110 ರೂಪಾಯಿಗೆ ಪೆಟ್ರೋಲ್ ಹಾಕಿಸಲು ಹೋದ ಬೈಕ್ ಸವಾರ
ಬೈಕ್ ಸವಾರ ಪರಿಶೀಲನೆ ನಡೆಸಿದಾಗ ಬೆಳಕಿಗೆ ಬಂತು ಮಹಾಮೋಸ
ಒಂದೆಡೆ ಪೆಟ್ರೋಲ್ ರೇಟ್ ಬರೆ.. ಇತ್ತ ಬಂಕ್ ಮಾಲೀಕರಿಂದ ಸುಲಿಗೆ
ತುಮಕೂರು: 110 ರೂಪಾಯಿಗೆ 300ml ಪೆಟ್ರೋಲ್ ನೀಡಿ ವಂಚಿಸುತ್ತಿದ್ದ ಘಟನೆಯೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಕುಣಿಗಲ್ ರಸ್ತೆಯಲ್ಲಿರುವ ಸಾಹುಕಾರ್ ಪ್ಯೂಯಲ್ ಪಾರ್ಕ್ ಎಂಬ HP ಪೆಟ್ರೋಲ್ ಬಂಕ್ನಲ್ಲಿ ಘಟನೆ ನಡೆದಿದೆ.
ಸವಾರನೋರ್ವ ತನ್ನ ಬೈಕ್ಗೆ 110 ರೂಪಾಯಿಯ ಪವರ್ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ. ಬಳಿಕ ಪರಿಶೀಲನೆ ಮಾಡಿದಾಗ ಕೇವಲ 300 ml ಬಂದಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೊಚ್ಚೆ ಮೇಲೆ ಕಲ್ಲು ಹಾಕಬಾರದು ಎಂದ ದಿವ್ಯಾ ಸುರೇಶ್.. ದರ್ಶನ್ ಪ್ರಕರಣದ ಬಗ್ಗೆ ಹೀಗಂದ್ರಾ?
ಇತ್ತೀಚೆಗೆ ಪೆಟ್ರೋಲ್ ಕದಿಯುವ ದಂಧೆ ಅತಿಯಾಗುತ್ತಿದ್ದು, ಒಂದು ಕಡೆ ಪೆಟ್ರೋಲ್ ರೇಟ್ ಬರೆ ಮತ್ತೊಂದು ಕಡೆ ಬಂಕ್ ಮಾಲೀಕರಿಂದ ಸುಲಿಗೆ ನಡೆಯುತ್ತಿದೆ. ಕಳೆದ ವಾರವಷ್ಟೇ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಇದೇ ರೀತಿ ದಂಧೆ ಬಯಲಾಗಿತ್ತು. ಪೆಟ್ರೋಲ್ ಬಂಕ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
110 ರೂಪಾಯಿಗೆ ಪೆಟ್ರೋಲ್ ಹಾಕಿಸಲು ಹೋದ ಬೈಕ್ ಸವಾರ
ಬೈಕ್ ಸವಾರ ಪರಿಶೀಲನೆ ನಡೆಸಿದಾಗ ಬೆಳಕಿಗೆ ಬಂತು ಮಹಾಮೋಸ
ಒಂದೆಡೆ ಪೆಟ್ರೋಲ್ ರೇಟ್ ಬರೆ.. ಇತ್ತ ಬಂಕ್ ಮಾಲೀಕರಿಂದ ಸುಲಿಗೆ
ತುಮಕೂರು: 110 ರೂಪಾಯಿಗೆ 300ml ಪೆಟ್ರೋಲ್ ನೀಡಿ ವಂಚಿಸುತ್ತಿದ್ದ ಘಟನೆಯೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಕುಣಿಗಲ್ ರಸ್ತೆಯಲ್ಲಿರುವ ಸಾಹುಕಾರ್ ಪ್ಯೂಯಲ್ ಪಾರ್ಕ್ ಎಂಬ HP ಪೆಟ್ರೋಲ್ ಬಂಕ್ನಲ್ಲಿ ಘಟನೆ ನಡೆದಿದೆ.
ಸವಾರನೋರ್ವ ತನ್ನ ಬೈಕ್ಗೆ 110 ರೂಪಾಯಿಯ ಪವರ್ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ. ಬಳಿಕ ಪರಿಶೀಲನೆ ಮಾಡಿದಾಗ ಕೇವಲ 300 ml ಬಂದಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೊಚ್ಚೆ ಮೇಲೆ ಕಲ್ಲು ಹಾಕಬಾರದು ಎಂದ ದಿವ್ಯಾ ಸುರೇಶ್.. ದರ್ಶನ್ ಪ್ರಕರಣದ ಬಗ್ಗೆ ಹೀಗಂದ್ರಾ?
ಇತ್ತೀಚೆಗೆ ಪೆಟ್ರೋಲ್ ಕದಿಯುವ ದಂಧೆ ಅತಿಯಾಗುತ್ತಿದ್ದು, ಒಂದು ಕಡೆ ಪೆಟ್ರೋಲ್ ರೇಟ್ ಬರೆ ಮತ್ತೊಂದು ಕಡೆ ಬಂಕ್ ಮಾಲೀಕರಿಂದ ಸುಲಿಗೆ ನಡೆಯುತ್ತಿದೆ. ಕಳೆದ ವಾರವಷ್ಟೇ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಇದೇ ರೀತಿ ದಂಧೆ ಬಯಲಾಗಿತ್ತು. ಪೆಟ್ರೋಲ್ ಬಂಕ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