ಆರ್ಸಿಬಿ ಈ ವೈಫಲ್ಯಕ್ಕೆ ಟೀಮ್ ಮ್ಯಾನೇಜ್ಮೆಂಟ್ ನೇರ ಹೊಣೆ
ಟಿ20 ಕ್ರಿಕೆಟ್ನಲ್ಲಿ ರನ್ಗಳಿಗೆ ಕಡಿವಾಣ ಹಾಕುವುದೇ ತುಂಬಾ ಮುಖ್ಯ
ನ್ಯೂ ಬೌಲರ್ ಯಶ್ ದಯಾಳ್, ಅಲ್ಜರಿ ಜೋಸೆಫ್ ಅಸ್ಥಿರ ಪ್ರದರ್ಶನ
ವರ್ಷಗಳು ಉರುಳುತ್ತಿವೆ. ಆದರೆ ಆರ್ಸಿಬಿ ಹಣೆಬರಹ ಬದಲಾಗುವ ಹಾಗೇ ಕಾಣ್ತಿಲ್ಲ. ರೆಡ್ ಆರ್ಮಿ ಆನ್ಫೀಲ್ಡ್ನಲ್ಲಿ ಹಳೇ ಚಾಳಿ ಮುಂದುವರಿಸಿದೆ. ಚೊಚ್ಚಲ ಟ್ರೋಫಿ ಗೆಲ್ಲುವ ಬಿಗ್ ಡ್ರೀಮ್ ಈ ಸಲವೂ ನುಚ್ಚುನೂರಾಗುವ ಲಕ್ಷಣ ಗೋಚರಿಸಿದೆ. ಅಭಿಮಾನಿ ದೇವರುಗಳು ಕಪ್ ಆಸೆ ಕೈಬಿಡೋದೆ ಉತ್ತಮ. ಯಾಕೆ ಅಂತೀರಾ?.
16 ವರ್ಷಗಳ ಕಪ್ ವನವಾಸ ಮುಂದುವರೆಯುತ್ತಾ..?
ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಇಲ್ಲಿತನಕ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಈ ಸಲವು ಯಾವ ಲಕ್ಷಣವೂ ಗೋಚರಿಸ್ತಿಲ್ಲ. ಯಾಕಂದ್ರೆ ಬೌಲಿಂಗ್ ತುಂಬಾ ವೀಕ್ ಇದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಸಿಎಸ್ಕೆ ಹಾಗೂ ಕೆಕೆಆರ್ ಎದುರಿನ ಸೋಲು. ಎರಡೂ ಪಂದ್ಯಗಳಲ್ಲಿ ಆರ್ಸಿಬಿ ಬೌಲಿಂಗ್ ದೌರ್ಬಲ್ಯ ಬಟಾಬಯಲಾಗಿದೆ.
ಫ್ಯಾನ್ಸ್ ಏನೋ 16 ವರ್ಷದಿಂದ ಆರ್ಸಿಬಿ ಈ ವರ್ಷ ಕಪ್ ಗೆಲ್ಲುತ್ತೆ, ಮುಂದಿನ ವರ್ಷ ಕಪ್ ಗೆಲ್ಲುತ್ತೆ ಅಂತ ಕನಸು ಕಾಣ್ತಿದ್ದಾರೆ. ಆ ಬಿಗ್ ಡ್ರೀಮ್ ಬರೀ ಕನಸಾಗಿ ಉಳಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸಾಲು ಸಾಲು ಬೌಲಿಂಗ್ ಎಡವಟ್ಟು, ಅಂತಹದೊಂದು ಪ್ರಶ್ನೆಯನ್ನ ಹುಟ್ಟುಹಾಕಿದೆ. ಇದನ್ನ ನಾವು ಮಾತ್ರ ಹೇಳ್ತಿಲ್ಲ. ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಮೈಕಲ್ ವಾನ್ ಕೂಡ ಆರ್ಸಿಬಿ ಬೌಲಿಂಗ್ ಅನ್ನ ಟೀಕಿಸಿದ್ದಾರೆ. ಬರೀ ಮೈಕಲ್ ವಾನ್ ಅಷ್ಟೆ ಅಲ್ಲ, ಸನ್ರೈಸರ್ಸ್ ಹೈದ್ರಾಬಾದ್ ತಂಡದ ಮಾಜಿ ಹೆಡ್ಕೋಚ್ ಟಾಮ್ ಮೋಡಿ ಕೂಡ ಆರ್ಸಿಬಿ ಕಳಪೆ ಬೌಲಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ
ಆರ್ಸಿಬಿ ತಂಡ ಇಂತಹ ಬೌಲಿಂಗ್ ಅಟ್ಯಾಕ್ ಹೊಂದಿ ಐಪಿಎಲ್ ಟ್ರೋಫಿ ಗೆಲ್ಲುವುದು ಅಸಾಧ್ಯ.
