ವಿಚ್ಛೇದನ ಬಗ್ಗೆ ಶ್ರೀದೇವಿಯ ತಂದೆ ಬೈರಪ್ಪ ಅವರು ಹೇಳಿರುವುದೇನು?
ಸ್ಯಾಂಡಲ್ವುಡ್ನ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಪ್ರಕರಣ
ಯುವರಾಜ್ ಪತ್ನಿ ಶ್ರೀದೇವಿ ಕೋರ್ಟ್ಗೆ ಹಾಜರಾಗುವುದು ಯಾವಾಗ?
ಇಂದು ಇಡೀ ಸ್ಯಾಂಡಲ್ವುಡ್ ಬೆಚ್ಚಿ ಬಿದ್ದಿದೆ. ದೊಡ್ಮನೆ ಕುಟುಂಬದಲ್ಲಿ ಇದುವರೆಗೆ ನಡೆಯದ ಘಟನೆ ನಡೆದು ಹೋಗಿದೆ. ಯುವ ರಾಜ್ಕುಮಾರ್ ಡಿವೋರ್ಸ್ಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪತ್ನಿಯಿಂದ ಮಾನಸಿಕ ಹಿಂಸೆ ಅಂತ ಯುವ ಆರೋಪ ಮಾಡಿದ್ರೆ ಶ್ರಿದೇವಿ ಮಾತ್ರ ಪತಿಗೆ ಬೇರೊಂದು ಸಂಬಂಧವಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಸ್ಯಾಂಡಲ್ವುಡ್ ಆಘಾತಕ್ಕೊಳಗಾಗಿದೆ. ಚಂದನವನದ ದೊಡ್ಮನೆಯಿಂದ ಶಾಕಿಂಗ್ ಸುದ್ದಿ ಬಂದಿದೆ. ಅದರಲ್ಲೂ ಅಣ್ಣಾವ್ರ ಹಾಗೂ ಅಪ್ಪು ಅಭಿಮಾನಿಗಳಿಗೆ ಈ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಜೂನಿಯರ್ ಪವರ್ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ತಿದ್ದ ಯುವ ರಾಜಕುಮಾರ್ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ.
ಇದನ್ನೂ ಓದಿ: ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?
ಪತ್ನಿಯಿಂದ ಮಾನಸಿಕ ಕಿರುಕುಳವೆಂದು ಯುವ ವಿಚ್ಛೇದನಕ್ಕೆ ಅರ್ಜಿ
ಸ್ಯಾಂಡಲ್ವುಡ್ನ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್ ದಾಖಲಾಗಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ರಾಘವೇಂದ್ರ ರಾಜ್ಕುಮಾರ್ ಎರಡನೇ ಪುತ್ರ ನಟ ಗುರು ರಾಜ್ಕುಮಾರ್ ಅಲಿಯಾಸ್ ಯುವ ರಾಜ್ಕುಮಾರ್ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಪತ್ನಿಯ ವಿರುದ್ಧ ಕ್ರೌರ್ಯ, ಅಗೌರವ ಹಾಗೂ ಮಾನಸಿಕ ಟಾರ್ಚರ್ ಆರೋಪ ಮಾಡಿ ಕೇಸ್ ದಾಖಲಿಸಿದ್ದಾರೆ. ಕಳೆದ 6ನೇ ತಾರೀಕು ಅರ್ಜಿ ಸಲ್ಲಿಸಿದ್ದು ಯುವ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್ ನೋಟಿಸ್ ಕೊಟ್ಟಿದೆ. ಜುಲೈ 4ರಂದು ವಿಚಾರಣೆ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: 3ನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?
ಸ್ಯಾಂಡಲ್ವುಡ್ ಬೆಚ್ಚಿಬಿದ್ದಿದೆ. ಚಂದನವನದ ದೊಡ್ಮನೆಯಲ್ಲಿ ಮೊದಲ ಬಾರಿಗೆ ಡಿವೋರ್ಸ್ ಸದ್ದು ಮಾಡಿದೆ. ಯುವರಾಜ್ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ವಿರುದ್ಧ ಮಾನಸಿಕ ಕಿರುಕುಳ ಆರೋಪ ಮಾಡಿದ ಪತಿ ವಿರುದ್ಧ ಅಫೇರ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಸಹ ನಟಿ ಜೊತೆ ಅಫೇರ್ ಇರೋದಾಗಿ ಶ್ರೀದೇವಿ ಗಂಭೀರ ಆರೋಪ
ಇನ್ನು ಲೀಗಲ್ ನೋಟಿಸ್ ನೀಡಿದ ಪತಿ ಯುವರಾಜ್ಕುಮಾರ್ಗೆ ಶ್ರೀದೇವಿ ಸವಿವರ ಉತ್ತರ ನೀಡಿದ್ದಾರೆ. ಉತ್ತರದಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ. ಅಮೆರಿಕದಿಂದ ಯುವ ವಕೀಲರಿಗೆ ಪ್ರತ್ಯುತ್ತರ ಕೊಟ್ಟಿದ್ದು, ಯುವನಿಗೆ ಸಹ ನಟಿ ಜೊತೆ ಅಫೇರ್ ಇರೋದಾಗಿ ಆರೋಪಿಸಿದ್ದಾರೆ. ಕೇಳಿದ್ದಕ್ಕೆ ಇದು ವಯಸ್ಕರ ವಿಚಾರ ಅಂತ ಹೇಳಿದ್ರಂತೆ. ಅಲ್ಲದೆ ಯುವಗೆ ಅವರ ಕರಿಯರ್ ಮೇಲೆ ಗುರಿಯೇ ಇರ್ಲಿಲ್ಲ ಅಂತ ಹೇಳಿದ್ದಾರೆ.
