗಿಲಲ್ಲೇ ಬಿಟ್ಟು ಬಂದ್ರಿ. ಅದು ನಿಮ್ಮ ಮಾನವೀಯತೆ ಮತ್ತು ಈ ಆಟದ ಮೇಲೆ ನಿಮಗಿರೋ ಪ್ರೀತಿಯನ್ನ ತೋರಿಸುತ್ತೆ. ನಾನು ನಿಮ್ಮಿಂದ ತುಂಬಾ ಕಲಿತಿದ್ದೇನೆ. ನನ್ನ ಪತ್ನಿ ನಿಮ್ಮನ್ನ ‘ವರ್ಕಿಂಗ್ ವೈಫ್’ ಎಂದು ಕರೆಯುತ್ತಾರೆ. ಹಾಗೆ ಕರೆಸಿಕೊಳ್ಳಲು ನನಗೂ ಇಷ್ಟ. ಇದೊಂದನ್ನ ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಾವಿಬ್ಬರು ಒಟ್ಟಾಗಿ ಸಾಧಿಸಿದ್ದಕ್ಕೆ ನನಗೆ ಖುಷಿಯಿದೆ. ರಾಹುಲ್ ಭಾಯ್, ನಿಮ್ಮನ್ನ ನನ್ನ ಆತ್ಮೀಯ, ನನ್ನ ಕೋಚ್ ಮತ್ತು ನನ್ನ ಗೆಳೆಯ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ-ರೋಹಿತ್ ಶರ್ಮಾ, ಕ್ರಿಕೆಟಿಗ
ಒಂದೇ ಗುರಿ, ಎರಡು ಮನಸು..!
2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಟ್ರೋಫಿ ಗೆಲ್ಲಲಾಗದ ಕೊರಗು ಟೀಮ್ ಇಂಡಿಯಾವನ್ನ ಬಿಡದೇ ಕಾಡಿತ್ತು. ಆ ಕೊರಗನ್ನ ನೀಗಿಸಿ, ಭಾರತದ ಧ್ವಜವನ್ನ ಹಾರಿಸೋ ಪಣ ತೊಟ್ಟಿತ್ತು ರೋಹಿತ್ ಶರ್ಮಾ – ರಾಹುಲ್ ದ್ರಾವಿಡ್ ಜೋಡಿ. ಕೋಚ್ – ಕ್ಯಾಪ್ಟನ್ ಆದ ದಿನದಿಂದ ಐಸಿಸಿ ಟ್ರೋಫಿ ಗೆಲುವಿಗಾಗಿ ಹಾಕಿದ ಶ್ರಮ ಅಷ್ಟಿಷ್ಟಲ್ಲ. ಅನುಭವಿಸಿದ್ದು ನಿರಾಸೆಯನ್ನ.
ಇದನ್ನೂ ಓದಿ:IND vs ZIM: ಜೈಸ್ವಾಲ್, ದುಬೆ, ಸಂಜು ತಂಡಕ್ಕೆ ಎಂಟ್ರಿ.. ಪ್ಲೇಯಿಂಗ್-11ನಿಂದ ಮೂವರು ಔಟ್..?
ಸೋತಾಗ ಸಂತೈಸಿ, ಗೆದ್ದಾಗ ಸಂಭ್ರಮಿಸಿದ್ದ ದ್ರಾವಿಡ್
2022ರ ಟಿ20 ವಿಶ್ವಕಪ್ ಸೆಮಿಸ್ನಲ್ಲಿ ಸೋತಾಗ ಡಗೌಟ್ನಲ್ಲಿ ರೋಹಿತ್ ಶರ್ಮಾ ಭಾವುಕರಾಗಿದ್ರು. ಅಂದು ರೋಹಿತ್ ಬಿಕ್ಕಿ ಬಿಕ್ಕಿ ಅಳ್ತಿದ್ರು. ಕೋಚ್ ದ್ರಾವಿಡ್ರ ಕಣ್ಣಾಲಿಗಳೂ ತುಂಬಿದ್ವು. ಕ್ಯಾಪ್ಟನ್ ಬಳಿ ಬಂದಿದ್ದ ದ್ರಾವಿಡ್ ಸಂತೈಸಿದ್ರು. 2022ರ T20 ವಿಶ್ವಕಪ್ ಮಾತ್ರವಲ್ಲ.. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್, ನಂತರ ತವರಲ್ಲೇ ನಡೆದ ಏಕದಿನ ವಿಶ್ವಕಪ್ ಸೋತಾಗಲೂ ರೋಹಿತ್ ಬೆನ್ನಿಗೆ ನಿಂತಿದ್ರು, ರಾಹುಲ್ ದ್ರಾವಿಡ್.!
