ಆಟಗಾರರಿಗೆ ಅಸಲಿ ಸಾಮರ್ಥ್ಯ ಹೊರ ಹಾಕಲು ಅವಕಾಶ ಸಿಗುತ್ತಿಲ್ಲ
ಭಾರತದ ಯುವ ಆಟಗಾರರ ಮೇಲೂ ‘ಇಂಪ್ಯಾಕ್ಟ್’ ರೂಲ್ ಎಫೆಕ್ಟ್!
ಟೀಮ್ ಇಂಡಿಯಾ ಪಾಲಿಗೆ ಈ ರೂಲ್ ಒಳ್ಳೆಯದಲ್ಲವೇ ಅಲ್ಲ, ಯಾಕೆ?
ಐಪಿಎಲ್ನಲ್ಲಿ ಬಳಕೆಯಾಗ್ತಿರೋ ಇಂಪ್ಯಾಕ್ಟ್ ಪ್ಲೇಯರ್ ರೂಲ್. ಟೀಮ್ ಇಂಡಿಯಾಗೆ ಮಾರಕವಾಗಿದೆಯಾ?. ಈ ಒಂದು ರೂಲ್ನಿಂದ ಟೀಮ್ ಇಂಡಿಯಾಗೆ ನಷ್ಟವಾಗ್ತಿದ್ಯಾ.? ಹೀಗೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ. ಇಷ್ಟಕ್ಕೂ ಭಾರತದ ನಾಯಕ ರೋಹಿತ್, ಈ ರೂಲ್ಸ್ ಸರಿಯಿಲ್ಲ ಅಂದಿರೋದ್ಯಾಕೆ.?
ಇಂಪ್ಯಾಕ್ಟ್ ಪ್ಲೇಯರ್ ಐಪಿಎಲ್ ಟೂರ್ನಿಗೆ ಹೊಸ ರಂಗನ್ನೇ ನೀಡಿದೆ. ಫ್ಯಾನ್ಸ್ಗೆ ರೋಚಕ ಪಂದ್ಯಗಳ ಹಬ್ಬದೂಟ ಉಣಬಡಿಸ್ತಿದೆ. ಕೊನೆ ಕ್ಷಣದಲ್ಲಿ ಇಂಪ್ಯಾಕ್ಟ್ ಪ್ಲೇಯರ್ಗಳಾಗಿ ಎಂಟ್ರಿ ನೀಡಿರುವ ಆಟಗಾರರು, ಪಂದ್ಯದ ಗತಿಯನ್ನೇ ಬದಲಿಸ್ತಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ತಂಡಗಳು ಬಿಗ್ ಟಾರ್ಗೆಟ್ ಸೆಟ್ ಮಾಡ್ತಿವೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇಂದು ಮೋದಿ ಮೇನಿಯಾ.. ಈ ರಸ್ತೆಗಳಲ್ಲಿ ವಾಹನ ಸವಾರರಿಗೆ ನೋ ಎಂಟ್ರಿ
ಇಂಪ್ಯಾಕ್ಟ್ ಪ್ಲೇಯರ್ ರೂಲ್ನ ಇಂಪ್ಯಾಕ್ಟ್ ಐಪಿಎಲ್ನ ರಂಗ್ ಬದಲಿಸಿದೆ ನಿಜ. ಆದ್ರೆ, ಇದೇ ವೇಳೆ ಟೀಮ್ ಇಂಡಿಯಾ ಪಾಲಿಗೆ ವಿಲನ್ ಆಗಿಯೂ ಕಾಡ್ತಿದೆ. ಸ್ವತಃ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾನೇ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ನಾನು ಈ ಇಂಪ್ಯಾಕ್ಟ್ ಪ್ಲೇಯರ್ ರೂಲ್ ಅಭಿಮಾನಿ ನಾನಲ್ಲ ಎಂದು ಬಹಿರಂಗವಾಗೇ ಹೇಳಿದ್ದಾರೆ.
