ಕ್ಲೈಮ್ಯಾಕ್ಸ್ ಹಂತ ತಲುಪಿದ ಕೋಚ್ ಆಯ್ಕೆ ಸರ್ಕಸ್
ದ್ರಾವಿಡ್ ಉತ್ತರಾಧಿಕಾರಿ ಆಯ್ಕೆ ಬಹುತೇಕ ಅಂತ್ಯ
ಗಂಭೀರ್ ಸುತ್ತ ಗಿರಗಿರ ಸುತ್ತಿದ್ದೇಕೆ ಬಿಸಿಸಿಐ ಬಾಸ್?
ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಆಯ್ಕೆಯ ಸರ್ಕಸ್ ಕ್ಲೈಮಾಕ್ಸ್ ಹಂತ ತಲುಪಿದೆ. ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್, ಪಟ್ಟಕ್ಕೇರೋದು ಬಹುತೇಕ ಕನ್ಫರ್ಮ್ ಆಗಿದೆ. ಫಾರಿನ್ ಕೋಚ್ಗಳನ್ನ ಸೈಡ್ಲೈನ್ ಮಾಡಿ ಕೋಚ್ ಪಟ್ಟಕ್ಕೆ ಗಂಭೀರ್ನ ಒಪ್ಪಿಸಲು ಬಿಸಿಸಿಐ ಬಾಸ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಷ್ಟಕ್ಕೂ ಗಂಭೀರ್ ಅವರೇ ಟೀಮ್ ಇಂಡಿಯಾದ ಕೋಚ್ ಯಾಕಾಗಬೇಕು?
ಟೀಮ್ ಇಂಡಿಯಾದ ಮುಂದಿನ ಹೆಡ್ ಕೋಚ್ ಯಾರು? ಈ ಪ್ರಶ್ನೆಗೆ ಬಹುತೇಕ ಫೈನಲ್ ಆನ್ಸರ್ ಸಿಕ್ಕಾಗಿದೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್, ಕೋಚ್ ಪಟ್ಟಕ್ಕೇರೋದು ಕನ್ಫರ್ಮ್ ಆಗಿದೆ. ಬಿಸಿಸಿಐ ಮೂಲಗಳ ಜೊತೆಗೆ ಐಪಿಎಲ್ ಫ್ರಾಂಚೈಸಿ ಒಂದರ ಮಾಲೀಕ ಕೂಡ ಈ ಸುದ್ದಿಯನ್ನ ಕನ್ಫರ್ಮ್ ಮಾಡಿದ್ದಾರೆ. ಇನ್ನೇನು ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.
ಇದನ್ನೂ ಓದಿ:ಭಾರತ – ಪಾಕ್ ನಡುವಿನ ಪಂದ್ಯಕ್ಕೆ ಭಾರೀ ಆತಂಕ.. ಏನಾಯ್ತು..?
ಗಂಭೀರ್ ಸುತ್ತ ಗಿರಗಿರ ಸುತ್ತಿದ್ದೇಕೆ ಬಿಸಿಸಿಐ ಬಾಸ್
ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ಫಾರಿನ್ ಕೋಚ್ಗಳ ಹೆಸರುಗಳು ರೇಸ್ನಲ್ಲಿ ಮುಂಚೂಣಿಯಲ್ಲಿದ್ವು. ಅದೇ ವೇಳೆ ದಿಢೀರ್ ಎಂದು ಈ ರೇಸ್ಗೆ ಗೌತಮ್ ಗಂಭೀರ್ ಹೆಸ್ರು ಎಂಟ್ರಿಯಾಯ್ತು. ಅಸಲಿಗೆ ಆರಂಭದಲ್ಲಿ ಗಂಭೀರ್ಗೆ ಅಷ್ಟೇನು ಆಸಕ್ತಿ ಇರಲಿಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಗೌತಿ ಸುತ್ತ ಗಿರಿಗಿರಿ ತಿರುಗಿ ಕೊನೆಗೂ ಒಪ್ಪಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಬಿಸಿಸಿಐ ಬಾಸ್ ಹೀಗೆ ಗಂಭೀರ್ ಹಿಂದೆ ಬಿದ್ದು ಒಪ್ಪಿಸಿರೋದಕ್ಕೆ ಕಾರಣಗಳು ಸಾಕಷ್ಟಿವೆ.