ಪ್ರತಿ ಐಸಿಸಿ ಟೂರ್ನಿ ಸೋತಾಗಲೂ, ರೋಹಿತ್ ವಿರುದ್ಧ ಟೀಕೆಗಳ ಸುರಿಮಳೆ ಸುರಿದಿತ್ತು. ಆಗ ಕೋಚ್ ದ್ರಾವಿಡ್ ಬ್ಯಾಕ್ ಮಾಡಿದ್ರು. ನಾಯಕನ್ನ ಯಾವ ಕಾರಣಕ್ಕೂ ಬಿಟ್ಟುಕೊಟ್ಟಿರಲಿಲ್ಲ. ಇಬ್ಬರ ನಡುವಿನ ಭಾಂದವ್ಯ ಹಾಗಿತ್ತು.
3ಕ್ಕೆ ಮುಕ್ತಾಯ.. 4ನೇ ಬಾರಿ ದಿಗ್ವಿಜಯ
3 ಐಸಿಸಿ ಟೂರ್ನಿ ಸೋತ್ರೂ ಇಬ್ಬರಲ್ಲಿ ಗೆಲುವಿನ ಹಠ, ಸಾಧಿಸೋ ಛಲ ಕಡಿಮೆಯಾಗಿರಲಿಲ್ಲ. 3ಕ್ಕೆ ಮುಕ್ತಾಯ ಹಾಡೋ ಪಣ ತೊಟ್ಟು ಹೋರಾಡಿದ ಈ ಜೋಡಿ ಕೊನೆಯಲ್ಲಿ ಯಶಸ್ಸು ಕಂಡಿದೆ. ಟಿ20 ವಿಶ್ವಕಪ್ ಗೆದ್ದು ಭಾರತವೇ ಸಂಭ್ರಮದಲ್ಲಿ ತೇಲುವಂತೆ ಮಾಡಿದೆ. ರಾಹುಲ್ ದ್ರಾವಿಡ್ರ ನಿವೃತ್ತಿ, ರೋಹಿತ್ ಶರ್ಮಾ ಮನಸ್ಸಲ್ಲಿ ಎಷ್ಟು ನೋವು ತಂದಿದ್ಯೋ.. ಅಷ್ಟೇ ಕ್ರಿಕೆಟ್ ಅಭಿಮಾನಿಗಳಲ್ಲೂ ಬೇಸರ ತರಿಸಿರೋದು ಸುಳ್ಳಲ್ಲ. ಹಳೆ ನೀರು ಹರಿಯಲೇಬೇಕು.. ಹೊಸ ನೀರು ಬರಲೇಬೇಕು.. ಕಾಲದ ನಿಯಮವೇ ಹಾಗಲ್ಲವೇ..?
ಇದನ್ನೂ ಓದಿ:ಹೈಕೋರ್ಟ್ನಲ್ಲಿ ದರ್ಶನ್ಗೆ ಭಾರೀ ನಿರಾಸೆ.. ಜುಲೈ 18 ವರೆಗೆ ಕಾಯಲೇಬೇಕು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ನಿರ್ಗಮಿತ ಕೋಚ್ಗೆ ನಾಯಕನ ನುಡಿ ನಮನ
ಒಂದೇ ಗುರಿ, ಎರಡು ಮನಸು, ಕಪ್ ಗೆಲ್ಲೋ ಪಣ
ಸೋತಾಗ ಸಂತೈಸಿ, ಗೆದ್ದಾಗ ಸಂಭ್ರಮಿಸಿದ್ದ ದ್ರಾವಿಡ್
ಇಷ್ಟು ದಿನ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದ್ದ ರೋಹಿತ್ ಶರ್ಮಾ ಇದ್ದಕ್ಕಿದ್ದಂತೆ ಭಾವುಕರಾಗಿದ್ದಾರೆ. ಕಳೆದ 3 ವರ್ಷದಿಂದ ಸಾಥ್ ಕೊಟ್ಟಿದ್ದ, ಕೋಚ್ ರಾಹುಲ್ ದ್ರಾವಿಡ್ ನಿರ್ಗಮನ ರೋಹಿತ್ ಶರ್ಮಾ ಮನಸನ್ನ ಕಲುಕಿದೆ. ನಿರ್ಗಮಿತ ಕೋಚ್ಗೆ ಕ್ಯಾಪ್ಟನ್ ರೋಹಿತ್ ಬರೆದಿರೋ ಭಾವುಕ ಪತ್ರ ಎಂಥವರ ಮನಸ್ಸಿನ್ನೂ ತಟ್ಟುವಂತಿದೆ.