ಕ್ರಿಕೆಟ್ 11 ಮಂದಿ ಆಡುವ ಆಟ, 12 ಮಂದಿ ಅಲ್ಲ. ನಾನು ಇಂಪ್ಯಾಕ್ಟ್ ರೂಲ್ ಅಭಿಮಾನಿ ಅಲ್ಲ. ಇದು ಪಂದ್ಯವನ್ನ ಬೇರೇ ಹಂತಕ್ಕೆ ಕೊಂಡೊಯ್ಯಬಹುದು. ಜನರಿಗೆ ಮನರಂಜನೆ ನೀಡಬಹುದು. ಆದ್ರೆ, ನ್ಯಾಯಯುತವಾಗಿ ನೋಡಿದ್ರೆ, ವಾಷಿಗ್ಟಂನ್ ಸುಂದರ್, ಶಿವಂ ದುಬೆ ಬೌಲಿಂಗ್ ಮಾಡಲು ಆಗ್ತಿಲ್ಲ. ಇದು ನಮಗೆ ಒಳ್ಳೆಯದಲ್ಲ.
ರೋಹಿತ್ ಶರ್ಮಾ, ಟೀಮ್ ಇಂಡಿಯಾ ನಾಯಕ
ರೋಹಿತ್ ಶರ್ಮಾ ಹೇಳ್ತಿರೋದು ಸರಿಯಾಗಿದೆ. ಟೀಮ್ ಇಂಡಿಯಾ ಪಾಲಿಗೆ ಈ ರೂಲ್ ಒಳ್ಳೆಯದಲ್ಲವೇ ಅಲ್ಲ. ಯಾಕೆ ಅನ್ನೋದನ್ನ ಒಂದೊಂದಾಗಿ ಎಕ್ಸ್ಪ್ಲೈನ್ ಮಾಡ್ತೀವಿ ನೋಡಿ.
ಆಲ್ರೌಂಡರ್ಗಳ ಮೇಲೆ ‘ರಾಂಗ್ ಇಂಪ್ಯಾಕ್ಟ್’.!
2023ರಲ್ಲಿ ಜಾರಿಗೆ ತಂದ ಈ ರೂಲ್, ಐಪಿಎಲ್ ತಂಡಗಳ ಫ್ಲೆಕ್ಸಿಬಲಿಟಿಗೆ ಕಾರಣವಾಗ್ತಿದೆ. ಪರಿಸ್ಥಿತಿಗೆ ತಕ್ಕ ಪವರ್ ಹಿಟ್ಟರ್, ಸ್ಪೆಷಲಿಸ್ಟ್ ಬೌಲರ್ಗಳನ್ನ ಬಳಸಿಕೊಂಡು ಎದುರಾಳಿ ತಂಡಗಳಿಗೆ ಕೌಂಟರ್ ನೀಡ್ತಿವೆ. ಆದ್ರೆ, ಇದೇ ಇಂಪ್ಯಾಕ್ಟ್ ರೂಲ್ನಿಂದ ಶಿವಂ ದುಬೆ, ವಾಷಿಂಗ್ಟನ್ ಸುಂದರ್ರಂಥ ಆಲ್ರೌಂಡರ್ಗಳಿಗೆ ಅನ್ಯಾಯವಾಗ್ತಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಬೇಕಿದ್ದ ಶಿವಂ ದುಬೆ, ವಾಷಿಗ್ಟಂನ್ ಸುಂದರ್, ಕೇವಲ ಬ್ಯಾಟಿಂಗ್ ಅಥವಾ ಬೌಲಿಂಗ್ ಒಂದಕ್ಕೆ ಸಿಮೀತ ಆಗ್ತಿದ್ದಾರೆ. ಆಟಗಾರರಿಗಿರುವ ಅಸಲಿ ಸಾಮರ್ಥ್ಯ ಹೊರ ಹಾಕಲು ಅವಕಾಶ ಸಿಗ್ತಿಲ್ಲ. ಆಟಗಾರರ ಬೆಳವಣಿಗೆಗೆ ಮಾರಕವಾಗಲಿದೆ.
ಇಂಪ್ಯಾಕ್ಟ್ ರೂಲ್ನಿಂದ ಹಾರ್ದಿಕ್ ರಿಪ್ಲೇಸ್ಮೆಂಟ್ ಸಿಗ್ತಲ್ಲ.!
ಹಾರ್ದಿಕ್ ಪಾಂಡ್ಯ.. ಟೀಮ್ ಇಂಡಿಯಾದ ಆಲ್ರೌಂಡರ್. ಬ್ಯಾಟ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗುವ ಹಾರ್ದಿಕ್, ಟೀಮ್ಗೆ ಬ್ಯಾಲೆನ್ಸ್ ತರ್ತಾರೆ. ಇಂತಾ ಆಲ್ರೌಂಡರ್ಗೆ ಇಂದಿಗೂ ಸೂಕ್ತ ರಿಪ್ಲೇಸ್ಮೆಂಟ್ ಆಟಗಾರ ಟೀಮ್ ಇಂಡಿಯಾಗೆ ಸಿಕ್ಕಿಲ್ಲ. ಐಪಿಎಲ್ನಲ್ಲಿ ಇರೋ ಇಂಪ್ಯಾಕ್ಟ್ ಪ್ಲೇಯರ್ ಪರ್ಫೆಕ್ಟ್ ಆಲ್ರೌಂಡರ್ ಹುಡುಕಾಟಕ್ಕೆ ಅವಕಾಶವನ್ನೂ ನೀಡ್ತಿಲ್ಲ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್ನಿಂದ ಡೆಡ್ಲಿ ಅಟ್ಯಾಕ್.. ಲಾಂಗ್ನಿಂದ ಜಸ್ಟ್ ಮಿಸ್ ಆದ ರೌಡಿಶೀಟರ್
ವಿಶ್ವವನ್ನ ಆಳ್ತಿರೋದೆ ಪೇಸ್ ಆಲ್ರೌಂಡರ್ಸ್ ತಂಡಗಳು..!
ವಿಶ್ವ ಟಿ20 ಕ್ರಿಕೆಟ್ನಲ್ಲಿ ಡಾಮಿನೇಟ್ ಮಾಡ್ತಿರೋದೇ ಪೇಸ್ ಆಲ್ರೌಂಡರ್ಗಳಿರೋ ತಂಡಗಳು. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು ಟಿ20 ಕ್ರಿಕೆಟ್ನಲ್ಲಿ ಮೆರೆಯುತ್ತಿವೆ. ಟಿ20 ವಿಶ್ವಕಪ್ನಲ್ಲಿ ಗೆದ್ದು ಬೀಗುತ್ತಿವೆ ಅಂದ್ರೆ, ಅದಕ್ಕೆ ಕಾರಣ ಆಯಾ ತಂಡಗಳಲ್ಲಿನ ಸೀಮ್ ಬೌಲಿಂಗ್ ಆಲ್ರೌಂಡರ್ಗಳು. ಬೆನ್ ಸ್ಟೋಕ್ಸ್, ಮಿಚೆಲ್ ಮಾರ್ಷ್, ಆ್ಯಂಡ್ರೆ ರಸೆಲ್ ಸೇರಿದಂತೆ ಹಲವರಿದ್ದಾರೆ. ಬ್ಯಾಟಿಂಗ್ ಜೊತೆ ಬೌಲಿಂಗ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ಇವರು, ತಂಡಕ್ಕೆ ಸಮತೋಲನ ತರ್ತಾರೆ.
ಇದನ್ನೂ ಓದಿ: ನೇಹಾ ಹಿರೇಮಠ್ ಹತ್ಯೆಗೆ ಭಾರೀ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹಿಸಿದ ನಟ ಧ್ರುವ ಸರ್ಜಾ
ಆದ್ರೆ, ಐಪಿಎಲ್ನಲ್ಲಿ ತಂದಿರೋ ಈ ಇಂಪ್ಯಾಕ್ಟ್ ಪ್ಲೇಯರ್ ರೂಲ್, ಪರ್ಫೆಕ್ಟ್ ಆಲ್ರೌಂಡರ್ಗಳ ಬೆಳವಣಿಗೆಗೆ ಮತ್ತು ಹುಡುಕಾಟಕ್ಕೆ ಅಡ್ಡಿಯಾಗಿದೆ. ಇದು ಭವಿಷ್ಯದಲ್ಲಿ ಟೀಮ್ ಇಂಡಿಯಾಗೆ ಮಾರಕವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಆಟಗಾರರಿಗೆ ಅಸಲಿ ಸಾಮರ್ಥ್ಯ ಹೊರ ಹಾಕಲು ಅವಕಾಶ ಸಿಗುತ್ತಿಲ್ಲ
ಭಾರತದ ಯುವ ಆಟಗಾರರ ಮೇಲೂ ‘ಇಂಪ್ಯಾಕ್ಟ್’ ರೂಲ್ ಎಫೆಕ್ಟ್!