ಕಾರಣ 1: ಡಿಸಿಷನ್ ಮೇಕರ್, ಯಾರಿಗೂ ಕೇರ್ ಮಾಡಲ್ಲ
ಕ್ರಿಕೆಟ್ ಅಂತಾ ಬಂದ್ರೆ ಗೌತಮ್ ಗಂಭೀರ್ ಸಂಪೂರ್ಣ ಅಗ್ರೆಸ್ಸೀವ್ ಆಗಿ ಕಾಣಿಸಿಕೊಳ್ತಾರೆ. ತಂಡದ ಗೆಲುವಷ್ಟೇ ಗಂಭೀರ್ ಗುರಿ. ಇದಕ್ಕಾಗಿ ಎಂತಹ ಟಫ್ ಡಿಸಿಷನ್ ಬೇಕಾದ್ರೂ ತೆಗೆದುಕೊಳ್ತಾರೆ. ಈ ನಿರ್ಧಾರ ತೆಗೆದುಕೊಳ್ಳೋ ಸಮಯದಲ್ಲಿ ಯಾರಿಗೂ ಕೇರ್ ಮಾಡಲ್ಲ. ಡೇರಿಂಗ್ ಡಿಸಿಷನ್ ತೆಗೆದುಕೊಳ್ಳೋ ಈ ಕ್ವಾಲಿಟಿ ಟೀಮ್ ಇಂಡಿಯಾ ಕೋಚ್ಗೆ ಬೇಕೆ ಬೇಕು.
ಕಾರಣ 2: ಭವಿಷ್ಯದ ತಂಡ ಕಟ್ಟೋಕೆ ಗಂಭೀರ್ ಬೆಸ್ಟ್ ಆಯ್ಕೆ
ಟೀಮ್ ಇಂಡಿಯಾ ಸದ್ಯ TRANSITION PERIODನಲ್ಲಿದೆ. ಇನ್ನೆರಡು ವರ್ಷಗಳಲ್ಲಿ ತಂಡದ ಬಹುತೇಕ ಸೀನಿಯರ್ಗಳು ನಿವೃತ್ತಿ ಘೋಷಿಸಲಿದ್ದಾರೆ. ಅವರ ಸ್ಥಾನಕ್ಕೆ ಸೂಕ್ತ ಆಟಗಾರರನ್ನ ಹುಡುಕಬೇಕಿದೆ. ಟ್ಯಾಲೆಂಟ್ ಹಂಟ್ ಮಾಡೋದ್ರಲ್ಲಿ ಗಂಭೀರ್ ಪಂಟರ್. ಭವಿಷ್ಯದ ತಂಡ ಕಟ್ಟಬೇಕಿರೋದ್ರಿಂದ ಗಂಭೀರ್ರಂತಹ ಕೋಚ್ ಅಗತ್ಯತೆ ತಂಡಕ್ಕಿದೆ.
ಕಾರಣ 3: ಯುವ ಆಟಗಾರರನ್ನ ಬೆಳೆಸೋ ಗುರು
ಯುವ ಆಟಗಾರರ ಪಾಲಿಗೆ ಗಂಭೀರ್ ಅಕ್ಷರಶಃ ಗುರು. ಟ್ಯಾಲೆಂಟ್ ಒಂದಿದ್ರೆ ಸಾಕು, ಆ ಆಟಗಾರನಿಗೆ ಅವಕಾಶ ನೀಡಿ, ತಿದ್ದಿ, ತೀಡಿ ಬೆಳೆಸೋದ್ರಲ್ಲಿ ಗಂಭೀರ್ ಎತ್ತಿದ ಕೈ. ಹಿಂದೆ ಕೆಕೆಆರ್ ನಾಯಕನಾಗಿದ್ದಾಗ, ಇದೀಗ ಮೆಂಟರ್ ಆಗಿದ್ದಾಗ ಗಂಭೀರ್, ಯುವ ಆಟಗಾರರನ್ನ ಸಿಕ್ಕಾಪಟ್ಟೆ ಬ್ಯಾಕ್ ಮಾಡಿದ್ರು. ಇದು ಆಟಗಾರರಿಗೆ ಹೆಚ್ಚಿನ ಕಾನ್ಫಿಡೆನ್ಸ್ ನೀಡುತ್ತೆ.
