newsfirstkannada.com

ಶ್ರೀರಸ್ತು ಶುಭಮಸ್ತು ಸೀರಿಯಲ್‌ಗೆ ದಿಢೀರ್ ಗುಡ್ ಬೈ ಹೇಳಿದ ನಟಿ ನೇತ್ರಾ ಜಾಧವ್; ಕಾರಣವೇನು?

Share :

Published May 25, 2024 at 5:02pm

    ಶಾರ್ವರಿ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಿರುತೆರೆ ವೀಕ್ಷಕರು

    ಶಾರ್ವರಿ ಪಾತ್ರಕ್ಕೆ ದಿಢೀರ್ ಗುಡ್​ ಬೈ ಹೇಳಿದ ಕಿರುತೆರೆ ನಟಿ ನೇತ್ರಾ ಜಾಧವ್

    ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಖಳನಾಯಕಿಯಾಗಿದ್ದ ನಟಿ ನೈತ್ರಾ

ದಿನದಿಂದ ದಿನಕ್ಕೆ ಶ್ರೀರಸ್ತು ಶುಭಮಸ್ತು ಸೀರಿಯಲ್​ ಹೊಸ ಟ್ವಿಸ್ಟ್​ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ​​ತುಳಸಿ ಮಾಧವ ಮುದ್ದಾದ ಪ್ರೀತಿಗೆ ವೀಕ್ಷರರು ಫಿದಾ ಆಗಿದ್ದಾರೆ. ಅದರಲ್ಲೂ ಶ್ರೀರಸ್ತು ಶುಭಮಸ್ತು ಸೀರಿಯಲ್​ನ ವಿಲನ್​ ನಟನೆಗೆ ವಿಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

ಆದರೆ, ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಮಿಂಚುತ್ತಿದ್ದ ಶಾರ್ವರಿ ಪಾತ್ರಧಾರಿ ನಟಿ ನೇತ್ರಾ ಜಾಧವ್ ಅವರು ಆಚೆ ಬಂದಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಶುರು ಆದಾಗಿನಿಂದ ಅವರು ಈ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಈ ಹಿಂದೆ ಶಾರ್ವರಿ ಅಭಿನಯಕ್ಕೆ ವೀಕ್ಷಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ ಏಕಾಏಕಿ ನಟಿ ನೇತ್ರಾ ಜಾಧವ್​ ಅವರು ಶ್ರೀರಸ್ತು ಶುಭಮಸ್ತು ಸೀರಿಯಲ್​ನಿಂದ ಆಚೆ ಬಂದಿದ್ದಾರೆ. ಅವರ ಪ್ರಾತಕ್ಕೆ ಹೊಸ ನಟಿಯ ಆಗಮನವಾಗಿದೆ.

ಶ್ರೀರಸ್ತು ಶುಭಮಸ್ತು ಸೀರಿಯಲ್​​ ಮಾಧವನ ಕುಟುಂಬವನ್ನು ಹೇಗಾದರೂ ಮಾಡಿ ಹಾಳು ಮಾಡಬೇಕೆಂದು ಶಾರ್ವರಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಂಚು ಮಾಡುತ್ತಿದ್ದಳು. ಕೆಲ ದಿನಗಳಿಂದ ಶಾರ್ವರಿ ಪಾತ್ರವನ್ನು ನಿಲ್ಲಿಸಿದ್ದರು. ಇದನ್ನು ಗಮನಿಸಿದ ವೀಕ್ಷಕರು ಶಾರ್ವರಿ ಎಲ್ಲಿ? ಏಕೆ ಅವರು ಕಾಣಿಸಿಕೊಳ್ಳುತ್ತಿಲ್ಲ? ಅವರಿಗೆ ಏನಾಗಿದೆ? ಎಂದು ವೀಕ್ಷಕರು ಸಾಲು ಸಾಲು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ಇದೀಗ ಹೊಸ ಶಾರ್ವರಿಯ ಆಗಮನವಾಗಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?

ಶಾರ್ವರಿ ಪಾತ್ರಕ್ಕೆ ನಟಿ ನೇತ್ರಾ ಜಾಧವ್ ಅವರ ಬದಲು ಸ್ವಪ್ನಾ ದೀಕ್ಷಿತ್ ಆಗಮಿಸಿದ್ದಾರೆ. ನಟಿ ಸ್ವಪ್ನಾ ದೀಕ್ಷಿತ್ ಅವರು ಕನ್ನಡ ಕಿರುತೆರೆಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಅವರು ಇದೀಗ ಶಾರ್ವರಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಆದರೆ ಇಷ್ಟು ದಿನ ಶಾರ್ವರಿ ಪಾತ್ರದಲ್ಲಿ ವೀಕ್ಷಕರಿಗೆ ನೇತ್ರಾ ಜಾಧವ್ ಮನರಂಜನೆ ನೀಡುತ್ತಿದ್ದರು. ನಮಗೆ ಹಳೆ ಶಾರ್ವರಿ ಬೇಕು ಹೊಸ ನಟಿ ಬೇಡ ಅಂತ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀರಸ್ತು ಶುಭಮಸ್ತು ಸೀರಿಯಲ್‌ಗೆ ದಿಢೀರ್ ಗುಡ್ ಬೈ ಹೇಳಿದ ನಟಿ ನೇತ್ರಾ ಜಾಧವ್; ಕಾರಣವೇನು?

