ಹೊಸಪೇಟೆ ನಗರದ ಹೊರಭಾಗದಲ್ಲಿರೋ ತುಂಗಾಭದ್ರಾ ಡ್ಯಾಂ
ಸಂಪೂರ್ಣ ಭರ್ತಿಯಾಗಿದ್ದ ಕಾರಣ ಜಲಾಶಯ ಗೇಟ್ಗೆ ಭಾರೀ ಹಾನಿ
ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿ ಚೈನ್ ಲಿಂಕ್ ತುಂಡಾಗಿದೆ
ಬೆಂಗಳೂರು: ತುಂಗಭದ್ರಾ ಜಲಾಶಯದ 19ನೇ ಚೈನ್ಲಿಂಕ್ ಗೇಟ್ ಕಟ್ ಆಗಿದ್ದು, ಭಾರೀ ಪ್ರಮಾಣದ ನೀರು ನದಿಗೆ ಹರಿಯುತ್ತಿದೆ. ಒಂದೇ ಗೇಟ್ನಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದ್ದು, ಗೇಟ್ ಕಟ್ ಆಗಿದ್ದರಿಂದ ನದಿ ಪಾತ್ರದಲ್ಲಿ ಜನರಲ್ಲಿ ಆತಂಕ ಶುರುವಾಗಿದೆ.
ಇದನ್ನೂ ಓದಿ: ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ, ಮನೆಯಲ್ಲಿ ಶುಭ ಕಾರ್ಯಗಳ ಚರ್ಚೆ; ಏನ್ ಹೇಳ್ತಿದೆ ಇಂದಿನ ಭವಿಷ್ಯ!
ಮಳೆಯಿಂದಾಗಿ ಹೊಸಪೇಟೆ ನಗರದ ಹೊರಭಾಗದಲ್ಲಿರೋ ತುಂಗಾಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದ ಕಾರಣ ಜಲಾಶಯ ಗೇಟ್ಗೆ ಭಾರೀ ಹಾನಿಯಾಗಿದೆ. ಹೀಗಾಗಿ ಜಲಾಶಯ ನೀರಿನ ಒತ್ತಡಕ್ಕೆ ಗೇಟ್ ಕಿತ್ತುಹೋಗಿದೆ. ತನ್ನಿಂದ ತಾನೇ ಡ್ಯಾಂನ ಗೇಟ್ ಓಪನ್ ಆಗಿದೆ.
ಇದನ್ನೂ ಓದಿ: ನೀವು ಸುಂದರವಾಗಿ ಕಾಣಬೇಕಂದ್ರೆ ಈ ಹಣ್ಣು ತಿಂದ್ರೆ ಸಾಕು.. ಚರ್ಮದ ಸಮಸ್ಯೆಗೆ ಇದುವೇ ರಾಮಬಾಣ!
ಇದು ಇತಿಹಾಸದಲ್ಲೇ ಫಸ್ಟ್
ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿ ಚೈನ್ ಲಿಂಕ್ ತುಂಡಾಗಿದೆ. ಜಲಾಶಯ ಭರ್ತಿಯಾಗಿರೋದ್ರಿಂದ ಈ ವೇಳೆ ಗೇಟ್ ದುರಸ್ತಿ ಮಾಡೋದು ಅಸಾಧ್ಯವಾಗಿದೆ.
ಇದನ್ನೂ ಓದಿ: ಮಾತನಾಡಲು, ಸೆಕ್ಸ್ ಮಾಡಲು ಒಂದೊಂದು ರೇಟ್ ಫಿಕ್ಸ್ ಮಾಡಿದ ಹೆಂಡ್ತಿ; ಕೋರ್ಟ್ಗೆ ಹೋದ ಗಂಡನಿಗೆ ಏನಾಯ್ತು?
ಕೋಟೆ ಪ್ರದೇಶದ ಜನರಿಗೆ ಎಚ್ಚರಿಕೆ
ಓವರ್ ಲೋಡ್ನಿಂದ ತುಂಗಭದ್ರಾ ಡ್ಯಾಂ ಗೇಟ್ ಕಿತ್ತುಹೋಗಿದ್ದರಿಂದ ಕಂಪ್ಲಿ ಪಟ್ಟಣದ ಜನರಿಗೆ ಹೆಚ್ಚಿದ ಆತಂಕ ಮನೆ ಮಾಡಿದೆ. ಹೆಚ್ಚಿನವರು ನದಿಯತ್ತ ದಾಪುಗಾಲು ಹಾಕುತ್ತಿದ್ದಾರೆ. ಈಗಾಗಲೇ ಕಂಪ್ಲಿ ಪಟ್ಟಣ ಕೋಟೆ ಪ್ರದೇಶದ ಜನರಿಗೆ ಎಚ್ಚರಿಕೆ ಸಂದೇಶ ಕೂಡ ರವಾನಿಸಲಾಗಿದೆ. ಗೇಟ್ ಒಡೆದ ಬಳಿಕ ಆತಂಕಗೊಂಡ ಕಂಪ್ಲಿಯ ಕೋಟೆ ಪ್ರದೇಶದ ಜನರು ಜಾಗರಣೆ ಮಾಡುವ ಪರಿಸ್ಥಿತಿ ಬಂದೊದಗಿದೆ.