ಕಾರಣ 4: ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ ವಾತಾವರಣ
ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ನಲ್ಲಿ ಸ್ಟಾರ್ಗಳೇ ತುಂಬಿಕೊಂಡಿದ್ದಾರೆ. ಸಾಮಾನ್ಯ ಕೋಚ್ ಆಯ್ಕೆ ಮಾಡಿದ್ರೆ, ಆಟಗಾರರನ್ನ ಹ್ಯಾಂಡಲ್ ಮಾಡೋದು ಅಸಾಧ್ಯದ ವಿಚಾರವಾಗಲಿದೆ. ತಂಡ ಒಗ್ಗಟ್ಟಾಗಿ ಹೋಗದಿದ್ರೆ ಎತ್ತು ಏರಿಗೆಳೆದ್ರೆ, ಕೋಣ ನೀರಿಗೇಳಿತು ಅನ್ನೋ ಸ್ಥಿತಿ ನಿರ್ಮಾಣವಾಗೋ ಸಾಧ್ಯತೆಯಿದೆ. ಗಂಭೀರ್ಗೆ ಈ ವಿಚಾರಗಳನ್ನು ಖಡಕ್ ಆಗಿ ಹ್ಯಾಂಡೆಲ್ ಮಾಡುವ ಸಾಮರ್ಥ್ಯ ಇದೆ.
ಇದನ್ನೂ ಓದಿ:Pushpa 2: The Rule ಸಿನಿಮಾಗೆ ದೊಡ್ಡ ಸಂಕಷ್ಟ.. ರಿಲೀಸ್ಗೂ ಮುನ್ನವೇ ಅನುಮಾನ ಶುರು..!
ಕಾರಣ 5: ICC ಟ್ರೋಫಿ ಗೆಲುವಿನ ಬರಕ್ಕೆ ಬ್ರೇಕ್ ಹಾಕೋ ಗುರಿ
2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲದ ಬರ ಟೀಮ್ ಇಂಡಿಯಾವನ್ನ ಕಾಡ್ತಿದೆ. ಲೀಗ್ನಲ್ಲಿ ಚನ್ನಾಗಿ ಆಡೋ ಟೀಮ್ ಇಂಡಿಯಾ, ಬರಿಗೈಯಲ್ಲಿ ವಾಪಾಸ್ಸಾಗ್ತಿದೆ. ಗಂಭೀರ್ ಕೋಚ್ ಆದರೆ ಈ ಕೊರತೆಯನ್ನ ನೀಗಿಸಬಲ್ಲರು. ಈ ಬಾರಿ ಮೆಂಟರ್ ಆಗಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು, ಆ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ. ಈ ಎಲ್ಲಾ ಕಾರಣಗಳಿಂದಲೇ ಬಿಸಿಸಿಐ ಬಾಸ್ಗಳು ಗಂಭೀರ್ ಹಿಂದೆ ಬಿದ್ದಿದ್ದಾರೆ. ಬಹುತೇಕ DEAL DONE ಎನ್ನೋ ಸುದ್ದಿ ಹೊರಬಿದ್ದಿದ್ದು, ಅಧಿಕೃತ ಆದೇಶ ಯಾವಾಗ ಹೊರಬರುತ್ತೆ ಅನ್ನೋದಷ್ಟೇ ಸದ್ಯದ ಕುತೂಹಲವಾಗಿದೆ.
ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕ್ಲೈಮ್ಯಾಕ್ಸ್ ಹಂತ ತಲುಪಿದ ಕೋಚ್ ಆಯ್ಕೆ ಸರ್ಕಸ್
ದ್ರಾವಿಡ್ ಉತ್ತರಾಧಿಕಾರಿ ಆಯ್ಕೆ ಬಹುತೇಕ ಅಂತ್ಯ
ಗಂಭೀರ್ ಸುತ್ತ ಗಿರಗಿರ ಸುತ್ತಿದ್ದೇಕೆ ಬಿಸಿಸಿಐ ಬಾಸ್?
ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಆಯ್ಕೆಯ ಸರ್ಕಸ್ ಕ್ಲೈಮಾಕ್ಸ್ ಹಂತ ತಲುಪಿದೆ. ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್, ಪಟ್ಟಕ್ಕೇರೋದು ಬಹುತೇಕ ಕನ್ಫರ್ಮ್ ಆಗಿದೆ. ಫಾರಿನ್ ಕೋಚ್ಗಳನ್ನ ಸೈಡ್ಲೈನ್ ಮಾಡಿ ಕೋಚ್ ಪಟ್ಟಕ್ಕೆ ಗಂಭೀರ್ನ ಒಪ್ಪಿಸಲು ಬಿಸಿಸಿಐ ಬಾಸ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಷ್ಟಕ್ಕೂ ಗಂಭೀರ್ ಅವರೇ ಟೀಮ್ ಇಂಡಿಯಾದ ಕೋಚ್ ಯಾಕಾಗಬೇಕು?
ಟೀಮ್ ಇಂಡಿಯಾದ ಮುಂದಿನ ಹೆಡ್ ಕೋಚ್ ಯಾರು? ಈ ಪ್ರಶ್ನೆಗೆ ಬಹುತೇಕ ಫೈನಲ್ ಆನ್ಸರ್ ಸಿಕ್ಕಾಗಿದೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್, ಕೋಚ್ ಪಟ್ಟಕ್ಕೇರೋದು ಕನ್ಫರ್ಮ್ ಆಗಿದೆ. ಬಿಸಿಸಿಐ ಮೂಲಗಳ ಜೊತೆಗೆ ಐಪಿಎಲ್ ಫ್ರಾಂಚೈಸಿ ಒಂದರ ಮಾಲೀಕ ಕೂಡ ಈ ಸುದ್ದಿಯನ್ನ ಕನ್ಫರ್ಮ್ ಮಾಡಿದ್ದಾರೆ. ಇನ್ನೇನು ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.
ಇದನ್ನೂ ಓದಿ:ಭಾರತ – ಪಾಕ್ ನಡುವಿನ ಪಂದ್ಯಕ್ಕೆ ಭಾರೀ ಆತಂಕ.. ಏನಾಯ್ತು..?
ಗಂಭೀರ್ ಸುತ್ತ ಗಿರಗಿರ ಸುತ್ತಿದ್ದೇಕೆ ಬಿಸಿಸಿಐ ಬಾಸ್
ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ಫಾರಿನ್ ಕೋಚ್ಗಳ ಹೆಸರುಗಳು ರೇಸ್ನಲ್ಲಿ ಮುಂಚೂಣಿಯಲ್ಲಿದ್ವು. ಅದೇ ವೇಳೆ ದಿಢೀರ್ ಎಂದು ಈ ರೇಸ್ಗೆ ಗೌತಮ್ ಗಂಭೀರ್ ಹೆಸ್ರು ಎಂಟ್ರಿಯಾಯ್ತು. ಅಸಲಿಗೆ ಆರಂಭದಲ್ಲಿ ಗಂಭೀರ್ಗೆ ಅಷ್ಟೇನು ಆಸಕ್ತಿ ಇರಲಿಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಗೌತಿ ಸುತ್ತ ಗಿರಿಗಿರಿ ತಿರುಗಿ ಕೊನೆಗೂ ಒಪ್ಪಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಬಿಸಿಸಿಐ ಬಾಸ್ ಹೀಗೆ ಗಂಭೀರ್ ಹಿಂದೆ ಬಿದ್ದು ಒಪ್ಪಿಸಿರೋದಕ್ಕೆ ಕಾರಣಗಳು ಸಾಕಷ್ಟಿವೆ.