https://newsfirstlive.com/wp-content/uploads/2024/05/shrirasthu-shubhamasthu.jpg

    ಶಾರ್ವರಿ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಿರುತೆರೆ ವೀಕ್ಷಕರು

    ಶಾರ್ವರಿ ಪಾತ್ರಕ್ಕೆ ದಿಢೀರ್ ಗುಡ್​ ಬೈ ಹೇಳಿದ ಕಿರುತೆರೆ ನಟಿ ನೇತ್ರಾ ಜಾಧವ್

    ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಖಳನಾಯಕಿಯಾಗಿದ್ದ ನಟಿ ನೈತ್ರಾ

ದಿನದಿಂದ ದಿನಕ್ಕೆ ಶ್ರೀರಸ್ತು ಶುಭಮಸ್ತು ಸೀರಿಯಲ್​ ಹೊಸ ಟ್ವಿಸ್ಟ್​ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ​​ತುಳಸಿ ಮಾಧವ ಮುದ್ದಾದ ಪ್ರೀತಿಗೆ ವೀಕ್ಷರರು ಫಿದಾ ಆಗಿದ್ದಾರೆ. ಅದರಲ್ಲೂ ಶ್ರೀರಸ್ತು ಶುಭಮಸ್ತು ಸೀರಿಯಲ್​ನ ವಿಲನ್​ ನಟನೆಗೆ ವಿಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

ಆದರೆ, ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಮಿಂಚುತ್ತಿದ್ದ ಶಾರ್ವರಿ ಪಾತ್ರಧಾರಿ ನಟಿ ನೇತ್ರಾ ಜಾಧವ್ ಅವರು ಆಚೆ ಬಂದಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಶುರು ಆದಾಗಿನಿಂದ ಅವರು ಈ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಈ ಹಿಂದೆ ಶಾರ್ವರಿ ಅಭಿನಯಕ್ಕೆ ವೀಕ್ಷಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ ಏಕಾಏಕಿ ನಟಿ ನೇತ್ರಾ ಜಾಧವ್​ ಅವರು ಶ್ರೀರಸ್ತು ಶುಭಮಸ್ತು ಸೀರಿಯಲ್​ನಿಂದ ಆಚೆ ಬಂದಿದ್ದಾರೆ. ಅವರ ಪ್ರಾತಕ್ಕೆ ಹೊಸ ನಟಿಯ ಆಗಮನವಾಗಿದೆ.

ಶ್ರೀರಸ್ತು ಶುಭಮಸ್ತು ಸೀರಿಯಲ್​​ ಮಾಧವನ ಕುಟುಂಬವನ್ನು ಹೇಗಾದರೂ ಮಾಡಿ ಹಾಳು ಮಾಡಬೇಕೆಂದು ಶಾರ್ವರಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಂಚು ಮಾಡುತ್ತಿದ್ದಳು. ಕೆಲ ದಿನಗಳಿಂದ ಶಾರ್ವರಿ ಪಾತ್ರವನ್ನು ನಿಲ್ಲಿಸಿದ್ದರು. ಇದನ್ನು ಗಮನಿಸಿದ ವೀಕ್ಷಕರು ಶಾರ್ವರಿ ಎಲ್ಲಿ? ಏಕೆ ಅವರು ಕಾಣಿಸಿಕೊಳ್ಳುತ್ತಿಲ್ಲ? ಅವರಿಗೆ ಏನಾಗಿದೆ? ಎಂದು ವೀಕ್ಷಕರು ಸಾಲು ಸಾಲು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ಇದೀಗ ಹೊಸ ಶಾರ್ವರಿಯ ಆಗಮನವಾಗಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?

ಶಾರ್ವರಿ ಪಾತ್ರಕ್ಕೆ ನಟಿ ನೇತ್ರಾ ಜಾಧವ್ ಅವರ ಬದಲು ಸ್ವಪ್ನಾ ದೀಕ್ಷಿತ್ ಆಗಮಿಸಿದ್ದಾರೆ. ನಟಿ ಸ್ವಪ್ನಾ ದೀಕ್ಷಿತ್ ಅವರು ಕನ್ನಡ ಕಿರುತೆರೆಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಅವರು ಇದೀಗ ಶಾರ್ವರಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಆದರೆ ಇಷ್ಟು ದಿನ ಶಾರ್ವರಿ ಪಾತ್ರದಲ್ಲಿ ವೀಕ್ಷಕರಿಗೆ ನೇತ್ರಾ ಜಾಧವ್ ಮನರಂಜನೆ ನೀಡುತ್ತಿದ್ದರು. ನಮಗೆ ಹಳೆ ಶಾರ್ವರಿ ಬೇಕು ಹೊಸ ನಟಿ ಬೇಡ ಅಂತ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More