/newsfirstlive-kannada/media/post_attachments/wp-content/uploads/2024/09/ARAVIND-KEJRIWLL-1.jpg)
ಪ್ರಮಾಣಿಕತೆ ಹೆಸರಲ್ಲಿ ಎಲೆಕ್ಷನ್​ಗೆ ಕಹಳೆ ಮೊಳಗಿಸಿದ ಕೇಜ್ರಿವಾಲ್​, ಹೊಸ ಕಳೆ ತಂದಿದ್ದಾರೆ. ಜನರ ಮನದಲ್ಲಿ ಅನುಕಂಪದ ಬೀಜಾಂಕುರಿಸಿ, ಮತಬುಟ್ಟಿ ತಂಬಿಸಿಕೊಳ್ಳುವ ಕೇಜ್ರಿವಾಲ್​ ಲೆಕ್ಕ ದಂಗುಬಡಿಸಿದೆ. ಈ ಮಧ್ಯೆ ರಾಜಧಾನಿ ಹಾರ್ಟ್​​ಬೀಟ್​​ ಡಾಕ್ಟರ್​​ ಯಾರು ಅನ್ನೋ ಚರ್ಚೆ ಹಬ್ಬಿದೆ.
ಕೇಜ್ರಿವಾಲ್​ ಹೂಡಿದ ರಾಜೀನಾಮೆ ಅಸ್ತ್ರ, ಬಿಜೆಪಿ ಚಾಣಾಕ್ಯ ಅಮಿತ್​ ಶಾರನ್ನೇ ಅಂಕ ಗಣಿತವನ್ನೇ ಪಲ್ಟಿ ಹೊಡೆಸಿದೆ. ಅರವಿಂದ ಕೇಜ್ರಿವಾಲ್​​ರ ಈ ಅನಿರೀಕ್ಷಿತ ರಾಜೀನಾಮೆ ಅಸ್ತ್ರ ಮಾತ್ರ ಡೆಲ್ಲಿಯತ್ತ ಚಿತ್ತ ನಡೆಸಿದೆ.
ಕೇಜ್ರಿವಾಲ್​ ಮಹಾ ದಾಳ!
ರಾಜೀನಾಮೆ ಘೋಷಣೆ ಹಿಂದೆ ಭಾರೀ ಎಚ್ಚರಿಕೆ ಹೆಜ್ಜೆ ಇರಿಸಿರುವ ಕೇಜ್ರಿ​, ಮಹಾರಾಷ್ಟ್ರ ಜೊತೆ ಜೊತೆ ಎಲೆಕ್ಷನ್​​ಗೆ ಸವಾಲು ಹಾಕಿದ್ದಾರೆ. ಇನ್ನೊಂದು ಈಗಲೇ ವಿಧಾನಸಭೆ ವಿಸರ್ಜನೆ ಮಾಡಿದ್ರೂ ಸಹ ದೆಹಲಿ ಎಲೆಕ್ಷನ್​ಗೆ ಆರು ತಿಂಗಳಿದ್ದು, ಅಲ್ಲಿವರೆಗೆ ಕೇರ್​​ಟೇಕರ್​​​ ಗವರ್ನಮೆಂಟ್​​ನ್ನ ಡೆಲ್ಲಿ ಗವರ್ನರ್​​ ಕಂಟ್ರೋಲ್​ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮಂಗಳವಾರ ರಾಜೀನಾಮೆ ನೀಡುವ ಕೇಜ್ರಿವಾಲ್​ ತಮ್ಮ ಸ್ಥಾನಕ್ಕೆ ಮೂವರಲ್ಲಿ ಒಬ್ಬರಿಗೆ ಅಧಿಕಾರ ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಕೇಜ್ರಿವಾಲ್​​ ರೀತಿಯೇ ಸಿಸೋಡಿಯಾ ಮೇಲೂ ಲಿಕ್ಕರ್​​ ಪಾಲಿಸಿ ಅಕ್ರಮ ಆರೋಪ ಇದ್ದು, ಈ ಇಬ್ಬರೂ ಸೇರಿ ಮೂವರಲ್ಲಿ ಒಬ್ಬರನ್ನ ಆಯ್ಕೆ ಮಾಡ್ಲಿದ್ದಾರೆ. ಹಾಗಾದ್ರೆ, ಡೆಲ್ಲಿ ಸಿಎಂ ಸಿಂಹಾಸನ ರೇಸ್​ನಲ್ಲಿರುವ ಆ ಮೂವರು ಯಾರು?
