/newsfirstlive-kannada/media/post_attachments/wp-content/uploads/2024/08/darshan-2.jpg)
ಪರಪ್ಪನ ಅಗ್ರಹಾರದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್​​ ರಾಜಾತಿಥ್ಯದ ಫೋಟೋ ವೈರಲ್​ ಆಗಿದೆ. ವಿಲ್ಸನ್ ಗಾರ್ಡನ್​​ ನಾಗ, ಕುಳ್ಳ ಸೀನ, ಮ್ಯಾನೇಜರ್​ ನಾಗರಾಜು ಜೊತೆಗೆ​​ ಕುಳಿತುಕೊಂಡು ಟೀ, ಸಿಗರೇಟ್​​ ಸೇದಿಕೊಂಡು ಆರಾಮಾಗಿ ಕುಳಿತಿರುವ ಫೋಟೋ ವೈರಲ್​ ಆಗಿದೆ. ಆದರೀಗ ವಿಲ್ಸನ್​ ಗಾರ್ಡನ್​​ ನಾಗ ಯಾರು? ಆತನ ಹೆಸರಿನಲ್ಲಿ ಪ್ರಕರಣಗಳೆಷ್ಟಿವೆ ಎಂದು ಅನೇಕರು ಹುಡುಕಾಡುತ್ತಿದ್ದಾರೆ. ಈ ಕುರಿತಾಗಿ ಮಾಹಿತಿ ಇಲ್ಲಿದೆ.
ವಿಲ್ಸನ್​​ ಗಾರ್ಡನ್​ ನಾಗ ಯಾರು ಗೊತ್ತಾ?
ವಿಲ್ಸನ್​​ ಗಾರ್ಡನ್​ ನಾಗ 18 ವರ್ಷಗಳಿಂದ ರೌಡಿಸಂನಲ್ಲಿ ಸಕ್ರೀಯವಾಗಿದ್ದು, ಈತ ಕಳ್ಳ ವೃತ್ತಿಯನ್ನು ಮಾಡುತ್ತಿದ್ದನು. ಒಂದು ಕಾಲದಲ್ಲಿ ಸೈಲೆಂಟ್​ ಸುನೀಲ ಮತ್ತು ಒಂಟೆ ರೋಹಿತನ ಜೊತೆಗೆ ಇದ್ದನು. ಅವರು ಹೇಳಿದಂತೆ ಕೇಳುತ್ತಿದ್ದನು.
ಸೈಲೆಂಟ್​ ಸುನೀಲ ಮತ್ತು ಒಂಟೆ ರೋಹಿತನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ವಿಲ್ಸನ್​​ ಗಾರ್ಡನ್​ ನಾಗ ಅವರು ಹೇಳಿದ್ದವರ ಮೇಲೆ ಹಲ್ಲೆ ಮಾಡುತ್ತಿದ್ದನು. ಆದರೀಗ ಸ್ವತಂತ್ರವಾಗಿ ಡಾನ್​ ಎನಿಸಿಕೊಳ್ಳುವಂತೆ ಬೆಳೆದಿದ್ದಾನೆ.
/newsfirstlive-kannada/media/post_attachments/wp-content/uploads/2024/08/WILSON-GARDEN-NAGA.jpg)
ವಿಲ್ಸನ್​​ ಗಾರ್ಡನ್​ ನಾಗ ಮೇಲಿರುವ ಕೇಸ್​​ಗಳು
ವಿಲ್ಸನ್​​ ಗಾರ್ಡನ್​ ನಾಗ ಮೇಲೆ ಹಲವು ಕೇಸ್​ಗಳಿವೆ. ಪ್ರಾರಂಭದಲ್ಲಿ 2005ರಲ್ಲಿ ಆಡುಗೋಡಿ ಠಾಣೆಯಲ್ಲಿ ಕಳ್ಳತನ ಕೇಸ್​ನಲ್ಲಿ ಈತ ಜೈಲು ಸೇರಿದ್ದನು. ಬಳಿಕ ಜಾಮೀನು ಮೇಲೆ ಹೊರಬಂದಿದ್ದನು. ಹೊರಬಂದ ನಾಗನಿಗೆ ಹಲವು ರೌಡಿಶೀಟರ್​ಗಳ ಸಂಪರ್ಕ ಬೆಳೆಯಿತು.
2009ರಲ್ಲಿ ಕಲಾಸಿಪಾಲ್ಯದ ರೌಡಿ ಗೇಟ್​ ಗಣೇಶ್ ಕೊಲೆ ಕೇಸ್​​​ನಲ್ಲಿ ವಿಲ್ಸನ್​​ ಗಾರ್ಡನ್​ ನಾಗ ಅರೆಸ್ಟ್​​ ಆಗಿದ್ದನು.​ ಈ ಕೇಸ್​ನಲ್ಲಿ 14 ರೌಡಿಗಳು ಅರೆಸ್ಟ್​​ ಆಗ್ತಾರೆ.
