Subscribe

0

user
  • Manage Subscription
  • Bookmarks
  • My Profile
  • Log Out
  • LIVE
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ವಿದೇಶ
  • ಸ್ಪೋರ್ಟ್ಸ್
  • ಆರೋಗ್ಯ
  • ಲೈಫ್‌ಸ್ಟೈಲ್
  • ಎಜುಕೇಶನ್
  • ಟೆಕ್
  • Sign in with Email

By clicking the button, I accept the Terms of Use of the service and its Privacy Policy, as well as consent to the processing of personal data.

Don’t have an account? Signup

ad_close_btn
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸ್ಪೋರ್ಟ್ಸ್
  • ಆರೋಗ್ಯ

Powered by :

ಟಾಪ್ ನ್ಯೂಸ್ ರಾಜ್ಯ

ನಕಲಿ CBI ಗ್ಯಾಂಗ್​ನಿಂದ ಮೋಸ ಹೋದ ಅಧಿಕಾರಿ.. ಬರೋಬ್ಬರಿ 85 ಲಕ್ಷ ರೂಪಾಯಿ ಪಂಗನಾಮ!

author-image
AS Harshith
10 Jun 2024 07:51 IST
Updated On 10 Jun 2024 08:54 IST
Follow Us
ನಕಲಿ CBI ಗ್ಯಾಂಗ್​ನಿಂದ ಮೋಸ ಹೋದ ಅಧಿಕಾರಿ.. ಬರೋಬ್ಬರಿ 85 ಲಕ್ಷ ರೂಪಾಯಿ ಪಂಗನಾಮ!
Advertisment
  • 15 ನಿಮಿಷದಲ್ಲಿ ಹಣ ವಾಪಸ್​ ನೀಡುತ್ತೇವೆಂದು ಪಂಗನಾಮ
  • ರಾಣಾ ಗಾರ್ಮೆಂಟ್ಸ್​ಗೂ ವಂಚಕರಿಗೂ ಏನು ಸಂಬಂಧ?
  • ಒಂದೆರಡಲ್ಲ ಬರೋಬ್ಬರಿ 105 ಖಾತೆಗಳಿಗೆ ಹಣ ವರ್ಗಾವಣೆ

ನಕಲಿ ಸಿಬಿಐ ಗ್ಯಾಂಗ್​ ಜಾಲವೊಂದು ಬಹುರಾಷ್ಟ್ರೀಯ ಸಂಸ್ಥೆಯೊಂದರ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ 85 ಲಕ್ಷ ರೂಪಾಯಿ ವಂಚಿಸಿದ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. 15 ನಿಮಿಷದಲ್ಲಿ ಹಣವನ್ನು ವಾಪಸ್​ ನೀಡುವುದಾಗಿ ಹೇಳಿ ಪಂಗನಾಮ ಹಾಕಿದೆ.

ವಂಚಕರು ಸಿಬಿಐ, ಕಸ್ಟಮ್ಸ್​, ನಾರ್ಕೋಟಿಕ್ಸ್​ ಹಾಗೂ ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಹಿರಿಯ ಅಧಿಕಾರಿಯನ್ನು ವಂಚಿಸಿದ್ದಾರೆ. ವಂಚಕರ ಮಾತಿಗೆ ಮರುಳಾಗಿ ಬರೋಬ್ಬರಿ 85 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಬಂದ ಬಂದ ಮಳೆರಾಯ.. ರಸ್ತೆ ಕೆರೆಯಾಯ್ತು, ಬೆಳೆ ನಾಶವಾಯ್ತು.. ಮಳೆಯಿಂದಾದ ಅವಾಂತರ ಒಂದಾ, ಎರಡಾ

ಹಿರಿಯ ಅಧಿಕಾರಿ ನೀಡಿದ 85 ಲಕ್ಷ ರೂಪಾಯಿ ಹಣವನ್ನು ವಂಚಕರು ಚೆಕ್​ ಮೂಲಕ ಪಡೆದುಕೊಂಡಿದ್ದರು. ಬಳಿಕ ಅದನ್ನು ದೆಹಲಿಯ ಉತ್ತಮ್​ ನಗರದ ಎಚ್​ಡಿಎಫ್​ಸಿ ಬ್ಯಾಂಕ್​ ಖಾತೆ ನಿರ್ವಹಿಸುತ್ತಿದ್ದ ರಾಣಾ ಗಾರ್ಮೆಂಟ್ಸ್​ಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಯಾತ್ರಾರ್ಥಿಗಳ ಬಸ್ಸಿನ ಮೇಲೆ ಭಯೋತ್ಪಾದಕರ ದಾಳಿ.. ಅನ್ಯಾಯವಾಗಿ 10 ಮಂದಿ ಸಾವು