ಕೋಟ್ಯಂತರ ಭಾರತೀಯರ ಪ್ರಾಥನೆ ಫಲಿಸಿ, ಕನಸು ನನಸಾಗಿ 11 ದಿನಗಳಾಯ್ತು. ಬಾರ್ಬಡೋಸ್ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನ ರೋಹಿತ್ ಶರ್ಮಾ ಪಡೆ ಹೆಮ್ಮೆಯಿಂದ ಹಾರಾಡಿಸಿದ ಆ ಕ್ಷಣ, ಭಾರತೀಯ ಕ್ರಿಕೆಟ್ ಲೋಕದ ಅವಿಸ್ಮರಣೀಯ ಕ್ಷಣ. ಟೀಮ್ ಇಂಡಿಯಾ T20 ಚಾಂಪಿಯನ್ ಆಗೋದ್ರೊಂದಿಗೆ ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. ದೇಶದ ಕೋಟಿ-ಕೋಟಿ ಮನಸುಗಳು ಖುಷಿಯಲ್ಲಿ ತೇಲಾಡಿವೆ. ಈ ಕೋಟಿ-ಕೋಟಿ ಜನರ ಖುಷಿಯ ಹಿಂದೆ ಈ ಇಬ್ಬರ ಶ್ರಮವಿದೆ. ಅವರೇ ಕೋಚ್ ರಾಹುಲ್ ದ್ರಾವಿಡ್ ಅಂಡ್ ಕ್ಯಾಪ್ಟನ್ ರೋಹಿತ್ ಶರ್ಮಾ
ಡಿಯರ್ ರಾಹುಲ್ ಭಾಯ್.. ರೋಹಿತ್ ಭಾವುಕ
ವಿಶ್ವಕಪ್ ಗೆಲುವಿನೊಂದಿಗೆ ಟೀಮ್ ಇಂಡಿಯಾ ಜೊತೆಗಿನ ರಾಹುಲ್ ದ್ರಾವಿಡ್ ನಂಟು ಅಂತ್ಯ ಕಂಡಿದೆ. ಕೋಚ್ ಹುದ್ದೆಗೆ ದ್ರಾವಿಡ್ ಗೆಲುವಿನ ವಿದಾಯ ಹೇಳಿದ್ದಾರೆ. ಇನ್ಮುಂದೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ದ್ರಾವಿಡ್ ಇರಲ್ಲ. ರೋಹಿತ್ಗೆ ದ್ರಾವಿಡ್ ಭಾಯ್ ಸಿಗಲ್ಲ. ಈ ವಿಚಾರ ಕ್ಯಾಪ್ಟನ್ ರೋಹಿತ್ರನ್ನ ಭಾವುಕವಾಗಿಸಿದೆ. ದ್ರಾವಿಡ್ಗೆ ರೋಹಿತ್ ಬರೆದಿರೋ ಭಾವುಕ ಪತ್ರವೇ ಈ ಕಥೆಯನ್ನ ಹೇಳ್ತಿದೆ.
ಇದನ್ನೂ ಓದಿ:ಐದು ಕೋಟಿ ಹಣ ನನಗೆ ಬೇಡ ಎಂದ ದ್ರಾವಿಡ್.. ಅದಕ್ಕೆ ಕಾರಣವೂ ಇದೆ.. ಮತ್ತೊಮ್ಮೆ ಹೃದಯಗೆದ್ದ ಕನ್ನಡಿಗ..!
