ಕ್ರಿಕೆಟ್ನಿಂದ ದೂರ ಉಳಿಯಬೇಕೆಂದು ಸೂಚನೆ ನೀಡಿದ್ದು ಯಾರು?
ಪಂಜಾಬ್ ಕಿಂಗ್ಸ್ ವಿರುದ್ಧ 9ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದಿದ್ದ ಮಹಿ
ಈ ಸೀಸನ್ ಬಳಿಕ ಎಂ.ಎಸ್ ಧೋನಿ ಗುಡ್ಬಾಯ್ ಹೇಳುತ್ತಾರಾ.?
ಐಪಿಎಲ್ ಆರಂಭದಿಂದಲೂ ಮಹಿ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯುತ್ತಿಲ್ಲ. ಕೊನೆ 2 ಓವರ್ ಮಾತ್ರ ಕಾಣಿಸಿಕೊಳ್ಳುವ ಮಾಹಿಗೆ ಇದೇ ಕೊನೆ ಐಪಿಎಲ್ ಆಗುತ್ತಾ ಅನ್ನೋ ಪ್ರಶ್ನೆ ಫ್ಯಾನ್ಸ್ಗೆ ಕಾಡ್ತಿದೆ. ಆದ್ರೀಗ ಇದಕ್ಕೆ ಉತ್ತರ ಸಿಕ್ಕಿದೆ. ಈ ಉತ್ತರ ತಿಳಿದ್ರೆ, ಧೋನಿಗೆ ನೀವೊಂದು ಸೆಲ್ಯೂಟ್ ಹೊಡೆಯೋದು ಪಕ್ಕಾ.
ಎಮ್.ಎಸ್.ಧೋನಿ.. ಕ್ರೇಜ್ ಕಾ ಬಾಪ್.. ದಿ ಗ್ರೇಟ್ ಮ್ಯಾಚ್ ಫಿನಿಷರ್.. ಧೋನಿ ರೌದ್ರವತಾರದ ಬ್ಯಾಟಿಂಗ್ ನೋಡಬೇಕು ಅನ್ನೋದು ಬಹುತೇಕರ ಹೆಬ್ಬಯಕೆ. ಆದ್ರೆ, ಧೋನಿ, ಕೊನೆ 2 ಓವರ್ಗಳಲ್ಲೇ ಬ್ಯಾಟಿಂಗ್ ನಡೆಸ್ತಿರುವುದು ಹಲವರಿಗೆ ಭಾರೀ ನಿರಾಸೆ ಮೂಡಿಸಿದೆ. ಧೋನಿಯ ಈ ನಡೆ ಫ್ಯಾನ್ಸ್ಗೆ ನಿರಾಸೆ ಮೂಡಿಸಿದ್ರೆ, ಕ್ರಿಕೆಟ್ ಪಂಡಿತರ ಪಾಲಿಗೆ ಟೀಕಾಸ್ತ್ರವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಅಭಿಮನ್ಯು ಮಿಥುನ್ ಸ್ಥಾನ ಕಳೆದುಕೊಂಡಿದ್ದು ಯಾಕೆ..? Exclusive ಸಂದರ್ಶನ
ಕೊನೆ ಕ್ಷಣದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿರುವುದೇಕೆ?
ಧೋನಿ ಕಡೆಕ್ಷಣದಲ್ಲಿ ಬ್ಯಾಟಿಂಗ್ ಇಳಿಯುತ್ತಿರುವ ಬಗ್ಗೆ ನಾನಾ ಚರ್ಚೆಗಳು ನಡೀತಿವೆ. ಪರ ವಿರೋಧದ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ. ಆದ್ರೆ, ಮಿಸ್ಟರ್ ಕೂಲ್ ಮಾಹಿ, ಕೊನೆ ಕ್ಷಣದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿರುವ ಹಿಂದೆ ಮಹತ್ವದ ಕಾರಣ ಇದೆ. ಆ ರೀಸನ್ ಏನು ಅನ್ನೋದು ಈಗ ಹೊರಬಿದ್ದಿದೆ.
