ದೆಹಲಿ ಲಿಕ್ಕರ್ ಹಗರಣದಲ್ಲಿ ಕೇಜ್ರಿವಾಲ್ಗೆ ಸಿಗದ ರಿಲೀಫ್
ಮಾ.28ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಕೇಜ್ರಿವಾಲ್
ದೆಹಲಿ ಸಿಎಂ ಸ್ಥಾನದಿಂದ ಕೆಳಕ್ಕಿಳಿಯುತ್ತಾರಾ ಕೇಜ್ರಿವಾಲ್?
ದಶಕಗಳ ಹಿಂದೆ ಪರಿವರ್ತನ್ ಆಂದೋಲನದ ಹೆಸರಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ, ಸಿಎಂ ಸ್ಥಾನಕ್ಕೇರಿದ ಅರವಿಂದ್ ಕೇಜ್ರಿವಾಲ್, ಇದೀಗ ಅದೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲುಪಾಲಾಗಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿರುವ ದೆಹಲಿ ಸಿಎಂ ಕೇಜ್ರಿವಾಲ್ರನ್ನು 6 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ವೇಳೆ ಅರವಿಂದ್ ಕೇಜ್ರಿವಾಲ್ ಹಾಡಿದ ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಮ್ಮಲ್ಲಿ ಒಂದೊಂದು ಸಮಸ್ಯೆಗಳಿವೆ. ಯಾರು ಈ ಕುರ್ಚಿ ಮೇಲೆ ಕೂರುತ್ತಾರೋ? ಅದೇ ಕೆಲವೊಮ್ಮೆ ಅವಘಡ ನಡೆಯುತ್ತವೆ. ಈ ಆಂದೋಲನದಿಂದ ಪರ್ಯಾಯ ವಿಕಲ್ಪವೊಂದು ಹುಟ್ಟಿಕೊಳ್ಳುತ್ತೋ, ಈ ಜನ ಕುರ್ಚಿ ಮೇಲೆ ಹೋಗಿ ಕೂತಾಗ. ಆಂದೋಲನದಲ್ಲಿದ್ದ ಜನರು ಭ್ರಷ್ಟರಾಗಬಹುದೇನೋ? ಆಂದೋಲನದಲ್ಲಿನ ಜನರು ಸಮಸ್ಯೆ ಸೃಷ್ಟಿಸಿದ್ರೆ? ಈ ವಿಚಾರದಲ್ಲಿ ನಮಗೆ ದೊಡ್ಡ ಚಿಂತೆ ಕಾಡ್ತಿದೆ-ಅರವಿಂದ್ ಕೇಜ್ರಿವಾಲ್-ದೆಹಲಿ ಸಿಎಂ
ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದಲೇ ದೆಹಲಿಯ ಅಧಿಕಾರದ ಗದ್ದುಗೆಗೇರಿ ಕೇಜ್ರಿವಾಲ್, ಹೋರಾಟದ ವೇಳೆ ನುಡಿದ್ದ ಮಾತು ನಿಜವಾಗಿದೆ.
ದೆಹಲಿ ಸಿಎಂ ಸ್ಥಾನದಿಂದ ಕೆಳಕ್ಕಿಳಿಯುತ್ತಾರಾ ಕೇಜ್ರಿವಾಲ್?
ಅರವಿಂದ್ ಕೇಜ್ರಿವಾಲ್ ಅವರ ಈ ಮಾತುಗಳನ್ನು ಕೇಳಿದ್ರೆ ನಿಜಕ್ಕೂ ಅಚ್ಚರಿ ಅನ್ಸುತ್ತೆ.. ಸದ್ಯ ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದ ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಭ್ರಷ್ಟಾಚಾರ ಹುರುಳಿನಲ್ಲಿ ಸಿಲುಕಿದ್ದಾರೆ. ಮತ್ತೊಂದೆಡೆ ಕೇಜ್ರಿವಾಲ್ ಜೈಲಿನಿಂದಲೇ ಅಧಿಕಾರ ನಡೆಸಲಿದ್ದಾರೆ ಎಂದು ಆಪ್ ನಾಯಕರು ಹೇಳ್ತಿದ್ದಾರೆ. ಆದ್ರೆ ಜೈಲಿನಿಂದ ಸರ್ಕಾರ ನಡೆಸುವುದು ಸುಲಭಸಾಧ್ಯವಲ್ಲ. ಹೀಗಾಗಿ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ಒಂದ್ವೇಳೆ ರಾಜೀನಾಮೆ ನೀಡಿದ್ರೆ ಮುಂದಿನ ದೆಹಲಿ ಸಿಎಂ ಯಾರು ಅನ್ನೋ ಚರ್ಚೆಯು ಶುರುವಾಗಿದ್ದು ಮೂರ್ನಾಲ್ಕು ಜನರ ಹೆಸರು ಚಾಲ್ತಿಯಲ್ಲಿದೆ.
ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್, ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್, ದೆಹಲಿ ಹಣಕಾಸು ಸಚಿವೆ ಅತಿಶಿ ಮರ್ಲೆನಾ, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್ ಅವರ ಹೆಸರುಗಳು ಸಿಎಂ ರೇಸ್ನಲ್ಲಿ ಕೇಳಿಬರುತ್ತಿವೆ. ಈ ಐವರಲ್ಲದೆ, ಪಕ್ಷದ ಸಂಸದೀಯ ಸಮಿತಿಯೂ ಕೂಡ ಬೇರೆ ಹೆಸರನ್ನು ನಿರ್ಧರಿಸಬಹುದು. ಪಕ್ಷ ಇದರ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಮಾರ್ಚ್ 26 ರಂದು ಪ್ರಧಾನಿ ನಿವಾಸಕ್ಕೆ ಆಪ್ ಘೇರಾವ್
ಕೇಜ್ರಿವಾಲ್ ಬಂಧನ ಖಂಡಿಸಿ, ದೇಶಾದ್ಯಂತ ಆಪ್ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನು ಮಾರ್ಚ್ 26ರಂದು ಪ್ರಧಾನಿ ನಿವಾಸಕ್ಕೆ ಘೇರಾವ್ ಹಾಕಲು ಆಪ್ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಒಟ್ಟಾರೆ.. ಅರವಿಂದ್ ಕೇಜ್ರಿವಾಲ್ ಬಂಧನದಿಂದ ದೆಹಲಿ ರಾಜಕಾರಣದಲ್ಲಿ ಭಾರೀ ಹೈಡ್ರಾಮಾವೇ ಸೃಷ್ಟಿಯಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ 6 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಿದ ಕಾಂಗ್ರೆಸ್; ಇದಕ್ಕೆ ಅಸಲಿ ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದೆಹಲಿ ಲಿಕ್ಕರ್ ಹಗರಣದಲ್ಲಿ ಕೇಜ್ರಿವಾಲ್ಗೆ ಸಿಗದ ರಿಲೀಫ್
ಮಾ.28ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಕೇಜ್ರಿವಾಲ್
ದೆಹಲಿ ಸಿಎಂ ಸ್ಥಾನದಿಂದ ಕೆಳಕ್ಕಿಳಿಯುತ್ತಾರಾ ಕೇಜ್ರಿವಾಲ್?
ದಶಕಗಳ ಹಿಂದೆ ಪರಿವರ್ತನ್ ಆಂದೋಲನದ ಹೆಸರಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ, ಸಿಎಂ ಸ್ಥಾನಕ್ಕೇರಿದ ಅರವಿಂದ್ ಕೇಜ್ರಿವಾಲ್, ಇದೀಗ ಅದೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲುಪಾಲಾಗಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿರುವ ದೆಹಲಿ ಸಿಎಂ ಕೇಜ್ರಿವಾಲ್ರನ್ನು 6 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ವೇಳೆ ಅರವಿಂದ್ ಕೇಜ್ರಿವಾಲ್ ಹಾಡಿದ ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಮ್ಮಲ್ಲಿ ಒಂದೊಂದು ಸಮಸ್ಯೆಗಳಿವೆ. ಯಾರು ಈ ಕುರ್ಚಿ ಮೇಲೆ ಕೂರುತ್ತಾರೋ? ಅದೇ ಕೆಲವೊಮ್ಮೆ ಅವಘಡ ನಡೆಯುತ್ತವೆ. ಈ ಆಂದೋಲನದಿಂದ ಪರ್ಯಾಯ ವಿಕಲ್ಪವೊಂದು ಹುಟ್ಟಿಕೊಳ್ಳುತ್ತೋ, ಈ ಜನ ಕುರ್ಚಿ ಮೇಲೆ ಹೋಗಿ ಕೂತಾಗ. ಆಂದೋಲನದಲ್ಲಿದ್ದ ಜನರು ಭ್ರಷ್ಟರಾಗಬಹುದೇನೋ? ಆಂದೋಲನದಲ್ಲಿನ ಜನರು ಸಮಸ್ಯೆ ಸೃಷ್ಟಿಸಿದ್ರೆ? ಈ ವಿಚಾರದಲ್ಲಿ ನಮಗೆ ದೊಡ್ಡ ಚಿಂತೆ ಕಾಡ್ತಿದೆ-ಅರವಿಂದ್ ಕೇಜ್ರಿವಾಲ್-ದೆಹಲಿ ಸಿಎಂ
ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದಲೇ ದೆಹಲಿಯ ಅಧಿಕಾರದ ಗದ್ದುಗೆಗೇರಿ ಕೇಜ್ರಿವಾಲ್, ಹೋರಾಟದ ವೇಳೆ ನುಡಿದ್ದ ಮಾತು ನಿಜವಾಗಿದೆ.
