ಗೆದ್ದವರ ಕಾಳಗದಲ್ಲಿ ಇಂದು ವಿನ್ನರ್ ಯಾರು..?
ಶುಭ್ಮನ್ vs ಋತುರಾಜ್ ನಡುವೆ ಭವಿಷ್ಯದ ಫೈಟ್!
ಇವರಿಬ್ಬರ ಬೆನ್ನಿಗಿದ್ದಾರೆ ಶ್ರೀಕೃಷ್ಣನಂತ ಸಾರಥಿಯರು..!
ಮತ್ತೊಂದು ಹೈವೋಲ್ಟೇಜ್ ಥ್ರಿಲ್ಲರ್ IPL ಮ್ಯಾಚ್ಗೆ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದಿರೋ ಚೆನ್ನೈ ಹಾಗೂ ಗುಜರಾತ್, ಗೆಲುವಿನ ನಾಗಲೋಟ ಮುಂದುವರಿಸುವ ತವಕದಲ್ಲಿವೆ. ಆದ್ರೆ, ಈ ಪಂದ್ಯದ ಗೆಲುವು ಸೋಲಿನ ಲೆಕ್ಕಾಚಾರಕ್ಕಿಂತ, ನಾಯಕರ ಮುಖಾಮುಖಿಯೇ ಹೆಚ್ಚು ಕುತೂಹಲ ಕೆರಳಿಸಿದೆ.
ಐಪಿಎಲ್ ಟೂರ್ನಿಯ ಇಂದಿನ ಮೆಗಾ ಫೈಟ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ – ಗುಜರಾತ್ ಟೈಟನ್ಸ್ ಮುಖಾಮುಖಿಯಾಗ್ತಿವೆ. ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರೋ ಉಭಯ ತಂಡಗಳು ಚೆಪಾಕ್ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿವೆ. ಹಾಲಿ ಚಾಂಪಿಯನ್ಸ್ ಹಾಗೂ ರನ್ನರ್ ಅಪ್ಗಳ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ.
ಒಂದೆಡೆ ಹಾಲಿ ಚಾಂಪಿಯನ್ಸ್ ಹಾಗೂ ರನ್ನರ್ಅಪ್ ನಡುವಿನ ಕದನ ಕುತೂಹಲವಾದ್ರೆ, ಇನ್ನೊಂದೆಡೆ ಯಂಗ್ ಕ್ಯಾಪ್ಟನ್ಸ್ ಮುಖಾಮುಖಿ ಹೇಗಿರುತ್ತೆ ಎಂಬ ಪ್ರಶ್ನೆ ಕ್ರಿಕೆಟ್ ವಲಯದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ನೂತನ ನಾಯಕ ಋತುರಾಜ್ ಗಾಯಕ್ವಾಡ್ ಆ್ಯಂಡ್ ಗುಜರಾತ್ ಟೈಟನ್ಸ್ ನಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ಮುಖಾಮುಖಿಯಲ್ಲಿ ಗೆಲ್ಲೋದ್ಯಾರು ಅನ್ನೋದೆ ಹಾಟ್ಟಾಪಿಕ್.!
ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಟಿಪ್ಪರ್.. ಬೈಕ್ ಸವಾರ ಸಾವು, ಮತ್ತೋರ್ವ ಗಂಭೀರ
ಇಂದು ನಡೆಯೋದು ಫ್ಯೂಚರ್ ಕ್ಯಾಪ್ಟನ್ಸ್ ಫೈಟ್.!
