ಅಖಾಡಕ್ಕೆ ಇಳಿದ ಬಿಸಿಸಿಐ ಸೆಕ್ರೆಟರಿ ಜಯ್ ಶಾ
ಫೈನಲ್ ಪಂದ್ಯದ ಬಳಿಕ ಚೆಪಾಕ್ನಲ್ಲಿ ನಡೆದಿದ್ದೇನು..?
ಹೈವೋಲ್ಟೆಜ್ ಮಾತುಕತೆ, ಸುದೀರ್ಘ ಚರ್ಚೆ.. ಯಾಕೆ.?
ಟೀಮ್ ಇಂಡಿಯಾದ ನೂತನ ಹೆಡ್ಕೋಚ್ ನೇಮಕದ ಹಗ್ಗಜಗ್ಗಾಟ ಮುಂದುವರೆದಿದೆ. ಖುದ್ದು ಬಿಸಿಸಿಐ ಸೆಕ್ರೆಟರಿ ಜಯ್ ಶಾ ಇದೀಗ ಫೀಲ್ಡ್ಗಿಳಿದಿದ್ದಾರೆ. ಪರಿಣಾಮ ಶಾರೂಖ್ ಖಾನ್ ವರ್ಸಸ್ ಜಯ್ ಶಾ ಬ್ಯಾಟಲ್ ಶುರುವಾಗಿದೆ. ಟೀಮ್ ಇಂಡಿಯಾ ಕೋಚ್ ಹುದ್ದೆಗೂ ಶಾರೂಖ್ ಖಾನ್ಗೂ ಏನ್ ಸಂಬಂಧ ಅಂತೀರಾ?
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ಕ್ಕೆ ಅದ್ದೂರಿ ತೆರೆಬಿದ್ದಿದೆ. 65 ದಿನಗಳ ಕಾಲ ನಡೆದ ಕ್ರಿಕೆಟ್ ಜಾತ್ರೆ ಫ್ಯಾನ್ಸ್ಗೆ ಫುಲ್ ಮೀಲ್ಸ್ ಮನರಂಜನೆ ನೀಡ್ತು. ರಣರೋಚಕ ಕಾದಾಟಗಳು, ಟ್ವಿಸ್ಟ್ ಅಂಡ್ ಟರ್ನ್, ಬೌಂಡರಿ – ಸಿಕ್ಸರ್ಗಳ ಸುರಿಮಳೆ, ಬೌಲರ್ಗಳ ವಿಕೆಟ್ ಬೇಟೆ.. ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಫೈನಲ್ ಫೈಟ್ನಲ್ಲಿ ಸನ್ರೈಸರ್ಸ್ ಹೈದ್ರಾಬಾದ್ಗೆ ಡಿಚ್ಚಿ ಕೊಟ್ಟ ಕೊಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಇದನ್ನೂ ಓದಿ:ರೀಮಲ್ ಚಂಡಮಾರುತ ಆರ್ಭಟ.. ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಯಾವಾಗ..?
IPL ಕಿರೀಟ ಗೆದ್ದ ಗಂಭೀರ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಈ ಬಾರಿ ಕೆಕೆಆರ್ ಟ್ರೋಫಿ ಗೆದ್ದಿರೋದ್ರ ಹಿಂದೆರೋ ಮಾಸ್ಟರ್ ಮೈಂಡ್ ಗೌತಮ್ ಗಂಭೀರ್. ಮೆಂಟರ್ ರೋಲ್ನಲ್ಲಿ ತಂಡಕ್ಕೆ ಗೌತಿ ಮರು ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಕೆಕೆಆರ್ನ ಆಟದ ಶೈಲಿ ಬದಲಾಯ್ತು. ತಂಡದ ಆಟಗಾರರಿಗೆ ಗುರು ಗೌತಿ ಮಾಡಿದ ಪಾಠದಿಂದ ತಂಡದ ಹಣೆ ಬರಹವೇ ಬದಲಾಯ್ತು. ಕಳೆದ 2 ಸೀಸನ್ಗಳಲ್ಲಿ 7ನೇ ಸ್ಥಾನಿಯಾಗಿ ಟೂರ್ನಿಗೆ ಗುಡ್ ಬೈ ಹೇಳಿದ್ದ ಕೆಕೆಆರ್ ಈ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಇದ್ರ ಬೆನ್ನಲ್ಲೇ, ಗಂಭೀರ್ ಡಿಮ್ಯಾಂಡ್ ಗಗನಕ್ಕೇರಿದೆ.
