ಅಮ್ಮ ನಾನು SSLC ಪಾಸ್ ಆದೆ ಎಂದು ಹೇಳಿದ್ದ ಬಾಲಕಿ ಮೀನಾ
ಬಾಲಕಿ ರುಂಡ ಒಂದು ಕಡೆ ಮುಂಡ ಒಂದು ಕಡೆ ಬಿಸಾಡಿ ಹೋಗಿದ್ದ
ಮೀನಾ ಮತ್ತು ಮೊಣ್ಣಂಡ ಪ್ರಕಾಶ್ ಇಬ್ಬರು ಲವ್ ಮಾಡುತ್ತಿದ್ದರು
ಕೊಡಗು: SSLC ವಿದ್ಯಾರ್ಥಿನಿಯ ರುಂಡ ಕತ್ತರಿಸಿ ತಲೆ ಮರೆಸಿಕೊಂಡಿದ್ದ ಆರೋಪಿ ಪ್ರಕಾಶ್ ಶವವಾಗಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿ ಆರೋಪಿ ಪ್ರಕಾಶ್, ಬಾಲಕಿಯನ್ನು ಭಯಾನಕವಾಗಿ ಕೊಂದು ರುಂಡವನ್ನು ತೆಗೆದುಕೊಂಡು ಹೋಗಿದ್ದ. ಪ್ರಕಾಶ್ ಎಲ್ಲಿಗೆ ಹೋಗಿದ್ದಾನೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ.
ಇದನ್ನೂ ಓದಿ: VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ
ಕೊಲೆಯಾದ ಬಾಲಕಿಯ ರುಂಡದ ಜೊತೆಗೆ ಪೊಲೀಸರು ಆರೋಪಿಯ ಗುರುತು ಪತ್ತೆ ಹಚ್ಚಲು ಬಲೆ ಬೀಸಿದ್ದರು. ಇದೀಗ ಬಂದ ಮಾಹಿತಿ ಪ್ರಕಾರ ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಪ್ರಕಾಶ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನ್ನ ಮನೆಯ ಸಮೀಪದಲ್ಲೇ ಪ್ರಕಾಶ್ ನೇಣಿಗೆ ಶರಣಾಗಿದ್ದಾನೆ. ಕೊಲೆಗಾರ ಪ್ರಕಾಶ್ ಮೃತದೇಹ ಪತ್ತೆಯಾದರೂ ಕೊಲೆಯಾದ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ. ಸದ್ಯ ಬಾಲಕಿಯ ರುಂಡ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಏನಿದು ಘಟನೆ?
ನಿನ್ನೆ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದೆ. ಮಧ್ಯಾಹ್ನದ ವೇಳೆಗೆ ಅಮ್ಮಾ ನಾನು 10ನೇ ತರಗತಿ ಪಾಸ್ ಆದೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದ ಬಾಲಕಿ ಸಂಜೆ ಹೊತ್ತಿಗೆ ಕೊಲೆಯಾಗಿದ್ದಾಳೆ. ಆರೋಪಿ ಮೊಣ್ಣಂಡ ಪ್ರಕಾಶ್ ಬಾಲಕಿ ರುಂಡ ಒಂದು ಕಡೆ. ಮುಂಡ ಒಂದು ಕಡೆ ಬಿಸಾಡಿ ಹೋಗಿದ್ದ.
ಇದನ್ನೂ ಓದಿ: VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ
ಅಸಲಿಗೆ ನಡೆದಿದ್ದೇನು?