ಮೈಕಲ್ ವಾನ್, ಮಾಜಿ ಕ್ರಿಕೆಟಿಗ
ಇಬ್ಬರು ವಿದೇಶಿ ಬೌಲರ್ಸ್ ಆಡಿಸಬೇಕು
ಆರ್ಸಿಬಿಗೆ ಬೇರೆ ಆಯ್ಕೆಗಳಿಲ್ಲ. ಇಬ್ಬರು ವಿದೇಶಿ ಪರಿಣತ ವೇಗಿಗಳನ್ನ ಆಡಿಸಬೇಕು. ಲೂಕಿ ಫರ್ಗೂಸನ್ ಹಾಗೂ ಟಾಪ್ಲೆ ಆಡಿದರೆ ಉತ್ತಮ.
ಟಾಮ್ ಮೂಡಿ, ಮಾಜಿ ಕ್ರಿಕೆಟಿಗ
ದುಬಾರಿ ಬೌಲಿಂಗ್ ಎಕಾನಮಿ.. ಸುಧಾರಿಸೋದ್ಯಾವಾಗ..?
ಮಾಜಿ ಕ್ರಿಕೆಟರ್ಸ್ ಆರ್ಸಿಬಿ ಬೌಲರ್ಗಳನ್ನ ಟೀಕಿಸೋದ್ರಲ್ಲಿ ತಪ್ಪಿಲ್ಲ ಬಿಡಿ. ಯಾಕಂದ್ರೆ ರೆಡ್ ಆರ್ಮಿ ಬೌಲಿಂಗ್ ವಿಭಾಗವೇ ಲಯ ತಪ್ಪಿದೆ. ಫಾಸ್ಟ್ ಹಾಗೂ ಸ್ಪಿನ್ನ್ ಬೌಲರ್ಗಳು ಎಕಾನಮಿ ಕಾಯ್ದುಕೊಳ್ಳುವಲ್ಲಿ ಕಂಪ್ಲೀಟ್ ಎಡವಿದ್ದಾರೆ.
ಆರ್ಸಿಬಿ ಬೌಲರ್ಸ್ ಎಕಾನಮಿ
ಲೆಗ್ ಬ್ರೇಕರ್ ಕರನ್ ಶರ್ಮಾ ಪ್ರಸಕ್ತ ಐಪಿಎಲ್ನಲ್ಲಿ 12ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ವೇಗಿ ಅಲ್ಜರಿ ಜೋಸೆಫ್ 11.89 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ರೆ, ಮೊಹಮ್ಮದ್ ಸಿರಾಜ್ 10 ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ 9 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
ಹರಾಜಿನಲ್ಲಿ ಎಡವಟ್ಟು..ಬೌಲಿಂಗ್ ಚಿಂತೆ ದುಪ್ಪಟ್ಟು..!
ಆರ್ಸಿಬಿ ಈ ವೈಫಲ್ಯಕ್ಕೆ ಟೀಮ್ ಮ್ಯಾನೇಜಜ್ಮೆಂಟ್ ನೇರ ಹೊಣೆ. ಯಾಕಂದ್ರೆ ಟಿ20 ಕ್ರಿಕೆಟ್ನಲ್ಲಿ ರನ್ಗೆ ಕಡಿವಾಣ ಹಾಕೋದು ತುಂಬಾ ಮುಖ್ಯ. ಇದು ಫ್ರಾಂಚೈಸಿಗೆ ಅರ್ಥವಾಗ್ಲಿಲ್ಲ. ಮ್ಯಾಚ್ ವಿನ್ನಿಂಗ್ ಬೌಲರ್ಗಳಾದ ಜೋಶ್ ಹೇಜಲ್ವುಡ್, ಹರ್ಷಲ್ ಪಟೇಲ್ ಹಾಗೂ ವಾನಿಂದು ಹಸರಂಗರನ್ನ ತಂಡದ ರಿಲೀಸ್ ಮಾಡ್ತು. ಹರಾಜಿನಲ್ಲಿ ಉತ್ತಮ ಬೌಲರ್ಗಳನ್ನ ಪಿಕ್ ಮಾಡಲಿಲ್ಲ. ಇದರಿಂದ ತಂಡಕ್ಕೆ ಹಿನ್ನಡೆಯಾಗಿದೆ.
