newsfirstkannada.com

KL ರಾಹುಲ್​​ 8 ವರ್ಷದಿಂದ ಸೆಂಚುರಿ ಸಿಡಿಸಿಲ್ವಾ..? ಕಾನ್ಪುರದ​ ಟೆಸ್ಟ್ ಮೇಲೆ ಕನ್ನಡಿಗನ ಭವಿಷ್ಯ!

Share :

Published September 25, 2024 at 10:37am

    ಹಸಿದ ಹುಲಿಯಂತೆ ಚಾನ್ಸ್​​ಗಾಗಿ ಕಾಯ್ತಿರೋ ಸರ್ಫರಾಜ್​ ಖಾನ್

    ಕಾನ್ಪುರದಲ್ಲಿ ಫ್ಲಾಪ್​ ಆದ್ರೆ ಕಿವೀಸ್​​ ಸರಣಿಯಿಂದ ರಾಹುಲ್ ಡ್ರಾಪ್​?

    2ನೇ ಟೆಸ್ಟ್, ಕನ್ನಡಿಗ KL​ ರಾಹುಲ್​ ಪಾಲಿಗೆ ಅಗ್ನಿಪರೀಕ್ಷೆಯ ಕಣ

ಇಂಡೋ-ಬಾಂಗ್ಲಾ 2ನೇ ಟೆಸ್ಟ್​ ಫೈಟ್​​ ಕನ್ನಡಿಗ ಕೆ.ಎಲ್​ ರಾಹುಲ್​ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಕಾನ್ಪುರದಲ್ಲಿ ಕನ್ನಡಿಗನಿಗೆ ಕೊನೆ ಚಾನ್ಸ್​ ಸಿಗೋದಂತೂ ಕನ್​ಫರ್ಮ್​. ಆದ್ರೆ, ಚಾನ್ಸ್​​ ಡು ಆರ್​​ ಡೈ. ಕಾನ್ಪುರದ ರಿಯಲ್​ ಟೆಸ್ಟ್​ನಲ್ಲಿ ಪಾಸಾದ್ರೆ ಓಕೆ. ಫೇಲಾದ್ರೆ, ಟೆಸ್ಟ್​ ಕ್ರಿಕೆಟ್​ನ ಭವಿಷ್ಯವೇ ಅತಂತ್ರಕ್ಕೆ ಸಿಲುಕಲಿದೆ. ರಾಹುಲ್​ ಕರಿಯರ್​ ಸಂಕಷ್ಟಕ್ಕೆ ಸಿಲುಕಿರೋದು ಯಾಕೆ.?

ಇಂಡೋ – ಬಾಂಗ್ಲಾ 2ನೇ ಟೆಸ್ಟ್​ ಫೈಟ್​ಗೆ ಕೌಂಟ್​​ಡೌನ್​ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್​ ಭೇಟೆಯಾಡಿ ದಿಗ್ವಿಜಯ ಸಾಧಿಸಿರೋ ಟೀಮ್​ ಇಂಡಿಯಾ, 2ನೇ ಟೆಸ್ಟ್​ನಲ್ಲೂ ಗೆದ್ದು ಬೀಗಲು ಸಜ್ಜಾಗಿದೆ. ಸರಣಿ ಕ್ಲೀನ್​ಸ್ವೀಪ್​ ಮೇಲೆ ಕಣ್ಣಿಟ್ಟಿರೋ ರೋಹಿತ್​ ಪಡೆ, ಕಾನ್ಪುರದ ಗ್ರೀನ್​ಪಾರ್ಕ್​ ಸ್ಟೇಡಿಯಂನಲ್ಲಿ ಇಂದಿನಿಂದ ಸಮರಾಭ್ಯಾಸ ನಡೆಸಲಿದೆ.

ಇದನ್ನೂ ಓದಿ: ಬಾಂಗ್ಲಾ ಆಟಗಾರರನ್ನ ಫೀಲ್ಡಿಂಗ್ ನಿಲ್ಲಿಸಿದ ರಿಷಬ್​ ಪಂತ್.. ಕಾಮೆಂಟರಿ ಸೇರಿ ಎಲ್ಲರಿಗೂ ಶಾಕ್!

