newsfirstkannada.com

ರೇಣುಕಾಸ್ವಾಮಿ ಫೋಟೋ ಮೊದಲು ಕ್ಲಿಕ್ಕಿಸಿದ್ಯಾರು? ಯಾರ ಫೋನ್​ನಲ್ಲಿತ್ತು ಆತ ಅಂಗಲಾಚುತ್ತಿರೋ ದೃಶ್ಯ

Share :

Published September 5, 2024 at 10:36am

Update September 5, 2024 at 10:37am

    ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ

    ಕಣ್ಣೀರಿಟ್ಟು ಅಂಗಲಾಚಿದರೂ ಬಿಡದ ಕಿರಾತಕರು

    ಮೊದಲ ಫೋಟೋ ಕ್ಲಿಕ್ಕಿಸಿದಾತನೇ ಐ ವಿಟ್ನೆಸ್​!

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿಯನ್ನು ಹಿಂಸಿಸಿ ಕೊಲೆ ಮಾಡಿರುವ ಫೋಟೋಗಳು ಪೊಲೀಸ್​ ಅಧಿಕಾರಿಗಳಿಗೆ ಸಿಕ್ಕಿದೆ. ಡಿಲೀಟ್​ ಆಗಿರುವ ಫೋಟೋಗಳನ್ನು FSL ತಂಡ ರಿಟ್ರೀವ್​ ಮಾಡಿದೆ. 10ಕ್ಕೂ ಹೆಚ್ಚು ಫೋಟೋಗಳು ಸಿಕ್ಕಿವೆ ಎಂಬ ಸುದ್ದಿ ಹೊರಬಿದ್ದಿದೆ.

ಆದರೆ ರೇಣುಕಾಸ್ವಾಮಿ ಹಿಂಸೆ ನೀಡುತ್ತಿರುವಾಗ ಫೋಟೋ ಮೊದಲಿಗೆ ಕ್ಲಿಕ್ಕಿಸಿದ್ಯಾರು? ದರ್ಶನ್​ಗೆ ಫೋಟೋ ಕಳುಹಿಸಿದ್ಯಾರು? ಈ ಕುರಿತಾದ ಕುತೂಹಲಕಾರಿಯಾದ ಮಾಹಿತಿ ಇಲ್ಲಿದೆ.

ಮೊದಲು ಫೋಟೋ ತೆಗೆದದ್ದು ಯಾರು?

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಚಿರಾಡಿದ್ದಾನಂತೆ. ಅದೇ ವೇಳೆ ಅಟ್ಟಹಾಸದಲ್ಲಿ ಆರೋಪಿಗಳು ಕೂಗಾಡಿದ್ದಾರಂತೆ. ಈ ವೇಳೆ ಗೇಟ್ ಹೊರಗಿದ್ದ ಸೆಕ್ಯೂರಿಟಿ ಒಳಗೆ ಬಂದಿದ್ದಾರೆ. ಹಲ್ಲೆ ಮಾಡಿದನ್ನ ಸೆಕ್ಯೂರಿಟಿ ಗಾರ್ಡ್ ಕಣ್ಣಾರೆ ನೋಡಿದ್ದಾರೆ. ಬಳಿಕ ತಕ್ಷಣ ವಿನಯ್​ಗೆ ಫೋನ್​ ಮಾಡಿದ್ದಾನೆ ಎನ್ನಲಾಗುತ್ತಿದೆ.

 

ಇದನ್ನೂ ಓದಿ: EXCLUSIVE: ಅಂಗಿ, ಬನಿಯಾನ್​ ಹರಿದು ವಿಕೃತಿ.. ಡಿಲೀಟ್​ ಆದ ರೇಣುಕಾಸ್ವಾಮಿ ಫೋಟೋ ಪತ್ತೆ  

ರೇಣುಕಾಸ್ವಾಮಿ ಪ್ರಕರಣದಲ್ಲಿ ಸೆಕ್ಯೂರಿಟಿ ಗಾರ್ಡ್ ಐ ವಿಟ್ನೇಸ್ ಆಗಿದ್ದು, ಈ ವೇಳೆ ವಿನಯ್ ಅವರು ನಮ್ಮವರೇ ಬಿಡು ಎಂದು ಸೆಕ್ಯೂರಿಟಿ ಗಾರ್ಡ್​ ಬಳಿ ಹೇಳಿದ್ದಾನಂತೆ. ನಂತರ ರೇಣುಕಾಸ್ವಾಮಿ ಫೋಟೋ ಕಳಿಸುವುದಕ್ಕೆ ವಿನಯ್ ಹೇಳಿದ್ದಾನೆ. ಆಗ ಸೆಕ್ಯೂರಿಟಿ ಫೋಟೋ ತೆಗೆದು ವಿನಯ್​​ಗೆ ಕಳಿಸಿದ್ದಾನೆ. ವಿನಯ್ ಆ ಫೋಟೋಗಳನ್ನ ನಟ ದರ್ಶನ್​ಗೆ ತೋರಿಸಿದ್ದಾನೆ. ಫೋಟೋಸ್​ ನೋಡಿದ ಬಳಿಕ ದರ್ಶನ್ ಶೆಡ್​ಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಫೋಟೋ​ ಹಿಂದಿನ ಕಥೆ ಏನು?