ಇಂದು ಚೆನ್ನೈನ ಚಿದಂಬರಂನಲ್ಲಿ ನಡೆಯೋದು ನಾಯಕರ ಕಾಳಗ. ಹೌದು..! ಮೊದಲ ಪಂದ್ಯದಲ್ಲೇ ನಾಯಕರಾಗಿ ಗೆದ್ದವರ ಕಾಳಗ. ಈ ಗೆದ್ದವರ ಕಾಳಗದಲ್ಲಿ ಇಂದು ಯಾರ್ ಗೆಲ್ತಾರೆ ಅನ್ನೋದು ಕ್ಯುರಿಯಾಸಿಟಿ ಹುಟ್ಟಿಸಿದೆ. ಹೀಗಾಗಿಯೇ ಇಂದಿನ ಫೈಟ್ ಚೆನ್ನೈ ವರ್ಸಸ್ ಗುಜರಾತ್ ಎಂಬುವುದಕ್ಕಿಂತ ಹೆಚ್ಚಾಗಿ ಇಂಡಿಯನ್ ಫ್ಯೂಚರ್ ಕ್ಯಾಪ್ಟನ್ಗಳ ಫೈಟ್ ಆಗಿ ಬಿಂಬಿತವಾಗಿದೆ.
ಶುಭ್ಮನ್, ಋತುರಾಜ್ ನಡುವೆ ಭವಿಷ್ಯದ ಫೈಟ್!
ಇವರಿಬ್ಬರೂ ಐಪಿಎಲ್ನಲ್ಲೇ ಮುಖಾಮುಖಿಯಾಗ್ತಿದ್ದರೂ, ಇವರಿಬ್ಬರ ಗುರಿ ಟೀಮ್ ಇಂಡಿಯಾ ನಾಯಕನ ಪಟ್ಟವಾಗಿದೆ. ಯಾಕಂದ್ರೆ, ಈಗಾಗಲೇ ಟೀಮ್ ಇಂಡಿಯಾದ ಸ್ಟಾರ್ಗಳಾಗಿರುವ ಇವರಿಬ್ಬರು, ಭವಿಷ್ಯದ ನಾಯಕರಾಗುವ ರೇಸ್ನಲ್ಲಿ ಮುಂಚೂಣಿಯಾಗಿದ್ದಾರೆ. ಈಗಾಗಲೇ ಋತುರಾಜ್, ನಾಯಕ ಹಾಗೂ ಉಪ ನಾಯಕನಾಗಿಯೂ ಟೀಮ್ ಇಂಡಿಯಾ ಪರ ಕಾರ್ಯ ನಿರ್ವಹಿಸಿದ್ದಾರೆ. ಅತ್ತ ಶುಭ್ಮನ್ ಗಿಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ನಾಯಕ, ಉಪ ನಾಯಕನಾಗದಿದ್ರೂ, ನಾಯಕತ್ವದ ರೇಸ್ನ ಸ್ಟ್ರಾಂಗ್ ಕಂಟೇಡರ್ ಅನ್ನೋದ್ರಲ್ಲಿ ಅನುಮಾನವಿಲ್ಲ.
ಎಲ್ಲದಕ್ಕೂ ಐಪಿಎಲ್ ಟೂರ್ನಿಯೊಂದೇ ವೇದಿಕೆ..!
ಒಂದ್ಕಡೆ ಫ್ಯೂಚರ್ ಕ್ಯಾಪ್ಟನ್ಗಳಾಗಿ ಗುರುತಿಸಿಕೊಂಡಿರೋ ಇವರು, ಜೂನ್ನಲ್ಲಿ ನಡೆಯೋ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯೋ ರೇಸ್ನಲ್ಲೂ ಇದ್ದಾರೆ. ಬ್ಯಾಕ್ ಆಪ್ ಓಪನರ್ ಸ್ಲಾಟ್ಗಾಗಿ ಇವರಿಬ್ಬರ ನಡುವೆಯೇ ನೇರಸ್ಪರ್ಧೆ ಇದೆ. ಹೀಗಾಗಿ ಐಪಿಎಲ್ನಲ್ಲಿ ಇವರಿಬ್ಬರ ರನ್ ಬ್ಯಾಟಲ್ ನಡೆಯೋದು ಕನ್ಫರ್ಮ್.
ವ್ಯೂಹಾತ್ಮಕ ಯುದ್ಧದಲ್ಲಿ ಇಂದು ಯಾರಿಗೆ ಅಪಜಯ..?
