ಐಪಿಎಲ್ನಲ್ಲಿ ಅಬ್ಬರ ವಿದ್ದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ
ಗೇಟ್ಪಾಸ್ ಪಡೆದಿರೋ ಶ್ರೇಯಸ್ಗೆ ಬಿಸಿಸಿಐ ಮತ್ತೊಂದು ಶಾಕ್
ಆಫ್ ಸ್ಪಿನ್ನರ್ ಅಶ್ವಿನ್, ರವಿ ಬಿಷ್ನೋಯ್ಗೂ ಸೆಲೆಕ್ಟರ್ಸ್ ಕೊಕ್
ಚುಟುಕು ಮಹಾದಂಗಲ್ಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟವಾಗಿದೆ. ಅಜಿತ್ ಅಗರ್ಕರ್ & ಟೀಮ್ ಪಕ್ಕಾ ಲೆಕ್ಕಾ ಹಾಕಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಕೆಲ ಅನುಭವಿಗಳು ಹಾಗೂ ಯುವ ಆಟಗಾರರಿಗೆ ಮಣೆ ಹಾಕಿರೋ ಸೆಲೆಕ್ಟರ್ಸ್, ಸ್ಥಾನದ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಶಾಕ್ ಕೊಟ್ಟಿದ್ದಾರೆ. ವಿಶ್ವಕಪ್ ಆಡೋ ಕನವರಿಕೆಯಲ್ಲಿದ್ದ ಕೆಲ ಸ್ಟಾರ್ಗಳ ಕನಸು ನುಚ್ಚು ನೂರಾಗಿದೆ.
ಟಿ20 ವಿಶ್ವಕಪ್ ಟೂರ್ನಿಗೆ ಕೊನೆಗೂ ಟೀಮ್ ಇಂಡಿಯಾ ಪ್ರಕಟವಾಗಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ ಬಲಿಷ್ಠ ತಂಡವನ್ನ ಸೆಲೆಕ್ಷನ್ ಕಮಿಟಿ ಆಯ್ಕೆ ಮಾಡಿದೆ. 15 ಆಟಗಾರರ ಜೊತೆಗೆ 4 ಮಂದಿ ರಿಸರ್ವ್ ಪ್ಲೇಯರ್ಸ್ಗಳು ಕೂಡ ವಿಂಡೀಸ್ ಫ್ಲೈಟ್ ಟಿಕೆಟ್ ಹತ್ತಲಿದ್ದಾರೆ. ಬ್ಯಾಟಿಂಗ್ -ಬೌಲಿಂಗ್ 2 ವಿಭಾಗದಲ್ಲಿ ಟೀಮ್ ಇಂಡಿಯಾ ಸಖತ್ ಸ್ಟ್ರಾಂಗ್ ಆಗಿ ಕಾಣ್ತಿದೆ.
ಇದನ್ನೂ ಓದಿ: ನಾದಿನಿಯ ಗಂಡನ ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ.. ಕಾರಿನಲ್ಲಿ ಹಾಕಿ ಬೆಂಕಿ ಇಟ್ಟ ಗಂಡ.. ಕಾರಣ?
ಇದನ್ನೂ ಓದಿ: ‘ಕರ್ನಾಟಕಕ್ಕೆ ಕಳಂಕ, ಮಾನವ ಕುಲಕ್ಕೆ ಅಪಮಾನ’- ಹಾಸನ ಅಶ್ಲೀಲ ವಿಡಿಯೋ ಬಗ್ಗೆ ಎಸ್ ನಾರಾಯಣ್ ಆಕ್ರೋಶ
ಈಗ ತಂಡಕ್ಕೆ ಆಯ್ಕೆಯಾದ ಆಟಗಾರರ ಹೊರತಾಗಿ ಇನ್ನೂ ಹಲ ಆಟಗಾರರು ವಿಶ್ವಕಪ್ ಆಡೋ ಕನಸನ್ನ ಕಂಡಿದ್ರು. ಅನುಭವ ಹಾಗೂ ಸ್ಟಾರ್ಡಮ್ ಲೆಕ್ಕಾಚಾರದಲ್ಲಿ ತಮಗೆ ಚಾನ್ಸ್ ಸಿಗುತ್ತೆ ಅನ್ನೋ ಲೆಕ್ಕಾಚಾರದಲ್ಲಿದ್ರು. ಆದ್ರೆ, ಆ ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಸೆಲೆಕ್ಟರ್ಸ್ ಶಾಕ್ ಕೊಟ್ಟಿದ್ದಾರೆ.
ಕನ್ನಡಿಗ ಕೆ.ಎಲ್ ರಾಹುಲ್ಗೆ ತಂಡದಲ್ಲಿಲ್ಲ ಸ್ಥಾನ.!
ಟೀಮ್ ಇಂಡಿಯಾದ ಆಪತ್ಭಾಂದವ ಎಂದೇ ಗುರುತಿಸಿಕೊಂಡಿರುವ ಕರ್ನಾಟಕದ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ಗೆ ಟಿ20 ವಿಶ್ವಕಪ್ ತಂಡದಿಂದ ಕೊಕ್ ಕೊಡಲಾಗಿದೆ. ಟಾಪ್ ಆರ್ಡರ್ ಜೊತೆಗೆ ಮಿಡಲ್ ಆರ್ಡರ್ನಲ್ಲೂ ಬ್ಯಾಟಿಂಗ್ ಮಾಡೋ ಸಾಮರ್ಥ್ಯವನ್ನ ರಾಹುಲ್ ಹೊಂದಿದ್ರು. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಆಗಿಯೂ ಸಾಮರ್ಥ್ಯವನ್ನ ನಿರೂಪಿಸಿದ್ರು. ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ನೀಡ್ತಾ ಇರೋ ರಾಹುಲ್ ಸಹಜವಾಗೇ ವಿಶ್ವಕಪ್ ತಂಡದಲ್ಲಿರ್ತಾರೆ ಅನ್ನೋ ನಿರೀಕ್ಷೆಯಿತ್ತು. ಆದ್ರೆ, ರಾಹುಲ್ಗೆ ತಂಡದಿಂದ ಕೊಕ್ ಕೊಡಲಾಗಿದೆ.
ಶ್ರೇಯಸ್ ಅಯ್ಯರ್ಗೆ ಶಾಕ್ ಕೊಟ್ಟ ಸೆಲೆಕ್ಟರ್ಸ್.!
ಐಪಿಎಲ್ಗೂ ಮುನ್ನ ವಿವಾದಕ್ಕೆ ಗುರಿಯಾಗಿ ಸೆಂಟ್ರಲ್ ಕಾಂಟ್ರ್ಯಾಕ್ಟ್ ಲಿಸ್ಟ್ನಿಂದ ಗೇಟ್ಪಾಸ್ ಪಡೆದಿರೋ ಶ್ರೇಯಸ್ಗೆ ಬಿಸಿಸಿಐ ಮತ್ತೊಂದು ಶಾಕ್ ಕೊಟ್ಟಿದೆ. ಟಿ20 ವಿಶ್ವಕಪ್ ತಂಡದಿಂದ ಶ್ರೇಯಸ್ ಅಯ್ಯರ್ಗೆ ಗೇಟ್ಪಾಸ್ ನೀಡಲಾಗಿದೆ. ಐಪಿಎಲ್ನಲ್ಲಿ ಕೆಕೆಆರ್ ತಂಡದ ಕ್ಯಾಪ್ಟನ್ ಆಗಿರುವ ಶ್ರೇಯಸ್ ಅಯ್ಯರ್ ಡಿಸೆಂಟ್ ಪರ್ಫಾಮೆನ್ಸ್ ನೀಡ್ತಾ ಇದ್ರೂ, ಡ್ರಾಪ್ ಮಾಡಲಾಗಿದೆ.
ಕಿಶನ್ ಕನಸು ನುಚ್ಚು ನೂರು.!
ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಇಶನ್ ಕಿಶನ್ಗೂ ವಿಶ್ವಕಪ್ ತಂಡದಿಂದ ಗೇಟ್ಪಾಸ್ ಕೊಡಲಾಗಿದೆ. ಶ್ರೇಯಸ್ ಅಯ್ಯರ್ ಜೊತೆಗೆ ಇಶಾನ್ ಕಿಶನ್ ಕೂಡ ಕಾಂಟ್ರವರ್ಸಿಗೆ ಗುರಿಯಾಗಿದ್ರು. ಇದೇ ಕಾರಣದಿಂದ ಸೆಂಟ್ರಲ್ ಕಾಂಟ್ರಾಕ್ಟ್ ಲಿಸ್ಟ್ನಿಂದ ಕೈ ಬಿಡಲಾಗಿತ್ತು. ಇದೀಗ ವಿಶ್ವಕಪ್ ತಂಡದಿಂದಲೂ ಕೊಕ್ ಕೊಡಲಾಗಿದೆ. ಐಪಿಎಲ್ನಲ್ಲಿ ಅಬ್ಬರದ ಪರ್ಫಾಮೆನ್ಸ್ ನೀಡ್ತಾ ಇದ್ರೂ, ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಇದನ್ನೂ ಓದಿ: ಹಾಸನ ವಿಡಿಯೋ ಕೇಸ್ಗೆ ಹೊಸ ಟ್ವಿಸ್ಟ್.. ಅಪ್ರಾಪ್ತ ಹೆಣ್ಣು ಮಗಳನ್ನು ಬಳಸಿಕೊಂಡ ಬಗ್ಗೆ ಅನುಮಾನ
ರವಿ ಬಿಷ್ನೋಯ್ಗೆ ಶಾಕ್ ಕೊಟ್ಟ ಸೆಲೆಕ್ಟರ್ಸ್.!
ಕಳೆದ ಒಂದು ವರ್ಷದಿಂದ ಯುವ ಸ್ಪಿನ್ನರ್ ರವಿ ಬಿಷ್ನೋಯ್ ಟೀಮ್ ಇಂಡಿಯಾ ಟಿ20 ತಂಡದ ಭಾಗವಾಗಿದ್ರು. 2023ರ ಜನವರಿಯಿಂದ ಈವರೆಗೆ 14 ಪಂದ್ಯಗಳನ್ನಾಡಿ 20 ವಿಕೆಟ್ ಬೇಟೆಯಾಡಿದ್ರು. 7.80ರ ಉತ್ತಮ ಎಕಾನಮಿಯನ್ನ ಹೊಂದಿದ್ದ ರವಿ ಬಿಷ್ನೋಯ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ರು. ಆದ್ರೆ, ಕುಲ್ದೀಪ್- ಚಹಲ್ ಜೊತೆಗಿನ ಪೈಪೋಟಿಯಲ್ಲಿ ಹಿಂದೆ ಬಿದ್ದ ಬಿಷ್ನೋಯ್ ಸ್ಥಾನ ವಂಚಿತರಾಗಿದ್ದಾರೆ.
ಅನುಭವಿಗಳಾದ ಅಶ್ವಿನ್, ಕಾರ್ತಿಕ್ಗೂ ನಿರಾಸೆ.!
ಅನುಭವಿ ಆಫ್ ಸ್ಪಿನ್ನರ್ ಅಶ್ವಿನ್ ಹಾಗೂ ಐಪಿಎಲ್ನಲ್ಲಿ ಫಿನಿಷರ್ ಆಗಿ ಮಿಂಚ್ತಾ ಇರೋ ದಿನೇಶ್ ಕಾರ್ತಿಕ್ ಹೆಸರು ಕೂಡ ವಿಶ್ವಕಪ್ ಸೆಲೆಕ್ಷನ್ ರೇಸ್ನಲ್ಲಿತ್ತು. ಆದ್ರೆ, ಅಂತಿಮವಾಗಿ ತಂಡದಲ್ಲಿ ಎಂಟ್ರಿ ಕೊಡುವಲ್ಲಿ ಫೇಲ್ ಆಗಿದ್ದಾರೆ. ಇಬ್ಬರೂ ಸೀನಿಯರ್ಸ್ಗೆ ಸೆಲೆಕ್ಟರ್ಸ್ ಕೊಕ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಐಪಿಎಲ್ನಲ್ಲಿ ಅಬ್ಬರ ವಿದ್ದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ
ಗೇಟ್ಪಾಸ್ ಪಡೆದಿರೋ ಶ್ರೇಯಸ್ಗೆ ಬಿಸಿಸಿಐ ಮತ್ತೊಂದು ಶಾಕ್
ಆಫ್ ಸ್ಪಿನ್ನರ್ ಅಶ್ವಿನ್, ರವಿ ಬಿಷ್ನೋಯ್ಗೂ ಸೆಲೆಕ್ಟರ್ಸ್ ಕೊಕ್
ಚುಟುಕು ಮಹಾದಂಗಲ್ಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟವಾಗಿದೆ. ಅಜಿತ್ ಅಗರ್ಕರ್ & ಟೀಮ್ ಪಕ್ಕಾ ಲೆಕ್ಕಾ ಹಾಕಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಕೆಲ ಅನುಭವಿಗಳು ಹಾಗೂ ಯುವ ಆಟಗಾರರಿಗೆ ಮಣೆ ಹಾಕಿರೋ ಸೆಲೆಕ್ಟರ್ಸ್, ಸ್ಥಾನದ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಶಾಕ್ ಕೊಟ್ಟಿದ್ದಾರೆ. ವಿಶ್ವಕಪ್ ಆಡೋ ಕನವರಿಕೆಯಲ್ಲಿದ್ದ ಕೆಲ ಸ್ಟಾರ್ಗಳ ಕನಸು ನುಚ್ಚು ನೂರಾಗಿದೆ.
ಟಿ20 ವಿಶ್ವಕಪ್ ಟೂರ್ನಿಗೆ ಕೊನೆಗೂ ಟೀಮ್ ಇಂಡಿಯಾ ಪ್ರಕಟವಾಗಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ ಬಲಿಷ್ಠ ತಂಡವನ್ನ ಸೆಲೆಕ್ಷನ್ ಕಮಿಟಿ ಆಯ್ಕೆ ಮಾಡಿದೆ. 15 ಆಟಗಾರರ ಜೊತೆಗೆ 4 ಮಂದಿ ರಿಸರ್ವ್ ಪ್ಲೇಯರ್ಸ್ಗಳು ಕೂಡ ವಿಂಡೀಸ್ ಫ್ಲೈಟ್ ಟಿಕೆಟ್ ಹತ್ತಲಿದ್ದಾರೆ. ಬ್ಯಾಟಿಂಗ್ -ಬೌಲಿಂಗ್ 2 ವಿಭಾಗದಲ್ಲಿ ಟೀಮ್ ಇಂಡಿಯಾ ಸಖತ್ ಸ್ಟ್ರಾಂಗ್ ಆಗಿ ಕಾಣ್ತಿದೆ.
ಇದನ್ನೂ ಓದಿ: ನಾದಿನಿಯ ಗಂಡನ ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ.. ಕಾರಿನಲ್ಲಿ ಹಾಕಿ ಬೆಂಕಿ ಇಟ್ಟ ಗಂಡ.. ಕಾರಣ?
ಇದನ್ನೂ ಓದಿ: ‘ಕರ್ನಾಟಕಕ್ಕೆ ಕಳಂಕ, ಮಾನವ ಕುಲಕ್ಕೆ ಅಪಮಾನ’- ಹಾಸನ ಅಶ್ಲೀಲ ವಿಡಿಯೋ ಬಗ್ಗೆ ಎಸ್ ನಾರಾಯಣ್ ಆಕ್ರೋಶ
ಈಗ ತಂಡಕ್ಕೆ ಆಯ್ಕೆಯಾದ ಆಟಗಾರರ ಹೊರತಾಗಿ ಇನ್ನೂ ಹಲ ಆಟಗಾರರು ವಿಶ್ವಕಪ್ ಆಡೋ ಕನಸನ್ನ ಕಂಡಿದ್ರು. ಅನುಭವ ಹಾಗೂ ಸ್ಟಾರ್ಡಮ್ ಲೆಕ್ಕಾಚಾರದಲ್ಲಿ ತಮಗೆ ಚಾನ್ಸ್ ಸಿಗುತ್ತೆ ಅನ್ನೋ ಲೆಕ್ಕಾಚಾರದಲ್ಲಿದ್ರು. ಆದ್ರೆ, ಆ ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಸೆಲೆಕ್ಟರ್ಸ್ ಶಾಕ್ ಕೊಟ್ಟಿದ್ದಾರೆ.