2012ರಲ್ಲಿ ಕಿಡ್ನಾಪ್​​, ದರೋಡೆ, ದರೋಡೆಗೆ ಯತ್ನ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ನಂತರ ಕಾಟನ್​ ಪೇಟೆ ರೌಡಿಶೀಟರ್​​ ಗುಪ್ಪನ ಕೊಲೆ ಪ್ರಕರಣದಲ್ಲಿ ಈತ 2 ವರ್ಷ ಜೈಲು ಸೇರಿದ್ದನು. ನಂತರ ಬೇಲ್​ ಮೇಲೆ ಹೊರ ಬಂದಿದ್ದನು.
2014ರಲ್ಲಿ ಶ್ರೀನಿವಾಸ ಎಂಬುವವನ ಕೊಲೆ ಕೇಸ್​​ನಲ್ಲಿ ಭಾಗಿಯಾಗಿ ವಿಲ್ಸನ್​​ ಗಾರ್ಡನ್​​ ನಾಗ ಅರೆಸ್ಟ್​ ಆಗ್ತಾನೆ. ಅದೇ ವರ್ಷ ಆತ ಬೇಲ್​ ಮೇಲೆ ಬರ್ತಾನೆ. ಬಳಿಕ ನಕರಾ ಬಾಬು ಎಂಬುವವನನ್ನು ಕೊಲೆ ಮಾಡ್ತಾನೆ. ಜೈಲು ಸೇರ್ತಾನೆ.
/newsfirstlive-kannada/media/post_attachments/wp-content/uploads/2024/08/WILSON-GARDEN-NAGA-1.jpg)
2016ರಲ್ಲಿ ವೈಟ್​​ಫೀಲ್ಡ್​ನಲ್ಲಿ ಸೊಹೇಲ್​​ ಎಂಬಾತನನ್ನು ಕೊಲೆ ಮಾಡ್ತಾನೆ. ಈ ಕೇಸ್​ನಲ್ಲಿ ವಿಲ್ಸನ್​​ ಗಾರ್ಡನ್​ ನಾಗ ಸೇರಿ 16 ಜನ ಅರೆಸ್ಟ್​ ಆಗ್ತಾರೆ. 2018ರಲ್ಲಿ ಸೈಲೆಂಟ್​ ಸುನೀಲ ಮತ್ತು ಒಂಟೆ ಸುನೀಲನ ಜೊತೆಗೆ ಆರ್ಮ್ಸ್​​ ಆ್ಯಕ್ಟ್​​ ಮತ್ತು ದರೋಡೆ ಯತ್ನ ಕೇಸ್​​ನಲ್ಲಿ ಅರೆಸ್ಟ್​ ಆಗುತ್ತಾನೆ.
2020ರಲ್ಲಿ ಅನ್ನಪೂರ್ಣೇಶ್ವರಿ ನಗರದಲ್ಲಿ ಜಿಮ್​​ ಸುಬ್ರಮಣಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗುತ್ತಾನೆ. ಅದೇ ವರ್ಷ ಹಾಸನದ ಹಿರೀಸಾವೆಯಲ್ಲಿ ಶಾಂತಿನಗರ ಲಿಂಗನ ಕೊಲೆ ಮಾಡುತ್ತಾನೆ. 2021ರಲ್ಲಿ ಕೋರಮಂಗಲದಲ್ಲಿ NDPS ಆಕ್ಟ್​​ನಡಿಯಲ್ಲಿ ಪ್ರಕರಣ ದಾಖಲಾಗುತ್ತದೆ.
ಸದ್ಯ ಸಿದ್ದಾಪುರ ಮಹೇಶ್​​ ಕೊಲೆ ಮಾಡಿಸಿ ವಿಲ್ಸನ್​​ ಗಾರ್ಡನ್​ ನಾಗ ಜೈಲು ಸೇರಿದ್ದಾನೆ. ಕೋಕಾ ಕಾಯ್ಡೆಯಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಚ್ಚರಿ ಸಂಗತಿ ಎಂದರೆ ಸಾಲು ಸಾಲು ಕೊಲೆ ಪ್ರಕರಣದಲ್ಲಿ ತವರು ಮನೆಗೆ ಹೋದಂತೆ ಜೈಲು ಸೇರಿರುವ ವಿಲ್ಸನ್​​ ಗಾರ್ಡನ್​ ನಾಗ ಇಷ್ಟು ಆರಾಮಾಗಿ ಅಲ್ಲಿ ಇದ್ದಾನೆ ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮಾತ್ರವಲ್ಲದೆ ಆತ ಜೈಲಲ್ಲಿ ಇದ್ದಾನೋ ಅಥವಾ ಅರಮನೆಯಲ್ಲಿ ಇದ್ದಾನೋ ಎಂಬ ಸಂಗತಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us