ಕಳೆದ ಆರೇಳು ತಿಂಗಳಿಂದ ಯುವ-ಶ್ರೀದೇವಿ ದೂರ.. ದೂರ
ಕಳೆದ ಆರೇಳು ತಿಂಗಳಿಂದ ಯುವ-ಶ್ರೀದೇವಿ ನಾನೊಂದು ತೀರ ನೀನೊಂದು ತೀರ ಅಂತ ದೂರ.. ದೂರ ಇದ್ದಾರೆ. ಸುಮಾರು 7 ವರ್ಷ ಪ್ರೀತಿಸಿ ಮದುವೆಯಾದ ಜೋಡಿ ಈಗ ಬೇರೆಯಾಗುತ್ತಿದ್ದಾರೆ. ಇನ್ಸ್ಟಾಗ್ರಾಂನಿಂದ ಪತ್ನಿ ಜೊತೆಗಿನ ಎಲ್ಲ ಫೋಟೋಗಳನ್ನು ಯುವ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮಕ್ಕಳು ಮಾಡಿಕೊಳ್ಳೋ ವಿಚಾರಕ್ಕೆ ಡಿವೋರ್ಸ್ ಆಯ್ತಾ? ಈ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?
ಬಲವಂತದ ಮದುವೆ.. ಡಿವೋರ್ಸ್ ಕೊಡಲ್ಲ ಎಂದ ಬೈರಪ್ಪ
ಇನ್ನು ಶ್ರೀದೇವಿ ತಂದೆ ಬೈರಪ್ಪ ಮಾತನಾಡಿದ್ದಾರೆ. ನನ್ನ ಮಗಳನ್ನ ಬಲವಂತವಾಗಿ ಮದುವೆ ಮಾಡಿಕೊಂಡ್ರು. ರಾಘವೇಂದ್ರ ರಾಜ್ಕುಮಾರ್ ಅವರೇ ಬಲವಂತ ಮಾಡಿದ್ರು. ಡಾ.ರಾಜ್ಕುಮಾರ್ ಅಕಾಡೆಮಿ ಆರಂಭಿಸಿದ್ದು ನನ್ನ ಮಗಳು. ಅವರಿಂದ ನನ್ನ ಮಗಳು ಸಾಕಷ್ಟು ಹಿಂಸೆ ಅನುಭವಿಸಿದ್ದಾಳೆ. ನನ್ನ ಮಗಳ ವಿದ್ಯಾಭ್ಯಾಸಕ್ಕೆ ಅವರೇ ಯುಎಸ್ಗೆ ಕಳುಹಿಸಿದ್ದಾರೆ. ನಮಗೆ ಅವರಿಬ್ಬರು ಕೂಡ ಚೆನ್ನಾಗಿರರ್ಬೇಕು ಅಂತ ಆಸೆ. ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮಾಜಿ ಪತ್ನಿ ನಿವೇದಿತಾ ಬಗ್ಗೆ ಹೇಳಿದ್ದೇನು.. ಡಿವೋರ್ಸ್ ಕುರಿತು ಅಸಲಿ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ
ನಟ ಯುವರಾಜಕುಮಾರ್ ಡಿವೋರ್ಸ್ ಸುದ್ದಿ ಚಂದನವನವನ್ನ ಶೇಕ್ ಮಾಡಿದೆ. ಅಣ್ಣಾವ್ರ ಕುಟುಂಬದ ಅಭಿಮಾನಿಗಳು ಶಾಕ್ಗೊಳಗಾಗಿದ್ದಾರೆ. ಆದಷ್ಟು ಬೇಗ ಇಬ್ಬರೂ ತಮ್ಮ ಭೀನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿ ಅಂತ ಪ್ರಾರ್ಥಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿಚ್ಛೇದನ ಬಗ್ಗೆ ಶ್ರೀದೇವಿಯ ತಂದೆ ಬೈರಪ್ಪ ಅವರು ಹೇಳಿರುವುದೇನು?