ಕಾನ್ಪುರದಲ್ಲಿ ಕನ್ನಡಿಗನಿಗೆ ರಿಯಲ್​ ‘ಟೆಸ್ಟ್’.!​​

ಚೆಪಾಕ್​ ಟೆಸ್ಟ್​ ಗೆದ್ದಿರೋ ಟೀಮ್​ ಇಂಡಿಯಾ, ಕಾನ್ಪುರದಲ್ಲೂ ಗೆಲ್ಲೋ ಅಪಾರವಾದ ಆತ್ಮವಿಶ್ವಾಸದಲ್ಲಿದೆ. ಆದ್ರೆ, ತಂಡದ ಬ್ಯಾಟ್ಸ್​ಮನ್​, ಕನ್ನಡಿಗ ಕೆ.ಎಲ್​ ರಾಹುಲ್​ ಆತ್ಮವಿಶ್ವಾಸ ಕುಸಿದುಹೋಗಿದೆ. ವೈಫಲ್ಯದ ಸುಳಿಗೆ ಸಿಲುಕಿರೋ ರಾಹುಲ್​ ಮುಂದೆ, ಸ್ಥಾನ ಉಳಿಸಿಕೊಳ್ಳೋ ಸವಾಲು ಎದುರಾಗಿದೆ. ಕಾನ್ಪುರದ ರಿಯಲ್​ ಟೆಸ್ಟ್​​ ಗೆದ್ರೆ ಮಾತ್ರ ರಾಹುಲ್​ ಸ್ಥಾನ ಸೇಫ್​. ಇಲ್ಲಾಂದ್ರೆ, ತಂಡದ ಡೋರ್​​ ಕ್ಲೋಸ್​​​ ಆಗೋ ಸಾಧ್ಯತೆ ದಟ್ಟವಾಗಿದೆ.

ಕೆ.ಎಲ್​​ ರಾಹುಲ್​ ಬೆನ್ನುಬಿದ್ದಿದ್ಯಾ ದುರಾದೃಷ್ಟ.?

ಚೆಪಾಕ್​ ಟೆಸ್ಟ್​ ಪಂದ್ಯದಲ್ಲಿ ಪೈಪೋಟಿಯ ನಡುವೆ ರಾಹುಲ್​ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ರು. ಆದ್ರೆ, ಸಿಕ್ಕ ಚಿನ್ನದಂತಾ ಅವಕಾಶವನ್ನ ಕೈ ಚೆಲ್ಲಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಕಣಕ್ಕಿಳಿದ ರಾಹುಲ್​, ತಾವೇ ಒತ್ತಡಕ್ಕೆ ಒಳಗಾದಂತೆ ಕಂಡ್ರು. ಆತ್ಮವಿಶ್ವಾಸವೇ ಇಲ್ಲದ ಆಟವಾಡಿದ ರಾಹುಲ್, 52 ಎಸೆತ ಎದುರಿಸಿ 16 ರನ್​ಗಳಿಸಿ ನಿರ್ಗಮಿಸಿದ್ರು.

ಮೊದಲ ಇನ್ನಿಂಗ್ಸ್​ನಲ್ಲಿ ಫ್ಲಾಪ್​ ಆದ ರಾಹುಲ್​, 2ನೇ ಇನ್ನಿಂಗ್ಸ್​​ನಲ್ಲಿ ಉತ್ತಮ ಪರ್ಫಾಮೆನ್ಸ್​ ನೀಡೋ ಲೆಕ್ಕಾಚಾರದಲ್ಲಿದ್ರು. 4 ಬೌಂಡರಿಗಳನ್ನ ಬಾರಿಸಿ ಕಾನ್ಫಿಡೆಂಟ್​​ ಆರಂಭ ಪಡೆದುಕೊಂಡ್ರು. ಆದ್ರೆ, ದುರಾದೃಷ್ಟವೋ, ಏನೋ ರಾಹುಲ್​ ರನ್​ಗಳಿಸಲು ಶುರು ಮಾಡಿದ ಬೆನ್ನಲ್ಲೇ ರೋಹಿತ್​ ಶರ್ಮಾ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿ ಬಿಟ್ರು.

8 ವರ್ಷ, 24 ಇನ್ನಿಂಗ್ಸ್​, ಭಾರತದಲ್ಲಿ ಟೆಸ್ಟ್​​ ಶತಕದ ಬರ

2016ರ ಡಿಸೆಂಬರ್​ನಲ್ಲಿ ನಡೆದ ಚೆನ್ನೈ ಟೆಸ್ಟ್​ನಲ್ಲಿ ಕನ್ನಡಿಗನ ಬ್ಯಾಟ್​​ ಸಖತ್​ ಸೌಂಡ್​ ಮಾಡಿತ್ತು. ಆಂಗ್ಲರ ದಾಳಿಯನ್ನ ದಿಟ್ಟವಾಗಿ ಎದುರಿಸಿದ್ದ ರಾಹುಲ್​​, ಸೆಂಚುರಿ ಸಿಡಿಸಿ ಮಿಂಚಿದ್ರು. 199 ರನ್​ಗಳ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು..