ಗೌತಮ್ ಗಂಭೀರ್ ಬೆನ್ನು ಬಿದ್ದ BCCI..!
ಟೀಮ್ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಅರ್ಜಿ ಅಹ್ವಾನಿಸಿರೋ ವಿಚಾರ ನಿಮಗೆ ಈಗಾಗಲೇ ಗೊತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್ನ ಕೋಚ್ ರೇಸ್ನಿಂದ ಬಹುತೇಕ ಬಿಗ್ನೇಮ್ಗಳು ಹಿಂದೆ ಸರಿದ್ದಾರೆ. ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದೆ. ಅಧಿಕೃತವಾಗಿ ಅರ್ಜಿ ಸಲ್ಲಿಸಿಲ್ಲ ಅನ್ನೋದು ಮೂಲದ ಮಾಹಿತಿಯಾಗಿದೆ. ಗಂಭೀರ್ನ ಕೋಚ್ ಪಟ್ಟಕ್ಕೆ ಕರೆತರಲು ಬಿಸಿಸಿಐ ಬಾಸ್ ಜಯ್ ಶಾ ಶತಾಯಗತಾಯ ಪ್ರಯತ್ನ ಪಡ್ತಿದ್ದಾರೆ. ಮೊನ್ನೆ ಫೈನಲ್ ಪಂದ್ಯದ ಬಳಿಕ ಹೋದಲ್ಲಿ, ಬಂದಲ್ಲಿ ಗೌತಿ ಸುತ್ತ ಸುತ್ತಿದ್ದಾರೆ.
ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?
ಫೈನಲ್ ಬಳಿಕ ಚೆಪಾಕ್ನಲ್ಲಿ ನಡೀತು ಸುದೀರ್ಘ ಚರ್ಚೆ
ಮೊನ್ನೆ ನಡೆದ ಫೈನಲ್ ಪಂದ್ಯದ ಬಳಿಕ ಚೆಪಾಕ್ ಮೈದಾನದಲ್ಲೇ ಹೈವೋಲ್ಟೆಜ್ ಸಭೆ ನಡೆದಿದೆ. ಬಿಸಿಸಿಐ ಸೆಕ್ರೆಟರಿ ಜಯ್ ಶಾ, ಗೌತಮ್ ಗಂಭೀರ್ ಓನ್ ಟು ಓನ್ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಸುದೀರ್ಘ ಚರ್ಚೆ ನಡೆಸಿರೋದು, ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್ ಎಂಬ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ.
ಅಡಕತ್ತರಿಗೆ ಸಿಲುಕಿದ ಗೌತಮ್ ಗಂಭೀರ್
ಅಸಲಿಗೆ ಅರ್ಜಿ ಸಲ್ಲಿಕೆಗೆ ನಿನ್ನೆಯೇ ಕೊನೆಯ ದಿನವಾಗಿತ್ತು. ಆದ್ರೂ ಗಂಭೀರ್ ಅರ್ಜಿ ಸಲ್ಲಿರೋದ್ರ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ರೇಸ್ಗೆ ಗಂಭೀರ್ ಧುಮುಕಿದ್ದೇ ಆದರೆ ಕೋಚ್ ಪಟ್ಟ ಸಿಗೋದು ಕನ್ಫರ್ಮ್. ಬಿಸಿಸಿಐ ಸೆಕ್ರೆಟರಿ ಜಯ್ ಶಾ ನಡೆಯೇ ಇದನ್ನ ಸಾರಿ ಸಾರಿ ಹೇಳ್ತಿದೆ. ಆದರೆ ಈ ವಿಚಾರದಲ್ಲಿ ಗಂಭೀರ್ ಅಡಕತ್ತರಿಗೆ ಸಿಲುಕಿದ್ದಾರೆ. ಕೆಕೆಆರ್ ತೊರೆಯಲು ಆಗದೇ, ಟೀಮ್ ಇಂಡಿಯಾ ಕೋಚ್ ಆಫರ್ನ ರಿಜೆಕ್ಟ್ ಮಾಡಲೂ ಆಗದ ಪರಿಸ್ಥಿತಿ ಗಂಭೀರ್ದ್ದಾಗಿದೆ.
ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?
ಗೌತಮ್ ಗಂಭೀರ್ ಎಂದಿಗೂ ದೇಶವೇ ಫಸ್ಟ್ ಅನ್ನೋ ಪ್ರತಿಪಾದನೆ ಮಾಡಿದ ವ್ಯಕ್ತಿ. ಇದೇ ಸಮಯದಲ್ಲಿ ಕೆಕೆಆರ್ ಜೊತೆಗೂ ಗಂಭೀರ್ ಸ್ಪೆಷಲ್ ಬಾಂಡ್ ಹೊಂದಿದ್ದಾರೆ. ಆಟಗಾರನಾಗಿ, ನಾಯಕನಾಗಿ ಇದೀಗ ಮೆಂಟರ್ ಆಗಿ ಸ್ಪೆಷಲ್ ಮೆಮೊರಿಸ್ ಹೊಂದಿದ್ದಾರೆ. ತಂಡದ ಸಕ್ಸಸ್ಗೆ ಕಾರಣರಾಗಿದ್ದಾರೆ. ಇದಕ್ಕಾಗಿಯೇ ಗಂಭೀರ್ನ, ಕೆಕೆಆರ್ ಒಡೆಯ ಶಾರೂಖ್ ಖಾನ್ ಶತಪ್ರಯತ್ನ ಮಾಡಿ ವಾಪಾಸ್ ಕರೆ ತಂದಿರೋದು. ಈಗ ಒಂದು ವೇಳೆ ಗಂಭೀರ್, ಟೀಮ್ ಇಂಡಿಯಾ ಕೋಚ್ ಆಗಲು ಒಪ್ಪಿದ್ದೇ ಆದ್ರೆ, ಕೆಕೆಆರ್ ತಂಡವನ್ನು ತೊರೆಯಬೇಕಾಗುತ್ತದೆ.
ಶಾರೂಖ್ VS ಜಯ್ ಶಾ ಫೈಟ್.. ಗೆಲ್ಲೋದ್ಯಾರು.?
ಕೆಕೆಆರ್ನಲ್ಲೇ ಗಂಭೀರ್ ಇರಬೇಕು ಅನ್ನೋದು ಶಾರೂಖ್ ಖಾನ್ ಮನಸ್ಸಿನ ಮಾತಾಗಿದೆ. ಅದಕ್ಕಾಗಿ ಬ್ಲ್ಯಾಂಕ್ ಚೆಕ್ನ ಆಫರ್ ಕೂಡ ಮಾಡಿದ್ದಾರೆ. ಇನ್ನೊಂದೆಡೆ, ಬಿಸಿಸಿಐ ಸೆಕ್ರೆಟರಿ ಜಯ್ ಶಾ, ಗಂಭೀರ್ನ ಟೀಮ್ ಇಂಡಿಯಾ ಕೋಚ್ ಮಾಡೋ ಸರ್ಕಸ್ಗೆ ಬಿದ್ದಿದ್ದಾರೆ. ಇಬ್ಬರಲ್ಲಿ ಯಾರು ಗಂಭೀರ್ ಮನವೊಲಿಸ್ತಾರೆ? ಗೌತಿ ದೇಶಕ್ಕೆ ಜೈ ಅಂತಾರಾ? ಫ್ರಾಂಚೈಸಿಗೆ ಪರವೇ ಓಲವು ತೋರ್ತಾರಾ? ಅನ್ನೋ ಕುತೂಹಲ ಸದ್ಯ ಎಲ್ಲರನ್ನೂ ಕಾಡ್ತಿದೆ.
