ಸಿಂಗಲ್ ಆಗಿ ಮಿಂಗಲ್ ಆದವರ ಮನಸ್ಸಿನ ಮಾತುಗಳು ಇಲ್ಲಿವೆ!
ಬಿಗ್ಬಾಸ್ ಶೋ ಗಾಸಿಪ್ ಮಾಡೋರಿಗೆ ಹಾಟ್ ಸ್ಪಾಟ್ ಇದು
ನ್ಯೂಸ್ಫಸ್ಟ್ ರೌಂಡ್ ಟೇಬಲ್ನಲ್ಲಿ ಬಿಗ್ಬಾಸ್ 5 ಸ್ಪರ್ಧಿಗಳು
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10- 15ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ಬಾಸ್ನಲ್ಲಿ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿ ಆಚೆ ಬಂದಿರಲಿಲ್ಲ. ಆದರೆ ಮಿಡ್ ವೀಕ್ ಎಲಿಮಿನೇಷನ್ ಇರಲಿದೆ.
ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳ ಪೈಕಿ ನಮ್ರತಾ ಗೌಡ, ತನಿಷಾ, ಡ್ರೋನ್ ಪ್ರಾತಾಪ್,ವಿನಯ್, ಸಂಗೀತಾ, ಕಾರ್ತಿಕ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಉಳಿದುಕೊಂಡಿದ್ದಾರೆ. ಬಿಗ್ಬಾಸ್ ಶುರುವಾದ ಮೊದಲ ವಾರದಿಂದ ಒಬ್ಬೊಬ್ಬರಾಗಿ ಆಚೆ ಹೋಗುತ್ತಿದ್ದರು. ಅವರ ಪೈಕಿ 5 ಸ್ಪರ್ಧಿಗಳು ನ್ಯೂಸ್ಫಸ್ಟ್ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಸ್ನೇಹಿತ್, ರಕ್ಷಕ್ ಬುಲೆಟ್, ನೀತು, ಪವಿ ಹಾಗೂ ಮೈಕಲ್ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್ಬಾಸ್ 5 ಸ್ಪರ್ಧಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.
ಇದನ್ನು ಓದಿ: BIGG BOSS: ಬಿಗ್ಬಾಸ್ ಮನೆಯಲ್ಲಿ ಈ ವಾರ ಎಲ್ಲರೂ ಖುಷ್.. ಸಂಕ್ರಾಂತಿಗೆ ಸಮ್ಥಿಂಗ್ ಸ್ಪೆಷಲ್!
ಬಿಗ್ಬಾಸ್ನಲ್ಲಿ ಯಾರನ್ನಾದ್ರೂ ಹೊಡೆದು ಆಚೆ ಬರ್ತಿದ್ದೆ ಎಂದು ರಕ್ಷಕ ಬುಲೆಟ್ ಹೇಳಿದ್ದಾರೆ. ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಅವರು, ನಾನು ಎಲಿಮಿನೇಟ್ ಆಗೋ ಮುಂಚೆ ಸುದೀಪ್ ಅಣ್ಣ ಒಂದು ಮಾತನ್ನು ಕೇಳುತ್ತಾರೆ. ಈ ವಾರ ಏನೂ ಮಾಡಿಲ್ಲ ಎಂದಿದ್ದರು. ನಾನು ಮತ್ತೆ ತುಕಾಲಿ ಸಂತೋಷ್ ಅವರು ಬಾತ್ ರೂಂನಲ್ಲಿ ಕುಳಿತುಕೊಂಡಾಗ ಈ ಬಗ್ಗೆ ಮಾತಾಡಿದ್ದೇವೆ. ಟಾಸ್ಕ್ ಆಡಿದ್ದೀನಿ, ಡೈಲಾಗ್ ಹೊಡೆದಿದ್ದೇನೆ, ಡ್ಯಾನ್ಸ್ ಮಾಡಿದ್ದೀವಿ, ಮಜಾ ಮಾಡಿದ್ದೇವೆ ಇನ್ನು ಏನ್ ಮಾಡಬೇಕು. ಒಂದು ಹೊಡೆಯಬೇಕು ಇಲ್ಲ, ಅಂದ್ರೆ ಮುಖ್ಯದ್ವಾರದಿಂದ ಆಚೆ ಹೋಗಬೇಕು ಅಷ್ಟೇ. ಅದು ಒಂದನ್ನು ಮಿಸ್ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿಂಗಲ್ ಆಗಿ ಮಿಂಗಲ್ ಆದವರ ಮನಸ್ಸಿನ ಮಾತುಗಳು ಇಲ್ಲಿವೆ!