ಮೊದಲ ಪಂದ್ಯದಲ್ಲಿ ನಾಯಕರಾಗಿ ಋತುರಾಜ್, ಶುಭ್ಮನ್ ಗೆದ್ದಿದ್ದಾರೆ ನಿಜ. ಆದ್ರೆ, ನಾಯಕರಾಗಿ ಗಮನ ಸೆಳೆದಿದ್ದು ಋತುರಾಜ್, ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬೌಲರ್ಗಳನ್ನ ಬಳಸಿಕೊಂಡ ರೀತಿ, ಕೊನೆ ಓವರ್ನಲ್ಲಿ ದೇಶಪಾಂಡೆ ಮೇಲಿಟ್ಟ ಭರವಸೆ. ಫೀಲ್ಡಿಂಗ್ ಚೇಂಜಸ್ ಇಂಪ್ರೆಸ್ಸಿಂಗ್ ಅಗಿತ್ತು. ಆದ್ರೆ, ಈ ವಿಚಾರದಲ್ಲಿ ಶುಭ್ಮನ್, ಕೋಚ್ ಅಶಿಶ್ ನೆಹ್ರಾರನ್ನೇ ನಂಬಿಕೊಂಡಂತೆ ಇತ್ತು. ಇವರಿಬ್ಬರ ಬೆನ್ನಿಗೆ ಶ್ರೀಕೃಷ್ಣನಂತೆ ಮಹೇಂದ್ರ ಸಿಂಗ್ ಧೋನಿ, ಆಶಿಶ್ ನೆಹ್ರಾ ಇದ್ದಾರೆ. ಹೀಗಾಗಿ ಈ ರಣಕಲಿಗಳ ವ್ಯೂಹಾತ್ಮಕ ಯುದ್ಧ ಹೇಗಿರುತ್ತೆ ಅನ್ನೋ ಕುತೂಹಲವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗೆದ್ದವರ ಕಾಳಗದಲ್ಲಿ ಇಂದು ವಿನ್ನರ್ ಯಾರು..?
ಶುಭ್ಮನ್ vs ಋತುರಾಜ್ ನಡುವೆ ಭವಿಷ್ಯದ ಫೈಟ್!
ಇವರಿಬ್ಬರ ಬೆನ್ನಿಗಿದ್ದಾರೆ ಶ್ರೀಕೃಷ್ಣನಂತ ಸಾರಥಿಯರು..!
ಮತ್ತೊಂದು ಹೈವೋಲ್ಟೇಜ್ ಥ್ರಿಲ್ಲರ್ IPL ಮ್ಯಾಚ್ಗೆ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದಿರೋ ಚೆನ್ನೈ ಹಾಗೂ ಗುಜರಾತ್, ಗೆಲುವಿನ ನಾಗಲೋಟ ಮುಂದುವರಿಸುವ ತವಕದಲ್ಲಿವೆ. ಆದ್ರೆ, ಈ ಪಂದ್ಯದ ಗೆಲುವು ಸೋಲಿನ ಲೆಕ್ಕಾಚಾರಕ್ಕಿಂತ, ನಾಯಕರ ಮುಖಾಮುಖಿಯೇ ಹೆಚ್ಚು ಕುತೂಹಲ ಕೆರಳಿಸಿದೆ.
ಐಪಿಎಲ್ ಟೂರ್ನಿಯ ಇಂದಿನ ಮೆಗಾ ಫೈಟ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ – ಗುಜರಾತ್ ಟೈಟನ್ಸ್ ಮುಖಾಮುಖಿಯಾಗ್ತಿವೆ. ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರೋ ಉಭಯ ತಂಡಗಳು ಚೆಪಾಕ್ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿವೆ. ಹಾಲಿ ಚಾಂಪಿಯನ್ಸ್ ಹಾಗೂ ರನ್ನರ್ ಅಪ್ಗಳ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ.