ಇದನ್ನೂ ಓದಿ:ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್ಗೆ ಬಿಗ್ ಟ್ವಿಸ್ಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಅಖಾಡಕ್ಕೆ ಇಳಿದ ಬಿಸಿಸಿಐ ಸೆಕ್ರೆಟರಿ ಜಯ್ ಶಾ
ಫೈನಲ್ ಪಂದ್ಯದ ಬಳಿಕ ಚೆಪಾಕ್ನಲ್ಲಿ ನಡೆದಿದ್ದೇನು..?
ಹೈವೋಲ್ಟೆಜ್ ಮಾತುಕತೆ, ಸುದೀರ್ಘ ಚರ್ಚೆ.. ಯಾಕೆ.?
ಟೀಮ್ ಇಂಡಿಯಾದ ನೂತನ ಹೆಡ್ಕೋಚ್ ನೇಮಕದ ಹಗ್ಗಜಗ್ಗಾಟ ಮುಂದುವರೆದಿದೆ. ಖುದ್ದು ಬಿಸಿಸಿಐ ಸೆಕ್ರೆಟರಿ ಜಯ್ ಶಾ ಇದೀಗ ಫೀಲ್ಡ್ಗಿಳಿದಿದ್ದಾರೆ. ಪರಿಣಾಮ ಶಾರೂಖ್ ಖಾನ್ ವರ್ಸಸ್ ಜಯ್ ಶಾ ಬ್ಯಾಟಲ್ ಶುರುವಾಗಿದೆ. ಟೀಮ್ ಇಂಡಿಯಾ ಕೋಚ್ ಹುದ್ದೆಗೂ ಶಾರೂಖ್ ಖಾನ್ಗೂ ಏನ್ ಸಂಬಂಧ ಅಂತೀರಾ?
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ಕ್ಕೆ ಅದ್ದೂರಿ ತೆರೆಬಿದ್ದಿದೆ. 65 ದಿನಗಳ ಕಾಲ ನಡೆದ ಕ್ರಿಕೆಟ್ ಜಾತ್ರೆ ಫ್ಯಾನ್ಸ್ಗೆ ಫುಲ್ ಮೀಲ್ಸ್ ಮನರಂಜನೆ ನೀಡ್ತು. ರಣರೋಚಕ ಕಾದಾಟಗಳು, ಟ್ವಿಸ್ಟ್ ಅಂಡ್ ಟರ್ನ್, ಬೌಂಡರಿ – ಸಿಕ್ಸರ್ಗಳ ಸುರಿಮಳೆ, ಬೌಲರ್ಗಳ ವಿಕೆಟ್ ಬೇಟೆ.. ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಫೈನಲ್ ಫೈಟ್ನಲ್ಲಿ ಸನ್ರೈಸರ್ಸ್ ಹೈದ್ರಾಬಾದ್ಗೆ ಡಿಚ್ಚಿ ಕೊಟ್ಟ ಕೊಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಇದನ್ನೂ ಓದಿ:ರೀಮಲ್ ಚಂಡಮಾರುತ ಆರ್ಭಟ.. ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಯಾವಾಗ..?
IPL ಕಿರೀಟ ಗೆದ್ದ ಗಂಭೀರ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಈ ಬಾರಿ ಕೆಕೆಆರ್ ಟ್ರೋಫಿ ಗೆದ್ದಿರೋದ್ರ ಹಿಂದೆರೋ ಮಾಸ್ಟರ್ ಮೈಂಡ್ ಗೌತಮ್ ಗಂಭೀರ್. ಮೆಂಟರ್ ರೋಲ್ನಲ್ಲಿ ತಂಡಕ್ಕೆ ಗೌತಿ ಮರು ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಕೆಕೆಆರ್ನ ಆಟದ ಶೈಲಿ ಬದಲಾಯ್ತು. ತಂಡದ ಆಟಗಾರರಿಗೆ ಗುರು ಗೌತಿ ಮಾಡಿದ ಪಾಠದಿಂದ ತಂಡದ ಹಣೆ ಬರಹವೇ ಬದಲಾಯ್ತು. ಕಳೆದ 2 ಸೀಸನ್ಗಳಲ್ಲಿ 7ನೇ ಸ್ಥಾನಿಯಾಗಿ ಟೂರ್ನಿಗೆ ಗುಡ್ ಬೈ ಹೇಳಿದ್ದ ಕೆಕೆಆರ್ ಈ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಇದ್ರ ಬೆನ್ನಲ್ಲೇ, ಗಂಭೀರ್ ಡಿಮ್ಯಾಂಡ್ ಗಗನಕ್ಕೇರಿದೆ.
