ಸಿಲಿಕಾನ್ ಸಿಲಿಯಲ್ಲೊಂದು ಬೆಚ್ಚಿ ಬೀಳಿಸುವ ಪ್ರಕರಣ
ವೃದ್ಧರೇ ಇವರ ಟಾರ್ಗೆಟ್.. ಲಕ್ಷ ಲಕ್ಷ ಪೀಕಿಸುತ್ತಾರೆ ಹುಷಾರ್
ವೃದ್ಧರೇ ಯುವತಿ ಮೈಮಾಟಕ್ಕೆ ಮನಸೋಲದಿರಿ.. ಯಾಮಾರಿಸ್ತಾರೆ
ಸಿಲಿಕಾನ್ ಸಿಟಿಯಲ್ಲಿ ದಿನಕ್ಕೊಂದು ಸೈಬರ್ ವಂಚನೆಗಳು ಬೆಳಕಿಗೆ ಬರುತ್ತಿರುತ್ತೆ. ಇದೀಗ ವೃದ್ಧರನ್ನು ಟಾರ್ಗೆಟ್ ಮಾಡಿ ವಂಚನೆಗಿಳಿದಿರುವ ವಂಚಕರು ಗೀಳು ಬೆಳಕಿಗೆ ಬಂದಿದೆ.
ಉತ್ತರ ಭಾರತದ ಪೊಲೀಸರೆಂದು ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಸಿಲಿಕಾನ್ ಸಿಲಿಯಲ್ಲಿ ನಡೆದಿದೆ. ವೃದ್ಧ ದತ್ತಾತ್ರೇಯ ಭಟ್ (63) ರಿಂದ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಾರಂಭದಲ್ಲಿ ವಂಚಕರು ಮೊದಲಿಗೆ ಯುವತಿ ಕಡೆಯಿಂದ ವಿಡಿಯೋ ಕಾಲ್ ಮಾಡಿಸುತ್ತಾರೆ. ವಿಡಿಯೋ ಕಾಲ್ನಲ್ಲಿ ಯುವತಿ ನಗ್ನವಾಗಿ ಬಳಿಕ ವೃದ್ಧರನ್ನು ನಗ್ನವಾಗುವಂತೆ ತಿಳಿಸುತ್ತಾರೆ. ನಂತರ ಕೆಲಗಂಟೆಗಳ ವಾಪಸ್ ಕರೆ ಮಾಡಿ ನೀನು ನನ್ನ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿದ್ದೀಯಾ ನಾನು ನಿನ್ನ ಮೇಲೆ ಪೊಲೀಸರಿಗೆ ದೂರು ನೀಡುತ್ತೆನೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ.
ಇದಾದ ಕೆಲವೆ ಗಂಟೆಗಳಲ್ಲಿ ಡೆಲ್ಲಿ ಸೈಬರ್ ಪೊಲೀಸ್ ಎಸಿಪಿ ವಿಕ್ರಮ್ ರಾಥೋಡ್ ಎಂದು ಕರೆ ಮಾಡುತ್ತಾರೆ. ನಿಮ್ಮ ಮೇಲೆ ಯುವತಿ ಒಬ್ಬರು ದೂರು ನೀಡಿದ್ದಾರೆ. ನೀವು ಅವರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿದ್ದೀರಿ ಎಂದು ದೂರು ಬಂದಿದೆ. ನಾನು ನಿಮಗೆ ಸಹಾಯ ಮಾಡುತ್ತೇನೆ 50 ಸಾವಿರ ಹಣ ನೀಡಿ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? 1Kg ಬೆಳ್ಳಿ ರೇಟ್ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ
ಒಂದು ದಿನದ ನಂತರ ಮತ್ತೆ ಪುಣೆ ಎಸಿಪಿ ಅರುಣ ಎಂದು ಹೇಳಿ ಕರೆ ಮಾಡುತ್ತಾರೆ. ನಿಮ್ಮ ಹೆಸರು ಮತ್ತು ಡೀಟೈಲ್ಸ್ ನೀಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಪ್ರಕರಣದಲ್ಲಿ ಪೊಲೀಸರು ನಿಮ್ಮನ್ನು ಬಂಧಿಸುತ್ತಾರೆ ಎಂದು ಬೆದರಿಕೆ ಹಾಕುತ್ತಾರೆ. ಪ್ರಕರಣ ದಿಂದ ಮುಕ್ತಿ ನೀಡಲು 40 ಲಕ್ಷ ಹಣಕ್ಕೆ ಡಿಮಾಂಡ್ ಮಾಡುತ್ತಾರೆ. ಆಡ್ವಾನ್ಸ್ ಎಂದು ಹೇಳಿ ವಂಚಕರು ಒಂದು ಲಕ್ಷ ಪಡೆದಿದ್ದಾರೆ. ಹೀಗೆ ಪದೆ ಪದೇ ಕರೆ ಬಂದ ಹಿನ್ನೆಲೆ ಅನುಮಾನ ಬಂದು ವೃದ್ಧ ದತ್ತಾತ್ರೇಯ ಭಟ್ (63 ) ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿಲಿಕಾನ್ ಸಿಲಿಯಲ್ಲೊಂದು ಬೆಚ್ಚಿ ಬೀಳಿಸುವ ಪ್ರಕರಣ
ವೃದ್ಧರೇ ಇವರ ಟಾರ್ಗೆಟ್.. ಲಕ್ಷ ಲಕ್ಷ ಪೀಕಿಸುತ್ತಾರೆ ಹುಷಾರ್
ವೃದ್ಧರೇ ಯುವತಿ ಮೈಮಾಟಕ್ಕೆ ಮನಸೋಲದಿರಿ.. ಯಾಮಾರಿಸ್ತಾರೆ
ಸಿಲಿಕಾನ್ ಸಿಟಿಯಲ್ಲಿ ದಿನಕ್ಕೊಂದು ಸೈಬರ್ ವಂಚನೆಗಳು ಬೆಳಕಿಗೆ ಬರುತ್ತಿರುತ್ತೆ. ಇದೀಗ ವೃದ್ಧರನ್ನು ಟಾರ್ಗೆಟ್ ಮಾಡಿ ವಂಚನೆಗಿಳಿದಿರುವ ವಂಚಕರು ಗೀಳು ಬೆಳಕಿಗೆ ಬಂದಿದೆ.