ಆರೋಪಿ ದರ್ಶನ್ ಶೆಡ್​ಗೆ ಬಂದು ದರ್ಶನ್​ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಕೆಳಗೆ ಬಿದ್ದವನನ್ನ ಎಳೆದು ಹೊಡೆದು ಬನಿಯನ್ ಹರಿದುಹಾಕಿದ್ದಾರೆ. ಶೆಡ್​ಗೆ ಬಂದವನೇ ರೇಣುಕಾಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಸಿನಿಮಾ ರೀತಿಯಲ್ಲಿ ಎತ್ತಿ ಬಿಸಾಡಿ ತುಳಿದಿದ್ದಾರೆ ಎನ್ನಲಾಗುತ್ತಿದೆ.ರೇಣುಕಾಸ್ವಾಮಿ ಮುಖಕ್ಕೆ ಶೂ ಕಾಲಿನಿಂದ ಒದ್ದಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: EXCLUSIVE: ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ, ಡಿಲೀಟ್ ಮಾಡಿದ್ದ ಫೋಟೋಸ್ ಪತ್ತೆ

ವಿನಯ್​​ ಫೋನ್​ನಲ್ಲಿ ಫೋಟೋ?

ಆರೋಪಿ ವಿನಯ್ ಫೋನ್​ನಲ್ಲಿ ರೇಣುಕಾಸ್ವಾಮಿ ಫೋಟೋಗಳು ಪತ್ತೆಯಾಗಿವೆ. ವಿನಯ್ ಫೋನ್​ನಲ್ಲಿ ರಿಟ್ರೀವ್ ಮಾಡಿದಾಗ ಪತ್ತೆಯಾಗಿದೆ. ದರ್ಶನ್ ಹಲ್ಲೆ ಮಾಡಿದ್ದಾಗ ಎ10 ವಿನಯ್ ಕ್ಲಿಕ್ ಮಾಡಿದ್ದಾನೆ. ಬಳಿಕ ಫೋಟೋವನ್ನ ಸಮತಾಗೂ ಕಳಿಸಿದ್ದಾನೆ ಎನ್ನಲಾಗುತ್ತಿದೆ. ಪೊಲೀಸರು ಆ ಫೋಟೋವನ್ನು ಸಹ ಪತ್ತೆಹಚ್ಚಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಫೋಟೋ ಮೊದಲು ಕ್ಲಿಕ್ಕಿಸಿದ್ಯಾರು? ಯಾರ ಫೋನ್​ನಲ್ಲಿತ್ತು ಆತ ಅಂಗಲಾಚುತ್ತಿರೋ ದೃಶ್ಯ

https://newsfirstlive.com/wp-content/uploads/2024/09/Renukaswamy-1.jpg

    ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ

    ಕಣ್ಣೀರಿಟ್ಟು ಅಂಗಲಾಚಿದರೂ ಬಿಡದ ಕಿರಾತಕರು

    ಮೊದಲ ಫೋಟೋ ಕ್ಲಿಕ್ಕಿಸಿದಾತನೇ ಐ ವಿಟ್ನೆಸ್​!

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿಯನ್ನು ಹಿಂಸಿಸಿ ಕೊಲೆ ಮಾಡಿರುವ ಫೋಟೋಗಳು ಪೊಲೀಸ್​ ಅಧಿಕಾರಿಗಳಿಗೆ ಸಿಕ್ಕಿದೆ. ಡಿಲೀಟ್​ ಆಗಿರುವ ಫೋಟೋಗಳನ್ನು FSL ತಂಡ ರಿಟ್ರೀವ್​ ಮಾಡಿದೆ. 10ಕ್ಕೂ ಹೆಚ್ಚು ಫೋಟೋಗಳು ಸಿಕ್ಕಿವೆ ಎಂಬ ಸುದ್ದಿ ಹೊರಬಿದ್ದಿದೆ.

ಆದರೆ ರೇಣುಕಾಸ್ವಾಮಿ ಹಿಂಸೆ ನೀಡುತ್ತಿರುವಾಗ ಫೋಟೋ ಮೊದಲಿಗೆ ಕ್ಲಿಕ್ಕಿಸಿದ್ಯಾರು? ದರ್ಶನ್​ಗೆ ಫೋಟೋ ಕಳುಹಿಸಿದ್ಯಾರು? ಈ ಕುರಿತಾದ ಕುತೂಹಲಕಾರಿಯಾದ ಮಾಹಿತಿ ಇಲ್ಲಿದೆ.

ಮೊದಲು ಫೋಟೋ ತೆಗೆದದ್ದು ಯಾರು?