ಡಿಯರ್ ರಾಹುಲ್ ಭಾಯ್
ನನ್ನೊಳಗಿನ ಭಾವನೆಯನ್ನ ಹೇಳಲು ಸರಿಯಾದ ಪದಗಳನ್ನ ಬಳಸಲು ಪ್ರಯತ್ನಪಟ್ಟಿದ್ದೇನೆ. ಪ್ರಯತ್ನದಲ್ಲಿ ನಾನು ಯಶಸ್ಸು ಕಂಡಂತಿಲ್ಲ.ಬೇರೆಯವರಂತೆ ನಾನೂ ಚಿಕ್ಕಂದಿನಿಂದಲೂ ನಿಮ್ಮನ್ನ ನೋಡಿಕೊಂಡು ಬೆಳೆದಿದ್ದೇನೆ. ನಾನು ತುಂಬಾ ಅದೃಷ್ಟವಂತ. ನಿಮ್ಮ ಜೊತೆ ಹತ್ತಿರದಿಂದ ಕೆಲಸ ಮಾಡೋ ಅವಕಾಶ ಸಿಕ್ತು. ಈ ಆಟ ಕಂಡ ಅಗ್ರಗಣ್ಯರು ನೀವು. ನಮ್ಮ ಕೋಚ್ ಆದಾಗ ನಾವು ಆರಾಮವಾಗಿರಲಿ, ನಿಮ್ಮೊಂದಿಗೆ ನಮಗೆ ಅನಿಸಿದ್ದನ್ನ ಹೇಳಲಿ ಅನ್ನೋ ಕಾರಣಕ್ಕೆ ನಿಮ್ಮ ಸಾಧನೆ ಮತ್ತು ಪುರಸ್ಕಾರಗಳನ್ನು ಬಾಗಿಲಲ್ಲೇ ಬಿಟ್ಟು ಬಂದ್ರಿ. ಅದು ನಿಮ್ಮ ಮಾನವೀಯತೆ ಮತ್ತು ಈ ಆಟದ ಮೇಲೆ ನಿಮಗಿರೋ ಪ್ರೀತಿಯನ್ನ ತೋರಿಸುತ್ತೆ. ನಾನು ನಿಮ್ಮಿಂದ ತುಂಬಾ ಕಲಿತಿದ್ದೇನೆ. ನನ್ನ ಪತ್ನಿ ನಿಮ್ಮನ್ನ ‘ವರ್ಕಿಂಗ್ ವೈಫ್’ ಎಂದು ಕರೆಯುತ್ತಾರೆ. ಹಾಗೆ ಕರೆಸಿಕೊಳ್ಳಲು ನನಗೂ ಇಷ್ಟ. ಇದೊಂದನ್ನ ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಾವಿಬ್ಬರು ಒಟ್ಟಾಗಿ ಸಾಧಿಸಿದ್ದಕ್ಕೆ ನನಗೆ ಖುಷಿಯಿದೆ. ರಾಹುಲ್ ಭಾಯ್, ನಿಮ್ಮನ್ನ ನನ್ನ ಆತ್ಮೀಯ, ನನ್ನ ಕೋಚ್ ಮತ್ತು ನನ್ನ ಗೆಳೆಯ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ-ರೋಹಿತ್ ಶರ್ಮಾ, ಕ್ರಿಕೆಟಿಗ
ಒಂದೇ ಗುರಿ, ಎರಡು ಮನಸು..!
2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಟ್ರೋಫಿ ಗೆಲ್ಲಲಾಗದ ಕೊರಗು ಟೀಮ್ ಇಂಡಿಯಾವನ್ನ ಬಿಡದೇ ಕಾಡಿತ್ತು. ಆ ಕೊರಗನ್ನ ನೀಗಿಸಿ, ಭಾರತದ ಧ್ವಜವನ್ನ ಹಾರಿಸೋ ಪಣ ತೊಟ್ಟಿತ್ತು ರೋಹಿತ್ ಶರ್ಮಾ – ರಾಹುಲ್ ದ್ರಾವಿಡ್ ಜೋಡಿ. ಕೋಚ್ – ಕ್ಯಾಪ್ಟನ್ ಆದ ದಿನದಿಂದ ಐಸಿಸಿ ಟ್ರೋಫಿ ಗೆಲುವಿಗಾಗಿ ಹಾಕಿದ ಶ್ರಮ ಅಷ್ಟಿಷ್ಟಲ್ಲ. ಅನುಭವಿಸಿದ್ದು ನಿರಾಸೆಯನ್ನ.
ಇದನ್ನೂ ಓದಿ:IND vs ZIM: ಜೈಸ್ವಾಲ್, ದುಬೆ, ಸಂಜು ತಂಡಕ್ಕೆ ಎಂಟ್ರಿ.. ಪ್ಲೇಯಿಂಗ್-11ನಿಂದ ಮೂವರು ಔಟ್..?