ಧೋನಿ ಕಡೆ ಕ್ಷಣದ ಬ್ಯಾಟಿಂಗ್ಗೆ ಕಾರಣವೇ ಇಂಜುರಿ..!
ಧೋನಿ, ಮತ್ತೆ ಲೋವರ್ ಆರ್ಡರ್ ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಧೋನಿ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಾಗುತ್ತಿಲ್ಲ. ರನ್ ಓಡಲಾಗುತ್ತಿಲ್ಲ. ನೆಟ್ಸ್ನಲ್ಲಿ ಅಭ್ಯಾಸದ ವೇಳೆ ಬಿಗ್ ಶಾಟ್ಸ್ ಫ್ರಾಕ್ಟೀಸ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ. 20 ಓವರ್ ಮೈದಾನದಲ್ಲಿ ನಿಂತು ಫೀಲ್ಡಿಂಗ್ ಮಾಡ್ತಿರುವ ಮಾಹಿ, ಚೆನ್ನೈ ತಂಡದ ಬ್ಯಾಟಿಂಗ್ ವೇಳೆ ವಿರಾಮ ಪಡೀತ್ತಿದ್ದಾರೆ.
ಡಾಕ್ಟರ್ ಮಾತನ್ನೇ ಲೆಕ್ಕಿಸದೆ ಕಣಕ್ಕಿಳಿಯುತ್ತಿದ್ದಾರೆ ಮಾಹಿ..!
ಗಂಭೀರ ಇಂಜುರಿಯಿಂದ ಬಳಲುತ್ತಿರುವ ಮಾಹಿ ಕ್ರಿಕೆಟ್ ಆಡುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಕ್ರಿಕೆಟ್ನಿಂದ ದೂರ ಉಳಿಯಲು ಡಾಕ್ಟರ್ ಸೂಚನೆ ನೀಡಿದ್ದಾರೆ. ಆದ್ರೆ, ಡಾಕ್ಟರ್ ಮಾತನ್ನೇ ಲೆಕ್ಕಿಸದ ಮಾಹಿ, ಕಣಕ್ಕಿಳಿಯುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಔಷದಿ ಪಡೆಯುತ್ತಿರುವ ಮಾಹಿ, ನೋವಿನ ನಡುವೆಯೇ 20 ಓವರ್ ಫೀಲ್ಡಿಂಗ್ ನಡೆಸ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಟೀಮ್ ಹಾಗೂ ಫ್ಯಾನ್ಸ್.
ಇದನ್ನೂ ಓದಿ: ನೇಮೋತ್ಸವ ಹರಿಕೆ ತೀರಿಸಿದ ಕೆಜಿಎಫ್ ಖ್ಯಾತಿಯ ಬ್ಯೂಟಿ ಶ್ರೀನಿಧಿ ಶೆಟ್ಟಿ.. ಎಲ್ಲಿ?
ಧೋನಿ ಅಂಗಳಕ್ಕಿಳಿಯುತ್ತಿರುವುದು ತಂಡಕ್ಕಾಗಿಯೇ ಆಗಿದೆ. ಯಾಕಂದ್ರೆ, ಇಂಜುರಿಯಿಂದ ವಿಕೆಟ್ ಕೀಪರ್ ಡಿವೋನ್ ಕಾನ್ವೆ ಅಲಭ್ಯರಾಗಿದ್ದಾರೆ. ಯುವ ಆಟಗಾರ ಸಮೀರ್ ರಿಜ್ವಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆಲ್ಲ ಮಿಗಿಲಾಗಿ ಧೋನಿ ಅಲಭ್ಯತೆ ಆಟಗಾರರ ಆತ್ಮವಿಶ್ವಾಸ ಕುಗ್ಗಿಸುತ್ತೆ. ಇವೆಲ್ಲವನ್ನ ಮನಗಂಡೇ ಮಾಹಿ ಅಂಗಳಕ್ಕಿಳಿಯುತ್ತಿದ್ದಾರೆ..
9 ಕ್ರಮಾಂಕದಲ್ಲಿ ಬ್ಯಾಟಿಂಗ್.. ರನ್ ಓಡಲು ಹಿಂದೇಟು..!
ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. 12.5 ಓವರ್ಗಳಲ್ಲೇ 101 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಮಾಹಿ ಬ್ಯಾಟಿಂಗ್ಗೆ ಬರ್ತಾರೆ ಅಂತಾನೇ ಊಹಿಸಲಾಗಿತ್ತು. ಆದ್ರೆ, ಬದಲಾಗಿ ಸ್ಯಾಟ್ನರ್, ಶಾರ್ದೂಲ್ ಕಣಕ್ಕಿಳಿದರು. 9ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಮಾಹಿ ಅಚ್ಚರಿ ಮೂಡಿಸಿದ್ರು.
ಇದಿಷ್ಟೇ ಅಲ್ಲ, ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಕೊನೆ ಓವರ್ನಲ್ಲಿ ರನ್ ಕದಿಯಲಿ ಧೋನಿ ನಿರಾಕರಿಸಿದ್ದರು. ಹೀಗಾಗಿ ಡ್ಯಾರಿಲ್ ಮಿಚೆಲ್, ಸ್ಟ್ರೈಕರ್ ತುದಿಯಿಂದ ಮತ್ತೆ ನಾನ್ ಸ್ಟ್ರೈಕರ್ ತುದಿಗೆ ವಾಪಸ್ ಬರಬೇಕಾಯ್ತು. ಇದು ಕೂಡ ಪರ, ವಿರೋಧ ಚರ್ಚೆಗೂ ಕಾರಣವಾಯ್ತು.
ಇದನ್ನೂ ಓದಿ: ರಾತ್ರಿ ಸುರಿದ ಭಾರೀ ಮಳೆಗೆ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ.. ಓರ್ವ ಸಾವು, ಮತ್ತೊಬ್ಬ ಗಂಭೀರ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಕಾಲಿಗೆ ಐಸ್ಪ್ಯಾಕ್ ಕಟ್ಟಿಯೇ ಬ್ಯಾಟಿಂಗ್ ನಡೆಸಿದ್ದ ಮಾಹಿ, ಕುಂಟುತ್ತಲೇ ಆಟಗಾರರೊಂದಿಗೆ ಮಾತುಕತೆ ನಡೆಸಿದ್ರು. ಈ ವೇಳೆಯೇ ಧೋನಿಗೆ ಇಂಜುರಿ ನೋವು ಕಾಡ್ತಿದೆ ಅನ್ನೋ ಸುಳಿವು ಸಿಕ್ಕಿತ್ತು. ಆದ್ರೆ, ಆ ಅಸಲಿ ಸತ್ಯ ಈಗ ಹೊರಬಿದ್ದಿದೆ.
ಲೆಜೆಂಡ್ ಧೋನಿ ಪಾಲಿಗೆ ಇದೇ ಕೊನೇ ಐಪಿಎಲ್ ಆಗುತ್ತಾ..?
2023ರ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದ ಮಹಿ, ಆ ನೋವಿನಲ್ಲೂ ಆಡಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಟ್ರೋಫಿ ಗೆದ್ದ ಬಳಿಕವೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಅನ್ನೋದು ಮರೆಯುವಂತಿಲ್ಲ. ಆದ್ರೀಗ ಮತ್ತೆ ಗಂಭೀರ ಇಂಜುರಿ ನೋವಿನಿಂದ ಬಳಲುತ್ತಿರುವ ಧೋನಿ, ಕೊನೆ ಬಾರಿ ತವರಿನ ಫ್ಯಾನ್ಸ್ಗೆ ಟ್ರೋಫಿ ಗೆಲ್ಲಿಸಿಕೊಡುವ ಮಹಾದಾಸೆ ಹೊಂದಿದ್ದಾರೆ. ಹೀಗಾಗಿ ಈ ಸೀಸನ್ ಅಂತ್ಯದ ಬಳಿಕ ಮಾಹಿ ಗುಡ್ಬಾಯ್ ಹೇಳಿದ್ರು ಅಚ್ಚರಿ ಪಡಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
newsfirstkannada, newsfirstlive, news1stkannada, news1stlive, news1st, newsfirst,
ಕ್ರಿಕೆಟ್ನಿಂದ ದೂರ ಉಳಿಯಬೇಕೆಂದು ಸೂಚನೆ ನೀಡಿದ್ದು ಯಾರು?