ಕಾರಣ 1: ಡಿಸಿಷನ್ ಮೇಕರ್, ಯಾರಿಗೂ ಕೇರ್ ಮಾಡಲ್ಲ
ಕ್ರಿಕೆಟ್ ಅಂತಾ ಬಂದ್ರೆ ಗೌತಮ್ ಗಂಭೀರ್ ಸಂಪೂರ್ಣ ಅಗ್ರೆಸ್ಸೀವ್ ಆಗಿ ಕಾಣಿಸಿಕೊಳ್ತಾರೆ. ತಂಡದ ಗೆಲುವಷ್ಟೇ ಗಂಭೀರ್ ಗುರಿ. ಇದಕ್ಕಾಗಿ ಎಂತಹ ಟಫ್ ಡಿಸಿಷನ್ ಬೇಕಾದ್ರೂ ತೆಗೆದುಕೊಳ್ತಾರೆ. ಈ ನಿರ್ಧಾರ ತೆಗೆದುಕೊಳ್ಳೋ ಸಮಯದಲ್ಲಿ ಯಾರಿಗೂ ಕೇರ್ ಮಾಡಲ್ಲ. ಡೇರಿಂಗ್ ಡಿಸಿಷನ್ ತೆಗೆದುಕೊಳ್ಳೋ ಈ ಕ್ವಾಲಿಟಿ ಟೀಮ್ ಇಂಡಿಯಾ ಕೋಚ್ಗೆ ಬೇಕೆ ಬೇಕು.
ಕಾರಣ 2: ಭವಿಷ್ಯದ ತಂಡ ಕಟ್ಟೋಕೆ ಗಂಭೀರ್ ಬೆಸ್ಟ್ ಆಯ್ಕೆ
ಟೀಮ್ ಇಂಡಿಯಾ ಸದ್ಯ TRANSITION PERIODನಲ್ಲಿದೆ. ಇನ್ನೆರಡು ವರ್ಷಗಳಲ್ಲಿ ತಂಡದ ಬಹುತೇಕ ಸೀನಿಯರ್ಗಳು ನಿವೃತ್ತಿ ಘೋಷಿಸಲಿದ್ದಾರೆ. ಅವರ ಸ್ಥಾನಕ್ಕೆ ಸೂಕ್ತ ಆಟಗಾರರನ್ನ ಹುಡುಕಬೇಕಿದೆ. ಟ್ಯಾಲೆಂಟ್ ಹಂಟ್ ಮಾಡೋದ್ರಲ್ಲಿ ಗಂಭೀರ್ ಪಂಟರ್. ಭವಿಷ್ಯದ ತಂಡ ಕಟ್ಟಬೇಕಿರೋದ್ರಿಂದ ಗಂಭೀರ್ರಂತಹ ಕೋಚ್ ಅಗತ್ಯತೆ ತಂಡಕ್ಕಿದೆ.
ಕಾರಣ 3: ಯುವ ಆಟಗಾರರನ್ನ ಬೆಳೆಸೋ ಗುರು
ಯುವ ಆಟಗಾರರ ಪಾಲಿಗೆ ಗಂಭೀರ್ ಅಕ್ಷರಶಃ ಗುರು. ಟ್ಯಾಲೆಂಟ್ ಒಂದಿದ್ರೆ ಸಾಕು, ಆ ಆಟಗಾರನಿಗೆ ಅವಕಾಶ ನೀಡಿ, ತಿದ್ದಿ, ತೀಡಿ ಬೆಳೆಸೋದ್ರಲ್ಲಿ ಗಂಭೀರ್ ಎತ್ತಿದ ಕೈ. ಹಿಂದೆ ಕೆಕೆಆರ್ ನಾಯಕನಾಗಿದ್ದಾಗ, ಇದೀಗ ಮೆಂಟರ್ ಆಗಿದ್ದಾಗ ಗಂಭೀರ್, ಯುವ ಆಟಗಾರರನ್ನ ಸಿಕ್ಕಾಪಟ್ಟೆ ಬ್ಯಾಕ್ ಮಾಡಿದ್ರು. ಇದು ಆಟಗಾರರಿಗೆ ಹೆಚ್ಚಿನ ಕಾನ್ಫಿಡೆನ್ಸ್ ನೀಡುತ್ತೆ.