ಸೋತಾಗ ಸಂತೈಸಿ, ಗೆದ್ದಾಗ ಸಂಭ್ರಮಿಸಿದ್ದ ದ್ರಾವಿಡ್
2022ರ ಟಿ20 ವಿಶ್ವಕಪ್ ಸೆಮಿಸ್ನಲ್ಲಿ ಸೋತಾಗ ಡಗೌಟ್ನಲ್ಲಿ ರೋಹಿತ್ ಶರ್ಮಾ ಭಾವುಕರಾಗಿದ್ರು. ಅಂದು ರೋಹಿತ್ ಬಿಕ್ಕಿ ಬಿಕ್ಕಿ ಅಳ್ತಿದ್ರು. ಕೋಚ್ ದ್ರಾವಿಡ್ರ ಕಣ್ಣಾಲಿಗಳೂ ತುಂಬಿದ್ವು. ಕ್ಯಾಪ್ಟನ್ ಬಳಿ ಬಂದಿದ್ದ ದ್ರಾವಿಡ್ ಸಂತೈಸಿದ್ರು. 2022ರ T20 ವಿಶ್ವಕಪ್ ಮಾತ್ರವಲ್ಲ.. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್, ನಂತರ ತವರಲ್ಲೇ ನಡೆದ ಏಕದಿನ ವಿಶ್ವಕಪ್ ಸೋತಾಗಲೂ ರೋಹಿತ್ ಬೆನ್ನಿಗೆ ನಿಂತಿದ್ರು, ರಾಹುಲ್ ದ್ರಾವಿಡ್.!
ಪ್ರತಿ ಐಸಿಸಿ ಟೂರ್ನಿ ಸೋತಾಗಲೂ, ರೋಹಿತ್ ವಿರುದ್ಧ ಟೀಕೆಗಳ ಸುರಿಮಳೆ ಸುರಿದಿತ್ತು. ಆಗ ಕೋಚ್ ದ್ರಾವಿಡ್ ಬ್ಯಾಕ್ ಮಾಡಿದ್ರು. ನಾಯಕನ್ನ ಯಾವ ಕಾರಣಕ್ಕೂ ಬಿಟ್ಟುಕೊಟ್ಟಿರಲಿಲ್ಲ. ಇಬ್ಬರ ನಡುವಿನ ಭಾಂದವ್ಯ ಹಾಗಿತ್ತು.
3ಕ್ಕೆ ಮುಕ್ತಾಯ.. 4ನೇ ಬಾರಿ ದಿಗ್ವಿಜಯ
3 ಐಸಿಸಿ ಟೂರ್ನಿ ಸೋತ್ರೂ ಇಬ್ಬರಲ್ಲಿ ಗೆಲುವಿನ ಹಠ, ಸಾಧಿಸೋ ಛಲ ಕಡಿಮೆಯಾಗಿರಲಿಲ್ಲ. 3ಕ್ಕೆ ಮುಕ್ತಾಯ ಹಾಡೋ ಪಣ ತೊಟ್ಟು ಹೋರಾಡಿದ ಈ ಜೋಡಿ ಕೊನೆಯಲ್ಲಿ ಯಶಸ್ಸು ಕಂಡಿದೆ. ಟಿ20 ವಿಶ್ವಕಪ್ ಗೆದ್ದು ಭಾರತವೇ ಸಂಭ್ರಮದಲ್ಲಿ ತೇಲುವಂತೆ ಮಾಡಿದೆ. ರಾಹುಲ್ ದ್ರಾವಿಡ್ರ ನಿವೃತ್ತಿ, ರೋಹಿತ್ ಶರ್ಮಾ ಮನಸ್ಸಲ್ಲಿ ಎಷ್ಟು ನೋವು ತಂದಿದ್ಯೋ.. ಅಷ್ಟೇ ಕ್ರಿಕೆಟ್ ಅಭಿಮಾನಿಗಳಲ್ಲೂ ಬೇಸರ ತರಿಸಿರೋದು ಸುಳ್ಳಲ್ಲ. ಹಳೆ ನೀರು ಹರಿಯಲೇಬೇಕು.. ಹೊಸ ನೀರು ಬರಲೇಬೇಕು.. ಕಾಲದ ನಿಯಮವೇ ಹಾಗಲ್ಲವೇ..?
ಇದನ್ನೂ ಓದಿ:ಹೈಕೋರ್ಟ್ನಲ್ಲಿ ದರ್ಶನ್ಗೆ ಭಾರೀ ನಿರಾಸೆ.. ಜುಲೈ 18 ವರೆಗೆ ಕಾಯಲೇಬೇಕು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್