ಇದನ್ನೂ ಓದಿ: ₹46 ಕೋಟಿ ವ್ಯವಹಾರ ಮಾಡಿದ ಅಂತ ಕಾಲೇಜು ವಿದ್ಯಾರ್ಥಿಗೆ IT ನೋಟಿಸ್.. ಫೊಲೀಸರು ಏನು ಅಂತಾರೆ?
ಈಗಿನ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್ಗಳಿಲ್ಲ. ಡೆತ್ ಓವರ್ಗಳಲ್ಲಿ ರನ್ ಕಂಟ್ರೋಲ್ ಮಾಡುವ ವೇಗಿಗಳಿಲ್ಲ. ಸಿರಾಜ್ ಒಬ್ಬರೇ ತಂಡದ ನಂಬಿಗಸ್ಥ ಬೌಲರ್. ನ್ಯೂ ಬೌಲರ್ ಯಶ್ ದಯಾಳ್ ಹಾಗೂ ಅಲ್ಜರಿ ಜೋಸೆಫ್ ಅಸ್ಥಿರ ಪ್ರದರ್ಶನ ನೀಡ್ತಿದ್ದಾರೆ. ಚಿನ್ನಸ್ವಾಮಿಯಂತ ಚಿಕ್ಕ ಗ್ರೌಂಡ್ನಲ್ಲಿ ಬೌಲರ್ಸ್ ಸರಾಗವಾಗಿ ರನ್ ಬಿಟ್ಟು ಕೊಡ್ತಿದ್ದಾರೆ. ಇಂತಹ ವೀಕ್ ಬೌಲಿಂಗ್ ಅಟ್ಯಾಕ್ ಇಟ್ಟುಕೊಂಡು ಕಪ್ ಗೆಲ್ಲೋದು ನಿಜಕ್ಕೂ ಕಷ್ಟ. ಮುಂದಿನ ಪಂದ್ಯಗಳಲ್ಲಾದ್ರು ಮಿಸ್ಟೇಕ್ಸ್ ತಿದ್ದಿಕೊಂಡು ಮುನ್ನಡೆದರಷ್ಟೇ ಹೊಸ ಚರಿತ್ರೆ ಸೃಷ್ಟಿಯಾದೀತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಆರ್ಸಿಬಿ ಈ ವೈಫಲ್ಯಕ್ಕೆ ಟೀಮ್ ಮ್ಯಾನೇಜ್ಮೆಂಟ್ ನೇರ ಹೊಣೆ
ಟಿ20 ಕ್ರಿಕೆಟ್ನಲ್ಲಿ ರನ್ಗಳಿಗೆ ಕಡಿವಾಣ ಹಾಕುವುದೇ ತುಂಬಾ ಮುಖ್ಯ
ನ್ಯೂ ಬೌಲರ್ ಯಶ್ ದಯಾಳ್, ಅಲ್ಜರಿ ಜೋಸೆಫ್ ಅಸ್ಥಿರ ಪ್ರದರ್ಶನ
ವರ್ಷಗಳು ಉರುಳುತ್ತಿವೆ. ಆದರೆ ಆರ್ಸಿಬಿ ಹಣೆಬರಹ ಬದಲಾಗುವ ಹಾಗೇ ಕಾಣ್ತಿಲ್ಲ. ರೆಡ್ ಆರ್ಮಿ ಆನ್ಫೀಲ್ಡ್ನಲ್ಲಿ ಹಳೇ ಚಾಳಿ ಮುಂದುವರಿಸಿದೆ. ಚೊಚ್ಚಲ ಟ್ರೋಫಿ ಗೆಲ್ಲುವ ಬಿಗ್ ಡ್ರೀಮ್ ಈ ಸಲವೂ ನುಚ್ಚುನೂರಾಗುವ ಲಕ್ಷಣ ಗೋಚರಿಸಿದೆ. ಅಭಿಮಾನಿ ದೇವರುಗಳು ಕಪ್ ಆಸೆ ಕೈಬಿಡೋದೆ ಉತ್ತಮ. ಯಾಕೆ ಅಂತೀರಾ?.
16 ವರ್ಷಗಳ ಕಪ್ ವನವಾಸ ಮುಂದುವರೆಯುತ್ತಾ..?
ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಇಲ್ಲಿತನಕ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಈ ಸಲವು ಯಾವ ಲಕ್ಷಣವೂ ಗೋಚರಿಸ್ತಿಲ್ಲ. ಯಾಕಂದ್ರೆ ಬೌಲಿಂಗ್ ತುಂಬಾ ವೀಕ್ ಇದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಸಿಎಸ್ಕೆ ಹಾಗೂ ಕೆಕೆಆರ್ ಎದುರಿನ ಸೋಲು. ಎರಡೂ ಪಂದ್ಯಗಳಲ್ಲಿ ಆರ್ಸಿಬಿ ಬೌಲಿಂಗ್ ದೌರ್ಬಲ್ಯ ಬಟಾಬಯಲಾಗಿದೆ.
ಫ್ಯಾನ್ಸ್ ಏನೋ 16 ವರ್ಷದಿಂದ ಆರ್ಸಿಬಿ ಈ ವರ್ಷ ಕಪ್ ಗೆಲ್ಲುತ್ತೆ, ಮುಂದಿನ ವರ್ಷ ಕಪ್ ಗೆಲ್ಲುತ್ತೆ ಅಂತ ಕನಸು ಕಾಣ್ತಿದ್ದಾರೆ. ಆ ಬಿಗ್ ಡ್ರೀಮ್ ಬರೀ ಕನಸಾಗಿ ಉಳಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸಾಲು ಸಾಲು ಬೌಲಿಂಗ್ ಎಡವಟ್ಟು, ಅಂತಹದೊಂದು ಪ್ರಶ್ನೆಯನ್ನ ಹುಟ್ಟುಹಾಕಿದೆ. ಇದನ್ನ ನಾವು ಮಾತ್ರ ಹೇಳ್ತಿಲ್ಲ. ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಮೈಕಲ್ ವಾನ್ ಕೂಡ ಆರ್ಸಿಬಿ ಬೌಲಿಂಗ್ ಅನ್ನ ಟೀಕಿಸಿದ್ದಾರೆ. ಬರೀ ಮೈಕಲ್ ವಾನ್ ಅಷ್ಟೆ ಅಲ್ಲ, ಸನ್ರೈಸರ್ಸ್ ಹೈದ್ರಾಬಾದ್ ತಂಡದ ಮಾಜಿ ಹೆಡ್ಕೋಚ್ ಟಾಮ್ ಮೋಡಿ ಕೂಡ ಆರ್ಸಿಬಿ ಕಳಪೆ ಬೌಲಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ
ಆರ್ಸಿಬಿ ತಂಡ ಇಂತಹ ಬೌಲಿಂಗ್ ಅಟ್ಯಾಕ್ ಹೊಂದಿ ಐಪಿಎಲ್ ಟ್ರೋಫಿ ಗೆಲ್ಲುವುದು ಅಸಾಧ್ಯ.
ಮೈಕಲ್ ವಾನ್, ಮಾಜಿ ಕ್ರಿಕೆಟಿಗ
ಇಬ್ಬರು ವಿದೇಶಿ ಬೌಲರ್ಸ್ ಆಡಿಸಬೇಕು
ಆರ್ಸಿಬಿಗೆ ಬೇರೆ ಆಯ್ಕೆಗಳಿಲ್ಲ. ಇಬ್ಬರು ವಿದೇಶಿ ಪರಿಣತ ವೇಗಿಗಳನ್ನ ಆಡಿಸಬೇಕು. ಲೂಕಿ ಫರ್ಗೂಸನ್ ಹಾಗೂ ಟಾಪ್ಲೆ ಆಡಿದರೆ ಉತ್ತಮ.
ಟಾಮ್ ಮೂಡಿ, ಮಾಜಿ ಕ್ರಿಕೆಟಿಗ
ದುಬಾರಿ ಬೌಲಿಂಗ್ ಎಕಾನಮಿ.. ಸುಧಾರಿಸೋದ್ಯಾವಾಗ..?
ಮಾಜಿ ಕ್ರಿಕೆಟರ್ಸ್ ಆರ್ಸಿಬಿ ಬೌಲರ್ಗಳನ್ನ ಟೀಕಿಸೋದ್ರಲ್ಲಿ ತಪ್ಪಿಲ್ಲ ಬಿಡಿ. ಯಾಕಂದ್ರೆ ರೆಡ್ ಆರ್ಮಿ ಬೌಲಿಂಗ್ ವಿಭಾಗವೇ ಲಯ ತಪ್ಪಿದೆ. ಫಾಸ್ಟ್ ಹಾಗೂ ಸ್ಪಿನ್ನ್ ಬೌಲರ್ಗಳು ಎಕಾನಮಿ ಕಾಯ್ದುಕೊಳ್ಳುವಲ್ಲಿ ಕಂಪ್ಲೀಟ್ ಎಡವಿದ್ದಾರೆ.
