ಕಮಿಷನರ್ ಕಚೇರಿಗೆ ದೂರು ನೀಡಲು ಬಂದ ನಟ ಭುವನ್ ಪೊನ್ನಣ್ಣ ದಂಪತಿ
ವಿಡಿಯೋವನ್ನು ಶೇರ್ ಮಾಡಿ ಬೇಸರಗೊಂಡ ನಟಿ ಹರ್ಷಿಕಾ ಪೂಣಚ್ಚ
ಸ್ಯಾಂಡಲ್ವುಡ್ ನಟ ಭುವನ್ ಪೊನ್ನಣ್ಣ ಮೇಲೆ ಕೆಲ ಯುವಕರಿಂದ ಹಲ್ಲೆ
ಬೆಂಗಳೂರು: ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಅವರ ಪತಿ ಭುವನ್ ಪೊನ್ನಣ್ಣ ಅವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಇದೀಗ ಇದೇ ಕೇಸ್ ಸಂಬಂಧ ದೂರು ನೀಡಲು ಕಮಿಷನರ್ ಕಚೇರಿಗೆ ಬಂದ ಹರ್ಷಿಕಾ ಪೂಣಚ್ಚ ಹಾಗೂ ಪತಿ ಭುವನ್ ಪೊನ್ನಣ್ಣ ಅವರು ಕಮಿಷನರ್ ಕಚೇರಿಗೆ ದೂರು ನೀಡಲು ಬಂದಿದ್ದಾರೆ.
ಇದನ್ನೂ ಓದಿ: ನೇಹಾಳ ಒಳ್ಳೆಯ ಗುಣ ನೋಡಿ ಡ್ರೈವರ್ ತನ್ನ ಮಗಳಿಗೆ ಆಕೆಯ ಹೆಸರನ್ನೇ ಇಟ್ಟಿದ್ದರು..!
ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚ ಪತಿ ಭುವನ್ ಪೊನ್ನಣ್ಣ ಮೇಲೆ ಪುಂಡರಿಂದ ಹಲ್ಲೆ.. ವಿಡಿಯೋ ಇಲ್ಲಿದೆ
ಇನ್ನು, ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ನಟ ಭುವನ್ ಪೊನ್ನಣ್ಣ, ನಾವು ಕಮಿಷನರ್ ಭೇಟಿಗೆ ಬಂದಿದ್ದೇವೆ. ಅವರು ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನ ಭೇಟಿಯಾಗಿದ್ದೇವೆ. ಎಫ್ಐಆರ್ ಮಾಡಿ ಕ್ರಮ ತೆಗೆದುಕೊಳ್ತೀವಿ ಅಂತ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇರೆ ರೂಪ ತೆಗೆದುಕೊಳ್ಳುತ್ತದೆ ಅಂತ ಆಗ ದೂರು ಕೊಟ್ಟಿರಲಿಲ್ಲ. ಮತ್ತೆ ಇಂಜೆಕ್ಷನ್ ತೆಗೆದುಕೊಳ್ಳಬೇಕು ಅಂತ ಅಂದಾಗ ನನ್ನ ಕಷ್ಟ ನೋಡಿ ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಾಕಿದ್ದಾರೆ.
ಅಂದು ಆ ಸಂದರ್ಭದಲ್ಲಿ ಹೊಯ್ಸಳ ಇತ್ತು. ಅಲ್ಲಿ ಹೋಗಿ ಅವರ ಬಳಿ ಮಾತನಾಡಿದ್ವಿ. ಅವತ್ತಿನ ಸ್ಥಿತಿಯಲ್ಲಿ ದೂರು ಕೊಡುವುದಕ್ಕೆ ಆಗಲಿಲ್ಲ. ತುಂಬಾ ಜನ ಫೋನ್ ಮಾಡಿ ದೂರು ಕೊಡದಿದ್ರೆ ತಪ್ಪಾಗುತ್ತೆ ಅಂತ ಹೇಳಿದ್ರು. ಈ ಕಾರಣಕ್ಕೆ ಮೊನ್ನೆ ಪೋಸ್ಟ್ ಮಾಡಿದ್ದೆ. ಈ ತರಹದ ಘಟನೆಗಳು ಬೆಂಗಳೂರಿನಲ್ಲಿ ಹಲವಾರು ಬಾರಿ ನಡೆದಿದೆ. ಕರ್ನಾಟಕದಲ್ಲಿ ನಾವೆಲ್ಲ ಒಂದೆ. ಯಾವುದೇ ಏರಿಯಾಗೆ ಹೋದ್ರು ಭಯವಿಲ್ಲದೇ ಹೋಗಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಮಿಷನರ್ ಕಚೇರಿಗೆ ದೂರು ನೀಡಲು ಬಂದ ನಟ ಭುವನ್ ಪೊನ್ನಣ್ಣ ದಂಪತಿ
ವಿಡಿಯೋವನ್ನು ಶೇರ್ ಮಾಡಿ ಬೇಸರಗೊಂಡ ನಟಿ ಹರ್ಷಿಕಾ ಪೂಣಚ್ಚ
ಸ್ಯಾಂಡಲ್ವುಡ್ ನಟ ಭುವನ್ ಪೊನ್ನಣ್ಣ ಮೇಲೆ ಕೆಲ ಯುವಕರಿಂದ ಹಲ್ಲೆ
ಬೆಂಗಳೂರು: ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಅವರ ಪತಿ ಭುವನ್ ಪೊನ್ನಣ್ಣ ಅವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಇದೀಗ ಇದೇ ಕೇಸ್ ಸಂಬಂಧ ದೂರು ನೀಡಲು ಕಮಿಷನರ್ ಕಚೇರಿಗೆ ಬಂದ ಹರ್ಷಿಕಾ ಪೂಣಚ್ಚ ಹಾಗೂ ಪತಿ ಭುವನ್ ಪೊನ್ನಣ್ಣ ಅವರು ಕಮಿಷನರ್ ಕಚೇರಿಗೆ ದೂರು ನೀಡಲು ಬಂದಿದ್ದಾರೆ.
ಇದನ್ನೂ ಓದಿ: ನೇಹಾಳ ಒಳ್ಳೆಯ ಗುಣ ನೋಡಿ ಡ್ರೈವರ್ ತನ್ನ ಮಗಳಿಗೆ ಆಕೆಯ ಹೆಸರನ್ನೇ ಇಟ್ಟಿದ್ದರು..!
ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚ ಪತಿ ಭುವನ್ ಪೊನ್ನಣ್ಣ ಮೇಲೆ ಪುಂಡರಿಂದ ಹಲ್ಲೆ.. ವಿಡಿಯೋ ಇಲ್ಲಿದೆ
ಇನ್ನು, ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ನಟ ಭುವನ್ ಪೊನ್ನಣ್ಣ, ನಾವು ಕಮಿಷನರ್ ಭೇಟಿಗೆ ಬಂದಿದ್ದೇವೆ. ಅವರು ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನ ಭೇಟಿಯಾಗಿದ್ದೇವೆ. ಎಫ್ಐಆರ್ ಮಾಡಿ ಕ್ರಮ ತೆಗೆದುಕೊಳ್ತೀವಿ ಅಂತ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇರೆ ರೂಪ ತೆಗೆದುಕೊಳ್ಳುತ್ತದೆ ಅಂತ ಆಗ ದೂರು ಕೊಟ್ಟಿರಲಿಲ್ಲ. ಮತ್ತೆ ಇಂಜೆಕ್ಷನ್ ತೆಗೆದುಕೊಳ್ಳಬೇಕು ಅಂತ ಅಂದಾಗ ನನ್ನ ಕಷ್ಟ ನೋಡಿ ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಾಕಿದ್ದಾರೆ.
ಅಂದು ಆ ಸಂದರ್ಭದಲ್ಲಿ ಹೊಯ್ಸಳ ಇತ್ತು. ಅಲ್ಲಿ ಹೋಗಿ ಅವರ ಬಳಿ ಮಾತನಾಡಿದ್ವಿ. ಅವತ್ತಿನ ಸ್ಥಿತಿಯಲ್ಲಿ ದೂರು ಕೊಡುವುದಕ್ಕೆ ಆಗಲಿಲ್ಲ. ತುಂಬಾ ಜನ ಫೋನ್ ಮಾಡಿ ದೂರು ಕೊಡದಿದ್ರೆ ತಪ್ಪಾಗುತ್ತೆ ಅಂತ ಹೇಳಿದ್ರು. ಈ ಕಾರಣಕ್ಕೆ ಮೊನ್ನೆ ಪೋಸ್ಟ್ ಮಾಡಿದ್ದೆ. ಈ ತರಹದ ಘಟನೆಗಳು ಬೆಂಗಳೂರಿನಲ್ಲಿ ಹಲವಾರು ಬಾರಿ ನಡೆದಿದೆ. ಕರ್ನಾಟಕದಲ್ಲಿ ನಾವೆಲ್ಲ ಒಂದೆ. ಯಾವುದೇ ಏರಿಯಾಗೆ ಹೋದ್ರು ಭಯವಿಲ್ಲದೇ ಹೋಗಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