ಉತ್ತರ ಭಾರತದ ಪೊಲೀಸರೆಂದು ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಸಿಲಿಕಾನ್ ಸಿಲಿಯಲ್ಲಿ ನಡೆದಿದೆ. ವೃದ್ಧ ದತ್ತಾತ್ರೇಯ ಭಟ್ (63) ರಿಂದ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಾರಂಭದಲ್ಲಿ ವಂಚಕರು ಮೊದಲಿಗೆ ಯುವತಿ ಕಡೆಯಿಂದ ವಿಡಿಯೋ ಕಾಲ್ ಮಾಡಿಸುತ್ತಾರೆ. ವಿಡಿಯೋ ಕಾಲ್ನಲ್ಲಿ ಯುವತಿ ನಗ್ನವಾಗಿ ಬಳಿಕ ವೃದ್ಧರನ್ನು ನಗ್ನವಾಗುವಂತೆ ತಿಳಿಸುತ್ತಾರೆ. ನಂತರ ಕೆಲಗಂಟೆಗಳ ವಾಪಸ್ ಕರೆ ಮಾಡಿ ನೀನು ನನ್ನ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿದ್ದೀಯಾ ನಾನು ನಿನ್ನ ಮೇಲೆ ಪೊಲೀಸರಿಗೆ ದೂರು ನೀಡುತ್ತೆನೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ.
ಇದಾದ ಕೆಲವೆ ಗಂಟೆಗಳಲ್ಲಿ ಡೆಲ್ಲಿ ಸೈಬರ್ ಪೊಲೀಸ್ ಎಸಿಪಿ ವಿಕ್ರಮ್ ರಾಥೋಡ್ ಎಂದು ಕರೆ ಮಾಡುತ್ತಾರೆ. ನಿಮ್ಮ ಮೇಲೆ ಯುವತಿ ಒಬ್ಬರು ದೂರು ನೀಡಿದ್ದಾರೆ. ನೀವು ಅವರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿದ್ದೀರಿ ಎಂದು ದೂರು ಬಂದಿದೆ. ನಾನು ನಿಮಗೆ ಸಹಾಯ ಮಾಡುತ್ತೇನೆ 50 ಸಾವಿರ ಹಣ ನೀಡಿ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? 1Kg ಬೆಳ್ಳಿ ರೇಟ್ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ
ಒಂದು ದಿನದ ನಂತರ ಮತ್ತೆ ಪುಣೆ ಎಸಿಪಿ ಅರುಣ ಎಂದು ಹೇಳಿ ಕರೆ ಮಾಡುತ್ತಾರೆ. ನಿಮ್ಮ ಹೆಸರು ಮತ್ತು ಡೀಟೈಲ್ಸ್ ನೀಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಪ್ರಕರಣದಲ್ಲಿ ಪೊಲೀಸರು ನಿಮ್ಮನ್ನು ಬಂಧಿಸುತ್ತಾರೆ ಎಂದು ಬೆದರಿಕೆ ಹಾಕುತ್ತಾರೆ. ಪ್ರಕರಣ ದಿಂದ ಮುಕ್ತಿ ನೀಡಲು 40 ಲಕ್ಷ ಹಣಕ್ಕೆ ಡಿಮಾಂಡ್ ಮಾಡುತ್ತಾರೆ. ಆಡ್ವಾನ್ಸ್ ಎಂದು ಹೇಳಿ ವಂಚಕರು ಒಂದು ಲಕ್ಷ ಪಡೆದಿದ್ದಾರೆ. ಹೀಗೆ ಪದೆ ಪದೇ ಕರೆ ಬಂದ ಹಿನ್ನೆಲೆ ಅನುಮಾನ ಬಂದು ವೃದ್ಧ ದತ್ತಾತ್ರೇಯ ಭಟ್ (63 ) ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