ಚೆನ್ನೈ ಟೆಸ್ಟ್​ನ ಆ ಶತಕವೇ ಕೊನೆ. ಅಂದಿನಿಂದ ಈವರೆಗೆ ಭಾರತದಲ್ಲಿ ರಾಹುಲ್​ ಟೆಸ್ಟ್​​ ಶತಕವನ್ನೇ ಸಿಡಿಸಿಲ್ಲ. 8 ವರ್ಷಗಳಿಂದ ತವರಿನಲ್ಲಿ ಶತಕದ ಬರವನ್ನ ಎದುರಿಸ್ತಾ ಇದ್ದಾರೆ. ಆ ಬಳಿಕ 23 ಇನ್ನಿಂಗ್ಸ್​​ಗಳನ್ನಾಡಿ 9 ಬಾರಿ ಹಾಫ್​ ಸೆಂಚುರಿ ಗಡಿ ದಾಟಿದ್ದಾರೆ. ಆದ್ರೆ, ಶತಕ ಮರೀಚಿಕೆಯಾಗಿದೆ.

ಇದನ್ನೂ ಓದಿ: Tirupati laddu: ತಿರುಪತಿ ಲಡ್ಡುಗಳಿಗೆ ನಂದಿನಿ ತುಪ್ಪ ಬೇಡ ಎನ್ನಲು ಈ ಕೊಬ್ಬಿನ ಮಾಫಿಯಾ ಕಾರಣವಾಗಿತ್ತಾ..?

ಕೆ.ಎಲ್​​ ರಾಹುಲ್​​ ಟೆಸ್ಟ್​ ಸ್ಥಾನಕ್ಕೂ ಬಂದಿದೆ ಕುತ್ತು.!

ಈಗಾಗಲೇ ಟಿ20 ತಂಡದಿಂದ ಕಡೆಗಣನೆಗೆ ಒಳಗಾಗಿರೋ ರಾಹುಲ್,​ ಟೆಸ್ಟ್​ ಸ್ಥಾನವೂ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇನ್​​ಕನ್ಸಿಸ್ಟೆಂಟ್​ ಆಟ ತೀವ್ರ ಟೀಕೆಗೆ ಗುರಿಯಾಗುವಂತೆ ಮಾಡಿದೆ. ಈ ಹಿಂದಿನ ಇಂಗ್ಲೆಂಡ್​​ ಸರಣಿಯಲ್ಲಿ ಇಂಪ್ರೆಸ್ಸಿವ್​ ಪ್ರದರ್ಶನ ನೀಡಿದ ಸರ್ಫರಾಜ್​ ಖಾನ್​ಗೆ​ ಸ್ಥಾನ ನೀಡುವಂತೆ ಬಲವಾದ ಕೂಗುಗಳು ಕೇಳಿಬರ್ತಿವೆ. ಹೀಗಾಗಿ ಕಾನ್ಪುರ ಟೆಸ್ಟ್​​ ರಾಹುಲ್​ ಪಾಲಿಗೆ ಡು ಆರ್​​ ಡೈ ಫೈಟ್​ ಆಗಿದೆ. ಈ ಟೆಸ್ಟ್​ನಲ್ಲಿ ಫೇಲ್​ ಆದ್ರೆ ಮಾತ್ರ ಮುಂಬರೋ ಕಿವೀಸ್​ ಸರಣಿಯಲ್ಲಿ ಸ್ಥಾನ ಸಿಗೋದು ಅನುಮಾನವಾಗಲಿದೆ.

