newsfirstkannada.com

ಬೆಚ್ಚಿಬಿದ್ದ ಧಾರವಾಡ! 3 ವರ್ಷಗಳ ಬಳಿಕ ಮನೆಯಲ್ಲಿ ಸಿಕ್ತು ಮೃತದೇಹ.. ಕೊಳೆತು ಅಸ್ಥಿಪಂಜರವಾಗಿತ್ತು ದೇಹ!

Share :

Published August 15, 2024 at 8:17am

    ಮೃತದೇಹದ ಗುರುತು ಪತ್ತೆ.. ಇದು ಕೊಲೆಯೇ ಅಥವಾ ಸಹಜ ಸಾವೇ?

    ಮೂರು ವರ್ಷಗಳಿಂದ ಬೆಡ್​​ ಮೇಲೆಯೇ ಇತ್ತು ಮಾನವನ ಅಸ್ಥಿಪಂಜರ

    ಸಾವಿನ ಸುತ್ತ ಅನುಮಾನದ ಹುತ್ತ.. ಸದ್ಯ ತನಿಖೆ ನಡೆಸುತ್ತಿರೋ ಪೊಲೀಸರು

ಮೂರು ವರ್ಷಗಳಿಂದ ಮನೆಯೊಂದರಲ್ಲಿ ಮೃತದೇಹ ಪತ್ತೆಯಾಗಿರುವ ಸಂಗತಿ ಧಾರವಾಡದ ಮಾಳಮಡ್ಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯಿಂದ ಗ್ರಾಮದಲ್ಲಿನ ಜನರನ್ನ ಬೆಚ್ಚಿಬೀಳುವಂತೆ ಮಾಡಿದೆ.

ಮೃತದೇಹದ ಗುರುತು ಪತ್ತೆಯಾಗಿದ್ದು, ಚಂದ್ರಶೇಖರ ಕೊಲ್ಲಾಪುರ ಎಂದು ಗುರುತಿಸಲಾಗಿದೆ. ಮೂರು ವರ್ಷಗಳಿಂದ ಚಂದ್ರಶೇಖರ ಮೃತದೇಹ ಮನೆಯಲ್ಲಿಯೇ ಇತ್ತು ಎಂಬುದು ಗ್ರಾಮದ ಜನರಿಗೆ ಶಾಕ್​ ನೀಡಿದಂತಾಗಿದೆ.

ಚಂದ್ರಶೇಖರವರು ಧಾರವಾಡದ ಸುರೇಖಾ ಎಂಬುವವರನ್ನ ವಿವಾಹವಾಗಿದ್ದರು.ಇವರಿಗೆ ಮಕ್ಕಳು ಆಗಿರಲಿಲ್ಲ. 2015 ರಲ್ಲಿ ಸುರೇಖಾ ಹೃದಯಾಘಾತದಿಂದ ನಿಧನರಾದರು. ಬಳಿಕ ಚಂದ್ರಶೇಖರ ತಾನೊಬ್ಬನೇ ಆ ಮನೆಯಲ್ಲಿ ವಾಸ ಮಾಡುತ್ತಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಕ್ರಿಕೆಟರ್ಸ್​!

ಸುರೇಖಾ ಅಕ್ಕನ ಮಗ ಯಶವಂತ ಎಂಬಾತ ಆಗಾಗ ಚಂದ್ರಶೇಖರ್​ ಮನೆಗೆ ಬಂದು ಹೋಗುತ್ತಿದ್ದರು.ಆದ್ರೆ ಯಶವಂತ ಕಳೆದ 3 ವರ್ಷಗಳಿಂದ ಚಂದ್ರಶೇಖರ ಮನೆಗೆ ಬಂದಿರಲಿಲ್ಲ. 3 ತಿಂಗಳ ಹಿಂದೆ ಮನೆಗೆ ಬಂದು ನೋಡಿದಾಗ ಮನೆ ಲಾಕ್ ಆಗಿತ್ತು.

ಇದನ್ನೂ ಓದಿ: ವಾರೆವ್ಹಾ! 5 ಡೋರ್​​ನ ಥಾರ್​​ ರೋಕ್ಸ್​ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

ಅನುಮಾನ ಬಂದ ಯಶವಂತ ಇತ್ತೀಚೆಗೆ ಪೊಲೀಸರ ಸಮ್ಮುಖದಲ್ಲಿ ಮನೆ ಬಾಗಿಲು ಮುರಿದು ಒಳ ಹೋಗಿ ಪರಿಶೀಲಿಸಿದಾಗ ಮನೆಯ ಬೆಡ್ ಮೇಲೆ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್​ ಮಾತನಾಡಿ ಅಸ್ಥಿಪಂಜರವನ್ನ ಹುಬ್ಬಳ್ಳಿ ಕಿಮ್ಸ್‌ಗೆ ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ. ಈಗ ವಿದ್ಯಾಗಿರಿ ಠಾಣೆ ಪೊಲೀಸರು ಇದೊಂದು ಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಚ್ಚಿಬಿದ್ದ ಧಾರವಾಡ! 3 ವರ್ಷಗಳ ಬಳಿಕ ಮನೆಯಲ್ಲಿ ಸಿಕ್ತು ಮೃತದೇಹ.. ಕೊಳೆತು ಅಸ್ಥಿಪಂಜರವಾಗಿತ್ತು ದೇಹ!

https://newsfirstlive.com/wp-content/uploads/2024/08/Dharwad.jpg

    ಮೃತದೇಹದ ಗುರುತು ಪತ್ತೆ.. ಇದು ಕೊಲೆಯೇ ಅಥವಾ ಸಹಜ ಸಾವೇ?

