/newsfirstlive-kannada/media/post_attachments/wp-content/uploads/2024/08/S-Somanath.jpg)
ಭಾರತ ಮೂಲದ ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ತಾಂತ್ರಿಕ ದೋಷದಿಂದ ಬಾಹ್ಯಾಕಾಶ ಸಿಲುಕಿಹಾಕಿಕೊಂಡಿದ್ದಾರೆ. ಕಳೆದ ಜೂನ್​ ತಿಂಗಳಿನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದು, ಒಂದು ವಾರದ ಯೋಜನೆಯೊಂದಿಗೆ ಹಿಂತಿರುಗಬೇಕಿತ್ತು. ಆದರೀಗ ಸುನೀತಾ ವಿಲಿಯಮ್ಸ್​​ ಹಿಂತಿರುಗಲು ಸಾಧ್ಯವಾಗದೆ 2 ತಿಂಗಳುಗಳು ಕಳೆದಿವೆ.
ನಾಸಾ ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್​ ಅವರನ್ನು ಕರೆ ತರಲು ಅನೇಕ ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಇದೀಗ ಭಾರತ ಕೂಡ ನಾಸಾಗೆ ಸಹಾಯ ಮಾಡುತ್ತಾ ಎಂಬ ಪ್ರಶ್ನೆಯೊಂದು ಮೂಡಿದೆ. ಆದರೆ ಈ ಪ್ರಶ್ನೆಗೆ ಇಸ್ರೋದ ಮುಖ್ಯಸ್ಥ ಎಸ್​ ಸೋಮನಾಥ್​ ಉತ್ತರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/07/SUNITA-2.jpg)
ಸುನೀತಾ ವಿಲಿಯಮ್ಸ್​ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ರಷ್ಯಾ ಮತ್ತು ಯುಎಸ್​​ಗೆ ಮಾತ್ರ ಸಹಾಯ ಮಾಡಬಹುದಾಗಿದೆ ಎಂದು ಎಸ್​ ಸೋಮನಾಥ್ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/06/Sunitha-Williams.jpg)
ಈ ಕ್ಷಣದಲ್ಲಿ ಭಾರತದಿಂದ ನೇರವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅವರನ್ನು ರಕ್ಷಿಸಲು ಕ್ರಾಫ್ಟ್​ ಕಳುಹಿಸುವ ಸಾಮರ್ಥ್ಯ ನಮಗಿಲ್ಲ. ಯುನೈಟೆಡ್​ ಮತ್ತು ರಷ್ಯಾ ಮಾತ್ರ ಸಂಭಾವ್ಯ ಪರಿಹಾರಗಳನ್ನು ಒದಗಿಸುತ್ತವೆ. ಯುಎಸ್​​ ಕ್ರೂ ಡ್ರ್ಯಾಗನ್​​ ವಾಹನವನ್ನು ಹೊಂದಿದೆ. ರಷ್ಯಾ ಸೋಯುಜ್​​ ಹೊಂದಿದೆ. ಇದರ ಮೂಲಕ ರಕ್ಷಣಾ ಕಾರ್ಯ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಎಲೋನ್​ ಮಸ್ಕ್​ನ ಸ್ಪೇಸ್​​ ಎಕ್ಸ್​​ ಕ್ರ್ಯೂ-9 ಮಿಷನ್​ ಮೂಲಕ ಗಗನಯತ್ರಿಗಳನ್ನು ಮರಳಿ ಭೂಮಿಗೆ ಕರೆತರಲು ನಾಸಾ ಯೋಚಿಸುತ್ತಿದೆ. ಸೆಪ್ಟೆಂಬರ್​ ಅಂತ್ಯಕ್ಕೆ ಈ ಕುರಿತು ನಿಗದಿ ಪಡಿಸಲಾಗಿದೆ. 2025ರಲ್ಲಿ ಕ್ರ್ಯೂ-9ನಲ್ಲಿ ಹಿಂತಿರುಗಲಿದ್ದಾರೆ ಎಂದು ಇಸ್ರೋ ಮುಖ್ಯಸ್ಥ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us