ಕ್ರಿಕೆಟ್ ಶಿಶುವಿನ ಎದುರು ಪಾಕಿಸ್ತಾನಕ್ಕೆ ಮುಖಭಂಗ
ಯುಎಸ್ಎ ಅಬ್ಬರ, ಮುಗ್ಗರಿಸಿದ ಪಾಕ್ ಸ್ಟಾರ್ಸ್
USA ಗೆಲುವಿನ ಹೀರೋಗಳ ರೋಚಕ ಜರ್ನಿ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ನಿರೀಕ್ಷೆಯೂ ಮಾಡದಂತ ಮುಖಭಂಗಕ್ಕೆ ಒಳಗಾಗಿದೆ. ಕ್ರಿಕೆಟ್ ಶಿಶು ಯುಎಸ್ಎ ತಂಡದ ಅಬ್ಬರದ ಆಟದ ಮುಂದೆ ಪಾಕ್ ಪಡೆಯ ಸೂಪರ್ ಸ್ಟಾರ್ಗಳು ಮುಗ್ಗರಿಸಿದ್ದಾರೆ. ಐತಿಹಾಸಿಕ ಗೆಲುವು ದಾಖಲಿಸಿದ ಅಮೆರಿಕಾವನ್ನು ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡ್ತಿದೆ. ಗೆಲುವಿನ ರೂವಾರಿಗಳಂತೂ ಕ್ರಿಕೆಟ್ ಲೋಕದ ಹೀರೋಗಳಾಗಿದ್ದಾರೆ. ಆ ಹೀರೋಗಳ ಜರ್ನಿ ಅಷ್ಟು ರೋಚಕವಾಗಿದೆ.
ಗುಜರಾತ್ನಿಂದ ನ್ಯೂಜೆರ್ಸಿಯವರೆಗೆ..!
ಪಾಕಿಸ್ತಾನ ವಿರುದ್ಧದ ಐತಿಹಾಸಿಕ ಗೆಲುವಿನ ರೂವಾರಿಯೇ ಯುಎಸ್ಎ ಕ್ಯಾಪ್ಟನ್ ಮೊನಕ್ ಪಟೇಲ್. ಈತನ ಅರ್ಧಶತಕ, ಚುರುಕಿನ ನಾಯಕತ್ವ ಯುಎಸ್ಎದ ಐತಿಹಾಸಿಕ ಗೆಲುವಿಗೆ ಕಾರಣವಾಯ್ತು. ಅಸಲಿಗೆ ಈ ಮೋನಕ್ ಪಟೇಲ್ ಮೂಲತಃ ಗುಜರಾತ್ನವರು. ಅಂಡರ್-19 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪ್ರತಿನಿಧಿಸಿದ ಕ್ರಿಕೆಟರ್. ಆ ಬಳಿಕ ಯುಎಸ್ಗೆ ಶಿಫ್ಟ್ ಆದ ಈ ಮೊನಕ್ ಪಟೇಲ್ ಜೀವನ ನಡೆಸಲು ರೆಸ್ಟೋರೆಂಟ್ ಬ್ಯುಸಿನೆಸ್ ಆರಂಭಿಸಿದ್ರು. ಕ್ರಿಕೆಟ್ ಮೇಲಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ. ದಿನ 10 ರಿಂದ 12 ತಾಸು ರೆಸ್ಟೋರೆಂಟ್ ಕಾಲ ಕಳೀತಿದ್ದ ಮೋನಕ್, ನಂತರದ ಸಮಯದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸ್ತಿದ್ರು.
ಇದನ್ನೂ ಓದಿ:ಕೇವಲ 5 ದಿನದಲ್ಲಿ 850 ಕೋಟಿ ರೂ ಗಳಿಕೆ..! CM ಆಗುವ ಮೊಲದೇ ಚಂದ್ರಬಾಬು ನಾಯ್ಡು ಕುಟುಂಬ ಶ್ರೀಮಂತ..!