    ಮೂರು ವರ್ಷಗಳಿಂದ ಬೆಡ್​​ ಮೇಲೆಯೇ ಇತ್ತು ಮಾನವನ ಅಸ್ಥಿಪಂಜರ

    ಸಾವಿನ ಸುತ್ತ ಅನುಮಾನದ ಹುತ್ತ.. ಸದ್ಯ ತನಿಖೆ ನಡೆಸುತ್ತಿರೋ ಪೊಲೀಸರು

ಮೂರು ವರ್ಷಗಳಿಂದ ಮನೆಯೊಂದರಲ್ಲಿ ಮೃತದೇಹ ಪತ್ತೆಯಾಗಿರುವ ಸಂಗತಿ ಧಾರವಾಡದ ಮಾಳಮಡ್ಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯಿಂದ ಗ್ರಾಮದಲ್ಲಿನ ಜನರನ್ನ ಬೆಚ್ಚಿಬೀಳುವಂತೆ ಮಾಡಿದೆ.

ಮೃತದೇಹದ ಗುರುತು ಪತ್ತೆಯಾಗಿದ್ದು, ಚಂದ್ರಶೇಖರ ಕೊಲ್ಲಾಪುರ ಎಂದು ಗುರುತಿಸಲಾಗಿದೆ. ಮೂರು ವರ್ಷಗಳಿಂದ ಚಂದ್ರಶೇಖರ ಮೃತದೇಹ ಮನೆಯಲ್ಲಿಯೇ ಇತ್ತು ಎಂಬುದು ಗ್ರಾಮದ ಜನರಿಗೆ ಶಾಕ್​ ನೀಡಿದಂತಾಗಿದೆ.

ಚಂದ್ರಶೇಖರವರು ಧಾರವಾಡದ ಸುರೇಖಾ ಎಂಬುವವರನ್ನ ವಿವಾಹವಾಗಿದ್ದರು.ಇವರಿಗೆ ಮಕ್ಕಳು ಆಗಿರಲಿಲ್ಲ. 2015 ರಲ್ಲಿ ಸುರೇಖಾ ಹೃದಯಾಘಾತದಿಂದ ನಿಧನರಾದರು. ಬಳಿಕ ಚಂದ್ರಶೇಖರ ತಾನೊಬ್ಬನೇ ಆ ಮನೆಯಲ್ಲಿ ವಾಸ ಮಾಡುತ್ತಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಕ್ರಿಕೆಟರ್ಸ್​!

ಸುರೇಖಾ ಅಕ್ಕನ ಮಗ ಯಶವಂತ ಎಂಬಾತ ಆಗಾಗ ಚಂದ್ರಶೇಖರ್​ ಮನೆಗೆ ಬಂದು ಹೋಗುತ್ತಿದ್ದರು.ಆದ್ರೆ ಯಶವಂತ ಕಳೆದ 3 ವರ್ಷಗಳಿಂದ ಚಂದ್ರಶೇಖರ ಮನೆಗೆ ಬಂದಿರಲಿಲ್ಲ. 3 ತಿಂಗಳ ಹಿಂದೆ ಮನೆಗೆ ಬಂದು ನೋಡಿದಾಗ ಮನೆ ಲಾಕ್ ಆಗಿತ್ತು.

ಇದನ್ನೂ ಓದಿ: ವಾರೆವ್ಹಾ! 5 ಡೋರ್​​ನ ಥಾರ್​​ ರೋಕ್ಸ್​ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

ಅನುಮಾನ ಬಂದ ಯಶವಂತ ಇತ್ತೀಚೆಗೆ ಪೊಲೀಸರ ಸಮ್ಮುಖದಲ್ಲಿ ಮನೆ ಬಾಗಿಲು ಮುರಿದು ಒಳ ಹೋಗಿ ಪರಿಶೀಲಿಸಿದಾಗ ಮನೆಯ ಬೆಡ್ ಮೇಲೆ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್​ ಮಾತನಾಡಿ ಅಸ್ಥಿಪಂಜರವನ್ನ ಹುಬ್ಬಳ್ಳಿ ಕಿಮ್ಸ್‌ಗೆ ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ. ಈಗ ವಿದ್ಯಾಗಿರಿ ಠಾಣೆ ಪೊಲೀಸರು ಇದೊಂದು ಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More