ತಮಿಳು ನಟ ಕೆ ಶ್ರೀಕಾಂತ್, ಕೃಷ್ಣ ಕುಮಾರ್​ಗೆ ಸಮನ್ಸ್ ಜಾರಿ ಮಾಡಿದ ED

ತಮಿಳು ನಟ ಕೆ ಶ್ರೀಕಾಂತ್ ಹಾಗೂ ಕೃಷ್ಣ ಕುಮಾರ್​ಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ಕೊಕೇನ್ ಪೆಡಿಂಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ.

author-image
Ganesh Kerekuli
SHRIKANTH
Advertisment

ಚೆನ್ನೈ: ತಮಿಳು ನಟ ಕೆ.ಶ್ರೀಕಾಂತ್ ಹಾಗೂ ಕೃಷ್ಣ ಕುಮಾರ್​ಗೆ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಕೊಕೇನ್ ಪೆಡಿಂಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತನಿಖೆಗೆ ಇಡಿ ಅಧಿಕಾರಿಗಳು ನೋಟಿಸ್​ ಜಾರಿ ಮಾಡಿದ್ದಾರೆ.

ತಮಿಳು ನಟರಿಗೆ ಇಡಿ ಸಂಕಷ್ಟ..!

ಕೊಕೇನ್ ಪೆಡಿಂಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದೆ. ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಕೆ ಶ್ರೀಕಾಂತ್ ಮತ್ತು ಕೃಷ್ಣ ಕುಮಾರ್​ಗೆ ನುಂಗಂಬಾಕ್ಕಂನಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೊಟೀಸ್​ ಮೂಲಕ ಸೂಚಿಸಿದ್ದಾರೆ.

ಇದನ್ನೂ ಓದಿ: ಕಾವ್ಯಗಾಗಿ ಬಿಗ್​ಬಾಸ್ ಮನೆಯಲ್ಲಿ ಕೆಂಪೇಗೌಡ ಆದ ಗಿಲ್ಲಿ.. ಹೇಗಿದೆ ಗೊತ್ತಾ ಹೊಸ ಲುಕ್​?

tamilu actor
Tamilu actors

ಒಟ್ಟು 11.5 ಗ್ರಾಂ ಕೊಕೇನ್,10.3 ಗ್ರಾಂ ಮೆಥಾಂಫೆಟಮೈನ್, 2.75 ಗ್ರಾಂ ಎಂಡಿಎಂಎ, 2.4 ಗ್ರಾಂ ಒಜಿ ಗಾಂಜಾ ಮತ್ತು 30 ಗ್ರಾಂ ಗಾಂಜಾವನ್ನು ಜಿಸಿಪಿ ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣ ಸಂಬಂಧ ಇಬ್ಬರು ನಟರಾದ ಕೆ.ಶ್ರೀಕಾಂತ್ ಮತ್ತು ಕೃಷ್ಣ ಕುಮಾರ್​ ಅವರನ್ನ ಬಂಧಿಸಲಾಗಿತ್ತು. ಮದ್ರಾಸ್​ ಹೈಕೋರ್ಟ್​ ನೀಡಿದ ಜಾಮೀನಿನ ಮೆರೆಗೆ ಇಬ್ಬರು ಜೈಲಿನಿಂದ ಹೊರ ಬಂದಿದ್ದರು. ಇದೀಗ ಅಕ್ಟೋಬರ್ 28 ರಂದು ಶ್ರೀಕಾಂತ್ ಹಾಗೂ ಅಕ್ಟೋಬರ್ 29 ರಂದು ಕೃಷ್ಣ ಕುಮಾರ್​ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್​ನಲ್ಲಿ  ಸೂಚಿಸಲಾಗಿದೆ.

ಇದನ್ನೂ ಓದಿ:BBK12; ಸೆಡೆ, ನಾಲಿಗೆ ಸೀಳಿ ಬಿಡ್ತೀನಿ.. ಅಯ್ಯೋ ಕಾಕ್ರೂಚ್ ಸುಧಿ ಮಾತುಗಳಿಗೆ ಸ್ಪರ್ಧಿಗಳು ಫುಲ್ ಶಾಕ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tamil Nadu Actor Srikanth
Advertisment