ಆರ್ಸಿಬಿ ಬೌಲರ್ಸ್ ಎಕಾನಮಿ
ಲೆಗ್ ಬ್ರೇಕರ್ ಕರನ್ ಶರ್ಮಾ ಪ್ರಸಕ್ತ ಐಪಿಎಲ್ನಲ್ಲಿ 12ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ವೇಗಿ ಅಲ್ಜರಿ ಜೋಸೆಫ್ 11.89 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ರೆ, ಮೊಹಮ್ಮದ್ ಸಿರಾಜ್ 10 ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ 9 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
ಹರಾಜಿನಲ್ಲಿ ಎಡವಟ್ಟು..ಬೌಲಿಂಗ್ ಚಿಂತೆ ದುಪ್ಪಟ್ಟು..!
ಆರ್ಸಿಬಿ ಈ ವೈಫಲ್ಯಕ್ಕೆ ಟೀಮ್ ಮ್ಯಾನೇಜಜ್ಮೆಂಟ್ ನೇರ ಹೊಣೆ. ಯಾಕಂದ್ರೆ ಟಿ20 ಕ್ರಿಕೆಟ್ನಲ್ಲಿ ರನ್ಗೆ ಕಡಿವಾಣ ಹಾಕೋದು ತುಂಬಾ ಮುಖ್ಯ. ಇದು ಫ್ರಾಂಚೈಸಿಗೆ ಅರ್ಥವಾಗ್ಲಿಲ್ಲ. ಮ್ಯಾಚ್ ವಿನ್ನಿಂಗ್ ಬೌಲರ್ಗಳಾದ ಜೋಶ್ ಹೇಜಲ್ವುಡ್, ಹರ್ಷಲ್ ಪಟೇಲ್ ಹಾಗೂ ವಾನಿಂದು ಹಸರಂಗರನ್ನ ತಂಡದ ರಿಲೀಸ್ ಮಾಡ್ತು. ಹರಾಜಿನಲ್ಲಿ ಉತ್ತಮ ಬೌಲರ್ಗಳನ್ನ ಪಿಕ್ ಮಾಡಲಿಲ್ಲ. ಇದರಿಂದ ತಂಡಕ್ಕೆ ಹಿನ್ನಡೆಯಾಗಿದೆ.
ಇದನ್ನೂ ಓದಿ: ₹46 ಕೋಟಿ ವ್ಯವಹಾರ ಮಾಡಿದ ಅಂತ ಕಾಲೇಜು ವಿದ್ಯಾರ್ಥಿಗೆ IT ನೋಟಿಸ್.. ಫೊಲೀಸರು ಏನು ಅಂತಾರೆ?
ಈಗಿನ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್ಗಳಿಲ್ಲ. ಡೆತ್ ಓವರ್ಗಳಲ್ಲಿ ರನ್ ಕಂಟ್ರೋಲ್ ಮಾಡುವ ವೇಗಿಗಳಿಲ್ಲ. ಸಿರಾಜ್ ಒಬ್ಬರೇ ತಂಡದ ನಂಬಿಗಸ್ಥ ಬೌಲರ್. ನ್ಯೂ ಬೌಲರ್ ಯಶ್ ದಯಾಳ್ ಹಾಗೂ ಅಲ್ಜರಿ ಜೋಸೆಫ್ ಅಸ್ಥಿರ ಪ್ರದರ್ಶನ ನೀಡ್ತಿದ್ದಾರೆ. ಚಿನ್ನಸ್ವಾಮಿಯಂತ ಚಿಕ್ಕ ಗ್ರೌಂಡ್ನಲ್ಲಿ ಬೌಲರ್ಸ್ ಸರಾಗವಾಗಿ ರನ್ ಬಿಟ್ಟು ಕೊಡ್ತಿದ್ದಾರೆ. ಇಂತಹ ವೀಕ್ ಬೌಲಿಂಗ್ ಅಟ್ಯಾಕ್ ಇಟ್ಟುಕೊಂಡು ಕಪ್ ಗೆಲ್ಲೋದು ನಿಜಕ್ಕೂ ಕಷ್ಟ. ಮುಂದಿನ ಪಂದ್ಯಗಳಲ್ಲಾದ್ರು ಮಿಸ್ಟೇಕ್ಸ್ ತಿದ್ದಿಕೊಂಡು ಮುನ್ನಡೆದರಷ್ಟೇ ಹೊಸ ಚರಿತ್ರೆ ಸೃಷ್ಟಿಯಾದೀತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