ವಂಚನೆಗೊಳಗಾದ ವ್ಯಕ್ತಿ ಈ ಬಗ್ಗೆ ಕೇಸ್​ ನೀಡಿದ್ದು, ಎಫ್​ಐಆರ್​ ದಾಖಲಾಗಿದೆ. ತನಿಖೆಯ ವೇಳೆ ರಾಣಾ ಗಾರ್ಮೆಂಟ್ಸ್​ ಭಾರತದಾದ್ಯಂತ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದೆ. ಸುಮಾರು 105 ಖಾತೆಗಳಿಗೆ ಹಣ ಚದುರಿಹೋಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲೇ ಹೊಸ ಇತಿಹಾಸ; ಪಾಕ್​​ ವಿರುದ್ಧ ಭಾರತ ತಂಡಕ್ಕೆ ರೋಚಕ ಜಯ

"ನನಗೆ 3 ವರ್ಷಗಳ ಸೇವಾ ಅವಧಿ ಉಳಿದಿತ್ತು. ನನ್ನ ಮಗನನ್ನು ಕಾಲೇಜಿಗೆ ಕಳುಹಿಸಲು ನನಗೆ ಸಮಯ ಬೇಕಾಗಿದ್ದರಿಂದ ಸ್ವಯಂ ನಿವೃತ್ತಿ ತೆಗೆದುಕೊಂಡೆ. ನನಗೆ ಮೇ 2 ರಂದು ನಿವೃತ್ತಿ ಪರಿಹಾರ ಸಿಕ್ಕಿತು. ನನ್ನ ಮಗನ ವೀಸಾ ಸಂಬಂಧಿತ ಪ್ರಕ್ರಿಯೆ ಮೇ 17 ರಂದು ನಡೆಯಬೇಕಿತ್ತು. ಆದರೆ ಮೇ 14 ರಂದು, ನನ್ನ ದಾಖಲೆಗಳನ್ನು ಪರಿಶೀಲಿಸಿದ ನಂತರ ಹಣ ಹಿಂದಿರುಗಿಸುವುದಾಗಿ ಹೇಳಿ ₹ 85 ಲಕ್ಷವನ್ನು ಕಳುಹಿಸುವಂತೆ ಗ್ಯಾಂಗ್ ನನ್ನನ್ನು ವಂಚಿಸಿದೆ’’ ಎಂದು ಭಾರತದಲ್ಲಿ ವ್ಯಾಪಕ ಕಾರ್ಯಾಚರಣೆಗಳನ್ನು ಹೊಂದಿರುವ ಜರ್ಮನಿಯ ಪ್ರಧಾನ ಕಚೇರಿಯ ಸಂಸ್ಥೆಯೊಂದರ 57 ವರ್ಷದ ನಿವೃತ್ತ ಅಸೋಸಿಯೇಟ್ ಜನರಲ್ ಮ್ಯಾನೇಜರ್ ಹೇಳಿದ್ದಾರೆ.

ಇದನ್ನೂ ಓದಿ: ನೂತನ ಕೇಂದ್ರ ಸಚಿವರಿಗೆ ಪ್ರಧಾನಿ ಮೋದಿ 100 ದಿನದ ಟಾರ್ಗೆಟ್​.. ಏನದು ಹೊಸ ಅಜೆಂಡಾ?

ಸದ್ಯ ಈ ಪ್ರಕರಣ ಕುರಿತಾಗಿ ತನಿಖೆ ನಡೆಯುತ್ತಿದೆ. ವಿಶಾಖಪಟ್ಟಣಂ ಕ್ರೈಂ ಬ್ರಾಂಚ್​ನಲ್ಲಿ ದೂರು ದಾಖಲಾಗಿದ್ದು, ವಂಚಕರಿಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
FOLLOW NEWSFIRST FOR
LATEST UPDATES
YouTubeFacebookTwitterInstagram
Subscribe to our Newsletter! Be the first to get exclusive offers and the latest news
logo

Related Articles
Read the Next Article
Latest Stories
Subscribe to our Newsletter! Be the first to get exclusive offers and the latest news



Quick Links

  • IC
  • GRIEVANCE
  • FEED
  • CONTACT US

Olecom Media Pvt Ltd. © 2025

Powered by