/newsfirstlive-kannada/media/post_attachments/wp-content/uploads/2024/08/Rachita-Ram-Darshan.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅಂದರ್ ಆಗಿರುವ ನಟ ದರ್ಶನ್ ಅವರ ಜೈಲು ವಾಸ ಮುಂದುವರಿದಿದೆ. ಮನೆ ಊಟಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ದಚ್ಚು ಅವರಿಗೆ ಸದ್ಯ ಆ ಭಾಗ್ಯವೂ ಕೂಡ ಇಲ್ಲ. ಹೀಗಾಗಿ ದರ್ಶನ್ ಭೇಟಿಗೆ ಅನಿವಾರ್ಯವಾಗಿ ಎಲ್ಲರೂ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಬೇಕಾದ ಸಂದರ್ಭ ಬಂದಿದೆ. ಈಗಾಗಲೇ ಹಲವಾರು ಚಿತ್ರನಟ ನಟಿಯರು ದರ್ಶನ್ ಭೇಟಿಗೆ ಅವಕಾಶ ಕೋರಿ, ಅವರನ್ನು ಹೋಗಿ ಜೈಲಿನಲ್ಲಿ ಭೇಟಿಯಾಗಿ ಬಂದಿದ್ದಾರೆ.
/newsfirstlive-kannada/media/post_attachments/wp-content/uploads/2024/08/RACHITA-RAM-MEETS-DARSHAN.jpg)
ಇದನ್ನೂ ಓದಿ:VIDEO: ಕನ್ನಡಿಗರ ಮನಸು ಗೆದ್ದ ‘ನಾನು ನಂದಿನಿ’ ಖ್ಯಾತಿ ವಿಕಾಸ್ ವಿಕ್ಕಿಪೀಡಿಯ; ಈ ಸಲ ಏನ್ಮಾಡಿದ್ರು?
ಇಂದು ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿ, ದರ್ಶನ್​ರನ್ನು ಭೇಟಿಯಾಗಿ ಬಂದಿದ್ದಾರೆ. ದರ್ಶನ್ ಜೈಲು ಸೇರಿ ಮೂರು ತಿಂಗಳಗಳ ಬಳಿಕ ರಚಿತಾ ರಾಮ್ ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/RACHITA-RAM-MEETS-DARSHAN-1.jpg)
ಮೂರು ಬ್ಯಾಗ್​ಗಳ ಮೂಲಕ ಜೈಲಿಗೆ ಆಗಮಿಸಿದ ರಚಿತಾ, ದರ್ಶನ್ ಆಪ್ತ ಸಚ್ಚಿದಾನಂದ್​ ಜೊತೆಗೆ ಜೈಲಿಗೆ ಆಗಮಿಸಿದ್ದರು. ದರ್ಶನ್ ನನ್ನ ಗುರು ಅಂತ ಇತ್ತೀಚಿಗೆ ಒಂದು ಪೋಸ್ಟ್​​ನಲ್ಲಿ ತಿಳಿಸಿದ್ದ ರಚಿತಾ, ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿರೋದು ನಂಬಲು ಕಷ್ಟ ಸಾಧ್ಯ ಎಂದು ತಿಳಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us