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಚಿರಾಡಿದ್ದಾನಂತೆ. ಅದೇ ವೇಳೆ ಅಟ್ಟಹಾಸದಲ್ಲಿ ಆರೋಪಿಗಳು ಕೂಗಾಡಿದ್ದಾರಂತೆ. ಈ ವೇಳೆ ಗೇಟ್ ಹೊರಗಿದ್ದ ಸೆಕ್ಯೂರಿಟಿ ಒಳಗೆ ಬಂದಿದ್ದಾರೆ. ಹಲ್ಲೆ ಮಾಡಿದನ್ನ ಸೆಕ್ಯೂರಿಟಿ ಗಾರ್ಡ್ ಕಣ್ಣಾರೆ ನೋಡಿದ್ದಾರೆ. ಬಳಿಕ ತಕ್ಷಣ ವಿನಯ್​ಗೆ ಫೋನ್​ ಮಾಡಿದ್ದಾನೆ ಎನ್ನಲಾಗುತ್ತಿದೆ.

 

ಇದನ್ನೂ ಓದಿ: EXCLUSIVE: ಅಂಗಿ, ಬನಿಯಾನ್​ ಹರಿದು ವಿಕೃತಿ.. ಡಿಲೀಟ್​ ಆದ ರೇಣುಕಾಸ್ವಾಮಿ ಫೋಟೋ ಪತ್ತೆ  

ರೇಣುಕಾಸ್ವಾಮಿ ಪ್ರಕರಣದಲ್ಲಿ ಸೆಕ್ಯೂರಿಟಿ ಗಾರ್ಡ್ ಐ ವಿಟ್ನೇಸ್ ಆಗಿದ್ದು, ಈ ವೇಳೆ ವಿನಯ್ ಅವರು ನಮ್ಮವರೇ ಬಿಡು ಎಂದು ಸೆಕ್ಯೂರಿಟಿ ಗಾರ್ಡ್​ ಬಳಿ ಹೇಳಿದ್ದಾನಂತೆ. ನಂತರ ರೇಣುಕಾಸ್ವಾಮಿ ಫೋಟೋ ಕಳಿಸುವುದಕ್ಕೆ ವಿನಯ್ ಹೇಳಿದ್ದಾನೆ. ಆಗ ಸೆಕ್ಯೂರಿಟಿ ಫೋಟೋ ತೆಗೆದು ವಿನಯ್​​ಗೆ ಕಳಿಸಿದ್ದಾನೆ. ವಿನಯ್ ಆ ಫೋಟೋಗಳನ್ನ ನಟ ದರ್ಶನ್​ಗೆ ತೋರಿಸಿದ್ದಾನೆ. ಫೋಟೋಸ್​ ನೋಡಿದ ಬಳಿಕ ದರ್ಶನ್ ಶೆಡ್​ಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಫೋಟೋ​ ಹಿಂದಿನ ಕಥೆ ಏನು?

ಆರೋಪಿ ದರ್ಶನ್ ಶೆಡ್​ಗೆ ಬಂದು ದರ್ಶನ್​ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಕೆಳಗೆ ಬಿದ್ದವನನ್ನ ಎಳೆದು ಹೊಡೆದು ಬನಿಯನ್ ಹರಿದುಹಾಕಿದ್ದಾರೆ. ಶೆಡ್​ಗೆ ಬಂದವನೇ ರೇಣುಕಾಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಸಿನಿಮಾ ರೀತಿಯಲ್ಲಿ ಎತ್ತಿ ಬಿಸಾಡಿ ತುಳಿದಿದ್ದಾರೆ ಎನ್ನಲಾಗುತ್ತಿದೆ.ರೇಣುಕಾಸ್ವಾಮಿ ಮುಖಕ್ಕೆ ಶೂ ಕಾಲಿನಿಂದ ಒದ್ದಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: EXCLUSIVE: ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ, ಡಿಲೀಟ್ ಮಾಡಿದ್ದ ಫೋಟೋಸ್ ಪತ್ತೆ

ವಿನಯ್​​ ಫೋನ್​ನಲ್ಲಿ ಫೋಟೋ?

ಆರೋಪಿ ವಿನಯ್ ಫೋನ್​ನಲ್ಲಿ ರೇಣುಕಾಸ್ವಾಮಿ ಫೋಟೋಗಳು ಪತ್ತೆಯಾಗಿವೆ. ವಿನಯ್ ಫೋನ್​ನಲ್ಲಿ ರಿಟ್ರೀವ್ ಮಾಡಿದಾಗ ಪತ್ತೆಯಾಗಿದೆ. ದರ್ಶನ್ ಹಲ್ಲೆ ಮಾಡಿದ್ದಾಗ ಎ10 ವಿನಯ್ ಕ್ಲಿಕ್ ಮಾಡಿದ್ದಾನೆ. ಬಳಿಕ ಫೋಟೋವನ್ನ ಸಮತಾಗೂ ಕಳಿಸಿದ್ದಾನೆ ಎನ್ನಲಾಗುತ್ತಿದೆ. ಪೊಲೀಸರು ಆ ಫೋಟೋವನ್ನು ಸಹ ಪತ್ತೆಹಚ್ಚಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More