ಕಾರಣ 4: ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ ವಾತಾವರಣ
ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ನಲ್ಲಿ ಸ್ಟಾರ್ಗಳೇ ತುಂಬಿಕೊಂಡಿದ್ದಾರೆ. ಸಾಮಾನ್ಯ ಕೋಚ್ ಆಯ್ಕೆ ಮಾಡಿದ್ರೆ, ಆಟಗಾರರನ್ನ ಹ್ಯಾಂಡಲ್ ಮಾಡೋದು ಅಸಾಧ್ಯದ ವಿಚಾರವಾಗಲಿದೆ. ತಂಡ ಒಗ್ಗಟ್ಟಾಗಿ ಹೋಗದಿದ್ರೆ ಎತ್ತು ಏರಿಗೆಳೆದ್ರೆ, ಕೋಣ ನೀರಿಗೇಳಿತು ಅನ್ನೋ ಸ್ಥಿತಿ ನಿರ್ಮಾಣವಾಗೋ ಸಾಧ್ಯತೆಯಿದೆ. ಗಂಭೀರ್ಗೆ ಈ ವಿಚಾರಗಳನ್ನು ಖಡಕ್ ಆಗಿ ಹ್ಯಾಂಡೆಲ್ ಮಾಡುವ ಸಾಮರ್ಥ್ಯ ಇದೆ.
ಇದನ್ನೂ ಓದಿ:Pushpa 2: The Rule ಸಿನಿಮಾಗೆ ದೊಡ್ಡ ಸಂಕಷ್ಟ.. ರಿಲೀಸ್ಗೂ ಮುನ್ನವೇ ಅನುಮಾನ ಶುರು..!
ಕಾರಣ 5: ICC ಟ್ರೋಫಿ ಗೆಲುವಿನ ಬರಕ್ಕೆ ಬ್ರೇಕ್ ಹಾಕೋ ಗುರಿ
2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲದ ಬರ ಟೀಮ್ ಇಂಡಿಯಾವನ್ನ ಕಾಡ್ತಿದೆ. ಲೀಗ್ನಲ್ಲಿ ಚನ್ನಾಗಿ ಆಡೋ ಟೀಮ್ ಇಂಡಿಯಾ, ಬರಿಗೈಯಲ್ಲಿ ವಾಪಾಸ್ಸಾಗ್ತಿದೆ. ಗಂಭೀರ್ ಕೋಚ್ ಆದರೆ ಈ ಕೊರತೆಯನ್ನ ನೀಗಿಸಬಲ್ಲರು. ಈ ಬಾರಿ ಮೆಂಟರ್ ಆಗಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು, ಆ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ. ಈ ಎಲ್ಲಾ ಕಾರಣಗಳಿಂದಲೇ ಬಿಸಿಸಿಐ ಬಾಸ್ಗಳು ಗಂಭೀರ್ ಹಿಂದೆ ಬಿದ್ದಿದ್ದಾರೆ. ಬಹುತೇಕ DEAL DONE ಎನ್ನೋ ಸುದ್ದಿ ಹೊರಬಿದ್ದಿದ್ದು, ಅಧಿಕೃತ ಆದೇಶ ಯಾವಾಗ ಹೊರಬರುತ್ತೆ ಅನ್ನೋದಷ್ಟೇ ಸದ್ಯದ ಕುತೂಹಲವಾಗಿದೆ.
ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್