ಮೂವರಲ್ಲಿ ಯಾರು?
- ಆಯ್ಕೆ 1 : ಗೋಪಾಲ್​ ರೈ
- ಆಯ್ಕೆ 2 : ಕೈಲಾಶ್​ ಗೆಹ್ಲೋಟ್​​
- ಆಯ್ಕೆ 3 : ಸುನಿತಾ ಕೇಜ್ರಿವಾಲ್​
ಕೈಲಾಶ್​​ ಗೆಹ್ಲೋಟ್​.. ದೆಹಲಿ ರಾಜಕಾರಣದ ಸಿನಾರಿಯೋ ಅರಿತಿರುವ 50 ವರ್ಷದ ನಾಯಕ.. ಸದ್ಯ ಡೆಲ್ಲಿ ಸಾರಿಗೆ ಸಚಿವರಾಗಿ ಅದ್ಭುತ ಸಾಧನೆಗೈದಿರುವ ಗೆಹ್ಲೋಟ್​​, ಉತ್ತಮ ಅಡ್ಮಿನಿಸ್ಟ್ರೇಟಿವ್​​, ಎಫೆಕ್ಟಿವ್​​ ಆಡಳಿತಗಾರ ಎಂದೇ ಖ್ಯಾರಿ ಪಡೆದಿದ್ದಾರೆ. ಸುನಿತಾ ಕೇಜ್ರಿವಾಲ್​.. ಸಿಎಂ ಕೇಜ್ರಿವಾಲ್​ ಪತ್ನಿ ರಾಜಕೀಯವನ್ನ ಹತ್ತಿರದಿಂದ ಬಲ್ಲವರು.. ಕೇಜ್ರಿವಾಲ್​​ಗೆ ಅವರ ಪತ್ನಿ ಮಾಜಿ ಐಆರ್​​ಎಸ್​​​ ಅಧಿಕಾರಿ ಸುನಿತಾ, ಅತ್ಯುತ್ತಮ ಸಲಹೆಗಾರರು.. ಕಳೆದ ಲೋಕಸಭೆಯಲ್ಲಿ ಸುನಿತಾ ಫೇಸ್​ ಇಟ್ಟುಕೊಂಡೇ ಎಎಪಿ ಪ್ರಚಾರದ ಕಣಕ್ಕೆ ಧುಮುಕಿತ್ತು.
ಇದನ್ನೂ ಓದಿ:KGF ಕಥೆಯನ್ನೇ ಮೀರಿಸುತ್ತೆ ಶಾಸಕ ಮುನಿರತ್ನ ಬದುಕು; ಬೀದಿಯಲ್ಲಿ ಇಡ್ಲಿ ಮಾರುತ್ತಿದ್ದ ಇವ್ರು ಬೆಳೆದಿದ್ದೇ ರೋಚಕ!
ಈ ಮೂವರಲ್ಲಿ ಸನಿತಾ ಎಲಿಮಿನೇಟ್​ ಆಗೋ ಸಾಧ್ಯತೆ ಇದ್ದು, ಗೋಪಾಲ್​ ರೈ ಅಥವಾ ಕೈಲಾಶ್​​ ಗೆಹ್ಲೋಟ್​ಗೆ ಸಿಎಂ ಸ್ಥಾನ ಸಿಗುವ ಸಾಧ್ಯತೆ ಇದೆ. ಒಟ್ಟಾರೆ, ಕೇಜ್ರಿವಾಲ್​ ಸದ್ಯ ದೆಹಲಿ ರಾಜಕೀಯದ ರಿಂಗ್​ ಮಾಸ್ಟರ್​ ಆಗಿದ್ದು, ಎಲೆಕ್ಷನ್​ ಮಾತ್ರ ರಣರೋಚಕ ಆಗಿರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