ಕೋಚ್ ಹುದ್ದೆಗೆ ಗೌತಿ ಫಿಕ್ಸ್.. ಷರತ್ತುಗಳು ಅನ್ವಯ..!
ಕೋಚ್ ಆಗೋಕೆ ಗಂಭೀರ್ ಇಟ್ರು ಡಿಮ್ಯಾಂಡ್..!
ಗಂಭೀರ್ ಡಿಮ್ಯಾಂಡ್ಗೆ ಬಿಸಿಸಿಐ ಗ್ರೀನ್ ಸಿಗ್ನಲ್
ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್ ಯಾರು? ಈ ಪ್ರಶ್ನೆಗೆ ಉತ್ತರ ಅತಿ ಶೀಘ್ರದಲ್ಲಿ ಬಹಿರಂಗಗೊಳ್ಳಲಿದೆ. ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಖಚಿತವಾಗಿದ್ದು, ಅಧಿಕೃತ ಮುದ್ರೆ ಮಾತ್ರ ಬಾಕಿ ಇದೆ. ಕೋಚ್ ಹುದ್ದೆಯ ಆಫರ್ ಅನ್ನ ಗಂಭೀರ್ ಸುಮ್ಮನೆ ಒಪ್ಪಿಕೊಂಡಿಲ್ಲ. ಬಿಗ್ ಬಾಸ್ಗಳ ಮುಂದೆ ಕೆಲ ಡಿಮ್ಯಾಂಡ್ಗಳಿಟ್ಟಿದ್ದಾರೆ.
ಹೆಡ್ ಮಾಸ್ಟರ್ ರಾಹುಲ್ ದ್ರಾವಿಡ್ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಬಳಿಕ ನಾನು ಮುಂದುವರೆಯಲ್ಲ ಅಂತಾ ದ್ರಾವಿಡ್ ಖಡಾಖಂಡಿತವಾಗಿ ಹೇಳಿದ್ದಾರೆ. ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಪಯಣ ಮುಗಿದ ಬೆನ್ನಲ್ಲೇ ದಿ ವಾಲ್ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈ ಬಳಿಕ ನೂತನ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಪದಗ್ರಹಣ ಫಿಕ್ಸ್ ಆಗಿದೆ.
ಇದನ್ನೂ ಓದಿ:ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?
ಕೋಚ್ ಆಗೋಕೆ ಗಂಭೀರ್ ಇಟ್ರು ಡಿಮ್ಯಾಂಡ್..!
ಕೋಚ್ ಹುಡುಕಾಟದಲ್ಲಿದ್ದ ಬಿಸಿಸಿಐ, ಈಗ ಗಂಭೀರ್ನ ಪಟ್ಟಾಭೀಷೇಕ ಕಟ್ಟಲು ಮುಂದಾಗಿದೆ. ಇದಕ್ಕೂ ಮುನ್ನ ಗಂಭೀರ್ ಜೊತೆ ಬಿಸಿಸಿಐ ಮಾತುಕತೆಯನ್ನು ನಡೆಸಿದೆ. ಈ ವೇಳೆ ಗೌತಮ್ ಗಂಭೀರ್, ಬಿಸಿಸಿಐ ಬಿಗ್ಬಾಸ್ಗಳ ಮುಂದೆ ಕೆಲ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಷರತ್ತುಗಳಿಗೆ ಒಪ್ಪಿದ್ರೆ ಮಾತ್ರ, ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದಕ್ಕೆ ಬಿಸಿಸಿಐ ಬಿಗ್ಬಾಸ್ಗಳೂ ಕೂಡ ಗ್ರೀನ್ ಸಿಗ್ನಲ್ ನೀಡಿದ್ದು, ಈ ಬಳಿಕವೇ ಗಂಭೀರ್, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ:ಪಟ್ಟಣಗೆರೆ ಶೆಡ್ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!
ಗಂಭೀರ್ ಡಿಮ್ಯಾಂಡ್..!
ಗೌತಮ್ ಗಂಭೀರ್ ಈ ರೀತಿಯ ಷರತ್ತುಗಳೆ ಬದಲಾವಣೆಯ ಮನ್ಸೂಚನೆಯನ್ನ ನೀಡಿವೆ. ಗೌತಿ ಹೆಡ್ ಕೋಚ್ ಆದ ಬಳಿಕ ಕೆಲ ಆಟಗಾರರು ಹಾಗೂ ಸಂಪೋರ್ಟಿಂಗ್ ಸ್ಟಾಫ್ಗೆ ಗೇಟ್ಪಾಸ್ ಗ್ಯಾರಂಟಿಯಾಗಿದೆ.