ಸ್ಯಾಂಡಲ್ವುಡ್ನ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಪ್ರಕರಣ
ಯುವರಾಜ್ ಪತ್ನಿ ಶ್ರೀದೇವಿ ಕೋರ್ಟ್ಗೆ ಹಾಜರಾಗುವುದು ಯಾವಾಗ?
ಇಂದು ಇಡೀ ಸ್ಯಾಂಡಲ್ವುಡ್ ಬೆಚ್ಚಿ ಬಿದ್ದಿದೆ. ದೊಡ್ಮನೆ ಕುಟುಂಬದಲ್ಲಿ ಇದುವರೆಗೆ ನಡೆಯದ ಘಟನೆ ನಡೆದು ಹೋಗಿದೆ. ಯುವ ರಾಜ್ಕುಮಾರ್ ಡಿವೋರ್ಸ್ಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪತ್ನಿಯಿಂದ ಮಾನಸಿಕ ಹಿಂಸೆ ಅಂತ ಯುವ ಆರೋಪ ಮಾಡಿದ್ರೆ ಶ್ರಿದೇವಿ ಮಾತ್ರ ಪತಿಗೆ ಬೇರೊಂದು ಸಂಬಂಧವಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಸ್ಯಾಂಡಲ್ವುಡ್ ಆಘಾತಕ್ಕೊಳಗಾಗಿದೆ. ಚಂದನವನದ ದೊಡ್ಮನೆಯಿಂದ ಶಾಕಿಂಗ್ ಸುದ್ದಿ ಬಂದಿದೆ. ಅದರಲ್ಲೂ ಅಣ್ಣಾವ್ರ ಹಾಗೂ ಅಪ್ಪು ಅಭಿಮಾನಿಗಳಿಗೆ ಈ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಜೂನಿಯರ್ ಪವರ್ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ತಿದ್ದ ಯುವ ರಾಜಕುಮಾರ್ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ.
ಇದನ್ನೂ ಓದಿ: ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?
ಪತ್ನಿಯಿಂದ ಮಾನಸಿಕ ಕಿರುಕುಳವೆಂದು ಯುವ ವಿಚ್ಛೇದನಕ್ಕೆ ಅರ್ಜಿ
ಸ್ಯಾಂಡಲ್ವುಡ್ನ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್ ದಾಖಲಾಗಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ರಾಘವೇಂದ್ರ ರಾಜ್ಕುಮಾರ್ ಎರಡನೇ ಪುತ್ರ ನಟ ಗುರು ರಾಜ್ಕುಮಾರ್ ಅಲಿಯಾಸ್ ಯುವ ರಾಜ್ಕುಮಾರ್ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಪತ್ನಿಯ ವಿರುದ್ಧ ಕ್ರೌರ್ಯ, ಅಗೌರವ ಹಾಗೂ ಮಾನಸಿಕ ಟಾರ್ಚರ್ ಆರೋಪ ಮಾಡಿ ಕೇಸ್ ದಾಖಲಿಸಿದ್ದಾರೆ. ಕಳೆದ 6ನೇ ತಾರೀಕು ಅರ್ಜಿ ಸಲ್ಲಿಸಿದ್ದು ಯುವ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್ ನೋಟಿಸ್ ಕೊಟ್ಟಿದೆ. ಜುಲೈ 4ರಂದು ವಿಚಾರಣೆ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: 3ನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?
ಸ್ಯಾಂಡಲ್ವುಡ್ ಬೆಚ್ಚಿಬಿದ್ದಿದೆ. ಚಂದನವನದ ದೊಡ್ಮನೆಯಲ್ಲಿ ಮೊದಲ ಬಾರಿಗೆ ಡಿವೋರ್ಸ್ ಸದ್ದು ಮಾಡಿದೆ. ಯುವರಾಜ್ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ವಿರುದ್ಧ ಮಾನಸಿಕ ಕಿರುಕುಳ ಆರೋಪ ಮಾಡಿದ ಪತಿ ವಿರುದ್ಧ ಅಫೇರ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಸಹ ನಟಿ ಜೊತೆ ಅಫೇರ್ ಇರೋದಾಗಿ ಶ್ರೀದೇವಿ ಗಂಭೀರ ಆರೋಪ
ಇನ್ನು ಲೀಗಲ್ ನೋಟಿಸ್ ನೀಡಿದ ಪತಿ ಯುವರಾಜ್ಕುಮಾರ್ಗೆ ಶ್ರೀದೇವಿ ಸವಿವರ ಉತ್ತರ ನೀಡಿದ್ದಾರೆ. ಉತ್ತರದಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ. ಅಮೆರಿಕದಿಂದ ಯುವ ವಕೀಲರಿಗೆ ಪ್ರತ್ಯುತ್ತರ ಕೊಟ್ಟಿದ್ದು, ಯುವನಿಗೆ ಸಹ ನಟಿ ಜೊತೆ ಅಫೇರ್ ಇರೋದಾಗಿ ಆರೋಪಿಸಿದ್ದಾರೆ. ಕೇಳಿದ್ದಕ್ಕೆ ಇದು ವಯಸ್ಕರ ವಿಚಾರ ಅಂತ ಹೇಳಿದ್ರಂತೆ. ಅಲ್ಲದೆ ಯುವಗೆ ಅವರ ಕರಿಯರ್ ಮೇಲೆ ಗುರಿಯೇ ಇರ್ಲಿಲ್ಲ ಅಂತ ಹೇಳಿದ್ದಾರೆ.
