newsfirstkannada.com

ಫ್ರಿಜ್‌ನಲ್ಲಿ ಮಹಿಳೆ ಕೊ*ಲೆ ಕೇಸ್‌ಗೆ ಹೊಸ ಟ್ವಿಸ್ಟ್‌.. ನೇಪಾಳ, ನೆಲಮಂಗಲ ಆಮೇಲೆ ವೈಯಾಲಿಕಾವಲ್; ಆಗಿದ್ದೇನು?

Share :

Published September 21, 2024 at 6:18pm

Update September 21, 2024 at 6:19pm

    ಪೀಸ್‌, ಪೀಸ್ ಮಾಡಿ ಯುವತಿ ಮೃತದೇಹವನ್ನು ಫ್ರಿಜ್‌ನಲ್ಲಿ ಇಟ್ಟಿದ್ದರು

    ಮನೆಯಿಂದ ಬರುತ್ತಿದ್ದ ಕೆಟ್ಟ ವಾಸನೆಯನ್ನು ಗಮನಿಸಿದ ಅಕ್ಕ-ಪಕ್ಕದವರು

    ಮಹಿಳೆಯ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ ಫ್ರಿಜ್‌ನಲ್ಲಿಟ್ಟು ಪರಾರಿ

ಬೆಂಗಳೂರು: ಪೀಸ್‌, ಪೀಸ್ ಮಾಡಿ ಯುವತಿ ಮೃತದೇಹವನ್ನು ಫ್ರಿಜ್‌ನಲ್ಲಿ ಇಟ್ಟಿದ್ದ ದೆಹಲಿ ಶ್ರದ್ಧಾ ಕೇಸ್‌ ಮಾದರಿಯ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳೀಯ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ. ಮಹಿಳೆಯ ಮೃತದೇಹವನ್ನು 30ಕ್ಕೂ ಹೆಚ್ಚು ಪೀಸ್‌, ಪೀಸ್‌ ಮಾಡಿ ಫ್ರಿಜ್‌ನಲ್ಲಿ ಮುಚ್ಚಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯೇ ಈ ಕೊ*ಲೆ ನಡೆದಿದೆ. ಮನೆಯಿಂದ ಬರುತ್ತಿದ್ದ ವಾಸನೆಯನ್ನು ಗಮನಿಸಿ ಅಕ್ಕ-ಪಕ್ಕದವರು ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಇಂದು ಮಹಿಳೆಯ ಸಂಬಂಧಿಕರು ಬೀಗ ಹೊಡೆದು ನೋಡಿದಾಗ ಭಯಾನಕ ಕೃತ್ಯ ಬಯಲಾಗಿದೆ.

ಇದನ್ನೂ ಓದಿ: 30 ಪೀಸ್‌ ಮಾಡಿದ್ದ ಯುವತಿ ದೇಹ ಫ್ರಿಜ್‌ನಲ್ಲಿ ಪತ್ತೆ.. ಬೆಂಗಳೂರಲ್ಲಿ ದೆಹಲಿ ಮಾದರಿಯ ಭಯಾನಕ ಹ*ತ್ಯೆ! 

ವೈಯಾಲಿಕಾವಲ್‌ ಮುನೇಶ್ವರ್‌ ಬ್ಲಾಕ್‌ನಲ್ಲಿರುವ ಮನೆಯಲ್ಲಿ ಯುವತಿಯ ಬರ್ಬರ ಹ*ತ್ಯೆಯಾಗಿದೆ. ಫಸ್ಟ್‌ ಫ್ಲೋರ್‌ನಲ್ಲಿರುವ 1 BHK ಮನೆಯಲ್ಲಿ 26 ವಯಸ್ಸಿನ ಮಹಿಳೆ ವಾಸವಿದ್ದರು. ಹಂತಕರು ಯುವತಿಯ ಕೊ*ಲೆ ಮಾಡಿ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ ಫ್ರಿಜ್‌ನಲ್ಲಿಟ್ಟು ಪರಾರಿಯಾಗಿದ್ದಾರೆ.