ಬದುಕು ಬದಲಿಸಿದ ತಾಯಿಯ ಕೊನೆಯ ಮಾತು..!
ಇದೇ ಸಮಯದಲ್ಲಿ ನಡುವೆ ರೆಸ್ಟೋರೆಂಟ್ ವಹಿವಾಟು ಕುಸಿತು. ಮೋನಕ್ ತಾಯಿ ಕ್ಯಾನ್ಸರ್ಗೆ ತುತ್ತಾಗಿದ್ರು. ಪರಿಣಾಮ ಹೋಟೆಲ್ ಮಾರಿದ ಮೋನಕ್ ಪಟೇಲ್, ತಾಯಿಯನ್ನ ನೋಡಿಕೊಳ್ಳೋ ನಿರ್ಧಾರ ಮಾಡಿದ್ರು. ವಿಧಿಯಾಟ.. ಬ್ಯಾಂಕ್ನಲ್ಲಿ ಕೇವಲ 3 ಸಾವಿರ ಡಾಲರ್ ಇಟ್ಟುಕೊಂಡು ಬಂದಾಗ, ತಾಯಿಯ ಕೊನೆಯುಸಿರೆಳೆದ್ರು. ಅದಕ್ಕೂ ಮುನ್ನ ಒಂದು ಮಾತು ಹೇಳಿದ್ರು. ಆಟವನ್ನ ಮುಂದುವರೆಸು, ಕಷ್ಟಪಟ್ಟು ಕೆಲಸ ಮಾಡು ಅಂತಾ. ಆ ಮಾತನ್ನ ಮೊನಕ್ ಪಟೇಲ್ ಪಾಲಿಸಿದ್ರು. ಇದೀಗ ಯಶಸ್ಸೂ ಸಿಕ್ಕಿದೆ.
ಅಮೆರಿಕಾದಲ್ಲಿ ಚಿಕ್ಕಮಗಳೂರಿನ ಹುಡುಗನ ಪರಾಕ್ರಮ..!
ಯುಎಸ್ಎ ಗೆಲುವಿನ ಮತ್ತೊಬ್ಬ ಹೀರೋ ನೋಸ್ತುಶ್ ಕೆಂಜಿಗೆ ಕೂಡ ಮೂಲತಃ ಭಾರತೀಯ. ಹುಟ್ಟಿದ್ದು ಅಮೆರಿಕಾದಲ್ಲೇ. ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ಈ ಆಟಗಾರನಿಗೆ ಭಾರತ ತಂಡದಲ್ಲಿ ಆಡೋ ಆಸೆಯಿತ್ತು. ಹೀಗಾಗಿ ತನ್ನ 24ನೇ ವಯಸ್ಸಿನಲ್ಲಿ ಭಾರತಕ್ಕೆ ವಾಪಾಸ್ಸ್ ಬಂದಿದ್ರು. ಇಲ್ಲಿರೋ ಪೈಪೋಟಿಯ ನಡುವೆ ಅವಕಾಶ ಸಿಗೋದು ಕಷ್ಟ ಎಂದು ಗೊತ್ತಾಯ್ತು. ಇದಕ್ಕಾಗಿ 2015ರಲ್ಲಿ ಮತ್ತೆ ಅಮೆರಿಕಾಗೆ ವಲಸೆ ಹೋದ್ರು. ಭಾರತಕ್ಕೆ ಬಂದು ಹೋದ ಯಡವಟ್ಟು ಕೆಂಜಿಗೆಯನ್ನ 4 ವರ್ಷಗಳ ಕಾಲ ಎಕ್ಸ್ರೇ ಟೆಕ್ನಿಶಿಯನ್ ಆಗಿ ಮಾಡಿಬಿಡ್ತು.