ಟೀಮ್ ಇಂಡಿಯಾ ಪಾಲಿಗೆ ಈ ರೂಲ್ ಒಳ್ಳೆಯದಲ್ಲವೇ ಅಲ್ಲ, ಯಾಕೆ?
ಐಪಿಎಲ್ನಲ್ಲಿ ಬಳಕೆಯಾಗ್ತಿರೋ ಇಂಪ್ಯಾಕ್ಟ್ ಪ್ಲೇಯರ್ ರೂಲ್. ಟೀಮ್ ಇಂಡಿಯಾಗೆ ಮಾರಕವಾಗಿದೆಯಾ?. ಈ ಒಂದು ರೂಲ್ನಿಂದ ಟೀಮ್ ಇಂಡಿಯಾಗೆ ನಷ್ಟವಾಗ್ತಿದ್ಯಾ.? ಹೀಗೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ. ಇಷ್ಟಕ್ಕೂ ಭಾರತದ ನಾಯಕ ರೋಹಿತ್, ಈ ರೂಲ್ಸ್ ಸರಿಯಿಲ್ಲ ಅಂದಿರೋದ್ಯಾಕೆ.?
ಇಂಪ್ಯಾಕ್ಟ್ ಪ್ಲೇಯರ್ ಐಪಿಎಲ್ ಟೂರ್ನಿಗೆ ಹೊಸ ರಂಗನ್ನೇ ನೀಡಿದೆ. ಫ್ಯಾನ್ಸ್ಗೆ ರೋಚಕ ಪಂದ್ಯಗಳ ಹಬ್ಬದೂಟ ಉಣಬಡಿಸ್ತಿದೆ. ಕೊನೆ ಕ್ಷಣದಲ್ಲಿ ಇಂಪ್ಯಾಕ್ಟ್ ಪ್ಲೇಯರ್ಗಳಾಗಿ ಎಂಟ್ರಿ ನೀಡಿರುವ ಆಟಗಾರರು, ಪಂದ್ಯದ ಗತಿಯನ್ನೇ ಬದಲಿಸ್ತಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ತಂಡಗಳು ಬಿಗ್ ಟಾರ್ಗೆಟ್ ಸೆಟ್ ಮಾಡ್ತಿವೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇಂದು ಮೋದಿ ಮೇನಿಯಾ.. ಈ ರಸ್ತೆಗಳಲ್ಲಿ ವಾಹನ ಸವಾರರಿಗೆ ನೋ ಎಂಟ್ರಿ
ಇಂಪ್ಯಾಕ್ಟ್ ಪ್ಲೇಯರ್ ರೂಲ್ನ ಇಂಪ್ಯಾಕ್ಟ್ ಐಪಿಎಲ್ನ ರಂಗ್ ಬದಲಿಸಿದೆ ನಿಜ. ಆದ್ರೆ, ಇದೇ ವೇಳೆ ಟೀಮ್ ಇಂಡಿಯಾ ಪಾಲಿಗೆ ವಿಲನ್ ಆಗಿಯೂ ಕಾಡ್ತಿದೆ. ಸ್ವತಃ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾನೇ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ನಾನು ಈ ಇಂಪ್ಯಾಕ್ಟ್ ಪ್ಲೇಯರ್ ರೂಲ್ ಅಭಿಮಾನಿ ನಾನಲ್ಲ ಎಂದು ಬಹಿರಂಗವಾಗೇ ಹೇಳಿದ್ದಾರೆ.