ದೆಹಲಿ ಸಿಎಂ ಸ್ಥಾನದಿಂದ ಕೆಳಕ್ಕಿಳಿಯುತ್ತಾರಾ ಕೇಜ್ರಿವಾಲ್?
ಅರವಿಂದ್ ಕೇಜ್ರಿವಾಲ್ ಅವರ ಈ ಮಾತುಗಳನ್ನು ಕೇಳಿದ್ರೆ ನಿಜಕ್ಕೂ ಅಚ್ಚರಿ ಅನ್ಸುತ್ತೆ.. ಸದ್ಯ ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದ ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಭ್ರಷ್ಟಾಚಾರ ಹುರುಳಿನಲ್ಲಿ ಸಿಲುಕಿದ್ದಾರೆ. ಮತ್ತೊಂದೆಡೆ ಕೇಜ್ರಿವಾಲ್ ಜೈಲಿನಿಂದಲೇ ಅಧಿಕಾರ ನಡೆಸಲಿದ್ದಾರೆ ಎಂದು ಆಪ್ ನಾಯಕರು ಹೇಳ್ತಿದ್ದಾರೆ. ಆದ್ರೆ ಜೈಲಿನಿಂದ ಸರ್ಕಾರ ನಡೆಸುವುದು ಸುಲಭಸಾಧ್ಯವಲ್ಲ. ಹೀಗಾಗಿ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ಒಂದ್ವೇಳೆ ರಾಜೀನಾಮೆ ನೀಡಿದ್ರೆ ಮುಂದಿನ ದೆಹಲಿ ಸಿಎಂ ಯಾರು ಅನ್ನೋ ಚರ್ಚೆಯು ಶುರುವಾಗಿದ್ದು ಮೂರ್ನಾಲ್ಕು ಜನರ ಹೆಸರು ಚಾಲ್ತಿಯಲ್ಲಿದೆ.
ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್, ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್, ದೆಹಲಿ ಹಣಕಾಸು ಸಚಿವೆ ಅತಿಶಿ ಮರ್ಲೆನಾ, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್ ಅವರ ಹೆಸರುಗಳು ಸಿಎಂ ರೇಸ್ನಲ್ಲಿ ಕೇಳಿಬರುತ್ತಿವೆ. ಈ ಐವರಲ್ಲದೆ, ಪಕ್ಷದ ಸಂಸದೀಯ ಸಮಿತಿಯೂ ಕೂಡ ಬೇರೆ ಹೆಸರನ್ನು ನಿರ್ಧರಿಸಬಹುದು. ಪಕ್ಷ ಇದರ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಮಾರ್ಚ್ 26 ರಂದು ಪ್ರಧಾನಿ ನಿವಾಸಕ್ಕೆ ಆಪ್ ಘೇರಾವ್
ಕೇಜ್ರಿವಾಲ್ ಬಂಧನ ಖಂಡಿಸಿ, ದೇಶಾದ್ಯಂತ ಆಪ್ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನು ಮಾರ್ಚ್ 26ರಂದು ಪ್ರಧಾನಿ ನಿವಾಸಕ್ಕೆ ಘೇರಾವ್ ಹಾಕಲು ಆಪ್ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಒಟ್ಟಾರೆ.. ಅರವಿಂದ್ ಕೇಜ್ರಿವಾಲ್ ಬಂಧನದಿಂದ ದೆಹಲಿ ರಾಜಕಾರಣದಲ್ಲಿ ಭಾರೀ ಹೈಡ್ರಾಮಾವೇ ಸೃಷ್ಟಿಯಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ 6 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಿದ ಕಾಂಗ್ರೆಸ್; ಇದಕ್ಕೆ ಅಸಲಿ ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