ಇದನ್ನೂ ಓದಿ:Accident: ಬೆಳ್ಳಂಬೆಳಗ್ಗೆ ಓಮ್ನಿ-ಕಾರು ಮಧ್ಯೆ ಭೀಕರ ಅಪಘಾತ.. ಓರ್ವ ಸಾವು
ಐಸಿಸಿ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಆ ದೇಶದ ನಾಗರೀಕನಾಗಿರಬೇಕು. ಜೊತೆಗೆ ಕನಿಷ್ಟ 4 ವರ್ಷಗಳ ಇದ್ದು, ಲೋಕಲೇಟ್ ಅನಿಸಿಕೊಂಡಿರಬೇಕು. ಆಗ ಮಾತ್ರ ಆಡಲು ಅರ್ಹರಾಗ್ತಾರೆ. ಹೀಗಾಗಿ 4 ವರ್ಷಗಳ ಕಾಲ ಎಕ್ಸ್ರೇ ಟೆಕ್ನಿಷಿಯನ್ ಆಗಿ ನೋಸ್ತುಶ್ ಕೆಂಜಿಗೆ ಕೆಲಸ ಮಾಡಿದ್ರು. ಹಗಲಿಡಿ ಎಕ್ಸ್ರೇ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ ಕೆಂಜಿಗೆ, ಸಂಜೆ 7ರಿಂದ ರಾತ್ರಿ 10ರವರೆಗೆ ಅಭ್ಯಾಸ ನಡೆಸ್ತಾ ಇದ್ರು. ಈ ಕಠಿಣ ಪರಿಶ್ರಮದ ಫಲವೇ ಇಂದು ಯಶಸ್ಸು ತಂದುಕೊಟ್ಟಿದೆ.
2010ರ ಸೋಲಿಗೆ ಈಗ ಸೇಡು ತೀರಿಸಿಕೊಂಡ ಸೌರಭ್..!
ಯುಎಸ್ಎ ಜಯದ ರಿಯಲ್ ಹೀರೋ ಸೌರಭ್ ನೇತ್ರಾವಲ್ಕರ್ ಕೂಡ ಅಂಡರ್ 19 ವಿಶ್ವಕಪ್ನಲ್ಲಿ ಭಾರತದ ಆಟಗಾರನೇ. 2010ರ ಅಂಡರ್ 19 ವಿಶ್ವಕಪ್ನಲ್ಲಿ ಪಾಕ್ ಎದುರು ಭಾರತ ಸೋತಿತ್ತು. ಆಗ ಪಾಕ್ ತಂಡದಲ್ಲಿ ಬಾಬರ್ ಇದ್ರೆ, ಭಾರತದ ಪರ ಸೌರಭ್ ಇದ್ರು. ಆ ಸೋಲಿನ ಸೇಡನ್ನು 14 ವರ್ಷಗಳ ಬಳಿಕ ಸೌರಭ್ ತೀರಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕೊಹ್ಲಿ, ಶರ್ಮಾ, ಪಂತ್ ಅಲ್ಲವೇ ಅಲ್ಲ.. ಭಾರತದ ಈ ಆಟಗಾರನ ಟಾರ್ಗೆಟ್ ಮಾಡಿದ ಪಾಕ್..!
ಅಂಡರ್ 19 ದಿನಗಳ ಬಳಿಕ ಭಾರತ ಬಿಟ್ಟ, ಸೌರಭ್ ಯುಎಸ್ಎಗೆ ವಲಸೆ ಹೋಗಿದ್ರು. ಅಲ್ಲೇ ಓದಿ ಒರಾಕಲ್ನಲ್ಲಿ ಇಂಜಿನಿಯರ್ ಆಗಿದ್ದಾರೆ. ಇದ್ರ ಜೊತೆಗೆ ಅಮೆರಿಕಾ ತಂಡವನ್ನ ಪ್ರತಿನಿಧಿಸ್ತಾ ಇರೋ, ಈ ಸೌರಭ್ ಪಾಕ್ ಎದುರು ಸೂಪರ್ ಓವರ್ನಲ್ಲಿ ಭರ್ಜರಿ ಬೌಲಿಂಗ್ ನಡೆಸಿದ್ರು. ಆ ಒಂದು ಓವರ್ನ ಆಟ ಐತಿಹಾಸಿಕ ಜಯಕ್ಕೆ ಕಾರಣವಾಯ್ತು.