ಕ್ರಿಕೆಟ್ 11 ಮಂದಿ ಆಡುವ ಆಟ, 12 ಮಂದಿ ಅಲ್ಲ. ನಾನು ಇಂಪ್ಯಾಕ್ಟ್ ರೂಲ್ ಅಭಿಮಾನಿ ಅಲ್ಲ. ಇದು ಪಂದ್ಯವನ್ನ ಬೇರೇ ಹಂತಕ್ಕೆ ಕೊಂಡೊಯ್ಯಬಹುದು. ಜನರಿಗೆ ಮನರಂಜನೆ ನೀಡಬಹುದು. ಆದ್ರೆ, ನ್ಯಾಯಯುತವಾಗಿ ನೋಡಿದ್ರೆ, ವಾಷಿಗ್ಟಂನ್ ಸುಂದರ್, ಶಿವಂ ದುಬೆ ಬೌಲಿಂಗ್ ಮಾಡಲು ಆಗ್ತಿಲ್ಲ. ಇದು ನಮಗೆ ಒಳ್ಳೆಯದಲ್ಲ.
ರೋಹಿತ್ ಶರ್ಮಾ, ಟೀಮ್ ಇಂಡಿಯಾ ನಾಯಕ
ರೋಹಿತ್ ಶರ್ಮಾ ಹೇಳ್ತಿರೋದು ಸರಿಯಾಗಿದೆ. ಟೀಮ್ ಇಂಡಿಯಾ ಪಾಲಿಗೆ ಈ ರೂಲ್ ಒಳ್ಳೆಯದಲ್ಲವೇ ಅಲ್ಲ. ಯಾಕೆ ಅನ್ನೋದನ್ನ ಒಂದೊಂದಾಗಿ ಎಕ್ಸ್ಪ್ಲೈನ್ ಮಾಡ್ತೀವಿ ನೋಡಿ.
ಆಲ್ರೌಂಡರ್ಗಳ ಮೇಲೆ ‘ರಾಂಗ್ ಇಂಪ್ಯಾಕ್ಟ್’.!
2023ರಲ್ಲಿ ಜಾರಿಗೆ ತಂದ ಈ ರೂಲ್, ಐಪಿಎಲ್ ತಂಡಗಳ ಫ್ಲೆಕ್ಸಿಬಲಿಟಿಗೆ ಕಾರಣವಾಗ್ತಿದೆ. ಪರಿಸ್ಥಿತಿಗೆ ತಕ್ಕ ಪವರ್ ಹಿಟ್ಟರ್, ಸ್ಪೆಷಲಿಸ್ಟ್ ಬೌಲರ್ಗಳನ್ನ ಬಳಸಿಕೊಂಡು ಎದುರಾಳಿ ತಂಡಗಳಿಗೆ ಕೌಂಟರ್ ನೀಡ್ತಿವೆ. ಆದ್ರೆ, ಇದೇ ಇಂಪ್ಯಾಕ್ಟ್ ರೂಲ್ನಿಂದ ಶಿವಂ ದುಬೆ, ವಾಷಿಂಗ್ಟನ್ ಸುಂದರ್ರಂಥ ಆಲ್ರೌಂಡರ್ಗಳಿಗೆ ಅನ್ಯಾಯವಾಗ್ತಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಬೇಕಿದ್ದ ಶಿವಂ ದುಬೆ, ವಾಷಿಗ್ಟಂನ್ ಸುಂದರ್, ಕೇವಲ ಬ್ಯಾಟಿಂಗ್ ಅಥವಾ ಬೌಲಿಂಗ್ ಒಂದಕ್ಕೆ ಸಿಮೀತ ಆಗ್ತಿದ್ದಾರೆ. ಆಟಗಾರರಿಗಿರುವ ಅಸಲಿ ಸಾಮರ್ಥ್ಯ ಹೊರ ಹಾಕಲು ಅವಕಾಶ ಸಿಗ್ತಿಲ್ಲ. ಆಟಗಾರರ ಬೆಳವಣಿಗೆಗೆ ಮಾರಕವಾಗಲಿದೆ.
ಇಂಪ್ಯಾಕ್ಟ್ ರೂಲ್ನಿಂದ ಹಾರ್ದಿಕ್ ರಿಪ್ಲೇಸ್ಮೆಂಟ್ ಸಿಗ್ತಲ್ಲ.!
