newsfirstkannada.com

‘ಚಂದನ್, ನಿವೇದಿತಾಗೂ ನನಗೂ ಇನ್ಮುಂದೆ ಯಾವುದೇ ಸಂಬಂಧವಿಲ್ಲ’- ನಟ ಪ್ರಥಮ್ ಹೀಗೆ ಹೇಳಿದ್ದೇಕೆ?

Share :

Published June 9, 2024 at 8:22pm

Update June 9, 2024 at 8:29pm

    ಚಂದನ್​, ನಿವೇದಿತಾ ಡಿವೋರ್ಸ್ ಸುದ್ದಿ ಸುಳ್ಳಾಗಲಿ ಎಂದ್ರು ಫ್ಯಾನ್ಸ್​

    ಕರ್ನಾಟಕದ ಕ್ಯೂಟ್​ ಕಪಲ್​ ಆಗಿದ್ದ ಚಂದನ್​ ಮತ್ತು ನಿವೇದಿತಾ ಗೌಡ

    ನನಗೂ ಇದಕ್ಕೂ ಸಂಬಂಧವಿಲ್ಲ, ನಾನು ಯಾವ ಸಂಧಾನಕ್ಕೂ ಹೋಗಲ್ಲ!

ಕರ್ನಾಟಕದ ಕ್ಯೂಟ್​ ಕಪಲ್​ ಆಗಿದ್ದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್​ ವಿಚಾರ ಕೇಳಿ ಅಭಿಮಾನಿಗಳಿಗೆ ಶಾಕ್​ ಆಗಿದ್ದರು. ಇದು ಸುದ್ದಿ ನಿಜಾನಾ ಅಥವಾ ಸುಳ್ಳಾ ಅಂತ ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದರು. ಈ ಸುದ್ದಿ ಎಲ್ಲಾ ಕಡೆ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳ ಜೊತೆಗೆ ಸ್ಯಾಂಡಲ್​ವುಡ್​ ನಟ ನಟಿಯರು ಫುಲ್​ ಶಾಕ್​ ಆಗಿದ್ದರು. ಇದಾದ ಬಳಿಕ ಡಿವೋರ್ಸ್ ವಿಚಾರದ ಬಗ್ಗೆ​ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ನೀಡಿದ್ರು.

ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್‌.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?

ಇನ್ನು, ಮೊನ್ನೆ ಮೊನ್ನೆಯಷ್ಟೇ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಇಬ್ಬರು ಏಕೆ ದಿಢೀರ್​ ನಿರ್ಧಾರಕ್ಕೆ ಬಂದ್ರು ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಜೊತೆಗೆ ಒಳ್ಳೆ ಹುಡುಗ ಪ್ರಥಮ್​ ಅವರು ಕೂಡ ಇಬ್ಬರನ್ನೂ ಕರೆಸಿ ಸಂಧಾನ ಮಾಡಲು ಮುಂದಾಗಿದ್ದರು. ಇಬ್ಬರು ಮತ್ತೆ ಒಂದಾಗಬೇಕು. ನಾನು ಚಂದನ್ ಶೆಟ್ಟಿಗೆ ಮಿಲನಾ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಕಳುಹಿಸುತ್ತೇನೆ. ಅದನ್ನು ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ ಎಂಬ ಆಶಯವನ್ನು ಪ್ರಥಮ್ ವ್ಯಕ್ತಪಡಿಸಿದ್ದರು. ಸಿನಿಮಾ ಇಂಟಸ್ಟ್ರಿಯಲ್ಲಿ ನಟ ಧ್ರುವ ಸರ್ಜಾ ಅವರ ಮಾತನ್ನ ಚಂದನ್ ಕೇಳ್ತಾರೆ.

ಇದನ್ನೂ ಓದಿ: ಬಿಯರ್​ ಖರೀದಿಸುವಾಗ ಬಾರ್​ನಲ್ಲೇ ತಗ್ಲಾಕೊಂಡ ಮಗ.. ಬೆಪ್ಪಾದ ಅಪ್ಪ ಮಾಡಿದ್ದೇನು ಗೊತ್ತಾ?

ಹೀಗಾಗಿ, ನಿವೇದಿತಾ ಹಾಗೂ ಚಂದನ್ ವಿಚ್ಛೇದನ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಲಿ. ಚಂದನ್‌‌ಗೆ ಒಳ್ಳೆದಾಗಲಿ ಎಂದು ಧ್ರುವ ಪೊಗರು ಸಿನೆಮಾದಲ್ಲಿ ಚಾನ್ಸ್ ಕೊಟ್ಟರು. ಪ್ರೀತಿ ಇದ್ದರೆ ಚಂದನ್ ಧ್ರುವ ಮಾತನ್ನ ಕೇಳ್ತಾರೆ ಅಂತ ಹೇಳಿದ್ರು. ಆದರೆ ಏಕಾಏಕಿ ಅವರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯ್ತು. ಆ ವಿಡಿಯೋ ವಿರುದ್ಧ ಕೆಲವರು ಭಾರಿ ಆಕ್ರೋಶ ಹೊರ ಹಾಕಿದ್ದರು. ಕಂಡವರ ಮನೆ ವಿಚಾರ ನಿಮಗ್ಯಾಕೆ, ಅವರ ಸಂಸಾರದಲ್ಲಿ ನೀವೇಕೆ ಮೂಗು ತೂರಿಸುತ್ತಿದ್ದಾರೆ ಅಂತಾ ಸಾಕಷ್ಟು ಜನರು ಕಾಮೆಂಟ್​ ಮಾಡಿದ್ದರು. ಇದರಿಂದ ಬೇಸರಗೊಂಡ ನಟ ಪ್ರಥಮ್​ ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಚಂದನ್, ನಿವೇದಿತಾಗೂ ನನಗೂ ಇನ್ಮುಂದೆ ಯಾವುದೇ ಸಂಬಂಧವಿಲ್ಲ’- ನಟ ಪ್ರಥಮ್ ಹೀಗೆ ಹೇಳಿದ್ದೇಕೆ?