ಇದನ್ನೂ ಓದಿ:ದರ್ಶನ್ ತನಿಖೆಯಲ್ಲಿ ಪೊಲೀಸರಿಂದ ಮಹತ್ವದ ನಿರ್ಧಾರ.. ಇವತ್ತು ಮೈಸೂರಿಗೆ ಕರ್ಕೊಂಡು ಬರ್ತಾರೆ..!
ಹಾಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹುದ್ದೆ ತ್ಯಜಿಸುವ ನಿರ್ಧಾರವನ್ನ ಈಗಾಗಲೇ ತಿಳಿಸಿದ್ದಾರೆ. ಆ ಬಳಿಕ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಬದಲಾಗೋದು ಪಕ್ಕಾ ಆಗಿದೆ. ಗಂಭೀರ್ ಕೋಚ್ ಅದ್ಮೇಲೆ ಯಾರನ್ನ ಸಂಪೋರ್ಟಿಂಗ್ ಸ್ಟಾಫ್ ಆಗಿ ಕರೆತರ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ. ಕೆಕೆಆರ್ ಸಂಪೋರ್ಟಿಂಗ್ ಸ್ಟಾಫ್ ಅನ್ನೇ ಹೈಜಾಕ್ ಮಾಡ್ತಾರಾ? ಡೆಲ್ಲಿ ಮಾಜಿ ಕ್ರಿಕೆಟಿಗರ ಮೇಲೆ ಕೃಪೆ ತೋರ್ತಾರಾ..? ಇಲ್ಲ ತನ್ನ ಜೊತೆ ಆಡಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರ ಮೊರೆ ಹೋಗ್ತಾರಾ ಅನ್ನೋದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ.
ಇದನ್ನೂ ಓದಿ:ಮಿಷನ್ ಅನ್ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!
ಬದಲಾಗುತ್ತಾ ಟೀಮ್ ಇಂಡಿಯಾ ಆಯ್ಕೆಯ ಮಾನದಂಡ..?
ನೂತನ ಕೋಚ್ ಆಗಮನದ ವೇಳೆ ತಂಡದಲ್ಲಿ ಕೋಚಿಂಗ್ ಸ್ಟಾಫ್ನಲ್ಲಿ ಬದಲಾವಣೆ ಸಹಜ. ಆದ್ರೆ, ಟೀಮ್ ಇಂಡಿಯಾ ಆಯ್ಕೆಗೆ ಮಾನದಂಡವಾಗಿರುವ ಯೋ ಯೋ ಟೆಸ್ಟ್ ಬಗ್ಗೆಯೇ ಗಂಭೀರ್ ಅಪಸ್ವರ ಎತ್ತಿದ್ದಾರೆ. ಆಟಗಾರರ ಪ್ರತಿಭೆ, ಹೋರಾಟದ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಬೇಕು ಎಂದಿದ್ದಾರೆ. ಹೀಗಾಗಿ ಗಂಭೀರ್, ಕೋಚ್ ಹುದ್ದೆಗೇರಿದ ಬಳಿಕ ಟೀಮ್ ಇಂಡಿಯಾದ ಆಯ್ಕೆಯ ಮಾನದಂಡವೇ ಬದಲಾಗುತ್ತಾ ಎಂಬ ಪ್ರಶ್ನೆಯೂ ಹಲವರಲ್ಲಿ ಕಾಡತೊಡಗಿದೆ.
ಇದನ್ನೂ ಓದಿ:ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?
ಒಟ್ನಲ್ಲಿ.. ಗಂಭೀರ್ ಭಾರತ ತಂಡದ ಕೋಚ್ ಹುದ್ದೆಗೇರುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ಟೀಮ್ ಇಂಡಿಯಾದಲ್ಲಿ ಯಾವೆಲ್ಲಾ ಬದಲಾವಣೆಗಳಾಗ್ತವೆ.? ಅನ್ನೋ ಪ್ರಶ್ನೆ ಫ್ಯಾನ್ಸ್ ತಲೆಯಲ್ಲಿ ಗಿರಕಿ ಹೊಡೀತಿರೋದಂತೂ ಸುಳ್ಳಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್ಗೆ ಕೊಟ್ಟ ವಾರ್ನಿಂಗ್ ಏನು..?