ಕಳೆದ ಆರೇಳು ತಿಂಗಳಿಂದ ಯುವ-ಶ್ರೀದೇವಿ ದೂರ.. ದೂರ
ಕಳೆದ ಆರೇಳು ತಿಂಗಳಿಂದ ಯುವ-ಶ್ರೀದೇವಿ ನಾನೊಂದು ತೀರ ನೀನೊಂದು ತೀರ ಅಂತ ದೂರ.. ದೂರ ಇದ್ದಾರೆ. ಸುಮಾರು 7 ವರ್ಷ ಪ್ರೀತಿಸಿ ಮದುವೆಯಾದ ಜೋಡಿ ಈಗ ಬೇರೆಯಾಗುತ್ತಿದ್ದಾರೆ. ಇನ್ಸ್ಟಾಗ್ರಾಂನಿಂದ ಪತ್ನಿ ಜೊತೆಗಿನ ಎಲ್ಲ ಫೋಟೋಗಳನ್ನು ಯುವ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮಕ್ಕಳು ಮಾಡಿಕೊಳ್ಳೋ ವಿಚಾರಕ್ಕೆ ಡಿವೋರ್ಸ್ ಆಯ್ತಾ? ಈ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?
ಬಲವಂತದ ಮದುವೆ.. ಡಿವೋರ್ಸ್ ಕೊಡಲ್ಲ ಎಂದ ಬೈರಪ್ಪ
ಇನ್ನು ಶ್ರೀದೇವಿ ತಂದೆ ಬೈರಪ್ಪ ಮಾತನಾಡಿದ್ದಾರೆ. ನನ್ನ ಮಗಳನ್ನ ಬಲವಂತವಾಗಿ ಮದುವೆ ಮಾಡಿಕೊಂಡ್ರು. ರಾಘವೇಂದ್ರ ರಾಜ್ಕುಮಾರ್ ಅವರೇ ಬಲವಂತ ಮಾಡಿದ್ರು. ಡಾ.ರಾಜ್ಕುಮಾರ್ ಅಕಾಡೆಮಿ ಆರಂಭಿಸಿದ್ದು ನನ್ನ ಮಗಳು. ಅವರಿಂದ ನನ್ನ ಮಗಳು ಸಾಕಷ್ಟು ಹಿಂಸೆ ಅನುಭವಿಸಿದ್ದಾಳೆ. ನನ್ನ ಮಗಳ ವಿದ್ಯಾಭ್ಯಾಸಕ್ಕೆ ಅವರೇ ಯುಎಸ್ಗೆ ಕಳುಹಿಸಿದ್ದಾರೆ. ನಮಗೆ ಅವರಿಬ್ಬರು ಕೂಡ ಚೆನ್ನಾಗಿರರ್ಬೇಕು ಅಂತ ಆಸೆ. ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮಾಜಿ ಪತ್ನಿ ನಿವೇದಿತಾ ಬಗ್ಗೆ ಹೇಳಿದ್ದೇನು.. ಡಿವೋರ್ಸ್ ಕುರಿತು ಅಸಲಿ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ
ನಟ ಯುವರಾಜಕುಮಾರ್ ಡಿವೋರ್ಸ್ ಸುದ್ದಿ ಚಂದನವನವನ್ನ ಶೇಕ್ ಮಾಡಿದೆ. ಅಣ್ಣಾವ್ರ ಕುಟುಂಬದ ಅಭಿಮಾನಿಗಳು ಶಾಕ್ಗೊಳಗಾಗಿದ್ದಾರೆ. ಆದಷ್ಟು ಬೇಗ ಇಬ್ಬರೂ ತಮ್ಮ ಭೀನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿ ಅಂತ ಪ್ರಾರ್ಥಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