ಮೃತದೇಹದ ಗುರುತು ಪತ್ತೆ.. ಇದು ಕೊಲೆಯೇ ಅಥವಾ ಸಹಜ ಸಾವೇ?
ಮೂರು ವರ್ಷಗಳಿಂದ ಬೆಡ್ ಮೇಲೆಯೇ ಇತ್ತು ಮಾನವನ ಅಸ್ಥಿಪಂಜರ
ಸಾವಿನ ಸುತ್ತ ಅನುಮಾನದ ಹುತ್ತ.. ಸದ್ಯ ತನಿಖೆ ನಡೆಸುತ್ತಿರೋ ಪೊಲೀಸರು
ಮೂರು ವರ್ಷಗಳಿಂದ ಮನೆಯೊಂದರಲ್ಲಿ ಮೃತದೇಹ ಪತ್ತೆಯಾಗಿರುವ ಸಂಗತಿ ಧಾರವಾಡದ ಮಾಳಮಡ್ಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯಿಂದ ಗ್ರಾಮದಲ್ಲಿನ ಜನರನ್ನ ಬೆಚ್ಚಿಬೀಳುವಂತೆ ಮಾಡಿದೆ.
ಮೃತದೇಹದ ಗುರುತು ಪತ್ತೆಯಾಗಿದ್ದು, ಚಂದ್ರಶೇಖರ ಕೊಲ್ಲಾಪುರ ಎಂದು ಗುರುತಿಸಲಾಗಿದೆ. ಮೂರು ವರ್ಷಗಳಿಂದ ಚಂದ್ರಶೇಖರ ಮೃತದೇಹ ಮನೆಯಲ್ಲಿಯೇ ಇತ್ತು ಎಂಬುದು ಗ್ರಾಮದ ಜನರಿಗೆ ಶಾಕ್ ನೀಡಿದಂತಾಗಿದೆ.
ಚಂದ್ರಶೇಖರವರು ಧಾರವಾಡದ ಸುರೇಖಾ ಎಂಬುವವರನ್ನ ವಿವಾಹವಾಗಿದ್ದರು.ಇವರಿಗೆ ಮಕ್ಕಳು ಆಗಿರಲಿಲ್ಲ. 2015 ರಲ್ಲಿ ಸುರೇಖಾ ಹೃದಯಾಘಾತದಿಂದ ನಿಧನರಾದರು. ಬಳಿಕ ಚಂದ್ರಶೇಖರ ತಾನೊಬ್ಬನೇ ಆ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಕ್ರಿಕೆಟರ್ಸ್!
ಸುರೇಖಾ ಅಕ್ಕನ ಮಗ ಯಶವಂತ ಎಂಬಾತ ಆಗಾಗ ಚಂದ್ರಶೇಖರ್ ಮನೆಗೆ ಬಂದು ಹೋಗುತ್ತಿದ್ದರು.ಆದ್ರೆ ಯಶವಂತ ಕಳೆದ 3 ವರ್ಷಗಳಿಂದ ಚಂದ್ರಶೇಖರ ಮನೆಗೆ ಬಂದಿರಲಿಲ್ಲ. 3 ತಿಂಗಳ ಹಿಂದೆ ಮನೆಗೆ ಬಂದು ನೋಡಿದಾಗ ಮನೆ ಲಾಕ್ ಆಗಿತ್ತು.
ಇದನ್ನೂ ಓದಿ: ವಾರೆವ್ಹಾ! 5 ಡೋರ್ನ ಥಾರ್ ರೋಕ್ಸ್ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?
ಅನುಮಾನ ಬಂದ ಯಶವಂತ ಇತ್ತೀಚೆಗೆ ಪೊಲೀಸರ ಸಮ್ಮುಖದಲ್ಲಿ ಮನೆ ಬಾಗಿಲು ಮುರಿದು ಒಳ ಹೋಗಿ ಪರಿಶೀಲಿಸಿದಾಗ ಮನೆಯ ಬೆಡ್ ಮೇಲೆ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ ಅಸ್ಥಿಪಂಜರವನ್ನ ಹುಬ್ಬಳ್ಳಿ ಕಿಮ್ಸ್ಗೆ ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ. ಈಗ ವಿದ್ಯಾಗಿರಿ ಠಾಣೆ ಪೊಲೀಸರು ಇದೊಂದು ಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮೃತದೇಹದ ಗುರುತು ಪತ್ತೆ.. ಇದು ಕೊಲೆಯೇ ಅಥವಾ ಸಹಜ ಸಾವೇ?