ಕೋಚ್ ಹುದ್ದೆಗೆ ಗೌತಿ ಫಿಕ್ಸ್.. ಷರತ್ತುಗಳು ಅನ್ವಯ..!
ಕೋಚ್ ಆಗೋಕೆ ಗಂಭೀರ್ ಇಟ್ರು ಡಿಮ್ಯಾಂಡ್..!
ಗಂಭೀರ್ ಡಿಮ್ಯಾಂಡ್ಗೆ ಬಿಸಿಸಿಐ ಗ್ರೀನ್ ಸಿಗ್ನಲ್
ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್ ಯಾರು? ಈ ಪ್ರಶ್ನೆಗೆ ಉತ್ತರ ಅತಿ ಶೀಘ್ರದಲ್ಲಿ ಬಹಿರಂಗಗೊಳ್ಳಲಿದೆ. ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಖಚಿತವಾಗಿದ್ದು, ಅಧಿಕೃತ ಮುದ್ರೆ ಮಾತ್ರ ಬಾಕಿ ಇದೆ. ಕೋಚ್ ಹುದ್ದೆಯ ಆಫರ್ ಅನ್ನ ಗಂಭೀರ್ ಸುಮ್ಮನೆ ಒಪ್ಪಿಕೊಂಡಿಲ್ಲ. ಬಿಗ್ ಬಾಸ್ಗಳ ಮುಂದೆ ಕೆಲ ಡಿಮ್ಯಾಂಡ್ಗಳಿಟ್ಟಿದ್ದಾರೆ.
ಹೆಡ್ ಮಾಸ್ಟರ್ ರಾಹುಲ್ ದ್ರಾವಿಡ್ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಬಳಿಕ ನಾನು ಮುಂದುವರೆಯಲ್ಲ ಅಂತಾ ದ್ರಾವಿಡ್ ಖಡಾಖಂಡಿತವಾಗಿ ಹೇಳಿದ್ದಾರೆ. ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಪಯಣ ಮುಗಿದ ಬೆನ್ನಲ್ಲೇ ದಿ ವಾಲ್ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈ ಬಳಿಕ ನೂತನ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಪದಗ್ರಹಣ ಫಿಕ್ಸ್ ಆಗಿದೆ.
ಇದನ್ನೂ ಓದಿ:ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?
ಕೋಚ್ ಆಗೋಕೆ ಗಂಭೀರ್ ಇಟ್ರು ಡಿಮ್ಯಾಂಡ್..!
ಕೋಚ್ ಹುಡುಕಾಟದಲ್ಲಿದ್ದ ಬಿಸಿಸಿಐ, ಈಗ ಗಂಭೀರ್ನ ಪಟ್ಟಾಭೀಷೇಕ ಕಟ್ಟಲು ಮುಂದಾಗಿದೆ. ಇದಕ್ಕೂ ಮುನ್ನ ಗಂಭೀರ್ ಜೊತೆ ಬಿಸಿಸಿಐ ಮಾತುಕತೆಯನ್ನು ನಡೆಸಿದೆ. ಈ ವೇಳೆ ಗೌತಮ್ ಗಂಭೀರ್, ಬಿಸಿಸಿಐ ಬಿಗ್ಬಾಸ್ಗಳ ಮುಂದೆ ಕೆಲ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಷರತ್ತುಗಳಿಗೆ ಒಪ್ಪಿದ್ರೆ ಮಾತ್ರ, ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದಕ್ಕೆ ಬಿಸಿಸಿಐ ಬಿಗ್ಬಾಸ್ಗಳೂ ಕೂಡ ಗ್ರೀನ್ ಸಿಗ್ನಲ್ ನೀಡಿದ್ದು, ಈ ಬಳಿಕವೇ ಗಂಭೀರ್, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ:ಪಟ್ಟಣಗೆರೆ ಶೆಡ್ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!
ಗಂಭೀರ್ ಡಿಮ್ಯಾಂಡ್..!
ಗೌತಮ್ ಗಂಭೀರ್ ಈ ರೀತಿಯ ಷರತ್ತುಗಳೆ ಬದಲಾವಣೆಯ ಮನ್ಸೂಚನೆಯನ್ನ ನೀಡಿವೆ. ಗೌತಿ ಹೆಡ್ ಕೋಚ್ ಆದ ಬಳಿಕ ಕೆಲ ಆಟಗಾರರು ಹಾಗೂ ಸಂಪೋರ್ಟಿಂಗ್ ಸ್ಟಾಫ್ಗೆ ಗೇಟ್ಪಾಸ್ ಗ್ಯಾರಂಟಿಯಾಗಿದೆ.