165 ಲೀಟರ್ ಫ್ರಿಡ್ಜ್‌ನಲ್ಲಿ ಮಹಿಳೆಯ ಮೃತದೇಹದ ತುಂಡು ಇಡಲಾಗಿತ್ತು. ಮೃತ ಮಹಿಳೆಯನ್ನು ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ. ನೇಪಾಳ ಮೂಲದ ಮಹಾಲಕ್ಷ್ಮೀ ಅವರು ನೆಲಮಂಗಲ‌ದ ಹುಕುಂ ಸಿಂಗ್ ರಾಣಾ ಎಂಬುವವರನ್ನು ಮದುವೆಯಾಗಿದ್ದಾರೆ. ಆದರೆ ಮಹಾಲಕ್ಷ್ಮೀ ತನ್ನ ಪತಿ, ಮಗನನ್ನು ಬಿಟ್ಟು ವೈಯಾಲಿಕಾವಲ್‌ನ ಮನೆಯಲ್ಲಿ ವಾಸವಿದ್ದರು.

ಇದನ್ನೂ ಓದಿ: 2 ತಿಂಗಳ ಗರ್ಭಿಣಿ ಮಾಡೆಲ್​ ಮೃತದೇಹ ಫ್ರಿಡ್ಜ್​ನಲ್ಲಿ ಪತ್ತೆ.. ಕೊಲೆಗಾರನಿಗಾಗಿ ಪೊಲೀಸರ ಹುಡುಕಾಟ 

ನೇಪಾಳ – ನೆಲಮಂಗಲ – ವೈಯಾಲಿಕಾವಲ್‌! 
ಮೃತ ಮಹಾಲಕ್ಷ್ಮಿ ನೇಪಾಳದವರಾಗಿದ್ದು, ಮಹಿಳೆಯ ಗಂಡ ನೆಲಮಂಗಲದಲ್ಲಿ ಇದ್ದಾರೆ. ಮಗು ಗಂಡನ ಜೊತೆಯಲ್ಲೇ ಇದೆ. ಮದುವೆಯಾಗಿ ಹಲವು ವರ್ಷಗಳ ಬಳಿಕ ಮಹಿಳೆ ಗಂಡನಿಂದ ಬೇರೆಯಾಗಿದ್ದಾಳೆ. ಪತಿಯಿಂದ ಬೇರೆಯಾದ ಬಳಿಕ ಈಕೆ ಒಬ್ಬಳೇ ವಾಸವಿದ್ದಾಳೆ. ಮನೆಗೆ ಓರ್ವ ಯುವಕ ಡ್ರಾಪ್ ಮಾಡುವುದು ಪಿಕ್ ಅಪ್‌ ಮಾಡುವ ಕೆಲಸ ಮಾಡ್ತಿದ್ದನಂತೆ. ಒಬ್ಬಳೇ ಮನೆಯಲ್ಲಿದ್ದಾಗ ಮಹಿಳೆಯ ಬರ್ಬರ ಹ*ತ್ಯೆಯಾಗಿದೆ.

ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮೀ ಅವರು ಕಳೆದ ಸೆಪ್ಟೆಂಬರ್‌ 2ರಿಂದ ಯಾರ ಫೋನ್ ಸ್ವೀಕರಿಸುತ್ತಿರಲಿಲ್ಲ. ಇಂದು ಬಾಗಿಲು ತೆರೆದಾಗ ಫ್ರಿಡ್ಜ್‌ನಿಂದ ಹುಳಗಳು ಹೊರಗೆ ಬರುತ್ತಾ ಇತ್ತು. ಮೇಲ್ನೋಟಕ್ಕೆ ಸುಮಾರು 19 ದಿನಗಳ ಹಿಂದೆಯೇ ಮಹಿಳೆಯ ಕೊ*ಲೆ ನಡೆದಿರೋ ಶಂಕೆ‌ ವ್ಯಕ್ತವಾಗಿದೆ. ಮಹಿಳೆಯ ಮೃತದೇಹವನ್ನು 30 ರಿಂದ 35 ತುಂಡುಗಳಾಗಿ ಕತ್ತರಿಸಿದ್ದಾರೆ. ಸ್ಥಳಕ್ಕೆ FSL ಹಾಗೂ ವೈದ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರಿಜ್‌ನಲ್ಲಿ ಮಹಿಳೆ ಕೊ*ಲೆ ಕೇಸ್‌ಗೆ ಹೊಸ ಟ್ವಿಸ್ಟ್‌.. ನೇಪಾಳ, ನೆಲಮಂಗಲ ಆಮೇಲೆ ವೈಯಾಲಿಕಾವಲ್; ಆಗಿದ್ದೇನು?

