ಪರಪ್ಪನ ಅಗ್ರಹಾರದಲ್ಲಿ ದಚ್ಚು ಮೀಟ್ ಮಾಡಿದ ರಚ್ಚು.. 3 ಬ್ಯಾಗ್‌ಗಳಲ್ಲಿ ಡಿಂಪಲ್ ಕ್ವೀನ್ ತಂದು ಕೊಟ್ಟಿದ್ದೇನು?

author-image
Gopal Kulkarni
Updated On
ಪರಪ್ಪನ ಅಗ್ರಹಾರದಲ್ಲಿ ದಚ್ಚು ಮೀಟ್ ಮಾಡಿದ ರಚ್ಚು.. 3 ಬ್ಯಾಗ್‌ಗಳಲ್ಲಿ ಡಿಂಪಲ್ ಕ್ವೀನ್ ತಂದು ಕೊಟ್ಟಿದ್ದೇನು?
Advertisment
  • ಪರಪ್ಪನ ಅಗ್ರಹಾರದಲ್ಲಿ ದರ್ಶನ್​ರನ್ನು ಮೀಟ್ ಮಾಡಿದ ನಟಿ ರಚಿತಾ ರಾಮ್
  • ಮೂರು ಬ್ಯಾಗ್​ಗಳೊಂದಿಗೆ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದ ಡಿಂಪಲ್ ಕ್ವೀನ್
  • ದರ್ಶನ್ ಜೈಲು ಸೇರಿ 2 ತಿಂಗಳಗಳ ಬಳಿಕ ಮೊದಲ ಬಾರಿ ಭೇಟಿ ಮಾಡಿದ ರಚಿತಾ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅಂದರ್ ಆಗಿರುವ ನಟ ದರ್ಶನ್ ಅವರ ಜೈಲು ವಾಸ ಮುಂದುವರಿದಿದೆ. ಮನೆ ಊಟಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ದಚ್ಚು ಅವರಿಗೆ ಸದ್ಯ ಆ ಭಾಗ್ಯವೂ ಕೂಡ ಇಲ್ಲ. ಹೀಗಾಗಿ ದರ್ಶನ್ ಭೇಟಿಗೆ ಅನಿವಾರ್ಯವಾಗಿ ಎಲ್ಲರೂ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಬೇಕಾದ ಸಂದರ್ಭ ಬಂದಿದೆ. ಈಗಾಗಲೇ ಹಲವಾರು ಚಿತ್ರನಟ ನಟಿಯರು ದರ್ಶನ್ ಭೇಟಿಗೆ ಅವಕಾಶ ಕೋರಿ, ಅವರನ್ನು ಹೋಗಿ ಜೈಲಿನಲ್ಲಿ ಭೇಟಿಯಾಗಿ ಬಂದಿದ್ದಾರೆ.

publive-image

ಇದನ್ನೂ ಓದಿ:VIDEO: ಕನ್ನಡಿಗರ ಮನಸು ಗೆದ್ದ ‘ನಾನು ನಂದಿನಿ’ ಖ್ಯಾತಿ ವಿಕಾಸ್ ವಿಕ್ಕಿಪೀಡಿಯ; ಈ ಸಲ ಏನ್ಮಾಡಿದ್ರು?

ಇಂದು ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿ, ದರ್ಶನ್​ರನ್ನು ಭೇಟಿಯಾಗಿ ಬಂದಿದ್ದಾರೆ. ದರ್ಶನ್ ಜೈಲು ಸೇರಿ ಮೂರು ತಿಂಗಳಗಳ ಬಳಿಕ ರಚಿತಾ ರಾಮ್ ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌.. ದರ್ಶನ್​ A1 ಮಾಡ್ತಿರೋದೇಕೆ? ಅಸಲಿ ರಹಸ್ಯ ಇಲ್ಲಿದೆ!

publive-image

ಮೂರು ಬ್ಯಾಗ್​ಗಳ ಮೂಲಕ ಜೈಲಿಗೆ ಆಗಮಿಸಿದ ರಚಿತಾ, ದರ್ಶನ್ ಆಪ್ತ ಸಚ್ಚಿದಾನಂದ್​ ಜೊತೆಗೆ ಜೈಲಿಗೆ ಆಗಮಿಸಿದ್ದರು. ದರ್ಶನ್ ನನ್ನ ಗುರು ಅಂತ ಇತ್ತೀಚಿಗೆ ಒಂದು ಪೋಸ್ಟ್​​ನಲ್ಲಿ ತಿಳಿಸಿದ್ದ ರಚಿತಾ, ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿರೋದು ನಂಬಲು ಕಷ್ಟ ಸಾಧ್ಯ ಎಂದು ತಿಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment