ವಿದೇಶದಿಂದಲೇ ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಸಂದೇಶ
ಇಡೀ ರಾಜ್ಯವನ್ನ ಒಂದು ತಿಂಗಳಿನಿಂದ ಕಾಡಿದ್ದ ಕಾತರ ಕಡೆಗೂ ಅಂತ್ಯ
ಪ್ರಜ್ವಲ್ ರೇವಣ್ಣ ಅವರ ಒಂದು ತಿಂಗಳ ಅಜ್ಞಾತವಾಸಕ್ಕೆ ಕಡೆಗೂ ತೆರೆ
ಪ್ರಜ್ವಲ್ ರೇವಣ್ಣ ಬರ್ತಾರೋ ಇಲ್ವೋ? ಬರೋದಾದ್ರೆ ಯಾವಾಗ ಬರ್ತಾರೆ? ಬರೋದೇ ಇಲ್ವಾ? ಹೀಗೆ ನಾನಾ ಪ್ರಶ್ನೆಗಳನ್ನು ಎಬ್ಬಿಸಿದ್ದ ಪ್ರಜ್ವಲ್ ರೇವಣ್ಣ ಕಡೆಗೂ ಪ್ರತ್ಯಕ್ಷರಾಗಿದ್ದಾರೆ. ವಿದೇಶದಿಂದಲೇ ವಿಡಿಯೋ ಸಂದೇಶ ರವಾನಿಸಿರೋ ಪ್ರಜ್ವಲ್ ರೇವಣ್ಣ, ತಾವು ವಾಪಾಸಾಗ್ತಿರೋ ಬಗ್ಗೆ ತಿಳಿಸಿದ್ದಾರೆ.
ಮೇ. 31ರ ಶುಕ್ರವಾರದಂದು ಅವರು ದೇಶಕ್ಕೆ ಮರಳಲಿದ್ದಾರಂತೆ. ಇಡೀ ರಾಜ್ಯವನ್ನ ಒಂದು ತಿಂಗಳಿನಿಂದ ಕಾಡಿದ್ದ ಕಾತರ ಕಡೆಗೂ ಅಂತ್ಯವಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರ ಒಂದು ತಿಂಗಳ ಅಜ್ಞಾತವಾಸಕ್ಕೆ ಕಡೆಗೂ ತೆರೆ ಬೀಳುವ ಕಾಲ ಸನ್ನಿಹಿತವಾಗಿದೆ. ಮೇ 31ರಂದು ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಾಸಾಗ್ತಾ ಇದ್ದಾರೆ. ಹಾಗಂತ ಅವರೇ ವಿಡಿಯೋ ಮೂಲಕ ಸಂದೇಶ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ: ‘ನಾನು ಡಿಪ್ರೆಶನ್ಗೆ ಹೋಗಿ ಐಸೋಲೇಷನ್ಗೆ ಒಳಗಾಗಿದ್ದೆ’- ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?
ಎಲ್ಲರಿಗೂ ನಮಸ್ಕಾರ.. ಮೊದಲನೆಯದಾಗಿ ನನ್ನ ತಂದೆ ತಾಯಿಗೆ, ತಾತನಿಗೆ, ನನ್ನ ಕುಮಾರಣ್ಣನಿಗೆ, ನಾಡಿನ ಜನತೆಗೆ ಮತ್ತು ನನ್ನ ಎಲ್ಲ ಕಾರ್ಯತರ್ಕರಿಗೆ ಕ್ಷಮಾಪಣೆ ಕೇಳಲು ಬಂದಿದ್ದೇನೆ. ನಾನು ಫಾರಿನ್ನಲ್ಲಿ ಎಲ್ಲಿ ಇದ್ದೇನೆ ಅಂತ ಸರಿಯಾಗಿ ಮಾಹಿತಿ ನೀಡಿರಲಿಲ್ಲ. 26ರ ಚುನಾವಣೆ ನಡೆದಂತ ಸಂದರ್ಭದಲ್ಲಿ ನನ್ನ ಮೇಲೆ ಯಾವುದೇ ಕೇಸ್ ದಾಖಲಾಗಿ ಇರಲಿಲ್ಲ. ಎಸ್ಐಟಿ ಕೂಡ ರಚನೆಯಾಗಿರಲಿಲ್ಲ. 26ರಂದು ವಿದೇಶಕ್ಕೆ ಹೋಗುವ ಬಗ್ಗೆ ಪ್ರೀ ಪ್ಲಾನ್ ಆಗಿತ್ತು. ಹಾಗಾಗಿ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ನಾನು ವಿದೇಶದಲ್ಲಿದ್ದಾಗ ನ್ಯೂಸ್ ನೋಡಿ ನನ್ನ ಮೇಲೆ ಆರೋಪ ಬಂದಿರುವುದು ಕಂಡುಬಂದಿದೆ. ಎಸ್ಐಟಿ ನೋಟಿಸ್ಗೂ ಕೂಡ ನಾನು ಟ್ವೀಟ್ ಹಾಗೂ ವಕೀಲರ ಮುಖಾಂತರ 7 ದಿನ ಸಮಯ ಹೇಳಿದ್ದೆ. ಇದಾದ ನಂತರ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಸೇರಿ ಎಲ್ಲ ವೇದಿಕೆ ಮೇಲೆ ಈ ವಿಚಾರದ ಬಗ್ಗೆ ಮಾತನಾಡಲು ಶುರು ಮಾಡಿದ್ದರು. ಇದನ್ನು ನೋಡಿ, ಕೇಳಿ ನಾನು ಡಿಪ್ರೆಶನ್ಗೆ ಹೋಗಬೇಕಾಯಿತು. ಹಾಗಾಗಿ ನಾನು ಮೊದಲನೆಯದಾಗಿ ಕ್ಷಮೆ ಕೇಳಿದ್ದೇನೆ. ಹಾಸನದಲ್ಲಿ ಕೂಡ ಕೆಲವರು ಸೇರಿಕೊಂಡು ರಾಜಕೀಯ ಪಿತೂರಿ ಮಾಡುವಂತ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಾನು ಬೆಳೆಯುತ್ತಿರುವುದನ್ನು ನೋಡಿದ ಅವರು ಕೆಲ ಕೇಸ್ಗಳಲ್ಲಿ ನನ್ನನ್ನು ಭಾಗಿ ಮಾಡಿದ್ದಾರೆ. ಹೀಗಾಗಿ ಯಾರು ಕೂಡ ಇದರ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ. ನಾನೇ ಮೇ 31ನೇ ತಾರೀಖು ಶುಕ್ರವಾರದಂದು SIT ಮುಂದೆ ಬಂದು ಸರಿಯಾಗಿ ಉತ್ತರ ನೀಡುತ್ತೇನೆ. ಹಾಗೇ ನ್ಯಾಯಲಯದ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿ ಕೂಡ ನನ್ನ ಮೇಲೆ ಇರುವ ಸುಳ್ಳು ಪ್ರಕರಣಗಳಿಂದ ಆಚೆ ಬರುವಂತ ಕೆಲಸ ಮಾಡುತ್ತೇನೆ. ದೇವರ, ಜನರ ಹಾಗೂ ಕುಟುಂಬಸ್ಥರ ಆರ್ಶಿವಾದ ನನ್ನ ಮೇಲೆ ಇರಲಿ. ಮೇ 31ನೇ ತಾರೀಖು ಶುಕ್ರವಾರದಂದು ಬಂದ ಕೂಡಲೇ ಇದಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತೇನೆ.
– ಪ್ರಜ್ವಲ್ ರೇವಣ್ಣ, ಸಂಸದ
ಇನ್ನು ವಿದೇಶ ಪ್ರವಾಸದ ಬಗ್ಗೆ ವಿವರಿಸಿರೋ ಪ್ರಜ್ವಲ್ ರೇವಣ್ಣರ, ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ವಿದೇಶಕ್ಕೆ ಹೋಗೋ ಸಮಯದಲ್ಲಿ ತನ್ನ ಮೇಲೆ ಯಾವುದೇ ಕೇಸ್ ಕೂಡಾ ದಾಖಲಾಗಿರಲಿಲ್ಲ, ವಿದೇಶಕ್ಕೆ ತಲುಪಿದ ಮೇಲಷ್ಟೇ ವಿಚಾರ ಗೊತ್ತಾಯಿತು ಅನ್ನೋದನ್ನ ಹೇಳ್ಕೊಂಡಿದ್ದಾರೆ. ವಿಚಾರ ತಿಳಿದ ಮೇಲೆ ನಾನು ಖಿನ್ನತೆಗೆ ಹೋಗುವಂತಾಯಿತು ಅಂತಾ ಅಲವತ್ತುಕೊಂಡಿದ್ದಾರೆ.
ಇದನ್ನೂ ಓದಿ: ಇದ್ದಕ್ಕಿದ್ದಂತೆಯೇ ಕುಸಿದ ಬೆಟ್ಟ.. 2000ಕ್ಕೂ ಅಧಿಕ ಜನರು ನೆಲ ಸಮಾಧಿ.. ಮೃತದೇಹಗಳಿಗಾಗಿ ಹುಡುಕಾಟ
ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಓಪನ್ ವೇದಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸುವ ಮೂಲಕ ರಾಜಕೀಯ ಪಿತೂರಿ ಮಾಡತೊಡಗಿದ್ರು. ಇದರಿಂದಾಗಿ ತಾನು ಖಿನ್ನತೆಗೆ ಒಳಗಾದೆ ಎಂದಿರುವ ಪ್ರಜ್ವಲ್, ನನ್ನ ವಿರುದ್ಧ ಎಲ್ಲಾ ಒಟ್ಟಾಗಿ ಷಡ್ಯಂತ್ರ ಮಾಡಿದಾಗ ನಾನೇ ದೂರ ಇರುವ ಸ್ಥಿತಿ ನಿರ್ಮಾಣವಾಯಿತು ಅಂತಾ ಆರೋಪಿಸಿದ್ದಾರೆ. ವಿದೇಶಕ್ಕೆ ತೆರಳಿದ ಮೇಲೆ ಈ ಎಲ್ಲಾ ವಿಚಾರಗಳು ತನ್ನ ಗಮನಕ್ಕೆ ಬಂದ್ವು. ಒಂದು ವಾರದಲ್ಲಿ ಎಸ್ಐಟಿ ಮುಂದೆ ಹಾಜರಾಗೋ ಬಗ್ಗೆ ವಕೀಲರ ಮೂಲಕ ಸಂದೇಶ ರವಾನಿಸಿದ್ದೆ. ಆದ್ರೆ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಹಿರಿಯ ನಾಯಕರು ಬಹಿರಂಗ ವೇದಿಕೆಯಲ್ಲಿ ಮಾತಾಡಿದ್ದು ಮತ್ತು ತನ್ನ ವಿರುದ್ದ ಪಿತೂರಿ ನಡೀತಿರೋದನ್ನೆಲ್ಲಾ ಗಮನಿಸಿದ ಮೇಲೆ ನಾನು ವಾಪಾಸ್ ಬರದೇ ಉಳಿದೆ ಅನ್ನೋದು ಪ್ರಜ್ವಲ್ ವಿವರಣೆ. ಇದಕ್ಕಾಗಿ ಅವರು ಕುಟುಂಬಸ್ಥರು ಮತ್ತು ರಾಜ್ಯದ ಜನರ ಕ್ಷಮೆಯಾಚನೆಯನ್ನೂ ಮಾಡಿದ್ದಾರೆ. ಸದ್ಯ ಮೇ.31ಕ್ಕೆ ಅವರು ಬರೋ ದಾರಿಗಾಗಿ ರಾಜ್ಯದ ಜನ ಕಾದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿದೇಶದಿಂದಲೇ ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಸಂದೇಶ
ಇಡೀ ರಾಜ್ಯವನ್ನ ಒಂದು ತಿಂಗಳಿನಿಂದ ಕಾಡಿದ್ದ ಕಾತರ ಕಡೆಗೂ ಅಂತ್ಯ
ಪ್ರಜ್ವಲ್ ರೇವಣ್ಣ ಅವರ ಒಂದು ತಿಂಗಳ ಅಜ್ಞಾತವಾಸಕ್ಕೆ ಕಡೆಗೂ ತೆರೆ
ಪ್ರಜ್ವಲ್ ರೇವಣ್ಣ ಬರ್ತಾರೋ ಇಲ್ವೋ? ಬರೋದಾದ್ರೆ ಯಾವಾಗ ಬರ್ತಾರೆ? ಬರೋದೇ ಇಲ್ವಾ? ಹೀಗೆ ನಾನಾ ಪ್ರಶ್ನೆಗಳನ್ನು ಎಬ್ಬಿಸಿದ್ದ ಪ್ರಜ್ವಲ್ ರೇವಣ್ಣ ಕಡೆಗೂ ಪ್ರತ್ಯಕ್ಷರಾಗಿದ್ದಾರೆ. ವಿದೇಶದಿಂದಲೇ ವಿಡಿಯೋ ಸಂದೇಶ ರವಾನಿಸಿರೋ ಪ್ರಜ್ವಲ್ ರೇವಣ್ಣ, ತಾವು ವಾಪಾಸಾಗ್ತಿರೋ ಬಗ್ಗೆ ತಿಳಿಸಿದ್ದಾರೆ.
ಮೇ. 31ರ ಶುಕ್ರವಾರದಂದು ಅವರು ದೇಶಕ್ಕೆ ಮರಳಲಿದ್ದಾರಂತೆ. ಇಡೀ ರಾಜ್ಯವನ್ನ ಒಂದು ತಿಂಗಳಿನಿಂದ ಕಾಡಿದ್ದ ಕಾತರ ಕಡೆಗೂ ಅಂತ್ಯವಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರ ಒಂದು ತಿಂಗಳ ಅಜ್ಞಾತವಾಸಕ್ಕೆ ಕಡೆಗೂ ತೆರೆ ಬೀಳುವ ಕಾಲ ಸನ್ನಿಹಿತವಾಗಿದೆ. ಮೇ 31ರಂದು ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಾಸಾಗ್ತಾ ಇದ್ದಾರೆ. ಹಾಗಂತ ಅವರೇ ವಿಡಿಯೋ ಮೂಲಕ ಸಂದೇಶ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ: ‘ನಾನು ಡಿಪ್ರೆಶನ್ಗೆ ಹೋಗಿ ಐಸೋಲೇಷನ್ಗೆ ಒಳಗಾಗಿದ್ದೆ’- ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?
ಎಲ್ಲರಿಗೂ ನಮಸ್ಕಾರ.. ಮೊದಲನೆಯದಾಗಿ ನನ್ನ ತಂದೆ ತಾಯಿಗೆ, ತಾತನಿಗೆ, ನನ್ನ ಕುಮಾರಣ್ಣನಿಗೆ, ನಾಡಿನ ಜನತೆಗೆ ಮತ್ತು ನನ್ನ ಎಲ್ಲ ಕಾರ್ಯತರ್ಕರಿಗೆ ಕ್ಷಮಾಪಣೆ ಕೇಳಲು ಬಂದಿದ್ದೇನೆ. ನಾನು ಫಾರಿನ್ನಲ್ಲಿ ಎಲ್ಲಿ ಇದ್ದೇನೆ ಅಂತ ಸರಿಯಾಗಿ ಮಾಹಿತಿ ನೀಡಿರಲಿಲ್ಲ. 26ರ ಚುನಾವಣೆ ನಡೆದಂತ ಸಂದರ್ಭದಲ್ಲಿ ನನ್ನ ಮೇಲೆ ಯಾವುದೇ ಕೇಸ್ ದಾಖಲಾಗಿ ಇರಲಿಲ್ಲ. ಎಸ್ಐಟಿ ಕೂಡ ರಚನೆಯಾಗಿರಲಿಲ್ಲ. 26ರಂದು ವಿದೇಶಕ್ಕೆ ಹೋಗುವ ಬಗ್ಗೆ ಪ್ರೀ ಪ್ಲಾನ್ ಆಗಿತ್ತು. ಹಾಗಾಗಿ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ನಾನು ವಿದೇಶದಲ್ಲಿದ್ದಾಗ ನ್ಯೂಸ್ ನೋಡಿ ನನ್ನ ಮೇಲೆ ಆರೋಪ ಬಂದಿರುವುದು ಕಂಡುಬಂದಿದೆ. ಎಸ್ಐಟಿ ನೋಟಿಸ್ಗೂ ಕೂಡ ನಾನು ಟ್ವೀಟ್ ಹಾಗೂ ವಕೀಲರ ಮುಖಾಂತರ 7 ದಿನ ಸಮಯ ಹೇಳಿದ್ದೆ. ಇದಾದ ನಂತರ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಸೇರಿ ಎಲ್ಲ ವೇದಿಕೆ ಮೇಲೆ ಈ ವಿಚಾರದ ಬಗ್ಗೆ ಮಾತನಾಡಲು ಶುರು ಮಾಡಿದ್ದರು. ಇದನ್ನು ನೋಡಿ, ಕೇಳಿ ನಾನು ಡಿಪ್ರೆಶನ್ಗೆ ಹೋಗಬೇಕಾಯಿತು. ಹಾಗಾಗಿ ನಾನು ಮೊದಲನೆಯದಾಗಿ ಕ್ಷಮೆ ಕೇಳಿದ್ದೇನೆ. ಹಾಸನದಲ್ಲಿ ಕೂಡ ಕೆಲವರು ಸೇರಿಕೊಂಡು ರಾಜಕೀಯ ಪಿತೂರಿ ಮಾಡುವಂತ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಾನು ಬೆಳೆಯುತ್ತಿರುವುದನ್ನು ನೋಡಿದ ಅವರು ಕೆಲ ಕೇಸ್ಗಳಲ್ಲಿ ನನ್ನನ್ನು ಭಾಗಿ ಮಾಡಿದ್ದಾರೆ. ಹೀಗಾಗಿ ಯಾರು ಕೂಡ ಇದರ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ. ನಾನೇ ಮೇ 31ನೇ ತಾರೀಖು ಶುಕ್ರವಾರದಂದು SIT ಮುಂದೆ ಬಂದು ಸರಿಯಾಗಿ ಉತ್ತರ ನೀಡುತ್ತೇನೆ. ಹಾಗೇ ನ್ಯಾಯಲಯದ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿ ಕೂಡ ನನ್ನ ಮೇಲೆ ಇರುವ ಸುಳ್ಳು ಪ್ರಕರಣಗಳಿಂದ ಆಚೆ ಬರುವಂತ ಕೆಲಸ ಮಾಡುತ್ತೇನೆ. ದೇವರ, ಜನರ ಹಾಗೂ ಕುಟುಂಬಸ್ಥರ ಆರ್ಶಿವಾದ ನನ್ನ ಮೇಲೆ ಇರಲಿ. ಮೇ 31ನೇ ತಾರೀಖು ಶುಕ್ರವಾರದಂದು ಬಂದ ಕೂಡಲೇ ಇದಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತೇನೆ.
– ಪ್ರಜ್ವಲ್ ರೇವಣ್ಣ, ಸಂಸದ
ಇನ್ನು ವಿದೇಶ ಪ್ರವಾಸದ ಬಗ್ಗೆ ವಿವರಿಸಿರೋ ಪ್ರಜ್ವಲ್ ರೇವಣ್ಣರ, ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ವಿದೇಶಕ್ಕೆ ಹೋಗೋ ಸಮಯದಲ್ಲಿ ತನ್ನ ಮೇಲೆ ಯಾವುದೇ ಕೇಸ್ ಕೂಡಾ ದಾಖಲಾಗಿರಲಿಲ್ಲ, ವಿದೇಶಕ್ಕೆ ತಲುಪಿದ ಮೇಲಷ್ಟೇ ವಿಚಾರ ಗೊತ್ತಾಯಿತು ಅನ್ನೋದನ್ನ ಹೇಳ್ಕೊಂಡಿದ್ದಾರೆ. ವಿಚಾರ ತಿಳಿದ ಮೇಲೆ ನಾನು ಖಿನ್ನತೆಗೆ ಹೋಗುವಂತಾಯಿತು ಅಂತಾ ಅಲವತ್ತುಕೊಂಡಿದ್ದಾರೆ.
ಇದನ್ನೂ ಓದಿ: ಇದ್ದಕ್ಕಿದ್ದಂತೆಯೇ ಕುಸಿದ ಬೆಟ್ಟ.. 2000ಕ್ಕೂ ಅಧಿಕ ಜನರು ನೆಲ ಸಮಾಧಿ.. ಮೃತದೇಹಗಳಿಗಾಗಿ ಹುಡುಕಾಟ
ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಓಪನ್ ವೇದಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸುವ ಮೂಲಕ ರಾಜಕೀಯ ಪಿತೂರಿ ಮಾಡತೊಡಗಿದ್ರು. ಇದರಿಂದಾಗಿ ತಾನು ಖಿನ್ನತೆಗೆ ಒಳಗಾದೆ ಎಂದಿರುವ ಪ್ರಜ್ವಲ್, ನನ್ನ ವಿರುದ್ಧ ಎಲ್ಲಾ ಒಟ್ಟಾಗಿ ಷಡ್ಯಂತ್ರ ಮಾಡಿದಾಗ ನಾನೇ ದೂರ ಇರುವ ಸ್ಥಿತಿ ನಿರ್ಮಾಣವಾಯಿತು ಅಂತಾ ಆರೋಪಿಸಿದ್ದಾರೆ. ವಿದೇಶಕ್ಕೆ ತೆರಳಿದ ಮೇಲೆ ಈ ಎಲ್ಲಾ ವಿಚಾರಗಳು ತನ್ನ ಗಮನಕ್ಕೆ ಬಂದ್ವು. ಒಂದು ವಾರದಲ್ಲಿ ಎಸ್ಐಟಿ ಮುಂದೆ ಹಾಜರಾಗೋ ಬಗ್ಗೆ ವಕೀಲರ ಮೂಲಕ ಸಂದೇಶ ರವಾನಿಸಿದ್ದೆ. ಆದ್ರೆ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಹಿರಿಯ ನಾಯಕರು ಬಹಿರಂಗ ವೇದಿಕೆಯಲ್ಲಿ ಮಾತಾಡಿದ್ದು ಮತ್ತು ತನ್ನ ವಿರುದ್ದ ಪಿತೂರಿ ನಡೀತಿರೋದನ್ನೆಲ್ಲಾ ಗಮನಿಸಿದ ಮೇಲೆ ನಾನು ವಾಪಾಸ್ ಬರದೇ ಉಳಿದೆ ಅನ್ನೋದು ಪ್ರಜ್ವಲ್ ವಿವರಣೆ. ಇದಕ್ಕಾಗಿ ಅವರು ಕುಟುಂಬಸ್ಥರು ಮತ್ತು ರಾಜ್ಯದ ಜನರ ಕ್ಷಮೆಯಾಚನೆಯನ್ನೂ ಮಾಡಿದ್ದಾರೆ. ಸದ್ಯ ಮೇ.31ಕ್ಕೆ ಅವರು ಬರೋ ದಾರಿಗಾಗಿ ರಾಜ್ಯದ ಜನ ಕಾದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