ಮೂರು ವರ್ಷಗಳಿಂದ ಬೆಡ್ ಮೇಲೆಯೇ ಇತ್ತು ಮಾನವನ ಅಸ್ಥಿಪಂಜರ
ಸಾವಿನ ಸುತ್ತ ಅನುಮಾನದ ಹುತ್ತ.. ಸದ್ಯ ತನಿಖೆ ನಡೆಸುತ್ತಿರೋ ಪೊಲೀಸರು
ಮೂರು ವರ್ಷಗಳಿಂದ ಮನೆಯೊಂದರಲ್ಲಿ ಮೃತದೇಹ ಪತ್ತೆಯಾಗಿರುವ ಸಂಗತಿ ಧಾರವಾಡದ ಮಾಳಮಡ್ಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯಿಂದ ಗ್ರಾಮದಲ್ಲಿನ ಜನರನ್ನ ಬೆಚ್ಚಿಬೀಳುವಂತೆ ಮಾಡಿದೆ.
ಮೃತದೇಹದ ಗುರುತು ಪತ್ತೆಯಾಗಿದ್ದು, ಚಂದ್ರಶೇಖರ ಕೊಲ್ಲಾಪುರ ಎಂದು ಗುರುತಿಸಲಾಗಿದೆ. ಮೂರು ವರ್ಷಗಳಿಂದ ಚಂದ್ರಶೇಖರ ಮೃತದೇಹ ಮನೆಯಲ್ಲಿಯೇ ಇತ್ತು ಎಂಬುದು ಗ್ರಾಮದ ಜನರಿಗೆ ಶಾಕ್ ನೀಡಿದಂತಾಗಿದೆ.
ಚಂದ್ರಶೇಖರವರು ಧಾರವಾಡದ ಸುರೇಖಾ ಎಂಬುವವರನ್ನ ವಿವಾಹವಾಗಿದ್ದರು.ಇವರಿಗೆ ಮಕ್ಕಳು ಆಗಿರಲಿಲ್ಲ. 2015 ರಲ್ಲಿ ಸುರೇಖಾ ಹೃದಯಾಘಾತದಿಂದ ನಿಧನರಾದರು. ಬಳಿಕ ಚಂದ್ರಶೇಖರ ತಾನೊಬ್ಬನೇ ಆ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಕ್ರಿಕೆಟರ್ಸ್!
ಸುರೇಖಾ ಅಕ್ಕನ ಮಗ ಯಶವಂತ ಎಂಬಾತ ಆಗಾಗ ಚಂದ್ರಶೇಖರ್ ಮನೆಗೆ ಬಂದು ಹೋಗುತ್ತಿದ್ದರು.ಆದ್ರೆ ಯಶವಂತ ಕಳೆದ 3 ವರ್ಷಗಳಿಂದ ಚಂದ್ರಶೇಖರ ಮನೆಗೆ ಬಂದಿರಲಿಲ್ಲ. 3 ತಿಂಗಳ ಹಿಂದೆ ಮನೆಗೆ ಬಂದು ನೋಡಿದಾಗ ಮನೆ ಲಾಕ್ ಆಗಿತ್ತು.
ಇದನ್ನೂ ಓದಿ: ವಾರೆವ್ಹಾ! 5 ಡೋರ್ನ ಥಾರ್ ರೋಕ್ಸ್ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?
ಅನುಮಾನ ಬಂದ ಯಶವಂತ ಇತ್ತೀಚೆಗೆ ಪೊಲೀಸರ ಸಮ್ಮುಖದಲ್ಲಿ ಮನೆ ಬಾಗಿಲು ಮುರಿದು ಒಳ ಹೋಗಿ ಪರಿಶೀಲಿಸಿದಾಗ ಮನೆಯ ಬೆಡ್ ಮೇಲೆ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ ಅಸ್ಥಿಪಂಜರವನ್ನ ಹುಬ್ಬಳ್ಳಿ ಕಿಮ್ಸ್ಗೆ ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ. ಈಗ ವಿದ್ಯಾಗಿರಿ ಠಾಣೆ ಪೊಲೀಸರು ಇದೊಂದು ಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