ಕನ್ನಡಿಗ ಕೆ.ಎಲ್ ರಾಹುಲ್ಗೆ ತಂಡದಲ್ಲಿಲ್ಲ ಸ್ಥಾನ.!
ಟೀಮ್ ಇಂಡಿಯಾದ ಆಪತ್ಭಾಂದವ ಎಂದೇ ಗುರುತಿಸಿಕೊಂಡಿರುವ ಕರ್ನಾಟಕದ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ಗೆ ಟಿ20 ವಿಶ್ವಕಪ್ ತಂಡದಿಂದ ಕೊಕ್ ಕೊಡಲಾಗಿದೆ. ಟಾಪ್ ಆರ್ಡರ್ ಜೊತೆಗೆ ಮಿಡಲ್ ಆರ್ಡರ್ನಲ್ಲೂ ಬ್ಯಾಟಿಂಗ್ ಮಾಡೋ ಸಾಮರ್ಥ್ಯವನ್ನ ರಾಹುಲ್ ಹೊಂದಿದ್ರು. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಆಗಿಯೂ ಸಾಮರ್ಥ್ಯವನ್ನ ನಿರೂಪಿಸಿದ್ರು. ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ನೀಡ್ತಾ ಇರೋ ರಾಹುಲ್ ಸಹಜವಾಗೇ ವಿಶ್ವಕಪ್ ತಂಡದಲ್ಲಿರ್ತಾರೆ ಅನ್ನೋ ನಿರೀಕ್ಷೆಯಿತ್ತು. ಆದ್ರೆ, ರಾಹುಲ್ಗೆ ತಂಡದಿಂದ ಕೊಕ್ ಕೊಡಲಾಗಿದೆ.
ಶ್ರೇಯಸ್ ಅಯ್ಯರ್ಗೆ ಶಾಕ್ ಕೊಟ್ಟ ಸೆಲೆಕ್ಟರ್ಸ್.!
ಐಪಿಎಲ್ಗೂ ಮುನ್ನ ವಿವಾದಕ್ಕೆ ಗುರಿಯಾಗಿ ಸೆಂಟ್ರಲ್ ಕಾಂಟ್ರ್ಯಾಕ್ಟ್ ಲಿಸ್ಟ್ನಿಂದ ಗೇಟ್ಪಾಸ್ ಪಡೆದಿರೋ ಶ್ರೇಯಸ್ಗೆ ಬಿಸಿಸಿಐ ಮತ್ತೊಂದು ಶಾಕ್ ಕೊಟ್ಟಿದೆ. ಟಿ20 ವಿಶ್ವಕಪ್ ತಂಡದಿಂದ ಶ್ರೇಯಸ್ ಅಯ್ಯರ್ಗೆ ಗೇಟ್ಪಾಸ್ ನೀಡಲಾಗಿದೆ. ಐಪಿಎಲ್ನಲ್ಲಿ ಕೆಕೆಆರ್ ತಂಡದ ಕ್ಯಾಪ್ಟನ್ ಆಗಿರುವ ಶ್ರೇಯಸ್ ಅಯ್ಯರ್ ಡಿಸೆಂಟ್ ಪರ್ಫಾಮೆನ್ಸ್ ನೀಡ್ತಾ ಇದ್ರೂ, ಡ್ರಾಪ್ ಮಾಡಲಾಗಿದೆ.
ಕಿಶನ್ ಕನಸು ನುಚ್ಚು ನೂರು.!
ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಇಶನ್ ಕಿಶನ್ಗೂ ವಿಶ್ವಕಪ್ ತಂಡದಿಂದ ಗೇಟ್ಪಾಸ್ ಕೊಡಲಾಗಿದೆ. ಶ್ರೇಯಸ್ ಅಯ್ಯರ್ ಜೊತೆಗೆ ಇಶಾನ್ ಕಿಶನ್ ಕೂಡ ಕಾಂಟ್ರವರ್ಸಿಗೆ ಗುರಿಯಾಗಿದ್ರು. ಇದೇ ಕಾರಣದಿಂದ ಸೆಂಟ್ರಲ್ ಕಾಂಟ್ರಾಕ್ಟ್ ಲಿಸ್ಟ್ನಿಂದ ಕೈ ಬಿಡಲಾಗಿತ್ತು. ಇದೀಗ ವಿಶ್ವಕಪ್ ತಂಡದಿಂದಲೂ ಕೊಕ್ ಕೊಡಲಾಗಿದೆ. ಐಪಿಎಲ್ನಲ್ಲಿ ಅಬ್ಬರದ ಪರ್ಫಾಮೆನ್ಸ್ ನೀಡ್ತಾ ಇದ್ರೂ, ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಇದನ್ನೂ ಓದಿ: ಹಾಸನ ವಿಡಿಯೋ ಕೇಸ್ಗೆ ಹೊಸ ಟ್ವಿಸ್ಟ್.. ಅಪ್ರಾಪ್ತ ಹೆಣ್ಣು ಮಗಳನ್ನು ಬಳಸಿಕೊಂಡ ಬಗ್ಗೆ ಅನುಮಾನ
ರವಿ ಬಿಷ್ನೋಯ್ಗೆ ಶಾಕ್ ಕೊಟ್ಟ ಸೆಲೆಕ್ಟರ್ಸ್.!
ಕಳೆದ ಒಂದು ವರ್ಷದಿಂದ ಯುವ ಸ್ಪಿನ್ನರ್ ರವಿ ಬಿಷ್ನೋಯ್ ಟೀಮ್ ಇಂಡಿಯಾ ಟಿ20 ತಂಡದ ಭಾಗವಾಗಿದ್ರು. 2023ರ ಜನವರಿಯಿಂದ ಈವರೆಗೆ 14 ಪಂದ್ಯಗಳನ್ನಾಡಿ 20 ವಿಕೆಟ್ ಬೇಟೆಯಾಡಿದ್ರು. 7.80ರ ಉತ್ತಮ ಎಕಾನಮಿಯನ್ನ ಹೊಂದಿದ್ದ ರವಿ ಬಿಷ್ನೋಯ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ರು. ಆದ್ರೆ, ಕುಲ್ದೀಪ್- ಚಹಲ್ ಜೊತೆಗಿನ ಪೈಪೋಟಿಯಲ್ಲಿ ಹಿಂದೆ ಬಿದ್ದ ಬಿಷ್ನೋಯ್ ಸ್ಥಾನ ವಂಚಿತರಾಗಿದ್ದಾರೆ.
ಅನುಭವಿಗಳಾದ ಅಶ್ವಿನ್, ಕಾರ್ತಿಕ್ಗೂ ನಿರಾಸೆ.!
ಅನುಭವಿ ಆಫ್ ಸ್ಪಿನ್ನರ್ ಅಶ್ವಿನ್ ಹಾಗೂ ಐಪಿಎಲ್ನಲ್ಲಿ ಫಿನಿಷರ್ ಆಗಿ ಮಿಂಚ್ತಾ ಇರೋ ದಿನೇಶ್ ಕಾರ್ತಿಕ್ ಹೆಸರು ಕೂಡ ವಿಶ್ವಕಪ್ ಸೆಲೆಕ್ಷನ್ ರೇಸ್ನಲ್ಲಿತ್ತು. ಆದ್ರೆ, ಅಂತಿಮವಾಗಿ ತಂಡದಲ್ಲಿ ಎಂಟ್ರಿ ಕೊಡುವಲ್ಲಿ ಫೇಲ್ ಆಗಿದ್ದಾರೆ. ಇಬ್ಬರೂ ಸೀನಿಯರ್ಸ್ಗೆ ಸೆಲೆಕ್ಟರ್ಸ್ ಕೊಕ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