ಮೀನಾ ಮತ್ತು ಮೊಣ್ಣಂಡ ಪ್ರಕಾಶ್ ಇಬ್ಬರು ಲವ್ ಮಾಡುತ್ತಿದ್ದರು. ಮನೆಯವರ ಬಳಿ ಒತ್ತಾಯ ಮಾಡಿಕೊಂಡು ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಸಂಜೆ ವೇಳೆ ಮೊಣ್ಣಂಡ ಪ್ರಕಾಶ್ ಬಾಲಕಿಯ ಮನೆಗೆ ಬಂದು ಆಕೆಯ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಆಕೆಯ ಕುತ್ತಿಗೆ ಕತ್ತರಿಸಿ ಎಸ್ಕೇಪ್ ಆಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಮ್ಮ ನಾನು SSLC ಪಾಸ್ ಆದೆ ಎಂದು ಹೇಳಿದ್ದ ಬಾಲಕಿ ಮೀನಾ
ಬಾಲಕಿ ರುಂಡ ಒಂದು ಕಡೆ ಮುಂಡ ಒಂದು ಕಡೆ ಬಿಸಾಡಿ ಹೋಗಿದ್ದ
ಮೀನಾ ಮತ್ತು ಮೊಣ್ಣಂಡ ಪ್ರಕಾಶ್ ಇಬ್ಬರು ಲವ್ ಮಾಡುತ್ತಿದ್ದರು
ಕೊಡಗು: SSLC ವಿದ್ಯಾರ್ಥಿನಿಯ ರುಂಡ ಕತ್ತರಿಸಿ ತಲೆ ಮರೆಸಿಕೊಂಡಿದ್ದ ಆರೋಪಿ ಪ್ರಕಾಶ್ ಶವವಾಗಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿ ಆರೋಪಿ ಪ್ರಕಾಶ್, ಬಾಲಕಿಯನ್ನು ಭಯಾನಕವಾಗಿ ಕೊಂದು ರುಂಡವನ್ನು ತೆಗೆದುಕೊಂಡು ಹೋಗಿದ್ದ. ಪ್ರಕಾಶ್ ಎಲ್ಲಿಗೆ ಹೋಗಿದ್ದಾನೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ.
ಇದನ್ನೂ ಓದಿ: VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ
ಕೊಲೆಯಾದ ಬಾಲಕಿಯ ರುಂಡದ ಜೊತೆಗೆ ಪೊಲೀಸರು ಆರೋಪಿಯ ಗುರುತು ಪತ್ತೆ ಹಚ್ಚಲು ಬಲೆ ಬೀಸಿದ್ದರು. ಇದೀಗ ಬಂದ ಮಾಹಿತಿ ಪ್ರಕಾರ ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಪ್ರಕಾಶ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನ್ನ ಮನೆಯ ಸಮೀಪದಲ್ಲೇ ಪ್ರಕಾಶ್ ನೇಣಿಗೆ ಶರಣಾಗಿದ್ದಾನೆ. ಕೊಲೆಗಾರ ಪ್ರಕಾಶ್ ಮೃತದೇಹ ಪತ್ತೆಯಾದರೂ ಕೊಲೆಯಾದ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ. ಸದ್ಯ ಬಾಲಕಿಯ ರುಂಡ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಏನಿದು ಘಟನೆ?
ನಿನ್ನೆ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದೆ. ಮಧ್ಯಾಹ್ನದ ವೇಳೆಗೆ ಅಮ್ಮಾ ನಾನು 10ನೇ ತರಗತಿ ಪಾಸ್ ಆದೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದ ಬಾಲಕಿ ಸಂಜೆ ಹೊತ್ತಿಗೆ ಕೊಲೆಯಾಗಿದ್ದಾಳೆ. ಆರೋಪಿ ಮೊಣ್ಣಂಡ ಪ್ರಕಾಶ್ ಬಾಲಕಿ ರುಂಡ ಒಂದು ಕಡೆ. ಮುಂಡ ಒಂದು ಕಡೆ ಬಿಸಾಡಿ ಹೋಗಿದ್ದ.
ಇದನ್ನೂ ಓದಿ: VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ
ಅಸಲಿಗೆ ನಡೆದಿದ್ದೇನು?
ಮೀನಾ ಮತ್ತು ಮೊಣ್ಣಂಡ ಪ್ರಕಾಶ್ ಇಬ್ಬರು ಲವ್ ಮಾಡುತ್ತಿದ್ದರು. ಮನೆಯವರ ಬಳಿ ಒತ್ತಾಯ ಮಾಡಿಕೊಂಡು ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಸಂಜೆ ವೇಳೆ ಮೊಣ್ಣಂಡ ಪ್ರಕಾಶ್ ಬಾಲಕಿಯ ಮನೆಗೆ ಬಂದು ಆಕೆಯ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಆಕೆಯ ಕುತ್ತಿಗೆ ಕತ್ತರಿಸಿ ಎಸ್ಕೇಪ್ ಆಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