newsfirstkannada.com

ಕಾರಿನಲ್ಲಿ ಮಗು ಮರೆತು ಮದ್ವೆಗೆ ಹೋದ ಅಪ್ಪ-ಅಮ್ಮ; ನರಳಿ ನರಳಿ ಪ್ರಾಣಬಿಟ್ಟ 3 ವರ್ಷದ ಕಂದಮ್ಮ

ಸಾಂದರ್ಭಿಕ ಚಿತ್ರ

Share :

Published May 16, 2024 at 2:36pm

    ಪೋಷಕರ ಕರುಳು ಚುರ್ ಎನ್ನುತ್ತೆ ಈ ದಾರುಣ ಘಟನೆ

    ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ, ಎಚ್ಚರ

    2 ಗಂಟೆಗಳ ಕಾಲ ಮದ್ವೆಯಲ್ಲಿ ಪೋಷಕರು ಎಂಜಾಯ್

ರಾಜಸ್ಥಾನದ ಕೋಟಾದಲ್ಲಿ ದಾರುಣ ಘಟನೆ ನಡೆದಿದ್ದು, ಮಕ್ಕಳ ಹೆತ್ತವರ ಕರಳು ಚುರ್ ಅನ್ನೋ ಸುದ್ದಿ ಇದಾಗಿದೆ. ಮೂರು ವರ್ಷದ ಮಗುವನ್ನು ಕಳೆದುಕೊಂಡು ಪೋಷಕರು ಕಣ್ಣೀರಲ್ಲಿ ಮುಳುಗಿದ್ದಾರೆ.

ಆಗಿದ್ದೇನು..?
ಜೋರಾವರಪುರದಲ್ಲಿ ಪ್ರದೀಪ್ ಅನ್ನೋರು ವಾಸವಿದ್ದಾರೆ. ಪ್ರದೀಪ್ ದಂಪತಿಗೆ ಇಬ್ಬರು ಮುದ್ದಾದ ಹೆಣ್ಮಕ್ಕಳಿದ್ದರು. ಇತ್ತೀಚೆಗೆ ಈ ದಂಪತಿ ತಮ್ಮ ಮಕ್ಕಳ ಜೊತೆ ಸಂಬಂಧಿಕರ ಮದುವೆ ತೆರಳಿತ್ತು. ಮದುವೆ ನಡೆಯುತ್ತಿದ್ದ ಸ್ಥಳ ಬರುತ್ತಿದ್ದಂತೆಯೇ, ಸಂಬಂಧಿಕರು ಎದುರಾದರು. ಹೀಗಾಗಿ ಪ್ರದೀಪ್ ಕಾರನ್ನು ನಿಲ್ಲಿಸಿದ್ದರು.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್​ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?

ಆಗ ಕಾರಿನಿಂದ ಪ್ರದೀಪ್ ಪತ್ನಿ ಮತ್ತು ಹಿರಿಯ ಮಗಳು ಇಳಿದಿದ್ದರು. ಇವರ ಕಿರಿಯ ಮಗಳು ಕಾರಿನ ಹಿಂದಿನ ಸೀಟಿನಲ್ಲಿ ನಿದ್ರೆಗೆ ಜಾರಿತ್ತು. ಇದು ಪ್ರದೀಪ್ ಗಮನಕ್ಕೆ ಬಂದಿರಲಿಲ್ಲ. ನಂತರ ಪ್ರದೀಪ್ ತಮ್ಮ ಕಾರನ್ನು ಪಾರ್ಕಿಂಗ್​ಗೆ ಹೋಗಿ ಪಾರ್ಕ್ ಮಾಡಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಬರೋಬ್ಬರಿ 2 ಗಂಟೆಗಳ ಕಾಲ ಮದುವೆ ಮನೆಯಲ್ಲಿ ಸುತ್ತಾಟ ನಡೆಸಿದ್ದಾರೆ. ಸಂಬಂಧಿಕರ ಜೊತೆ ಮಾತನಾಡಿ ಮಜಾ ಮಾಡಿದ್ದಾರೆ. ಕೊನೆಗೆ ಮಗಳು ನೆನಪಾಗಿದೆ. ಎಲ್ಲಿ ಎಂದು ಹುಡುಕಾಟ ನಡೆಸಿದ್ದಾರೆ. ಇಡೀ ಮದುವೆ ಮನೆಯಲ್ಲಿ ಶೋಧ ನಡೆಸಿದ್ದಾರೆ. ಕೊನೆಗೆ ಕಾರು ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದಿದ್ದಾರೆ. ಕಾರಿನ ಒಳಗೆ ನೋಡಿದಾಗ ಮೂರು ವರ್ಷದ ಮಗು ಗೌರವಿಕಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಮೃತಪಟ್ಟಿದ್ದಾಳೆ ಎಂದು ಘೋಷಣೆ ಮಾಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೆಸ್ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಆರ್​ಸಿಬಿಗೆ ಹಿನ್ನಡೆ ಮೇಲೆ ಹಿನ್ನಡೆ.. ಇಷ್ಟಕ್ಕೆಲ್ಲ ಕಾರಣ ಆ 1 ರನ್​, ಆ 1 ಸೋಲು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಾರಿನಲ್ಲಿ ಮಗು ಮರೆತು ಮದ್ವೆಗೆ ಹೋದ ಅಪ್ಪ-ಅಮ್ಮ; ನರಳಿ ನರಳಿ ಪ್ರಾಣಬಿಟ್ಟ 3 ವರ್ಷದ ಕಂದಮ್ಮ