ಇವರಿಷ್ಟೇ ಅಲ್ಲ.. ಇದೇ ತಂಡದಲ್ಲಿರೋ ಹರ್ಮಿತ್ ಸಿಂಗ್, ಮಿಲಿಂದ್ ಕುಮಾರ್ ಕೂಡ ಭಾರತದವರೇ. ಡೆಲ್ಲಿಯ ಮಿಲಿಂದ್ ಕುಮಾರ್ ಸಿಕ್ಕಿಂ, ತ್ರಿಪುರಾ ಪರ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಿದ್ದು, ಆರ್ಸಿಬಿ, ಡೆಲ್ಲಿ ಡೇರ್ಡೆವಿಲ್ಸ್ ತಂಡದಲ್ಲೂ ಇದ್ರು. ಹರ್ಮಿತ್ ಸಿಂಗ್, ಉನ್ಮುಕ್ತ್ ಚಾಂದ್ ನೇತೃತ್ವದ ಅಂಡರ್ 19 ತಂಡ ಚಾಂಪಿಯನ್ ಆದ ತಂಡದ ಸದಸ್ಯನಾಗಿದ್ರು. ಈ ಎಲ್ಲಾ ಭಾರತೀಯರು ಸೇರಿ, ಬದ್ಧವೈರಿ ಪಾಕಿಸ್ತಾನ ಪಡೆಯನ್ನ ಸೋಲಿಸಿದ್ದಾಗಿದೆ. ಭಾನುವಾರ ಅಸಲಿ ಟೀಮ್ ಇಂಡಿಯಾ ಕೂಡ ಪಾಕ್ನ ಸೋಲಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.
ವಿಶೇಷ ವರದಿ: ವಸಂತ್ ಮಳವತ್ತಿ
ಇದನ್ನೂ ಓದಿ:IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕ್ರಿಕೆಟ್ ಶಿಶುವಿನ ಎದುರು ಪಾಕಿಸ್ತಾನಕ್ಕೆ ಮುಖಭಂಗ
ಯುಎಸ್ಎ ಅಬ್ಬರ, ಮುಗ್ಗರಿಸಿದ ಪಾಕ್ ಸ್ಟಾರ್ಸ್
USA ಗೆಲುವಿನ ಹೀರೋಗಳ ರೋಚಕ ಜರ್ನಿ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ನಿರೀಕ್ಷೆಯೂ ಮಾಡದಂತ ಮುಖಭಂಗಕ್ಕೆ ಒಳಗಾಗಿದೆ. ಕ್ರಿಕೆಟ್ ಶಿಶು ಯುಎಸ್ಎ ತಂಡದ ಅಬ್ಬರದ ಆಟದ ಮುಂದೆ ಪಾಕ್ ಪಡೆಯ ಸೂಪರ್ ಸ್ಟಾರ್ಗಳು ಮುಗ್ಗರಿಸಿದ್ದಾರೆ. ಐತಿಹಾಸಿಕ ಗೆಲುವು ದಾಖಲಿಸಿದ ಅಮೆರಿಕಾವನ್ನು ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡ್ತಿದೆ. ಗೆಲುವಿನ ರೂವಾರಿಗಳಂತೂ ಕ್ರಿಕೆಟ್ ಲೋಕದ ಹೀರೋಗಳಾಗಿದ್ದಾರೆ. ಆ ಹೀರೋಗಳ ಜರ್ನಿ ಅಷ್ಟು ರೋಚಕವಾಗಿದೆ.
ಗುಜರಾತ್ನಿಂದ ನ್ಯೂಜೆರ್ಸಿಯವರೆಗೆ..!