ಇದನ್ನೂ ಓದಿ: ಅಬ್ಬಾ.. ಬಾಂಗ್ಲಾದಲ್ಲಿ ತಿರುಗಿಬಿದ್ದ ಹಿಂದೂಗಳಿಂದ ಅತಿ ದೊಡ್ಡ ದಂಗೆ; ಏನೆಲ್ಲಾ ನೋವು? ಎಷ್ಟೆಲ್ಲಾ ಕ್ರೌರ್ಯ?
TB ಬೋರ್ಡ್ನಿಂದಲೇ ಎಚ್ಚರಿಕೆ
ಇನ್ನು ನದಿ ಪಾತ್ರದ ಜನರಿಗೆ TB ಬೋರ್ಡ್ನಿಂದಲೇ ಎಚ್ಚರಿಕೆ ರವಾನಿಸಲಾಗಿದೆ. ಕಂಪ್ಲಿ ಸೇತುವೆಗೆ ಪೊಲೀಸ್ ಬಂದೋಬಸ್ ನಿಯೋಜನೆ ಮಾಡಲಾಗಿದೆ. ನದಿ ಪಾತ್ರಕ್ಕೆ ಬಂದ ಜನರನ್ನ ಪೊಲೀಸರು ಹಿಂದಿರುಗಿ ಕಳುಹಿಸುತ್ತಿದ್ದಾರೆ. ನದಿ ಸಂಪರ್ಕದ ರಸ್ತೆಯಲ್ಲಿ ಬ್ಯಾರಿಕೇಡ್ಗಳ ಅಳವಡಿಕೆ ಮಾಡಲಾಗಿದೆ. ಯಾವ್ದೆ ಕ್ಷಣದಲ್ಲೂ ನದಿಗೆ ಇನ್ನಷ್ಟು ಪ್ರಮಾಣ ನೀರು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೊಸಪೇಟೆ ನಗರದ ಹೊರಭಾಗದಲ್ಲಿರೋ ತುಂಗಾಭದ್ರಾ ಡ್ಯಾಂ
ಸಂಪೂರ್ಣ ಭರ್ತಿಯಾಗಿದ್ದ ಕಾರಣ ಜಲಾಶಯ ಗೇಟ್ಗೆ ಭಾರೀ ಹಾನಿ
ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿ ಚೈನ್ ಲಿಂಕ್ ತುಂಡಾಗಿದೆ
ಬೆಂಗಳೂರು: ತುಂಗಭದ್ರಾ ಜಲಾಶಯದ 19ನೇ ಚೈನ್ಲಿಂಕ್ ಗೇಟ್ ಕಟ್ ಆಗಿದ್ದು, ಭಾರೀ ಪ್ರಮಾಣದ ನೀರು ನದಿಗೆ ಹರಿಯುತ್ತಿದೆ. ಒಂದೇ ಗೇಟ್ನಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದ್ದು, ಗೇಟ್ ಕಟ್ ಆಗಿದ್ದರಿಂದ ನದಿ ಪಾತ್ರದಲ್ಲಿ ಜನರಲ್ಲಿ ಆತಂಕ ಶುರುವಾಗಿದೆ.
ಇದನ್ನೂ ಓದಿ: ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ, ಮನೆಯಲ್ಲಿ ಶುಭ ಕಾರ್ಯಗಳ ಚರ್ಚೆ; ಏನ್ ಹೇಳ್ತಿದೆ ಇಂದಿನ ಭವಿಷ್ಯ!
ಮಳೆಯಿಂದಾಗಿ ಹೊಸಪೇಟೆ ನಗರದ ಹೊರಭಾಗದಲ್ಲಿರೋ ತುಂಗಾಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದ ಕಾರಣ ಜಲಾಶಯ ಗೇಟ್ಗೆ ಭಾರೀ ಹಾನಿಯಾಗಿದೆ. ಹೀಗಾಗಿ ಜಲಾಶಯ ನೀರಿನ ಒತ್ತಡಕ್ಕೆ ಗೇಟ್ ಕಿತ್ತುಹೋಗಿದೆ. ತನ್ನಿಂದ ತಾನೇ ಡ್ಯಾಂನ ಗೇಟ್ ಓಪನ್ ಆಗಿದೆ.