https://newsfirstlive.com/wp-content/uploads/2024/06/nivi7.jpg

    ಚಂದನ್​, ನಿವೇದಿತಾ ಡಿವೋರ್ಸ್ ಸುದ್ದಿ ಸುಳ್ಳಾಗಲಿ ಎಂದ್ರು ಫ್ಯಾನ್ಸ್​

    ಕರ್ನಾಟಕದ ಕ್ಯೂಟ್​ ಕಪಲ್​ ಆಗಿದ್ದ ಚಂದನ್​ ಮತ್ತು ನಿವೇದಿತಾ ಗೌಡ

    ನನಗೂ ಇದಕ್ಕೂ ಸಂಬಂಧವಿಲ್ಲ, ನಾನು ಯಾವ ಸಂಧಾನಕ್ಕೂ ಹೋಗಲ್ಲ!

ಕರ್ನಾಟಕದ ಕ್ಯೂಟ್​ ಕಪಲ್​ ಆಗಿದ್ದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್​ ವಿಚಾರ ಕೇಳಿ ಅಭಿಮಾನಿಗಳಿಗೆ ಶಾಕ್​ ಆಗಿದ್ದರು. ಇದು ಸುದ್ದಿ ನಿಜಾನಾ ಅಥವಾ ಸುಳ್ಳಾ ಅಂತ ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದರು. ಈ ಸುದ್ದಿ ಎಲ್ಲಾ ಕಡೆ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳ ಜೊತೆಗೆ ಸ್ಯಾಂಡಲ್​ವುಡ್​ ನಟ ನಟಿಯರು ಫುಲ್​ ಶಾಕ್​ ಆಗಿದ್ದರು. ಇದಾದ ಬಳಿಕ ಡಿವೋರ್ಸ್ ವಿಚಾರದ ಬಗ್ಗೆ​ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ನೀಡಿದ್ರು.

ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್‌.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?

ಇನ್ನು, ಮೊನ್ನೆ ಮೊನ್ನೆಯಷ್ಟೇ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಇಬ್ಬರು ಏಕೆ ದಿಢೀರ್​ ನಿರ್ಧಾರಕ್ಕೆ ಬಂದ್ರು ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಜೊತೆಗೆ ಒಳ್ಳೆ ಹುಡುಗ ಪ್ರಥಮ್​ ಅವರು ಕೂಡ ಇಬ್ಬರನ್ನೂ ಕರೆಸಿ ಸಂಧಾನ ಮಾಡಲು ಮುಂದಾಗಿದ್ದರು. ಇಬ್ಬರು ಮತ್ತೆ ಒಂದಾಗಬೇಕು. ನಾನು ಚಂದನ್ ಶೆಟ್ಟಿಗೆ ಮಿಲನಾ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಕಳುಹಿಸುತ್ತೇನೆ. ಅದನ್ನು ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ ಎಂಬ ಆಶಯವನ್ನು ಪ್ರಥಮ್ ವ್ಯಕ್ತಪಡಿಸಿದ್ದರು. ಸಿನಿಮಾ ಇಂಟಸ್ಟ್ರಿಯಲ್ಲಿ ನಟ ಧ್ರುವ ಸರ್ಜಾ ಅವರ ಮಾತನ್ನ ಚಂದನ್ ಕೇಳ್ತಾರೆ.

ಇದನ್ನೂ ಓದಿ: ಬಿಯರ್​ ಖರೀದಿಸುವಾಗ ಬಾರ್​ನಲ್ಲೇ ತಗ್ಲಾಕೊಂಡ ಮಗ.. ಬೆಪ್ಪಾದ ಅಪ್ಪ ಮಾಡಿದ್ದೇನು ಗೊತ್ತಾ?

ಹೀಗಾಗಿ, ನಿವೇದಿತಾ ಹಾಗೂ ಚಂದನ್ ವಿಚ್ಛೇದನ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಲಿ. ಚಂದನ್‌‌ಗೆ ಒಳ್ಳೆದಾಗಲಿ ಎಂದು ಧ್ರುವ ಪೊಗರು ಸಿನೆಮಾದಲ್ಲಿ ಚಾನ್ಸ್ ಕೊಟ್ಟರು. ಪ್ರೀತಿ ಇದ್ದರೆ ಚಂದನ್ ಧ್ರುವ ಮಾತನ್ನ ಕೇಳ್ತಾರೆ ಅಂತ ಹೇಳಿದ್ರು. ಆದರೆ ಏಕಾಏಕಿ ಅವರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯ್ತು. ಆ ವಿಡಿಯೋ ವಿರುದ್ಧ ಕೆಲವರು ಭಾರಿ ಆಕ್ರೋಶ ಹೊರ ಹಾಕಿದ್ದರು. ಕಂಡವರ ಮನೆ ವಿಚಾರ ನಿಮಗ್ಯಾಕೆ, ಅವರ ಸಂಸಾರದಲ್ಲಿ ನೀವೇಕೆ ಮೂಗು ತೂರಿಸುತ್ತಿದ್ದಾರೆ ಅಂತಾ ಸಾಕಷ್ಟು ಜನರು ಕಾಮೆಂಟ್​ ಮಾಡಿದ್ದರು. ಇದರಿಂದ ಬೇಸರಗೊಂಡ ನಟ ಪ್ರಥಮ್​ ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More