ಗೌತಮ್ ಗಂಭೀರ್ ಬೆನ್ನು ಬಿದ್ದ BCCI..!
ಟೀಮ್ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಅರ್ಜಿ ಅಹ್ವಾನಿಸಿರೋ ವಿಚಾರ ನಿಮಗೆ ಈಗಾಗಲೇ ಗೊತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್ನ ಕೋಚ್ ರೇಸ್ನಿಂದ ಬಹುತೇಕ ಬಿಗ್ನೇಮ್ಗಳು ಹಿಂದೆ ಸರಿದ್ದಾರೆ. ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದೆ. ಅಧಿಕೃತವಾಗಿ ಅರ್ಜಿ ಸಲ್ಲಿಸಿಲ್ಲ ಅನ್ನೋದು ಮೂಲದ ಮಾಹಿತಿಯಾಗಿದೆ. ಗಂಭೀರ್ನ ಕೋಚ್ ಪಟ್ಟಕ್ಕೆ ಕರೆತರಲು ಬಿಸಿಸಿಐ ಬಾಸ್ ಜಯ್ ಶಾ ಶತಾಯಗತಾಯ ಪ್ರಯತ್ನ ಪಡ್ತಿದ್ದಾರೆ. ಮೊನ್ನೆ ಫೈನಲ್ ಪಂದ್ಯದ ಬಳಿಕ ಹೋದಲ್ಲಿ, ಬಂದಲ್ಲಿ ಗೌತಿ ಸುತ್ತ ಸುತ್ತಿದ್ದಾರೆ.
ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?
ಫೈನಲ್ ಬಳಿಕ ಚೆಪಾಕ್ನಲ್ಲಿ ನಡೀತು ಸುದೀರ್ಘ ಚರ್ಚೆ
ಮೊನ್ನೆ ನಡೆದ ಫೈನಲ್ ಪಂದ್ಯದ ಬಳಿಕ ಚೆಪಾಕ್ ಮೈದಾನದಲ್ಲೇ ಹೈವೋಲ್ಟೆಜ್ ಸಭೆ ನಡೆದಿದೆ. ಬಿಸಿಸಿಐ ಸೆಕ್ರೆಟರಿ ಜಯ್ ಶಾ, ಗೌತಮ್ ಗಂಭೀರ್ ಓನ್ ಟು ಓನ್ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಸುದೀರ್ಘ ಚರ್ಚೆ ನಡೆಸಿರೋದು, ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್ ಎಂಬ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ.
ಅಡಕತ್ತರಿಗೆ ಸಿಲುಕಿದ ಗೌತಮ್ ಗಂಭೀರ್
ಅಸಲಿಗೆ ಅರ್ಜಿ ಸಲ್ಲಿಕೆಗೆ ನಿನ್ನೆಯೇ ಕೊನೆಯ ದಿನವಾಗಿತ್ತು. ಆದ್ರೂ ಗಂಭೀರ್ ಅರ್ಜಿ ಸಲ್ಲಿರೋದ್ರ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ರೇಸ್ಗೆ ಗಂಭೀರ್ ಧುಮುಕಿದ್ದೇ ಆದರೆ ಕೋಚ್ ಪಟ್ಟ ಸಿಗೋದು ಕನ್ಫರ್ಮ್. ಬಿಸಿಸಿಐ ಸೆಕ್ರೆಟರಿ ಜಯ್ ಶಾ ನಡೆಯೇ ಇದನ್ನ ಸಾರಿ ಸಾರಿ ಹೇಳ್ತಿದೆ. ಆದರೆ ಈ ವಿಚಾರದಲ್ಲಿ ಗಂಭೀರ್ ಅಡಕತ್ತರಿಗೆ ಸಿಲುಕಿದ್ದಾರೆ. ಕೆಕೆಆರ್ ತೊರೆಯಲು ಆಗದೇ, ಟೀಮ್ ಇಂಡಿಯಾ ಕೋಚ್ ಆಫರ್ನ ರಿಜೆಕ್ಟ್ ಮಾಡಲೂ ಆಗದ ಪರಿಸ್ಥಿತಿ ಗಂಭೀರ್ದ್ದಾಗಿದೆ.
ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?
ಗೌತಮ್ ಗಂಭೀರ್ ಎಂದಿಗೂ ದೇಶವೇ ಫಸ್ಟ್ ಅನ್ನೋ ಪ್ರತಿಪಾದನೆ ಮಾಡಿದ ವ್ಯಕ್ತಿ. ಇದೇ ಸಮಯದಲ್ಲಿ ಕೆಕೆಆರ್ ಜೊತೆಗೂ ಗಂಭೀರ್ ಸ್ಪೆಷಲ್ ಬಾಂಡ್ ಹೊಂದಿದ್ದಾರೆ. ಆಟಗಾರನಾಗಿ, ನಾಯಕನಾಗಿ ಇದೀಗ ಮೆಂಟರ್ ಆಗಿ ಸ್ಪೆಷಲ್ ಮೆಮೊರಿಸ್ ಹೊಂದಿದ್ದಾರೆ. ತಂಡದ ಸಕ್ಸಸ್ಗೆ ಕಾರಣರಾಗಿದ್ದಾರೆ. ಇದಕ್ಕಾಗಿಯೇ ಗಂಭೀರ್ನ, ಕೆಕೆಆರ್ ಒಡೆಯ ಶಾರೂಖ್ ಖಾನ್ ಶತಪ್ರಯತ್ನ ಮಾಡಿ ವಾಪಾಸ್ ಕರೆ ತಂದಿರೋದು. ಈಗ ಒಂದು ವೇಳೆ ಗಂಭೀರ್, ಟೀಮ್ ಇಂಡಿಯಾ ಕೋಚ್ ಆಗಲು ಒಪ್ಪಿದ್ದೇ ಆದ್ರೆ, ಕೆಕೆಆರ್ ತಂಡವನ್ನು ತೊರೆಯಬೇಕಾಗುತ್ತದೆ.
ಶಾರೂಖ್ VS ಜಯ್ ಶಾ ಫೈಟ್.. ಗೆಲ್ಲೋದ್ಯಾರು.?
ಕೆಕೆಆರ್ನಲ್ಲೇ ಗಂಭೀರ್ ಇರಬೇಕು ಅನ್ನೋದು ಶಾರೂಖ್ ಖಾನ್ ಮನಸ್ಸಿನ ಮಾತಾಗಿದೆ. ಅದಕ್ಕಾಗಿ ಬ್ಲ್ಯಾಂಕ್ ಚೆಕ್ನ ಆಫರ್ ಕೂಡ ಮಾಡಿದ್ದಾರೆ. ಇನ್ನೊಂದೆಡೆ, ಬಿಸಿಸಿಐ ಸೆಕ್ರೆಟರಿ ಜಯ್ ಶಾ, ಗಂಭೀರ್ನ ಟೀಮ್ ಇಂಡಿಯಾ ಕೋಚ್ ಮಾಡೋ ಸರ್ಕಸ್ಗೆ ಬಿದ್ದಿದ್ದಾರೆ. ಇಬ್ಬರಲ್ಲಿ ಯಾರು ಗಂಭೀರ್ ಮನವೊಲಿಸ್ತಾರೆ? ಗೌತಿ ದೇಶಕ್ಕೆ ಜೈ ಅಂತಾರಾ? ಫ್ರಾಂಚೈಸಿಗೆ ಪರವೇ ಓಲವು ತೋರ್ತಾರಾ? ಅನ್ನೋ ಕುತೂಹಲ ಸದ್ಯ ಎಲ್ಲರನ್ನೂ ಕಾಡ್ತಿದೆ.
ಇದನ್ನೂ ಓದಿ:ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್ಗೆ ಬಿಗ್ ಟ್ವಿಸ್ಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್