https://newsfirstlive.com/wp-content/uploads/2024/05/CAR.jpg

    ಪೋಷಕರ ಕರುಳು ಚುರ್ ಎನ್ನುತ್ತೆ ಈ ದಾರುಣ ಘಟನೆ

    ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ, ಎಚ್ಚರ

    2 ಗಂಟೆಗಳ ಕಾಲ ಮದ್ವೆಯಲ್ಲಿ ಪೋಷಕರು ಎಂಜಾಯ್

ರಾಜಸ್ಥಾನದ ಕೋಟಾದಲ್ಲಿ ದಾರುಣ ಘಟನೆ ನಡೆದಿದ್ದು, ಮಕ್ಕಳ ಹೆತ್ತವರ ಕರಳು ಚುರ್ ಅನ್ನೋ ಸುದ್ದಿ ಇದಾಗಿದೆ. ಮೂರು ವರ್ಷದ ಮಗುವನ್ನು ಕಳೆದುಕೊಂಡು ಪೋಷಕರು ಕಣ್ಣೀರಲ್ಲಿ ಮುಳುಗಿದ್ದಾರೆ.

ಆಗಿದ್ದೇನು..?
ಜೋರಾವರಪುರದಲ್ಲಿ ಪ್ರದೀಪ್ ಅನ್ನೋರು ವಾಸವಿದ್ದಾರೆ. ಪ್ರದೀಪ್ ದಂಪತಿಗೆ ಇಬ್ಬರು ಮುದ್ದಾದ ಹೆಣ್ಮಕ್ಕಳಿದ್ದರು. ಇತ್ತೀಚೆಗೆ ಈ ದಂಪತಿ ತಮ್ಮ ಮಕ್ಕಳ ಜೊತೆ ಸಂಬಂಧಿಕರ ಮದುವೆ ತೆರಳಿತ್ತು. ಮದುವೆ ನಡೆಯುತ್ತಿದ್ದ ಸ್ಥಳ ಬರುತ್ತಿದ್ದಂತೆಯೇ, ಸಂಬಂಧಿಕರು ಎದುರಾದರು. ಹೀಗಾಗಿ ಪ್ರದೀಪ್ ಕಾರನ್ನು ನಿಲ್ಲಿಸಿದ್ದರು.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್​ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?

ಆಗ ಕಾರಿನಿಂದ ಪ್ರದೀಪ್ ಪತ್ನಿ ಮತ್ತು ಹಿರಿಯ ಮಗಳು ಇಳಿದಿದ್ದರು. ಇವರ ಕಿರಿಯ ಮಗಳು ಕಾರಿನ ಹಿಂದಿನ ಸೀಟಿನಲ್ಲಿ ನಿದ್ರೆಗೆ ಜಾರಿತ್ತು. ಇದು ಪ್ರದೀಪ್ ಗಮನಕ್ಕೆ ಬಂದಿರಲಿಲ್ಲ. ನಂತರ ಪ್ರದೀಪ್ ತಮ್ಮ ಕಾರನ್ನು ಪಾರ್ಕಿಂಗ್​ಗೆ ಹೋಗಿ ಪಾರ್ಕ್ ಮಾಡಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಬರೋಬ್ಬರಿ 2 ಗಂಟೆಗಳ ಕಾಲ ಮದುವೆ ಮನೆಯಲ್ಲಿ ಸುತ್ತಾಟ ನಡೆಸಿದ್ದಾರೆ. ಸಂಬಂಧಿಕರ ಜೊತೆ ಮಾತನಾಡಿ ಮಜಾ ಮಾಡಿದ್ದಾರೆ. ಕೊನೆಗೆ ಮಗಳು ನೆನಪಾಗಿದೆ. ಎಲ್ಲಿ ಎಂದು ಹುಡುಕಾಟ ನಡೆಸಿದ್ದಾರೆ. ಇಡೀ ಮದುವೆ ಮನೆಯಲ್ಲಿ ಶೋಧ ನಡೆಸಿದ್ದಾರೆ. ಕೊನೆಗೆ ಕಾರು ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದಿದ್ದಾರೆ. ಕಾರಿನ ಒಳಗೆ ನೋಡಿದಾಗ ಮೂರು ವರ್ಷದ ಮಗು ಗೌರವಿಕಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಮೃತಪಟ್ಟಿದ್ದಾಳೆ ಎಂದು ಘೋಷಣೆ ಮಾಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೆಸ್ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಆರ್​ಸಿಬಿಗೆ ಹಿನ್ನಡೆ ಮೇಲೆ ಹಿನ್ನಡೆ.. ಇಷ್ಟಕ್ಕೆಲ್ಲ ಕಾರಣ ಆ 1 ರನ್​, ಆ 1 ಸೋಲು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More