ಬಿಗ್ಬಾಸ್ ಶೋ ಗಾಸಿಪ್ ಮಾಡೋರಿಗೆ ಹಾಟ್ ಸ್ಪಾಟ್ ಇದು
ನ್ಯೂಸ್ಫಸ್ಟ್ ರೌಂಡ್ ಟೇಬಲ್ನಲ್ಲಿ ಬಿಗ್ಬಾಸ್ 5 ಸ್ಪರ್ಧಿಗಳು
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10- 15ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ಬಾಸ್ನಲ್ಲಿ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿ ಆಚೆ ಬಂದಿರಲಿಲ್ಲ. ಆದರೆ ಮಿಡ್ ವೀಕ್ ಎಲಿಮಿನೇಷನ್ ಇರಲಿದೆ.
ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳ ಪೈಕಿ ನಮ್ರತಾ ಗೌಡ, ತನಿಷಾ, ಡ್ರೋನ್ ಪ್ರಾತಾಪ್,ವಿನಯ್, ಸಂಗೀತಾ, ಕಾರ್ತಿಕ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಉಳಿದುಕೊಂಡಿದ್ದಾರೆ. ಬಿಗ್ಬಾಸ್ ಶುರುವಾದ ಮೊದಲ ವಾರದಿಂದ ಒಬ್ಬೊಬ್ಬರಾಗಿ ಆಚೆ ಹೋಗುತ್ತಿದ್ದರು. ಅವರ ಪೈಕಿ 5 ಸ್ಪರ್ಧಿಗಳು ನ್ಯೂಸ್ಫಸ್ಟ್ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಸ್ನೇಹಿತ್, ರಕ್ಷಕ್ ಬುಲೆಟ್, ನೀತು, ಪವಿ ಹಾಗೂ ಮೈಕಲ್ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್ಬಾಸ್ 5 ಸ್ಪರ್ಧಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.
ಇದನ್ನು ಓದಿ: BIGG BOSS: ಬಿಗ್ಬಾಸ್ ಮನೆಯಲ್ಲಿ ಈ ವಾರ ಎಲ್ಲರೂ ಖುಷ್.. ಸಂಕ್ರಾಂತಿಗೆ ಸಮ್ಥಿಂಗ್ ಸ್ಪೆಷಲ್!
ಬಿಗ್ಬಾಸ್ನಲ್ಲಿ ಯಾರನ್ನಾದ್ರೂ ಹೊಡೆದು ಆಚೆ ಬರ್ತಿದ್ದೆ ಎಂದು ರಕ್ಷಕ ಬುಲೆಟ್ ಹೇಳಿದ್ದಾರೆ. ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಅವರು, ನಾನು ಎಲಿಮಿನೇಟ್ ಆಗೋ ಮುಂಚೆ ಸುದೀಪ್ ಅಣ್ಣ ಒಂದು ಮಾತನ್ನು ಕೇಳುತ್ತಾರೆ. ಈ ವಾರ ಏನೂ ಮಾಡಿಲ್ಲ ಎಂದಿದ್ದರು. ನಾನು ಮತ್ತೆ ತುಕಾಲಿ ಸಂತೋಷ್ ಅವರು ಬಾತ್ ರೂಂನಲ್ಲಿ ಕುಳಿತುಕೊಂಡಾಗ ಈ ಬಗ್ಗೆ ಮಾತಾಡಿದ್ದೇವೆ. ಟಾಸ್ಕ್ ಆಡಿದ್ದೀನಿ, ಡೈಲಾಗ್ ಹೊಡೆದಿದ್ದೇನೆ, ಡ್ಯಾನ್ಸ್ ಮಾಡಿದ್ದೀವಿ, ಮಜಾ ಮಾಡಿದ್ದೇವೆ ಇನ್ನು ಏನ್ ಮಾಡಬೇಕು. ಒಂದು ಹೊಡೆಯಬೇಕು ಇಲ್ಲ, ಅಂದ್ರೆ ಮುಖ್ಯದ್ವಾರದಿಂದ ಆಚೆ ಹೋಗಬೇಕು ಅಷ್ಟೇ. ಅದು ಒಂದನ್ನು ಮಿಸ್ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