ಕಾನ್ಪುರ ಟೆಸ್ಟ್​ ಪಂದ್ಯ ಕನ್ನಡಿಗ ಕೆ.ಎಲ್​ ರಾಹುಲ್​ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ. ಈ ರಿಯಲ್​ ಟೆಸ್ಟ್​ನಲ್ಲಿ ಕನ್ನಡಿಗ ಗೆಲ್ಲಲಿ ಅನ್ನೊದು ಕರ್ನಾಟಕದ ಕ್ರಿಕೆಟ್​ ಅಭಿಮಾನಿಗಳ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್​​ 8 ವರ್ಷದಿಂದ ಸೆಂಚುರಿ ಸಿಡಿಸಿಲ್ವಾ..? ಕಾನ್ಪುರದ​ ಟೆಸ್ಟ್ ಮೇಲೆ ಕನ್ನಡಿಗನ ಭವಿಷ್ಯ!

https://newsfirstlive.com/wp-content/uploads/2024/01/KL_Rahul_Test.jpg

    ಹಸಿದ ಹುಲಿಯಂತೆ ಚಾನ್ಸ್​​ಗಾಗಿ ಕಾಯ್ತಿರೋ ಸರ್ಫರಾಜ್​ ಖಾನ್

    ಕಾನ್ಪುರದಲ್ಲಿ ಫ್ಲಾಪ್​ ಆದ್ರೆ ಕಿವೀಸ್​​ ಸರಣಿಯಿಂದ ರಾಹುಲ್ ಡ್ರಾಪ್​?

    2ನೇ ಟೆಸ್ಟ್, ಕನ್ನಡಿಗ KL​ ರಾಹುಲ್​ ಪಾಲಿಗೆ ಅಗ್ನಿಪರೀಕ್ಷೆಯ ಕಣ

ಇಂಡೋ-ಬಾಂಗ್ಲಾ 2ನೇ ಟೆಸ್ಟ್​ ಫೈಟ್​​ ಕನ್ನಡಿಗ ಕೆ.ಎಲ್​ ರಾಹುಲ್​ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಕಾನ್ಪುರದಲ್ಲಿ ಕನ್ನಡಿಗನಿಗೆ ಕೊನೆ ಚಾನ್ಸ್​ ಸಿಗೋದಂತೂ ಕನ್​ಫರ್ಮ್​. ಆದ್ರೆ, ಚಾನ್ಸ್​​ ಡು ಆರ್​​ ಡೈ. ಕಾನ್ಪುರದ ರಿಯಲ್​ ಟೆಸ್ಟ್​ನಲ್ಲಿ ಪಾಸಾದ್ರೆ ಓಕೆ. ಫೇಲಾದ್ರೆ, ಟೆಸ್ಟ್​ ಕ್ರಿಕೆಟ್​ನ ಭವಿಷ್ಯವೇ ಅತಂತ್ರಕ್ಕೆ ಸಿಲುಕಲಿದೆ. ರಾಹುಲ್​ ಕರಿಯರ್​ ಸಂಕಷ್ಟಕ್ಕೆ ಸಿಲುಕಿರೋದು ಯಾಕೆ.?

ಇಂಡೋ – ಬಾಂಗ್ಲಾ 2ನೇ ಟೆಸ್ಟ್​ ಫೈಟ್​ಗೆ ಕೌಂಟ್​​ಡೌನ್​ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್​ ಭೇಟೆಯಾಡಿ ದಿಗ್ವಿಜಯ ಸಾಧಿಸಿರೋ ಟೀಮ್​ ಇಂಡಿಯಾ, 2ನೇ ಟೆಸ್ಟ್​ನಲ್ಲೂ ಗೆದ್ದು ಬೀಗಲು ಸಜ್ಜಾಗಿದೆ. ಸರಣಿ ಕ್ಲೀನ್​ಸ್ವೀಪ್​ ಮೇಲೆ ಕಣ್ಣಿಟ್ಟಿರೋ ರೋಹಿತ್​ ಪಡೆ, ಕಾನ್ಪುರದ ಗ್ರೀನ್​ಪಾರ್ಕ್​ ಸ್ಟೇಡಿಯಂನಲ್ಲಿ ಇಂದಿನಿಂದ ಸಮರಾಭ್ಯಾಸ ನಡೆಸಲಿದೆ.

ಇದನ್ನೂ ಓದಿ: ಬಾಂಗ್ಲಾ ಆಟಗಾರರನ್ನ ಫೀಲ್ಡಿಂಗ್ ನಿಲ್ಲಿಸಿದ ರಿಷಬ್​ ಪಂತ್.. ಕಾಮೆಂಟರಿ ಸೇರಿ ಎಲ್ಲರಿಗೂ ಶಾಕ್!