https://newsfirstlive.com/wp-content/uploads/2024/09/Vyalikaval-lady-Death-1.jpg

    ಪೀಸ್‌, ಪೀಸ್ ಮಾಡಿ ಯುವತಿ ಮೃತದೇಹವನ್ನು ಫ್ರಿಜ್‌ನಲ್ಲಿ ಇಟ್ಟಿದ್ದರು

    ಮನೆಯಿಂದ ಬರುತ್ತಿದ್ದ ಕೆಟ್ಟ ವಾಸನೆಯನ್ನು ಗಮನಿಸಿದ ಅಕ್ಕ-ಪಕ್ಕದವರು

    ಮಹಿಳೆಯ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ ಫ್ರಿಜ್‌ನಲ್ಲಿಟ್ಟು ಪರಾರಿ

ಬೆಂಗಳೂರು: ಪೀಸ್‌, ಪೀಸ್ ಮಾಡಿ ಯುವತಿ ಮೃತದೇಹವನ್ನು ಫ್ರಿಜ್‌ನಲ್ಲಿ ಇಟ್ಟಿದ್ದ ದೆಹಲಿ ಶ್ರದ್ಧಾ ಕೇಸ್‌ ಮಾದರಿಯ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳೀಯ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ. ಮಹಿಳೆಯ ಮೃತದೇಹವನ್ನು 30ಕ್ಕೂ ಹೆಚ್ಚು ಪೀಸ್‌, ಪೀಸ್‌ ಮಾಡಿ ಫ್ರಿಜ್‌ನಲ್ಲಿ ಮುಚ್ಚಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯೇ ಈ ಕೊ*ಲೆ ನಡೆದಿದೆ. ಮನೆಯಿಂದ ಬರುತ್ತಿದ್ದ ವಾಸನೆಯನ್ನು ಗಮನಿಸಿ ಅಕ್ಕ-ಪಕ್ಕದವರು ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಇಂದು ಮಹಿಳೆಯ ಸಂಬಂಧಿಕರು ಬೀಗ ಹೊಡೆದು ನೋಡಿದಾಗ ಭಯಾನಕ ಕೃತ್ಯ ಬಯಲಾಗಿದೆ.

ಇದನ್ನೂ ಓದಿ: 30 ಪೀಸ್‌ ಮಾಡಿದ್ದ ಯುವತಿ ದೇಹ ಫ್ರಿಜ್‌ನಲ್ಲಿ ಪತ್ತೆ.. ಬೆಂಗಳೂರಲ್ಲಿ ದೆಹಲಿ ಮಾದರಿಯ ಭಯಾನಕ ಹ*ತ್ಯೆ! 

ವೈಯಾಲಿಕಾವಲ್‌ ಮುನೇಶ್ವರ್‌ ಬ್ಲಾಕ್‌ನಲ್ಲಿರುವ ಮನೆಯಲ್ಲಿ ಯುವತಿಯ ಬರ್ಬರ ಹ*ತ್ಯೆಯಾಗಿದೆ. ಫಸ್ಟ್‌ ಫ್ಲೋರ್‌ನಲ್ಲಿರುವ 1 BHK ಮನೆಯಲ್ಲಿ 26 ವಯಸ್ಸಿನ ಮಹಿಳೆ ವಾಸವಿದ್ದರು. ಹಂತಕರು ಯುವತಿಯ ಕೊ*ಲೆ ಮಾಡಿ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ ಫ್ರಿಜ್‌ನಲ್ಲಿಟ್ಟು ಪರಾರಿಯಾಗಿದ್ದಾರೆ.