ಪಾಕಿಸ್ತಾನ ವಿರುದ್ಧದ ಐತಿಹಾಸಿಕ ಗೆಲುವಿನ ರೂವಾರಿಯೇ ಯುಎಸ್ಎ ಕ್ಯಾಪ್ಟನ್ ಮೊನಕ್ ಪಟೇಲ್. ಈತನ ಅರ್ಧಶತಕ, ಚುರುಕಿನ ನಾಯಕತ್ವ ಯುಎಸ್ಎದ ಐತಿಹಾಸಿಕ ಗೆಲುವಿಗೆ ಕಾರಣವಾಯ್ತು. ಅಸಲಿಗೆ ಈ ಮೋನಕ್ ಪಟೇಲ್ ಮೂಲತಃ ಗುಜರಾತ್ನವರು. ಅಂಡರ್-19 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪ್ರತಿನಿಧಿಸಿದ ಕ್ರಿಕೆಟರ್. ಆ ಬಳಿಕ ಯುಎಸ್ಗೆ ಶಿಫ್ಟ್ ಆದ ಈ ಮೊನಕ್ ಪಟೇಲ್ ಜೀವನ ನಡೆಸಲು ರೆಸ್ಟೋರೆಂಟ್ ಬ್ಯುಸಿನೆಸ್ ಆರಂಭಿಸಿದ್ರು. ಕ್ರಿಕೆಟ್ ಮೇಲಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ. ದಿನ 10 ರಿಂದ 12 ತಾಸು ರೆಸ್ಟೋರೆಂಟ್ ಕಾಲ ಕಳೀತಿದ್ದ ಮೋನಕ್, ನಂತರದ ಸಮಯದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸ್ತಿದ್ರು.
ಇದನ್ನೂ ಓದಿ:ಕೇವಲ 5 ದಿನದಲ್ಲಿ 850 ಕೋಟಿ ರೂ ಗಳಿಕೆ..! CM ಆಗುವ ಮೊಲದೇ ಚಂದ್ರಬಾಬು ನಾಯ್ಡು ಕುಟುಂಬ ಶ್ರೀಮಂತ..!
ಬದುಕು ಬದಲಿಸಿದ ತಾಯಿಯ ಕೊನೆಯ ಮಾತು..!
ಇದೇ ಸಮಯದಲ್ಲಿ ನಡುವೆ ರೆಸ್ಟೋರೆಂಟ್ ವಹಿವಾಟು ಕುಸಿತು. ಮೋನಕ್ ತಾಯಿ ಕ್ಯಾನ್ಸರ್ಗೆ ತುತ್ತಾಗಿದ್ರು. ಪರಿಣಾಮ ಹೋಟೆಲ್ ಮಾರಿದ ಮೋನಕ್ ಪಟೇಲ್, ತಾಯಿಯನ್ನ ನೋಡಿಕೊಳ್ಳೋ ನಿರ್ಧಾರ ಮಾಡಿದ್ರು. ವಿಧಿಯಾಟ.. ಬ್ಯಾಂಕ್ನಲ್ಲಿ ಕೇವಲ 3 ಸಾವಿರ ಡಾಲರ್ ಇಟ್ಟುಕೊಂಡು ಬಂದಾಗ, ತಾಯಿಯ ಕೊನೆಯುಸಿರೆಳೆದ್ರು. ಅದಕ್ಕೂ ಮುನ್ನ ಒಂದು ಮಾತು ಹೇಳಿದ್ರು. ಆಟವನ್ನ ಮುಂದುವರೆಸು, ಕಷ್ಟಪಟ್ಟು ಕೆಲಸ ಮಾಡು ಅಂತಾ. ಆ ಮಾತನ್ನ ಮೊನಕ್ ಪಟೇಲ್ ಪಾಲಿಸಿದ್ರು. ಇದೀಗ ಯಶಸ್ಸೂ ಸಿಕ್ಕಿದೆ.
ಅಮೆರಿಕಾದಲ್ಲಿ ಚಿಕ್ಕಮಗಳೂರಿನ ಹುಡುಗನ ಪರಾಕ್ರಮ..!