ಒಂದೆಡೆ ಹಾಲಿ ಚಾಂಪಿಯನ್ಸ್ ಹಾಗೂ ರನ್ನರ್ಅಪ್ ನಡುವಿನ ಕದನ ಕುತೂಹಲವಾದ್ರೆ, ಇನ್ನೊಂದೆಡೆ ಯಂಗ್ ಕ್ಯಾಪ್ಟನ್ಸ್ ಮುಖಾಮುಖಿ ಹೇಗಿರುತ್ತೆ ಎಂಬ ಪ್ರಶ್ನೆ ಕ್ರಿಕೆಟ್ ವಲಯದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ನೂತನ ನಾಯಕ ಋತುರಾಜ್ ಗಾಯಕ್ವಾಡ್ ಆ್ಯಂಡ್ ಗುಜರಾತ್ ಟೈಟನ್ಸ್ ನಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ಮುಖಾಮುಖಿಯಲ್ಲಿ ಗೆಲ್ಲೋದ್ಯಾರು ಅನ್ನೋದೆ ಹಾಟ್ಟಾಪಿಕ್.!
ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಟಿಪ್ಪರ್.. ಬೈಕ್ ಸವಾರ ಸಾವು, ಮತ್ತೋರ್ವ ಗಂಭೀರ
ಇಂದು ನಡೆಯೋದು ಫ್ಯೂಚರ್ ಕ್ಯಾಪ್ಟನ್ಸ್ ಫೈಟ್.!
ಇಂದು ಚೆನ್ನೈನ ಚಿದಂಬರಂನಲ್ಲಿ ನಡೆಯೋದು ನಾಯಕರ ಕಾಳಗ. ಹೌದು..! ಮೊದಲ ಪಂದ್ಯದಲ್ಲೇ ನಾಯಕರಾಗಿ ಗೆದ್ದವರ ಕಾಳಗ. ಈ ಗೆದ್ದವರ ಕಾಳಗದಲ್ಲಿ ಇಂದು ಯಾರ್ ಗೆಲ್ತಾರೆ ಅನ್ನೋದು ಕ್ಯುರಿಯಾಸಿಟಿ ಹುಟ್ಟಿಸಿದೆ. ಹೀಗಾಗಿಯೇ ಇಂದಿನ ಫೈಟ್ ಚೆನ್ನೈ ವರ್ಸಸ್ ಗುಜರಾತ್ ಎಂಬುವುದಕ್ಕಿಂತ ಹೆಚ್ಚಾಗಿ ಇಂಡಿಯನ್ ಫ್ಯೂಚರ್ ಕ್ಯಾಪ್ಟನ್ಗಳ ಫೈಟ್ ಆಗಿ ಬಿಂಬಿತವಾಗಿದೆ.
ಶುಭ್ಮನ್, ಋತುರಾಜ್ ನಡುವೆ ಭವಿಷ್ಯದ ಫೈಟ್!
ಇವರಿಬ್ಬರೂ ಐಪಿಎಲ್ನಲ್ಲೇ ಮುಖಾಮುಖಿಯಾಗ್ತಿದ್ದರೂ, ಇವರಿಬ್ಬರ ಗುರಿ ಟೀಮ್ ಇಂಡಿಯಾ ನಾಯಕನ ಪಟ್ಟವಾಗಿದೆ. ಯಾಕಂದ್ರೆ, ಈಗಾಗಲೇ ಟೀಮ್ ಇಂಡಿಯಾದ ಸ್ಟಾರ್ಗಳಾಗಿರುವ ಇವರಿಬ್ಬರು, ಭವಿಷ್ಯದ ನಾಯಕರಾಗುವ ರೇಸ್ನಲ್ಲಿ ಮುಂಚೂಣಿಯಾಗಿದ್ದಾರೆ. ಈಗಾಗಲೇ ಋತುರಾಜ್, ನಾಯಕ ಹಾಗೂ ಉಪ ನಾಯಕನಾಗಿಯೂ ಟೀಮ್ ಇಂಡಿಯಾ ಪರ ಕಾರ್ಯ ನಿರ್ವಹಿಸಿದ್ದಾರೆ. ಅತ್ತ ಶುಭ್ಮನ್ ಗಿಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ನಾಯಕ, ಉಪ ನಾಯಕನಾಗದಿದ್ರೂ, ನಾಯಕತ್ವದ ರೇಸ್ನ ಸ್ಟ್ರಾಂಗ್ ಕಂಟೇಡರ್ ಅನ್ನೋದ್ರಲ್ಲಿ ಅನುಮಾನವಿಲ್ಲ.