ಪಂಜಾಬ್ ಕಿಂಗ್ಸ್ ವಿರುದ್ಧ 9ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದಿದ್ದ ಮಹಿ
ಈ ಸೀಸನ್ ಬಳಿಕ ಎಂ.ಎಸ್ ಧೋನಿ ಗುಡ್ಬಾಯ್ ಹೇಳುತ್ತಾರಾ.?
ಐಪಿಎಲ್ ಆರಂಭದಿಂದಲೂ ಮಹಿ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯುತ್ತಿಲ್ಲ. ಕೊನೆ 2 ಓವರ್ ಮಾತ್ರ ಕಾಣಿಸಿಕೊಳ್ಳುವ ಮಾಹಿಗೆ ಇದೇ ಕೊನೆ ಐಪಿಎಲ್ ಆಗುತ್ತಾ ಅನ್ನೋ ಪ್ರಶ್ನೆ ಫ್ಯಾನ್ಸ್ಗೆ ಕಾಡ್ತಿದೆ. ಆದ್ರೀಗ ಇದಕ್ಕೆ ಉತ್ತರ ಸಿಕ್ಕಿದೆ. ಈ ಉತ್ತರ ತಿಳಿದ್ರೆ, ಧೋನಿಗೆ ನೀವೊಂದು ಸೆಲ್ಯೂಟ್ ಹೊಡೆಯೋದು ಪಕ್ಕಾ.
ಎಮ್.ಎಸ್.ಧೋನಿ.. ಕ್ರೇಜ್ ಕಾ ಬಾಪ್.. ದಿ ಗ್ರೇಟ್ ಮ್ಯಾಚ್ ಫಿನಿಷರ್.. ಧೋನಿ ರೌದ್ರವತಾರದ ಬ್ಯಾಟಿಂಗ್ ನೋಡಬೇಕು ಅನ್ನೋದು ಬಹುತೇಕರ ಹೆಬ್ಬಯಕೆ. ಆದ್ರೆ, ಧೋನಿ, ಕೊನೆ 2 ಓವರ್ಗಳಲ್ಲೇ ಬ್ಯಾಟಿಂಗ್ ನಡೆಸ್ತಿರುವುದು ಹಲವರಿಗೆ ಭಾರೀ ನಿರಾಸೆ ಮೂಡಿಸಿದೆ. ಧೋನಿಯ ಈ ನಡೆ ಫ್ಯಾನ್ಸ್ಗೆ ನಿರಾಸೆ ಮೂಡಿಸಿದ್ರೆ, ಕ್ರಿಕೆಟ್ ಪಂಡಿತರ ಪಾಲಿಗೆ ಟೀಕಾಸ್ತ್ರವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಅಭಿಮನ್ಯು ಮಿಥುನ್ ಸ್ಥಾನ ಕಳೆದುಕೊಂಡಿದ್ದು ಯಾಕೆ..? Exclusive ಸಂದರ್ಶನ
ಕೊನೆ ಕ್ಷಣದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿರುವುದೇಕೆ?
ಧೋನಿ ಕಡೆಕ್ಷಣದಲ್ಲಿ ಬ್ಯಾಟಿಂಗ್ ಇಳಿಯುತ್ತಿರುವ ಬಗ್ಗೆ ನಾನಾ ಚರ್ಚೆಗಳು ನಡೀತಿವೆ. ಪರ ವಿರೋಧದ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ. ಆದ್ರೆ, ಮಿಸ್ಟರ್ ಕೂಲ್ ಮಾಹಿ, ಕೊನೆ ಕ್ಷಣದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿರುವ ಹಿಂದೆ ಮಹತ್ವದ ಕಾರಣ ಇದೆ. ಆ ರೀಸನ್ ಏನು ಅನ್ನೋದು ಈಗ ಹೊರಬಿದ್ದಿದೆ.
ಧೋನಿ ಕಡೆ ಕ್ಷಣದ ಬ್ಯಾಟಿಂಗ್ಗೆ ಕಾರಣವೇ ಇಂಜುರಿ..!
ಧೋನಿ, ಮತ್ತೆ ಲೋವರ್ ಆರ್ಡರ್ ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಧೋನಿ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಾಗುತ್ತಿಲ್ಲ. ರನ್ ಓಡಲಾಗುತ್ತಿಲ್ಲ. ನೆಟ್ಸ್ನಲ್ಲಿ ಅಭ್ಯಾಸದ ವೇಳೆ ಬಿಗ್ ಶಾಟ್ಸ್ ಫ್ರಾಕ್ಟೀಸ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ. 20 ಓವರ್ ಮೈದಾನದಲ್ಲಿ ನಿಂತು ಫೀಲ್ಡಿಂಗ್ ಮಾಡ್ತಿರುವ ಮಾಹಿ, ಚೆನ್ನೈ ತಂಡದ ಬ್ಯಾಟಿಂಗ್ ವೇಳೆ ವಿರಾಮ ಪಡೀತ್ತಿದ್ದಾರೆ.
ಡಾಕ್ಟರ್ ಮಾತನ್ನೇ ಲೆಕ್ಕಿಸದೆ ಕಣಕ್ಕಿಳಿಯುತ್ತಿದ್ದಾರೆ ಮಾಹಿ..!
ಗಂಭೀರ ಇಂಜುರಿಯಿಂದ ಬಳಲುತ್ತಿರುವ ಮಾಹಿ ಕ್ರಿಕೆಟ್ ಆಡುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಕ್ರಿಕೆಟ್ನಿಂದ ದೂರ ಉಳಿಯಲು ಡಾಕ್ಟರ್ ಸೂಚನೆ ನೀಡಿದ್ದಾರೆ. ಆದ್ರೆ, ಡಾಕ್ಟರ್ ಮಾತನ್ನೇ ಲೆಕ್ಕಿಸದ ಮಾಹಿ, ಕಣಕ್ಕಿಳಿಯುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಔಷದಿ ಪಡೆಯುತ್ತಿರುವ ಮಾಹಿ, ನೋವಿನ ನಡುವೆಯೇ 20 ಓವರ್ ಫೀಲ್ಡಿಂಗ್ ನಡೆಸ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಟೀಮ್ ಹಾಗೂ ಫ್ಯಾನ್ಸ್.
ಇದನ್ನೂ ಓದಿ: ನೇಮೋತ್ಸವ ಹರಿಕೆ ತೀರಿಸಿದ ಕೆಜಿಎಫ್ ಖ್ಯಾತಿಯ ಬ್ಯೂಟಿ ಶ್ರೀನಿಧಿ ಶೆಟ್ಟಿ.. ಎಲ್ಲಿ?
ಧೋನಿ ಅಂಗಳಕ್ಕಿಳಿಯುತ್ತಿರುವುದು ತಂಡಕ್ಕಾಗಿಯೇ ಆಗಿದೆ. ಯಾಕಂದ್ರೆ, ಇಂಜುರಿಯಿಂದ ವಿಕೆಟ್ ಕೀಪರ್ ಡಿವೋನ್ ಕಾನ್ವೆ ಅಲಭ್ಯರಾಗಿದ್ದಾರೆ. ಯುವ ಆಟಗಾರ ಸಮೀರ್ ರಿಜ್ವಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆಲ್ಲ ಮಿಗಿಲಾಗಿ ಧೋನಿ ಅಲಭ್ಯತೆ ಆಟಗಾರರ ಆತ್ಮವಿಶ್ವಾಸ ಕುಗ್ಗಿಸುತ್ತೆ. ಇವೆಲ್ಲವನ್ನ ಮನಗಂಡೇ ಮಾಹಿ ಅಂಗಳಕ್ಕಿಳಿಯುತ್ತಿದ್ದಾರೆ..
9 ಕ್ರಮಾಂಕದಲ್ಲಿ ಬ್ಯಾಟಿಂಗ್.. ರನ್ ಓಡಲು ಹಿಂದೇಟು..!
ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. 12.5 ಓವರ್ಗಳಲ್ಲೇ 101 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಮಾಹಿ ಬ್ಯಾಟಿಂಗ್ಗೆ ಬರ್ತಾರೆ ಅಂತಾನೇ ಊಹಿಸಲಾಗಿತ್ತು. ಆದ್ರೆ, ಬದಲಾಗಿ ಸ್ಯಾಟ್ನರ್, ಶಾರ್ದೂಲ್ ಕಣಕ್ಕಿಳಿದರು. 9ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಮಾಹಿ ಅಚ್ಚರಿ ಮೂಡಿಸಿದ್ರು.
ಇದಿಷ್ಟೇ ಅಲ್ಲ, ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಕೊನೆ ಓವರ್ನಲ್ಲಿ ರನ್ ಕದಿಯಲಿ ಧೋನಿ ನಿರಾಕರಿಸಿದ್ದರು. ಹೀಗಾಗಿ ಡ್ಯಾರಿಲ್ ಮಿಚೆಲ್, ಸ್ಟ್ರೈಕರ್ ತುದಿಯಿಂದ ಮತ್ತೆ ನಾನ್ ಸ್ಟ್ರೈಕರ್ ತುದಿಗೆ ವಾಪಸ್ ಬರಬೇಕಾಯ್ತು. ಇದು ಕೂಡ ಪರ, ವಿರೋಧ ಚರ್ಚೆಗೂ ಕಾರಣವಾಯ್ತು.
ಇದನ್ನೂ ಓದಿ: ರಾತ್ರಿ ಸುರಿದ ಭಾರೀ ಮಳೆಗೆ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ.. ಓರ್ವ ಸಾವು, ಮತ್ತೊಬ್ಬ ಗಂಭೀರ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಕಾಲಿಗೆ ಐಸ್ಪ್ಯಾಕ್ ಕಟ್ಟಿಯೇ ಬ್ಯಾಟಿಂಗ್ ನಡೆಸಿದ್ದ ಮಾಹಿ, ಕುಂಟುತ್ತಲೇ ಆಟಗಾರರೊಂದಿಗೆ ಮಾತುಕತೆ ನಡೆಸಿದ್ರು. ಈ ವೇಳೆಯೇ ಧೋನಿಗೆ ಇಂಜುರಿ ನೋವು ಕಾಡ್ತಿದೆ ಅನ್ನೋ ಸುಳಿವು ಸಿಕ್ಕಿತ್ತು. ಆದ್ರೆ, ಆ ಅಸಲಿ ಸತ್ಯ ಈಗ ಹೊರಬಿದ್ದಿದೆ.
ಲೆಜೆಂಡ್ ಧೋನಿ ಪಾಲಿಗೆ ಇದೇ ಕೊನೇ ಐಪಿಎಲ್ ಆಗುತ್ತಾ..?
2023ರ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದ ಮಹಿ, ಆ ನೋವಿನಲ್ಲೂ ಆಡಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಟ್ರೋಫಿ ಗೆದ್ದ ಬಳಿಕವೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಅನ್ನೋದು ಮರೆಯುವಂತಿಲ್ಲ. ಆದ್ರೀಗ ಮತ್ತೆ ಗಂಭೀರ ಇಂಜುರಿ ನೋವಿನಿಂದ ಬಳಲುತ್ತಿರುವ ಧೋನಿ, ಕೊನೆ ಬಾರಿ ತವರಿನ ಫ್ಯಾನ್ಸ್ಗೆ ಟ್ರೋಫಿ ಗೆಲ್ಲಿಸಿಕೊಡುವ ಮಹಾದಾಸೆ ಹೊಂದಿದ್ದಾರೆ. ಹೀಗಾಗಿ ಈ ಸೀಸನ್ ಅಂತ್ಯದ ಬಳಿಕ ಮಾಹಿ ಗುಡ್ಬಾಯ್ ಹೇಳಿದ್ರು ಅಚ್ಚರಿ ಪಡಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
newsfirstkannada, newsfirstlive, news1stkannada, news1stlive, news1st, newsfirst,