ಇದನ್ನೂ ಓದಿ: ನೀವು ಸುಂದರವಾಗಿ ಕಾಣಬೇಕಂದ್ರೆ ಈ ಹಣ್ಣು ತಿಂದ್ರೆ ಸಾಕು.. ಚರ್ಮದ ಸಮಸ್ಯೆಗೆ ಇದುವೇ ರಾಮಬಾಣ!
ಇದು ಇತಿಹಾಸದಲ್ಲೇ ಫಸ್ಟ್
ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿ ಚೈನ್ ಲಿಂಕ್ ತುಂಡಾಗಿದೆ. ಜಲಾಶಯ ಭರ್ತಿಯಾಗಿರೋದ್ರಿಂದ ಈ ವೇಳೆ ಗೇಟ್ ದುರಸ್ತಿ ಮಾಡೋದು ಅಸಾಧ್ಯವಾಗಿದೆ.
ಇದನ್ನೂ ಓದಿ: ಮಾತನಾಡಲು, ಸೆಕ್ಸ್ ಮಾಡಲು ಒಂದೊಂದು ರೇಟ್ ಫಿಕ್ಸ್ ಮಾಡಿದ ಹೆಂಡ್ತಿ; ಕೋರ್ಟ್ಗೆ ಹೋದ ಗಂಡನಿಗೆ ಏನಾಯ್ತು?
ಕೋಟೆ ಪ್ರದೇಶದ ಜನರಿಗೆ ಎಚ್ಚರಿಕೆ
ಓವರ್ ಲೋಡ್ನಿಂದ ತುಂಗಭದ್ರಾ ಡ್ಯಾಂ ಗೇಟ್ ಕಿತ್ತುಹೋಗಿದ್ದರಿಂದ ಕಂಪ್ಲಿ ಪಟ್ಟಣದ ಜನರಿಗೆ ಹೆಚ್ಚಿದ ಆತಂಕ ಮನೆ ಮಾಡಿದೆ. ಹೆಚ್ಚಿನವರು ನದಿಯತ್ತ ದಾಪುಗಾಲು ಹಾಕುತ್ತಿದ್ದಾರೆ. ಈಗಾಗಲೇ ಕಂಪ್ಲಿ ಪಟ್ಟಣ ಕೋಟೆ ಪ್ರದೇಶದ ಜನರಿಗೆ ಎಚ್ಚರಿಕೆ ಸಂದೇಶ ಕೂಡ ರವಾನಿಸಲಾಗಿದೆ. ಗೇಟ್ ಒಡೆದ ಬಳಿಕ ಆತಂಕಗೊಂಡ ಕಂಪ್ಲಿಯ ಕೋಟೆ ಪ್ರದೇಶದ ಜನರು ಜಾಗರಣೆ ಮಾಡುವ ಪರಿಸ್ಥಿತಿ ಬಂದೊದಗಿದೆ.
ಇದನ್ನೂ ಓದಿ: ಅಬ್ಬಾ.. ಬಾಂಗ್ಲಾದಲ್ಲಿ ತಿರುಗಿಬಿದ್ದ ಹಿಂದೂಗಳಿಂದ ಅತಿ ದೊಡ್ಡ ದಂಗೆ; ಏನೆಲ್ಲಾ ನೋವು? ಎಷ್ಟೆಲ್ಲಾ ಕ್ರೌರ್ಯ?
TB ಬೋರ್ಡ್ನಿಂದಲೇ ಎಚ್ಚರಿಕೆ
ಇನ್ನು ನದಿ ಪಾತ್ರದ ಜನರಿಗೆ TB ಬೋರ್ಡ್ನಿಂದಲೇ ಎಚ್ಚರಿಕೆ ರವಾನಿಸಲಾಗಿದೆ. ಕಂಪ್ಲಿ ಸೇತುವೆಗೆ ಪೊಲೀಸ್ ಬಂದೋಬಸ್ ನಿಯೋಜನೆ ಮಾಡಲಾಗಿದೆ. ನದಿ ಪಾತ್ರಕ್ಕೆ ಬಂದ ಜನರನ್ನ ಪೊಲೀಸರು ಹಿಂದಿರುಗಿ ಕಳುಹಿಸುತ್ತಿದ್ದಾರೆ. ನದಿ ಸಂಪರ್ಕದ ರಸ್ತೆಯಲ್ಲಿ ಬ್ಯಾರಿಕೇಡ್ಗಳ ಅಳವಡಿಕೆ ಮಾಡಲಾಗಿದೆ. ಯಾವ್ದೆ ಕ್ಷಣದಲ್ಲೂ ನದಿಗೆ ಇನ್ನಷ್ಟು ಪ್ರಮಾಣ ನೀರು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