165 ಲೀಟರ್ ಫ್ರಿಡ್ಜ್‌ನಲ್ಲಿ ಮಹಿಳೆಯ ಮೃತದೇಹದ ತುಂಡು ಇಡಲಾಗಿತ್ತು. ಮೃತ ಮಹಿಳೆಯನ್ನು ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ. ನೇಪಾಳ ಮೂಲದ ಮಹಾಲಕ್ಷ್ಮೀ ಅವರು ನೆಲಮಂಗಲ‌ದ ಹುಕುಂ ಸಿಂಗ್ ರಾಣಾ ಎಂಬುವವರನ್ನು ಮದುವೆಯಾಗಿದ್ದಾರೆ. ಆದರೆ ಮಹಾಲಕ್ಷ್ಮೀ ತನ್ನ ಪತಿ, ಮಗನನ್ನು ಬಿಟ್ಟು ವೈಯಾಲಿಕಾವಲ್‌ನ ಮನೆಯಲ್ಲಿ ವಾಸವಿದ್ದರು.

ಇದನ್ನೂ ಓದಿ: 2 ತಿಂಗಳ ಗರ್ಭಿಣಿ ಮಾಡೆಲ್​ ಮೃತದೇಹ ಫ್ರಿಡ್ಜ್​ನಲ್ಲಿ ಪತ್ತೆ.. ಕೊಲೆಗಾರನಿಗಾಗಿ ಪೊಲೀಸರ ಹುಡುಕಾಟ 

ನೇಪಾಳ – ನೆಲಮಂಗಲ – ವೈಯಾಲಿಕಾವಲ್‌! 
ಮೃತ ಮಹಾಲಕ್ಷ್ಮಿ ನೇಪಾಳದವರಾಗಿದ್ದು, ಮಹಿಳೆಯ ಗಂಡ ನೆಲಮಂಗಲದಲ್ಲಿ ಇದ್ದಾರೆ. ಮಗು ಗಂಡನ ಜೊತೆಯಲ್ಲೇ ಇದೆ. ಮದುವೆಯಾಗಿ ಹಲವು ವರ್ಷಗಳ ಬಳಿಕ ಮಹಿಳೆ ಗಂಡನಿಂದ ಬೇರೆಯಾಗಿದ್ದಾಳೆ. ಪತಿಯಿಂದ ಬೇರೆಯಾದ ಬಳಿಕ ಈಕೆ ಒಬ್ಬಳೇ ವಾಸವಿದ್ದಾಳೆ. ಮನೆಗೆ ಓರ್ವ ಯುವಕ ಡ್ರಾಪ್ ಮಾಡುವುದು ಪಿಕ್ ಅಪ್‌ ಮಾಡುವ ಕೆಲಸ ಮಾಡ್ತಿದ್ದನಂತೆ. ಒಬ್ಬಳೇ ಮನೆಯಲ್ಲಿದ್ದಾಗ ಮಹಿಳೆಯ ಬರ್ಬರ ಹ*ತ್ಯೆಯಾಗಿದೆ.

ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮೀ ಅವರು ಕಳೆದ ಸೆಪ್ಟೆಂಬರ್‌ 2ರಿಂದ ಯಾರ ಫೋನ್ ಸ್ವೀಕರಿಸುತ್ತಿರಲಿಲ್ಲ. ಇಂದು ಬಾಗಿಲು ತೆರೆದಾಗ ಫ್ರಿಡ್ಜ್‌ನಿಂದ ಹುಳಗಳು ಹೊರಗೆ ಬರುತ್ತಾ ಇತ್ತು. ಮೇಲ್ನೋಟಕ್ಕೆ ಸುಮಾರು 19 ದಿನಗಳ ಹಿಂದೆಯೇ ಮಹಿಳೆಯ ಕೊ*ಲೆ ನಡೆದಿರೋ ಶಂಕೆ‌ ವ್ಯಕ್ತವಾಗಿದೆ. ಮಹಿಳೆಯ ಮೃತದೇಹವನ್ನು 30 ರಿಂದ 35 ತುಂಡುಗಳಾಗಿ ಕತ್ತರಿಸಿದ್ದಾರೆ. ಸ್ಥಳಕ್ಕೆ FSL ಹಾಗೂ ವೈದ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More