ಯುಎಸ್ಎ ಗೆಲುವಿನ ಮತ್ತೊಬ್ಬ ಹೀರೋ ನೋಸ್ತುಶ್ ಕೆಂಜಿಗೆ ಕೂಡ ಮೂಲತಃ ಭಾರತೀಯ. ಹುಟ್ಟಿದ್ದು ಅಮೆರಿಕಾದಲ್ಲೇ. ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ಈ ಆಟಗಾರನಿಗೆ ಭಾರತ ತಂಡದಲ್ಲಿ ಆಡೋ ಆಸೆಯಿತ್ತು. ಹೀಗಾಗಿ ತನ್ನ 24ನೇ ವಯಸ್ಸಿನಲ್ಲಿ ಭಾರತಕ್ಕೆ ವಾಪಾಸ್ಸ್ ಬಂದಿದ್ರು. ಇಲ್ಲಿರೋ ಪೈಪೋಟಿಯ ನಡುವೆ ಅವಕಾಶ ಸಿಗೋದು ಕಷ್ಟ ಎಂದು ಗೊತ್ತಾಯ್ತು. ಇದಕ್ಕಾಗಿ 2015ರಲ್ಲಿ ಮತ್ತೆ ಅಮೆರಿಕಾಗೆ ವಲಸೆ ಹೋದ್ರು. ಭಾರತಕ್ಕೆ ಬಂದು ಹೋದ ಯಡವಟ್ಟು ಕೆಂಜಿಗೆಯನ್ನ 4 ವರ್ಷಗಳ ಕಾಲ ಎಕ್ಸ್ರೇ ಟೆಕ್ನಿಶಿಯನ್ ಆಗಿ ಮಾಡಿಬಿಡ್ತು.
ಇದನ್ನೂ ಓದಿ:Accident: ಬೆಳ್ಳಂಬೆಳಗ್ಗೆ ಓಮ್ನಿ-ಕಾರು ಮಧ್ಯೆ ಭೀಕರ ಅಪಘಾತ.. ಓರ್ವ ಸಾವು
ಐಸಿಸಿ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಆ ದೇಶದ ನಾಗರೀಕನಾಗಿರಬೇಕು. ಜೊತೆಗೆ ಕನಿಷ್ಟ 4 ವರ್ಷಗಳ ಇದ್ದು, ಲೋಕಲೇಟ್ ಅನಿಸಿಕೊಂಡಿರಬೇಕು. ಆಗ ಮಾತ್ರ ಆಡಲು ಅರ್ಹರಾಗ್ತಾರೆ. ಹೀಗಾಗಿ 4 ವರ್ಷಗಳ ಕಾಲ ಎಕ್ಸ್ರೇ ಟೆಕ್ನಿಷಿಯನ್ ಆಗಿ ನೋಸ್ತುಶ್ ಕೆಂಜಿಗೆ ಕೆಲಸ ಮಾಡಿದ್ರು. ಹಗಲಿಡಿ ಎಕ್ಸ್ರೇ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ ಕೆಂಜಿಗೆ, ಸಂಜೆ 7ರಿಂದ ರಾತ್ರಿ 10ರವರೆಗೆ ಅಭ್ಯಾಸ ನಡೆಸ್ತಾ ಇದ್ರು. ಈ ಕಠಿಣ ಪರಿಶ್ರಮದ ಫಲವೇ ಇಂದು ಯಶಸ್ಸು ತಂದುಕೊಟ್ಟಿದೆ.
2010ರ ಸೋಲಿಗೆ ಈಗ ಸೇಡು ತೀರಿಸಿಕೊಂಡ ಸೌರಭ್..!