ಕಾನ್ಪುರದಲ್ಲಿ ಕನ್ನಡಿಗನಿಗೆ ರಿಯಲ್​ ‘ಟೆಸ್ಟ್’.!​​

ಚೆಪಾಕ್​ ಟೆಸ್ಟ್​ ಗೆದ್ದಿರೋ ಟೀಮ್​ ಇಂಡಿಯಾ, ಕಾನ್ಪುರದಲ್ಲೂ ಗೆಲ್ಲೋ ಅಪಾರವಾದ ಆತ್ಮವಿಶ್ವಾಸದಲ್ಲಿದೆ. ಆದ್ರೆ, ತಂಡದ ಬ್ಯಾಟ್ಸ್​ಮನ್​, ಕನ್ನಡಿಗ ಕೆ.ಎಲ್​ ರಾಹುಲ್​ ಆತ್ಮವಿಶ್ವಾಸ ಕುಸಿದುಹೋಗಿದೆ. ವೈಫಲ್ಯದ ಸುಳಿಗೆ ಸಿಲುಕಿರೋ ರಾಹುಲ್​ ಮುಂದೆ, ಸ್ಥಾನ ಉಳಿಸಿಕೊಳ್ಳೋ ಸವಾಲು ಎದುರಾಗಿದೆ. ಕಾನ್ಪುರದ ರಿಯಲ್​ ಟೆಸ್ಟ್​​ ಗೆದ್ರೆ ಮಾತ್ರ ರಾಹುಲ್​ ಸ್ಥಾನ ಸೇಫ್​. ಇಲ್ಲಾಂದ್ರೆ, ತಂಡದ ಡೋರ್​​ ಕ್ಲೋಸ್​​​ ಆಗೋ ಸಾಧ್ಯತೆ ದಟ್ಟವಾಗಿದೆ.

ಕೆ.ಎಲ್​​ ರಾಹುಲ್​ ಬೆನ್ನುಬಿದ್ದಿದ್ಯಾ ದುರಾದೃಷ್ಟ.?

ಚೆಪಾಕ್​ ಟೆಸ್ಟ್​ ಪಂದ್ಯದಲ್ಲಿ ಪೈಪೋಟಿಯ ನಡುವೆ ರಾಹುಲ್​ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ರು. ಆದ್ರೆ, ಸಿಕ್ಕ ಚಿನ್ನದಂತಾ ಅವಕಾಶವನ್ನ ಕೈ ಚೆಲ್ಲಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಕಣಕ್ಕಿಳಿದ ರಾಹುಲ್​, ತಾವೇ ಒತ್ತಡಕ್ಕೆ ಒಳಗಾದಂತೆ ಕಂಡ್ರು. ಆತ್ಮವಿಶ್ವಾಸವೇ ಇಲ್ಲದ ಆಟವಾಡಿದ ರಾಹುಲ್, 52 ಎಸೆತ ಎದುರಿಸಿ 16 ರನ್​ಗಳಿಸಿ ನಿರ್ಗಮಿಸಿದ್ರು.

ಮೊದಲ ಇನ್ನಿಂಗ್ಸ್​ನಲ್ಲಿ ಫ್ಲಾಪ್​ ಆದ ರಾಹುಲ್​, 2ನೇ ಇನ್ನಿಂಗ್ಸ್​​ನಲ್ಲಿ ಉತ್ತಮ ಪರ್ಫಾಮೆನ್ಸ್​ ನೀಡೋ ಲೆಕ್ಕಾಚಾರದಲ್ಲಿದ್ರು. 4 ಬೌಂಡರಿಗಳನ್ನ ಬಾರಿಸಿ ಕಾನ್ಫಿಡೆಂಟ್​​ ಆರಂಭ ಪಡೆದುಕೊಂಡ್ರು. ಆದ್ರೆ, ದುರಾದೃಷ್ಟವೋ, ಏನೋ ರಾಹುಲ್​ ರನ್​ಗಳಿಸಲು ಶುರು ಮಾಡಿದ ಬೆನ್ನಲ್ಲೇ ರೋಹಿತ್​ ಶರ್ಮಾ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿ ಬಿಟ್ರು.

8 ವರ್ಷ, 24 ಇನ್ನಿಂಗ್ಸ್​, ಭಾರತದಲ್ಲಿ ಟೆಸ್ಟ್​​ ಶತಕದ ಬರ

2016ರ ಡಿಸೆಂಬರ್​ನಲ್ಲಿ ನಡೆದ ಚೆನ್ನೈ ಟೆಸ್ಟ್​ನಲ್ಲಿ ಕನ್ನಡಿಗನ ಬ್ಯಾಟ್​​ ಸಖತ್​ ಸೌಂಡ್​ ಮಾಡಿತ್ತು. ಆಂಗ್ಲರ ದಾಳಿಯನ್ನ ದಿಟ್ಟವಾಗಿ ಎದುರಿಸಿದ್ದ ರಾಹುಲ್​​, ಸೆಂಚುರಿ ಸಿಡಿಸಿ ಮಿಂಚಿದ್ರು. 199 ರನ್​ಗಳ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು..