ಹಾರ್ದಿಕ್ ಪಾಂಡ್ಯ.. ಟೀಮ್ ಇಂಡಿಯಾದ ಆಲ್ರೌಂಡರ್. ಬ್ಯಾಟ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗುವ ಹಾರ್ದಿಕ್, ಟೀಮ್ಗೆ ಬ್ಯಾಲೆನ್ಸ್ ತರ್ತಾರೆ. ಇಂತಾ ಆಲ್ರೌಂಡರ್ಗೆ ಇಂದಿಗೂ ಸೂಕ್ತ ರಿಪ್ಲೇಸ್ಮೆಂಟ್ ಆಟಗಾರ ಟೀಮ್ ಇಂಡಿಯಾಗೆ ಸಿಕ್ಕಿಲ್ಲ. ಐಪಿಎಲ್ನಲ್ಲಿ ಇರೋ ಇಂಪ್ಯಾಕ್ಟ್ ಪ್ಲೇಯರ್ ಪರ್ಫೆಕ್ಟ್ ಆಲ್ರೌಂಡರ್ ಹುಡುಕಾಟಕ್ಕೆ ಅವಕಾಶವನ್ನೂ ನೀಡ್ತಿಲ್ಲ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್ನಿಂದ ಡೆಡ್ಲಿ ಅಟ್ಯಾಕ್.. ಲಾಂಗ್ನಿಂದ ಜಸ್ಟ್ ಮಿಸ್ ಆದ ರೌಡಿಶೀಟರ್
ವಿಶ್ವವನ್ನ ಆಳ್ತಿರೋದೆ ಪೇಸ್ ಆಲ್ರೌಂಡರ್ಸ್ ತಂಡಗಳು..!
ವಿಶ್ವ ಟಿ20 ಕ್ರಿಕೆಟ್ನಲ್ಲಿ ಡಾಮಿನೇಟ್ ಮಾಡ್ತಿರೋದೇ ಪೇಸ್ ಆಲ್ರೌಂಡರ್ಗಳಿರೋ ತಂಡಗಳು. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು ಟಿ20 ಕ್ರಿಕೆಟ್ನಲ್ಲಿ ಮೆರೆಯುತ್ತಿವೆ. ಟಿ20 ವಿಶ್ವಕಪ್ನಲ್ಲಿ ಗೆದ್ದು ಬೀಗುತ್ತಿವೆ ಅಂದ್ರೆ, ಅದಕ್ಕೆ ಕಾರಣ ಆಯಾ ತಂಡಗಳಲ್ಲಿನ ಸೀಮ್ ಬೌಲಿಂಗ್ ಆಲ್ರೌಂಡರ್ಗಳು. ಬೆನ್ ಸ್ಟೋಕ್ಸ್, ಮಿಚೆಲ್ ಮಾರ್ಷ್, ಆ್ಯಂಡ್ರೆ ರಸೆಲ್ ಸೇರಿದಂತೆ ಹಲವರಿದ್ದಾರೆ. ಬ್ಯಾಟಿಂಗ್ ಜೊತೆ ಬೌಲಿಂಗ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ಇವರು, ತಂಡಕ್ಕೆ ಸಮತೋಲನ ತರ್ತಾರೆ.
ಇದನ್ನೂ ಓದಿ: ನೇಹಾ ಹಿರೇಮಠ್ ಹತ್ಯೆಗೆ ಭಾರೀ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹಿಸಿದ ನಟ ಧ್ರುವ ಸರ್ಜಾ
ಆದ್ರೆ, ಐಪಿಎಲ್ನಲ್ಲಿ ತಂದಿರೋ ಈ ಇಂಪ್ಯಾಕ್ಟ್ ಪ್ಲೇಯರ್ ರೂಲ್, ಪರ್ಫೆಕ್ಟ್ ಆಲ್ರೌಂಡರ್ಗಳ ಬೆಳವಣಿಗೆಗೆ ಮತ್ತು ಹುಡುಕಾಟಕ್ಕೆ ಅಡ್ಡಿಯಾಗಿದೆ. ಇದು ಭವಿಷ್ಯದಲ್ಲಿ ಟೀಮ್ ಇಂಡಿಯಾಗೆ ಮಾರಕವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