/newsfirstlive-kannada/media/post_attachments/wp-content/uploads/2024/01/DUNIYA_VIJAY-2.jpg)
ಬೆಂಗಳೂರು: ‘ಭೀಮ’ ನಟ ದುನಿಯಾ ವಿಜಯ್​ಗೆ ಸಿಸಿಬಿ ಪೊಲೀಸರು ನೋಟಿಸ್ ಕೊಡಲಿಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಚಾಮರಾಜ ಪೇಟೆ ಸಿಸಿಬಿ ಕಚೇರಿಯ ಕೂಗಳತೆ ದೂರದಲ್ಲಿಯೇ ಮಾದಕವಸ್ತು ಸೇವನೆ ಮಾಡುತ್ತಿದ್ದಾರೆ ಎಂದು ದುನಿಯಾ ವಿಜಯ್​ ಹೇಳಿದ್ದರು. ಇದೀಗ ನಟನ ಹೇಳಿಕೆಯ ವಿಚಾರವಾಗಿ ಸಿಸಿಬಿ ನೋಟಿಸ್​ ಕೊಡಲು ಮುಂದಾಗಿದ್ದಾರೆ.
ಭೀಮ ಸಿನಿಮಾದ ರಿಲೀಸ್​ ಬಳಿಕ ನಟ ದುನಿಯಾ ವಿಜಯ್​ ಚಾಮರಾಜಪೇಟೆ ಬಳಿ ಸ್ಥಳವೊಂದರ ಮೇಲೆ ದಾಳಿ ಮಾಡಿದ್ದರು. ಮಾದಕವಸ್ತು ಸೇವನೆಗೆ ಬಳಸುವ ಸಿರೀಂಜ್ ಸೇರಿ ಕೆಲ ವಸ್ತುಗಳನ್ನ ನಟ ಪತ್ತೆ ಮಾಡಿದ್ದರು.
/newsfirstlive-kannada/media/post_attachments/wp-content/uploads/2023/10/duniya-2.jpg)
ಇವಿಷ್ಟು ಅಲ್ಲದೆ, ನಗರದ ಕೆಲ ಮೆಡಿಕಲ್ ಶಾಪ್​​ಗಳಲ್ಲಿ ಟೈಡಾಲ್ ಮಾತ್ರೆಯನ್ನ ಮಾದಕ ವ್ಯಸನಿಗಳಿಗೆ ಮಾರಾಟ ಮಾಡ್ತಿದ್ದಾರೆಂದು ಫೇಸ್​ಬುಕ್ ಲೈವ್​ನಲ್ಲಿ ದುನಿಯಾ ವಿಜಯ್ ತಿಳಿಸಿದ್ದರು. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕು ಎಂದಿದ್ದರು.
ಇದನ್ನೂ ಓದಿ: DASARA 2024: ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುವೇ ನಂಬರ್ ಒನ್! ಆನೆಗಳ ತೂಕ ಮತ್ತು ಆರೋಗ್ಯದ ಬಗ್ಗೆ ಇಲ್ಲಿದೆ ಮಾಹಿತಿ
ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತರವರು, ನಟ ದುನಿಯಾ ವಿಜಯ್​​ ಅವರನ್ನ ಕರೆಸಿ ಅವರ ಬಳಿ ಇರೋ ಮಾಹಿತಿ ಕಲೆಹಾಕಬೇಕು. ಮಾದಕವಸ್ತು ಅಡ್ಡೆಗಳ ಮೇಲೆ ದಾಳಿ ಮಾಡಬೇಕು ಎಂದು ಹೇಳಿದ್ದಾರೆ. ಈ ವಿಚಾರದ ಕುರಿತು ವಕೀಲ ನಾರಾಯಣಸ್ವಾಮಿಯವರು ನಗರ ಪೊಲೀಸ್ ಆಯುಕ್ತ ದಯಾನಂದ್ ರಿಗೆ ದೂರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us