ಚೆನ್ನೈ ಟೆಸ್ಟ್​ನ ಆ ಶತಕವೇ ಕೊನೆ. ಅಂದಿನಿಂದ ಈವರೆಗೆ ಭಾರತದಲ್ಲಿ ರಾಹುಲ್​ ಟೆಸ್ಟ್​​ ಶತಕವನ್ನೇ ಸಿಡಿಸಿಲ್ಲ. 8 ವರ್ಷಗಳಿಂದ ತವರಿನಲ್ಲಿ ಶತಕದ ಬರವನ್ನ ಎದುರಿಸ್ತಾ ಇದ್ದಾರೆ. ಆ ಬಳಿಕ 23 ಇನ್ನಿಂಗ್ಸ್​​ಗಳನ್ನಾಡಿ 9 ಬಾರಿ ಹಾಫ್​ ಸೆಂಚುರಿ ಗಡಿ ದಾಟಿದ್ದಾರೆ. ಆದ್ರೆ, ಶತಕ ಮರೀಚಿಕೆಯಾಗಿದೆ.

ಇದನ್ನೂ ಓದಿ: Tirupati laddu: ತಿರುಪತಿ ಲಡ್ಡುಗಳಿಗೆ ನಂದಿನಿ ತುಪ್ಪ ಬೇಡ ಎನ್ನಲು ಈ ಕೊಬ್ಬಿನ ಮಾಫಿಯಾ ಕಾರಣವಾಗಿತ್ತಾ..?

ಕೆ.ಎಲ್​​ ರಾಹುಲ್​​ ಟೆಸ್ಟ್​ ಸ್ಥಾನಕ್ಕೂ ಬಂದಿದೆ ಕುತ್ತು.!

ಈಗಾಗಲೇ ಟಿ20 ತಂಡದಿಂದ ಕಡೆಗಣನೆಗೆ ಒಳಗಾಗಿರೋ ರಾಹುಲ್,​ ಟೆಸ್ಟ್​ ಸ್ಥಾನವೂ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇನ್​​ಕನ್ಸಿಸ್ಟೆಂಟ್​ ಆಟ ತೀವ್ರ ಟೀಕೆಗೆ ಗುರಿಯಾಗುವಂತೆ ಮಾಡಿದೆ. ಈ ಹಿಂದಿನ ಇಂಗ್ಲೆಂಡ್​​ ಸರಣಿಯಲ್ಲಿ ಇಂಪ್ರೆಸ್ಸಿವ್​ ಪ್ರದರ್ಶನ ನೀಡಿದ ಸರ್ಫರಾಜ್​ ಖಾನ್​ಗೆ​ ಸ್ಥಾನ ನೀಡುವಂತೆ ಬಲವಾದ ಕೂಗುಗಳು ಕೇಳಿಬರ್ತಿವೆ. ಹೀಗಾಗಿ ಕಾನ್ಪುರ ಟೆಸ್ಟ್​​ ರಾಹುಲ್​ ಪಾಲಿಗೆ ಡು ಆರ್​​ ಡೈ ಫೈಟ್​ ಆಗಿದೆ. ಈ ಟೆಸ್ಟ್​ನಲ್ಲಿ ಫೇಲ್​ ಆದ್ರೆ ಮಾತ್ರ ಮುಂಬರೋ ಕಿವೀಸ್​ ಸರಣಿಯಲ್ಲಿ ಸ್ಥಾನ ಸಿಗೋದು ಅನುಮಾನವಾಗಲಿದೆ.

ಕಾನ್ಪುರ ಟೆಸ್ಟ್​ ಪಂದ್ಯ ಕನ್ನಡಿಗ ಕೆ.ಎಲ್​ ರಾಹುಲ್​ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ. ಈ ರಿಯಲ್​ ಟೆಸ್ಟ್​ನಲ್ಲಿ ಕನ್ನಡಿಗ ಗೆಲ್ಲಲಿ ಅನ್ನೊದು ಕರ್ನಾಟಕದ ಕ್ರಿಕೆಟ್​ ಅಭಿಮಾನಿಗಳ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More