ಇದನ್ನೂ ಓದಿ:ದರ್ಶನ್ ತನಿಖೆಯಲ್ಲಿ ಪೊಲೀಸರಿಂದ ಮಹತ್ವದ ನಿರ್ಧಾರ.. ಇವತ್ತು ಮೈಸೂರಿಗೆ ಕರ್ಕೊಂಡು ಬರ್ತಾರೆ..!
ಹಾಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹುದ್ದೆ ತ್ಯಜಿಸುವ ನಿರ್ಧಾರವನ್ನ ಈಗಾಗಲೇ ತಿಳಿಸಿದ್ದಾರೆ. ಆ ಬಳಿಕ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಬದಲಾಗೋದು ಪಕ್ಕಾ ಆಗಿದೆ. ಗಂಭೀರ್ ಕೋಚ್ ಅದ್ಮೇಲೆ ಯಾರನ್ನ ಸಂಪೋರ್ಟಿಂಗ್ ಸ್ಟಾಫ್ ಆಗಿ ಕರೆತರ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ. ಕೆಕೆಆರ್ ಸಂಪೋರ್ಟಿಂಗ್ ಸ್ಟಾಫ್ ಅನ್ನೇ ಹೈಜಾಕ್ ಮಾಡ್ತಾರಾ? ಡೆಲ್ಲಿ ಮಾಜಿ ಕ್ರಿಕೆಟಿಗರ ಮೇಲೆ ಕೃಪೆ ತೋರ್ತಾರಾ..? ಇಲ್ಲ ತನ್ನ ಜೊತೆ ಆಡಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರ ಮೊರೆ ಹೋಗ್ತಾರಾ ಅನ್ನೋದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ.
ಇದನ್ನೂ ಓದಿ:ಮಿಷನ್ ಅನ್ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!
ಬದಲಾಗುತ್ತಾ ಟೀಮ್ ಇಂಡಿಯಾ ಆಯ್ಕೆಯ ಮಾನದಂಡ..?
ನೂತನ ಕೋಚ್ ಆಗಮನದ ವೇಳೆ ತಂಡದಲ್ಲಿ ಕೋಚಿಂಗ್ ಸ್ಟಾಫ್ನಲ್ಲಿ ಬದಲಾವಣೆ ಸಹಜ. ಆದ್ರೆ, ಟೀಮ್ ಇಂಡಿಯಾ ಆಯ್ಕೆಗೆ ಮಾನದಂಡವಾಗಿರುವ ಯೋ ಯೋ ಟೆಸ್ಟ್ ಬಗ್ಗೆಯೇ ಗಂಭೀರ್ ಅಪಸ್ವರ ಎತ್ತಿದ್ದಾರೆ. ಆಟಗಾರರ ಪ್ರತಿಭೆ, ಹೋರಾಟದ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಬೇಕು ಎಂದಿದ್ದಾರೆ. ಹೀಗಾಗಿ ಗಂಭೀರ್, ಕೋಚ್ ಹುದ್ದೆಗೇರಿದ ಬಳಿಕ ಟೀಮ್ ಇಂಡಿಯಾದ ಆಯ್ಕೆಯ ಮಾನದಂಡವೇ ಬದಲಾಗುತ್ತಾ ಎಂಬ ಪ್ರಶ್ನೆಯೂ ಹಲವರಲ್ಲಿ ಕಾಡತೊಡಗಿದೆ.
ಇದನ್ನೂ ಓದಿ:ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?
ಒಟ್ನಲ್ಲಿ.. ಗಂಭೀರ್ ಭಾರತ ತಂಡದ ಕೋಚ್ ಹುದ್ದೆಗೇರುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ಟೀಮ್ ಇಂಡಿಯಾದಲ್ಲಿ ಯಾವೆಲ್ಲಾ ಬದಲಾವಣೆಗಳಾಗ್ತವೆ.? ಅನ್ನೋ ಪ್ರಶ್ನೆ ಫ್ಯಾನ್ಸ್ ತಲೆಯಲ್ಲಿ ಗಿರಕಿ ಹೊಡೀತಿರೋದಂತೂ ಸುಳ್ಳಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್ಗೆ ಕೊಟ್ಟ ವಾರ್ನಿಂಗ್ ಏನು..?