ಯುಎಸ್ಎ ಜಯದ ರಿಯಲ್ ಹೀರೋ ಸೌರಭ್ ನೇತ್ರಾವಲ್ಕರ್ ಕೂಡ ಅಂಡರ್ 19 ವಿಶ್ವಕಪ್ನಲ್ಲಿ ಭಾರತದ ಆಟಗಾರನೇ. 2010ರ ಅಂಡರ್ 19 ವಿಶ್ವಕಪ್ನಲ್ಲಿ ಪಾಕ್ ಎದುರು ಭಾರತ ಸೋತಿತ್ತು. ಆಗ ಪಾಕ್ ತಂಡದಲ್ಲಿ ಬಾಬರ್ ಇದ್ರೆ, ಭಾರತದ ಪರ ಸೌರಭ್ ಇದ್ರು. ಆ ಸೋಲಿನ ಸೇಡನ್ನು 14 ವರ್ಷಗಳ ಬಳಿಕ ಸೌರಭ್ ತೀರಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕೊಹ್ಲಿ, ಶರ್ಮಾ, ಪಂತ್ ಅಲ್ಲವೇ ಅಲ್ಲ.. ಭಾರತದ ಈ ಆಟಗಾರನ ಟಾರ್ಗೆಟ್ ಮಾಡಿದ ಪಾಕ್..!
ಅಂಡರ್ 19 ದಿನಗಳ ಬಳಿಕ ಭಾರತ ಬಿಟ್ಟ, ಸೌರಭ್ ಯುಎಸ್ಎಗೆ ವಲಸೆ ಹೋಗಿದ್ರು. ಅಲ್ಲೇ ಓದಿ ಒರಾಕಲ್ನಲ್ಲಿ ಇಂಜಿನಿಯರ್ ಆಗಿದ್ದಾರೆ. ಇದ್ರ ಜೊತೆಗೆ ಅಮೆರಿಕಾ ತಂಡವನ್ನ ಪ್ರತಿನಿಧಿಸ್ತಾ ಇರೋ, ಈ ಸೌರಭ್ ಪಾಕ್ ಎದುರು ಸೂಪರ್ ಓವರ್ನಲ್ಲಿ ಭರ್ಜರಿ ಬೌಲಿಂಗ್ ನಡೆಸಿದ್ರು. ಆ ಒಂದು ಓವರ್ನ ಆಟ ಐತಿಹಾಸಿಕ ಜಯಕ್ಕೆ ಕಾರಣವಾಯ್ತು.
ಇವರಿಷ್ಟೇ ಅಲ್ಲ.. ಇದೇ ತಂಡದಲ್ಲಿರೋ ಹರ್ಮಿತ್ ಸಿಂಗ್, ಮಿಲಿಂದ್ ಕುಮಾರ್ ಕೂಡ ಭಾರತದವರೇ. ಡೆಲ್ಲಿಯ ಮಿಲಿಂದ್ ಕುಮಾರ್ ಸಿಕ್ಕಿಂ, ತ್ರಿಪುರಾ ಪರ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಿದ್ದು, ಆರ್ಸಿಬಿ, ಡೆಲ್ಲಿ ಡೇರ್ಡೆವಿಲ್ಸ್ ತಂಡದಲ್ಲೂ ಇದ್ರು. ಹರ್ಮಿತ್ ಸಿಂಗ್, ಉನ್ಮುಕ್ತ್ ಚಾಂದ್ ನೇತೃತ್ವದ ಅಂಡರ್ 19 ತಂಡ ಚಾಂಪಿಯನ್ ಆದ ತಂಡದ ಸದಸ್ಯನಾಗಿದ್ರು. ಈ ಎಲ್ಲಾ ಭಾರತೀಯರು ಸೇರಿ, ಬದ್ಧವೈರಿ ಪಾಕಿಸ್ತಾನ ಪಡೆಯನ್ನ ಸೋಲಿಸಿದ್ದಾಗಿದೆ. ಭಾನುವಾರ ಅಸಲಿ ಟೀಮ್ ಇಂಡಿಯಾ ಕೂಡ ಪಾಕ್ನ ಸೋಲಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.
ವಿಶೇಷ ವರದಿ: ವಸಂತ್ ಮಳವತ್ತಿ
ಇದನ್ನೂ ಓದಿ:IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್