ಎಲ್ಲದಕ್ಕೂ ಐಪಿಎಲ್ ಟೂರ್ನಿಯೊಂದೇ ವೇದಿಕೆ..!
ಒಂದ್ಕಡೆ ಫ್ಯೂಚರ್ ಕ್ಯಾಪ್ಟನ್ಗಳಾಗಿ ಗುರುತಿಸಿಕೊಂಡಿರೋ ಇವರು, ಜೂನ್ನಲ್ಲಿ ನಡೆಯೋ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯೋ ರೇಸ್ನಲ್ಲೂ ಇದ್ದಾರೆ. ಬ್ಯಾಕ್ ಆಪ್ ಓಪನರ್ ಸ್ಲಾಟ್ಗಾಗಿ ಇವರಿಬ್ಬರ ನಡುವೆಯೇ ನೇರಸ್ಪರ್ಧೆ ಇದೆ. ಹೀಗಾಗಿ ಐಪಿಎಲ್ನಲ್ಲಿ ಇವರಿಬ್ಬರ ರನ್ ಬ್ಯಾಟಲ್ ನಡೆಯೋದು ಕನ್ಫರ್ಮ್.
ವ್ಯೂಹಾತ್ಮಕ ಯುದ್ಧದಲ್ಲಿ ಇಂದು ಯಾರಿಗೆ ಅಪಜಯ..?
ಮೊದಲ ಪಂದ್ಯದಲ್ಲಿ ನಾಯಕರಾಗಿ ಋತುರಾಜ್, ಶುಭ್ಮನ್ ಗೆದ್ದಿದ್ದಾರೆ ನಿಜ. ಆದ್ರೆ, ನಾಯಕರಾಗಿ ಗಮನ ಸೆಳೆದಿದ್ದು ಋತುರಾಜ್, ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬೌಲರ್ಗಳನ್ನ ಬಳಸಿಕೊಂಡ ರೀತಿ, ಕೊನೆ ಓವರ್ನಲ್ಲಿ ದೇಶಪಾಂಡೆ ಮೇಲಿಟ್ಟ ಭರವಸೆ. ಫೀಲ್ಡಿಂಗ್ ಚೇಂಜಸ್ ಇಂಪ್ರೆಸ್ಸಿಂಗ್ ಅಗಿತ್ತು. ಆದ್ರೆ, ಈ ವಿಚಾರದಲ್ಲಿ ಶುಭ್ಮನ್, ಕೋಚ್ ಅಶಿಶ್ ನೆಹ್ರಾರನ್ನೇ ನಂಬಿಕೊಂಡಂತೆ ಇತ್ತು. ಇವರಿಬ್ಬರ ಬೆನ್ನಿಗೆ ಶ್ರೀಕೃಷ್ಣನಂತೆ ಮಹೇಂದ್ರ ಸಿಂಗ್ ಧೋನಿ, ಆಶಿಶ್ ನೆಹ್ರಾ ಇದ್ದಾರೆ. ಹೀಗಾಗಿ ಈ ರಣಕಲಿಗಳ ವ್ಯೂಹಾತ್ಮಕ ಯುದ್ಧ ಹೇಗಿರುತ್ತೆ ಅನ್ನೋ ಕುತೂಹಲವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